Sign In

By signing in or creating an account, you agree with Associated Broadcasting Company's Terms & Conditions and Privacy Policy.

16ನೇ ವಯಸ್ಸಲ್ಲಿ ಅಪ್ಪುಗೆ ಅಮ್ಮ ಕೊಡಿಸಿದ್ರು ಕಾರು: ಆದ್ರೆ ಜನರಿಂದ ಕೇಳಿಬಂದಿತ್ತು ಚುಚ್ಚುಮಾತು; ನಂತರ ಏನಾಯ್ತು?

Puneeth Rajkumar Unknown Facts: ಆ ಚುಚ್ಚು ಮಾತನ್ನೇ ಪುನೀತ್​ ರಾಜ್​ಕುಮಾರ್​ ಅವರು ಸವಾಲಾಗಿ ಸ್ವೀಕರಿಸಿದರು. ಏನಾದರೂ ಮಾಡಲೇಬೇಕು ಎಂದು ನಿರ್ಧರಿಸಿದರು. ಹಲವಾರು ಬಿಸ್ನೆಸ್​ನಲ್ಲಿ ಅವರು ತೊಡಗಿಕೊಂಡರು.

16ನೇ ವಯಸ್ಸಲ್ಲಿ ಅಪ್ಪುಗೆ ಅಮ್ಮ ಕೊಡಿಸಿದ್ರು ಕಾರು: ಆದ್ರೆ ಜನರಿಂದ ಕೇಳಿಬಂದಿತ್ತು ಚುಚ್ಚುಮಾತು; ನಂತರ ಏನಾಯ್ತು?
ಪುನೀತ್​ ರಾಜ್​ಕುಮಾರ್​
Follow us
TV9 Web
| Updated By: Digi Tech Desk

Updated on: Oct 07, 2022 | 3:28 PM

ಸೆಲೆಬ್ರಿಟಿಗಳ ಮಕ್ಕಳಾಗಿರುವುದು ಸುಲಭದ ಮಾತಲ್ಲ. ಸ್ಟಾರ್​ ಕಿಡ್​ ಎಂಬ ಪಟ್ಟ ಯಾವಾಗಲೂ ಜೊತೆಗಿರುತ್ತದೆ. ಅದನ್ನು ಮೀರಿ ತಮ್ಮದೇ ಸ್ವಂತ ಐಡೆಂಟಿಟಿಯನ್ನು ಕಟ್ಟಿಕೊಳ್ಳುವುದು ಸವಾಲಿನ ಕೆಲಸ. ಪುನೀತ್​ ರಾಜ್​ಕುಮಾರ್​ (Puneeth Rajkumar) ಅವರಿಗೂ ಈ ವಿಚಾರ ಪರಿಣಾಮ ಬೀರಿತ್ತು. ಇಂದು ಭೌತಿಕವಾಗಿ ಅಪ್ಪು ನಮ್ಮೊಂದಿಗೆ ಇಲ್ಲ. ಕೆಲವೇ ದಿನಗಳು ಕಳೆದರೆ ಅವರು ಇಹಲೋಕ ತ್ಯಜಿಸಿ ಒಂದು ವರ್ಷ (Puneeth Rajkumar Death Anniversary) ಪೂರೈಸಲಿದೆ. ಈ ಸಂದರ್ಭದಲ್ಲಿ ‘ಪವರ್​ ಸ್ಟಾರ್​’ ಜೀವನದ ಕೆಲವು ಅಪರೂಪದ ಮಾಹಿತಿಯನ್ನು ಮೆಲುಕು ಹಾಕಲಾಗುತ್ತಿದೆ. ಡಾ. ರಾಜ್​ಕುಮಾರ್​ (Dr Rajkumar) ಪುತ್ರನಾದ ಪುನೀತ್​ ರಾಜ್​ಕುಮಾರ್​ ಅವರು ಬಡತನ ಕಂಡವರಲ್ಲ. ಮುದ್ದಿನ ಮಗನಾಗಿದ್ದ ಅವರಿಗೆ ಕೇಳಿದ್ದೆಲ್ಲವನ್ನೂ ಕೊಡಿಸಲಾಗುತ್ತಿತ್ತು. ಆ ಬಗ್ಗೆ ಅನೇಕ ಬಾರಿ ಪುನೀತ್​ ರಾಜ್​ಕುಮಾರ್​ ಹೇಳಿಕೊಂಡಿದ್ದುಂಟು.

ಬಾಲನಟನಾಗಿ ಅನೇಕ ಸಿನಿಮಾಗಳಲ್ಲಿ ನಟಿಸಿದ ಬಳಿಕ ಪುನೀತ್​ ರಾಜ್​​ಕುಮಾರ್​ ಅವರು ಒಂದು ಬ್ರೇಕ್​ ಪಡೆದುಕೊಂಡರು. ಮತ್ತೆ ಚಿತ್ರರಂಗಕ್ಕೆ ಬರಬೇಕು ಎಂಬ ಉದ್ದೇಶ ಅವರಿಗೆ ಇರಲಿಲ್ಲ. ಆದರೂ ಕೂಡ ಅವರಿಗೆ ತಮ್ಮದೇ ಸ್ವಂತ ಐಡೆಂಟಿಟಿ ಹೊಂದಬೇಕು ಎಂಬ ಹಂಬಲ ಇತ್ತು. ಅದಕ್ಕೆ ಕಾರಣ ಆಗಿದ್ದು ಒಂದು ಘಟನೆ. ಈ ಕುರಿತು ಸಂದರ್ಶನವೊಂದರಲ್ಲಿ ಪುನೀತ್​ ಮಾತನಾಡಿದ್ದರು.

‘ನನ್ನ 16ನೇ ವರ್ಷದ ಹುಟ್ಟುಹಬ್ಬಕ್ಕೆ ಅಮ್ಮ ಒಂದು ಕಾರನ್ನು ಉಡುಗೊರೆಯಾಗಿ ನೀಡಿದರು. ಅದನ್ನು ನಾನು ಓಡಿಸಿಕೊಂಡು ಹೋಗುವಾಗ ಮೂಲೆಯಲ್ಲಿ ನಿಂತಿದ್ದ ವ್ಯಕ್ತಿಯೊಬ್ಬರು, ‘ನೋಡು.. ಅಪ್ಪನ ದುಡ್ಡು ಹೇಗೆ ಉಡೀಸ್​ ಮಾಡ್ತಾ ಇದ್ದಾನೆ’ ಎಂತ ಹೇಳಿದ್ದು ನನಗೆ ಕೇಳಿಸಿತು. ಆ ಮಾತು ನನ್ನ ಮನಸ್ಸಿನಲ್ಲಿ ಉಳಿದು ಬಿಡ್ತು’ ಎಂದು ಪುನೀತ್​ ರಾಜ್​ಕುಮಾರ್​ ಆ ಸಂದರ್ಶನದಲ್ಲಿ ಹೇಳಿದ್ದರು.

ಇದನ್ನೂ ಓದಿ
Image
Puneeth Rajkumar: ಪುನೀತ್​ ರಾಜ್​ಕುಮಾರ್ ಇಲ್ಲದೇ ಕಳೆಯಿತು 11 ತಿಂಗಳು; ಸಮಾಧಿ ಬಳಿ ಕಣ್ಣೀರು ಹಾಕಿದ ಫ್ಯಾನ್ಸ್​
Image
ಹೊಸಪೇಟೆ ಪುನೀತ್ ಪುತ್ಥಳಿಗೆ ವಿನಯ್ ರಾಜ್​ಕುಮಾರ್ ಮಾಲಾರ್ಪಣೆ
Image
Kantara: ‘ಕಾಂತಾರ’ ಚಿತ್ರಕ್ಕೆ ಪುನೀತ್​ ಹೀರೋ ಆಗ್ಬೇಕಿತ್ತು; ಆ ಸ್ಥಾನಕ್ಕೆ ರಿಷಬ್ ಶೆಟ್ಟಿ ಬಂದಿದ್ದು ಹೇಗೆ? ಇಲ್ಲಿದೆ ಉತ್ತರ
Image
ಪುನೀತ್ ಜನ್ಮದಿನ ಇನ್ಮುಂದೆ ‘ಸ್ಫೂರ್ತಿ ದಿನ’; ಸಚಿವ ಸುನೀಲ್ ಕುಮಾರ್ ಮನವಿ ಪುರಸ್ಕರಿಸಿದ ಸಿಎಂ ಬೊಮ್ಮಾಯಿ

ಆ ಮಾತನ್ನೇ ಅವರು ಸವಾಲಾಗಿ ಸ್ವೀಕರಿಸಿದರು. ಏನಾದರೂ ಮಾಡಲೇಬೇಕು ಎಂದು ನಿರ್ಧರಿಸಿದರು. ಹಲವಾರು ಬಿಸ್ನೆಸ್​ನಲ್ಲಿ ಅವರು ತೊಡಗಿಕೊಂಡರು. ಆದರೆ ಯಾವುದೂ ಕೂಡ ಅಂದುಕೊಂಡ ಮಟ್ಟಕ್ಕೆ ಫಲ ನೀಡಲಿಲ್ಲ. ಕೊನೆಗೂ ಅವರಿಗೆ ಮತ್ತೆ ಕೈ ಹಿಡಿದಿದ್ದು ನಟನೆ. ಹೌದು, ‘ಅಪ್ಪು’ ಸಿನಿಮಾ ಮೂಲಕ ಹೀರೋ ಆಗಿ ಅವರು ಚಿತ್ರರಂಗಕ್ಕೆ ಎಂಟ್ರಿ ಪಡೆದರು.

ಮನಸೆಳೆಯುವಂತಹ ಅಭಿನಯ, ಅತ್ಯುತ್ತಮ ಡ್ಯಾನ್ಸ್​, ಭರ್ಜರಿ ಫೈಟಿಂಗ್​.. ಹೀಗೆ ಎಲ್ಲದರಲ್ಲೂ ಪುನೀತ್​ ರಾಜ್​ಕುಮಾರ್​ ಅವರು ಜನಮನ ಗೆದ್ದರು. ಹೀರೋ ಆಗಿ ಅವರನ್ನು ಜನರು ಪ್ರೀತಿಯಿಂದ ಸ್ವೀಕರಿಸಿದರು. ಬ್ಯಾಕ್​ ಟು ಬ್ಯಾಕ್​ ಸೂಪರ್​ ಹಿಟ್​ ಸಿನಿಮಾಗಳನ್ನು ನೀಡುತ್ತ ‘ಪವರ್​ ಸ್ಟಾರ್​’ ಆಗಿ ಪುನೀತ್​ ಬೆಳೆದರು. ಸ್ಟಾರ್​ ಕಿಡ್​ ಆಗಿದ್ದರೂ ಕೂಡ ತಮ್ಮದೇ ಸ್ವಂತ ಐಡೆಂಟಿಟಿ ಕಟ್ಟಿಕೊಳ್ಳುವಲ್ಲಿ ಪುನೀತ್​ ಯಶಸ್ವಿಯಾದರು. ಹೀಗೆ ಸ್ವಂತವಾಗಿ ದುಡಿದ ಹಣದಲ್ಲಿ ಐಷಾರಾಮಿ ಕಾರುಗಳನ್ನು ಖರೀದಿಸಿದರು.

ಇಂದು ಕೋಟ್ಯಂತರ ಅಭಿಮಾನಿಗಳ ಎದೆಯಲ್ಲಿ ಪುನೀತ್​ ರಾಜ್​ಕುಮಾರ್​ ಹೆಸರು ಶಾಶ್ವತವಾಗಿ ಉಳಿದುಕೊಂಡಿದೆ. ಮಾಡಿದ ಸಾಮಾಜಿಕ ಕಾರ್ಯ ಮತ್ತು ಸಿನಿಮಾಗಳ ಮೂಲಕ ಅವರನ್ನು ಮತ್ತೆ ಮತ್ತೆ ನೆನಪಿಸಿಕೊಳ್ಳಲಾಗುತ್ತಿದೆ. ಅನೇಕ ವೃತ್ತ, ಪಾರ್ಕ್​, ರಸ್ತೆಗಳಿಗೆ ಪುನೀತ್​ ಹೆಸರನ್ನು ಇಡಲಾಗಿದೆ. ಹಲವಾರು ಕಡೆಗಳಲ್ಲಿ ಅಪ್ಪು ಪ್ರತಿಮೆ, ಪುತ್ತಳಿ ರಾರಾಜಿಸುತ್ತಿವೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಸುಲಭ ಕ್ಯಾಚ್ ಕೈಚೆಲ್ಲಿದರೂ ಔಟಾದ ಆರ್​ಸಿಬಿ ಬ್ಯಾಟರ್
ಸುಲಭ ಕ್ಯಾಚ್ ಕೈಚೆಲ್ಲಿದರೂ ಔಟಾದ ಆರ್​ಸಿಬಿ ಬ್ಯಾಟರ್
ಮತ್ತೆ ಮಾರ್ದನಿಸಿದ ಲಿಂಗಾಯತ ಪ್ರತ್ಯೇಕ ಧರ್ಮದ ಕೂಗು
ಮತ್ತೆ ಮಾರ್ದನಿಸಿದ ಲಿಂಗಾಯತ ಪ್ರತ್ಯೇಕ ಧರ್ಮದ ಕೂಗು
ಮಹಾಕುಂಭಮೇಳ ಹೇಗೆ ಅಯೋಜಿಸಲಾಯಿತು ಅಂತ ವಿಚಾರಿಸಿದ್ದೀನಿ: ಶಿವಕುಮಾರ್
ಮಹಾಕುಂಭಮೇಳ ಹೇಗೆ ಅಯೋಜಿಸಲಾಯಿತು ಅಂತ ವಿಚಾರಿಸಿದ್ದೀನಿ: ಶಿವಕುಮಾರ್
ಬಜೆಟ್‌ನಲ್ಲಿ ಮಾವು, ರೇಷ್ಮೆ ಬೆಳೆಗೆ ಆದ್ಯತೆ ನೀಡಿ; ಸಂಸದ ಮಂಜುನಾಥ್ ಸಲಹೆ
ಬಜೆಟ್‌ನಲ್ಲಿ ಮಾವು, ರೇಷ್ಮೆ ಬೆಳೆಗೆ ಆದ್ಯತೆ ನೀಡಿ; ಸಂಸದ ಮಂಜುನಾಥ್ ಸಲಹೆ
ಡಿಕೆ ಶಿವಕುಮಾರ್​ ಕೂಡ ಏಕನಾಥ ಶಿಂಧೆ ರೀತಿ ಆಗಬಹುದು: ಆರ್​ ಅಶೋಕ್
ಡಿಕೆ ಶಿವಕುಮಾರ್​ ಕೂಡ ಏಕನಾಥ ಶಿಂಧೆ ರೀತಿ ಆಗಬಹುದು: ಆರ್​ ಅಶೋಕ್
ಸದ್ಗುರು ವಾಸುದೇವ್ ಖುದ್ದಾಗಿ ಮನೆಗೆ ಬಂದು ಆಹ್ವಾನಿಸಿದ್ದರು: ಶಿವಕುಮಾರ್
ಸದ್ಗುರು ವಾಸುದೇವ್ ಖುದ್ದಾಗಿ ಮನೆಗೆ ಬಂದು ಆಹ್ವಾನಿಸಿದ್ದರು: ಶಿವಕುಮಾರ್
ಮಹಿಳಾ ಪಿಡಿಒಗೆ ಚಪ್ಪಲಿಯಿಂದ ಹೊಡೆದ ಗ್ರಾಮ ಪಂಚಾಯಿತಿ ಸದಸ್ಯೆ
ಮಹಿಳಾ ಪಿಡಿಒಗೆ ಚಪ್ಪಲಿಯಿಂದ ಹೊಡೆದ ಗ್ರಾಮ ಪಂಚಾಯಿತಿ ಸದಸ್ಯೆ
ಲೇಡಿ ಕಾನ್​ಸ್ಟೇಬಲ್​ರನ್ನು ಸಾರ್ವಜನಿಕವಾಗಿ ನಿಂದಿಸಿದ ಹೆಡ್ ಕಾನ್​ಸ್ಟೇಬಲ್
ಲೇಡಿ ಕಾನ್​ಸ್ಟೇಬಲ್​ರನ್ನು ಸಾರ್ವಜನಿಕವಾಗಿ ನಿಂದಿಸಿದ ಹೆಡ್ ಕಾನ್​ಸ್ಟೇಬಲ್
ವಿಧಾನಸೌಧ ಆವರಣದಲ್ಲಿ ಮೊದಲ ಬಾರಿಗೆ ಪುಸ್ತಕ ಮೇಳ ಆಯೋಜನೆ
ವಿಧಾನಸೌಧ ಆವರಣದಲ್ಲಿ ಮೊದಲ ಬಾರಿಗೆ ಪುಸ್ತಕ ಮೇಳ ಆಯೋಜನೆ
ಲಕ್ಷ್ಮಿ ಹೆಬ್ಬಾಳ್ಕರ್​ಗೆ ಭವತಿ ಭಿಕ್ಷಾಂ ದೇಹಿ ಎಂದ ವಿದ್ಯಾರ್ಥಿಗಳು !
ಲಕ್ಷ್ಮಿ ಹೆಬ್ಬಾಳ್ಕರ್​ಗೆ ಭವತಿ ಭಿಕ್ಷಾಂ ದೇಹಿ ಎಂದ ವಿದ್ಯಾರ್ಥಿಗಳು !