AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

16ನೇ ವಯಸ್ಸಲ್ಲಿ ಅಪ್ಪುಗೆ ಅಮ್ಮ ಕೊಡಿಸಿದ್ರು ಕಾರು: ಆದ್ರೆ ಜನರಿಂದ ಕೇಳಿಬಂದಿತ್ತು ಚುಚ್ಚುಮಾತು; ನಂತರ ಏನಾಯ್ತು?

Puneeth Rajkumar Unknown Facts: ಆ ಚುಚ್ಚು ಮಾತನ್ನೇ ಪುನೀತ್​ ರಾಜ್​ಕುಮಾರ್​ ಅವರು ಸವಾಲಾಗಿ ಸ್ವೀಕರಿಸಿದರು. ಏನಾದರೂ ಮಾಡಲೇಬೇಕು ಎಂದು ನಿರ್ಧರಿಸಿದರು. ಹಲವಾರು ಬಿಸ್ನೆಸ್​ನಲ್ಲಿ ಅವರು ತೊಡಗಿಕೊಂಡರು.

16ನೇ ವಯಸ್ಸಲ್ಲಿ ಅಪ್ಪುಗೆ ಅಮ್ಮ ಕೊಡಿಸಿದ್ರು ಕಾರು: ಆದ್ರೆ ಜನರಿಂದ ಕೇಳಿಬಂದಿತ್ತು ಚುಚ್ಚುಮಾತು; ನಂತರ ಏನಾಯ್ತು?
ಪುನೀತ್​ ರಾಜ್​ಕುಮಾರ್​
TV9 Web
| Edited By: |

Updated on: Oct 07, 2022 | 3:28 PM

Share

ಸೆಲೆಬ್ರಿಟಿಗಳ ಮಕ್ಕಳಾಗಿರುವುದು ಸುಲಭದ ಮಾತಲ್ಲ. ಸ್ಟಾರ್​ ಕಿಡ್​ ಎಂಬ ಪಟ್ಟ ಯಾವಾಗಲೂ ಜೊತೆಗಿರುತ್ತದೆ. ಅದನ್ನು ಮೀರಿ ತಮ್ಮದೇ ಸ್ವಂತ ಐಡೆಂಟಿಟಿಯನ್ನು ಕಟ್ಟಿಕೊಳ್ಳುವುದು ಸವಾಲಿನ ಕೆಲಸ. ಪುನೀತ್​ ರಾಜ್​ಕುಮಾರ್​ (Puneeth Rajkumar) ಅವರಿಗೂ ಈ ವಿಚಾರ ಪರಿಣಾಮ ಬೀರಿತ್ತು. ಇಂದು ಭೌತಿಕವಾಗಿ ಅಪ್ಪು ನಮ್ಮೊಂದಿಗೆ ಇಲ್ಲ. ಕೆಲವೇ ದಿನಗಳು ಕಳೆದರೆ ಅವರು ಇಹಲೋಕ ತ್ಯಜಿಸಿ ಒಂದು ವರ್ಷ (Puneeth Rajkumar Death Anniversary) ಪೂರೈಸಲಿದೆ. ಈ ಸಂದರ್ಭದಲ್ಲಿ ‘ಪವರ್​ ಸ್ಟಾರ್​’ ಜೀವನದ ಕೆಲವು ಅಪರೂಪದ ಮಾಹಿತಿಯನ್ನು ಮೆಲುಕು ಹಾಕಲಾಗುತ್ತಿದೆ. ಡಾ. ರಾಜ್​ಕುಮಾರ್​ (Dr Rajkumar) ಪುತ್ರನಾದ ಪುನೀತ್​ ರಾಜ್​ಕುಮಾರ್​ ಅವರು ಬಡತನ ಕಂಡವರಲ್ಲ. ಮುದ್ದಿನ ಮಗನಾಗಿದ್ದ ಅವರಿಗೆ ಕೇಳಿದ್ದೆಲ್ಲವನ್ನೂ ಕೊಡಿಸಲಾಗುತ್ತಿತ್ತು. ಆ ಬಗ್ಗೆ ಅನೇಕ ಬಾರಿ ಪುನೀತ್​ ರಾಜ್​ಕುಮಾರ್​ ಹೇಳಿಕೊಂಡಿದ್ದುಂಟು.

ಬಾಲನಟನಾಗಿ ಅನೇಕ ಸಿನಿಮಾಗಳಲ್ಲಿ ನಟಿಸಿದ ಬಳಿಕ ಪುನೀತ್​ ರಾಜ್​​ಕುಮಾರ್​ ಅವರು ಒಂದು ಬ್ರೇಕ್​ ಪಡೆದುಕೊಂಡರು. ಮತ್ತೆ ಚಿತ್ರರಂಗಕ್ಕೆ ಬರಬೇಕು ಎಂಬ ಉದ್ದೇಶ ಅವರಿಗೆ ಇರಲಿಲ್ಲ. ಆದರೂ ಕೂಡ ಅವರಿಗೆ ತಮ್ಮದೇ ಸ್ವಂತ ಐಡೆಂಟಿಟಿ ಹೊಂದಬೇಕು ಎಂಬ ಹಂಬಲ ಇತ್ತು. ಅದಕ್ಕೆ ಕಾರಣ ಆಗಿದ್ದು ಒಂದು ಘಟನೆ. ಈ ಕುರಿತು ಸಂದರ್ಶನವೊಂದರಲ್ಲಿ ಪುನೀತ್​ ಮಾತನಾಡಿದ್ದರು.

‘ನನ್ನ 16ನೇ ವರ್ಷದ ಹುಟ್ಟುಹಬ್ಬಕ್ಕೆ ಅಮ್ಮ ಒಂದು ಕಾರನ್ನು ಉಡುಗೊರೆಯಾಗಿ ನೀಡಿದರು. ಅದನ್ನು ನಾನು ಓಡಿಸಿಕೊಂಡು ಹೋಗುವಾಗ ಮೂಲೆಯಲ್ಲಿ ನಿಂತಿದ್ದ ವ್ಯಕ್ತಿಯೊಬ್ಬರು, ‘ನೋಡು.. ಅಪ್ಪನ ದುಡ್ಡು ಹೇಗೆ ಉಡೀಸ್​ ಮಾಡ್ತಾ ಇದ್ದಾನೆ’ ಎಂತ ಹೇಳಿದ್ದು ನನಗೆ ಕೇಳಿಸಿತು. ಆ ಮಾತು ನನ್ನ ಮನಸ್ಸಿನಲ್ಲಿ ಉಳಿದು ಬಿಡ್ತು’ ಎಂದು ಪುನೀತ್​ ರಾಜ್​ಕುಮಾರ್​ ಆ ಸಂದರ್ಶನದಲ್ಲಿ ಹೇಳಿದ್ದರು.

ಇದನ್ನೂ ಓದಿ
Image
Puneeth Rajkumar: ಪುನೀತ್​ ರಾಜ್​ಕುಮಾರ್ ಇಲ್ಲದೇ ಕಳೆಯಿತು 11 ತಿಂಗಳು; ಸಮಾಧಿ ಬಳಿ ಕಣ್ಣೀರು ಹಾಕಿದ ಫ್ಯಾನ್ಸ್​
Image
ಹೊಸಪೇಟೆ ಪುನೀತ್ ಪುತ್ಥಳಿಗೆ ವಿನಯ್ ರಾಜ್​ಕುಮಾರ್ ಮಾಲಾರ್ಪಣೆ
Image
Kantara: ‘ಕಾಂತಾರ’ ಚಿತ್ರಕ್ಕೆ ಪುನೀತ್​ ಹೀರೋ ಆಗ್ಬೇಕಿತ್ತು; ಆ ಸ್ಥಾನಕ್ಕೆ ರಿಷಬ್ ಶೆಟ್ಟಿ ಬಂದಿದ್ದು ಹೇಗೆ? ಇಲ್ಲಿದೆ ಉತ್ತರ
Image
ಪುನೀತ್ ಜನ್ಮದಿನ ಇನ್ಮುಂದೆ ‘ಸ್ಫೂರ್ತಿ ದಿನ’; ಸಚಿವ ಸುನೀಲ್ ಕುಮಾರ್ ಮನವಿ ಪುರಸ್ಕರಿಸಿದ ಸಿಎಂ ಬೊಮ್ಮಾಯಿ

ಆ ಮಾತನ್ನೇ ಅವರು ಸವಾಲಾಗಿ ಸ್ವೀಕರಿಸಿದರು. ಏನಾದರೂ ಮಾಡಲೇಬೇಕು ಎಂದು ನಿರ್ಧರಿಸಿದರು. ಹಲವಾರು ಬಿಸ್ನೆಸ್​ನಲ್ಲಿ ಅವರು ತೊಡಗಿಕೊಂಡರು. ಆದರೆ ಯಾವುದೂ ಕೂಡ ಅಂದುಕೊಂಡ ಮಟ್ಟಕ್ಕೆ ಫಲ ನೀಡಲಿಲ್ಲ. ಕೊನೆಗೂ ಅವರಿಗೆ ಮತ್ತೆ ಕೈ ಹಿಡಿದಿದ್ದು ನಟನೆ. ಹೌದು, ‘ಅಪ್ಪು’ ಸಿನಿಮಾ ಮೂಲಕ ಹೀರೋ ಆಗಿ ಅವರು ಚಿತ್ರರಂಗಕ್ಕೆ ಎಂಟ್ರಿ ಪಡೆದರು.

ಮನಸೆಳೆಯುವಂತಹ ಅಭಿನಯ, ಅತ್ಯುತ್ತಮ ಡ್ಯಾನ್ಸ್​, ಭರ್ಜರಿ ಫೈಟಿಂಗ್​.. ಹೀಗೆ ಎಲ್ಲದರಲ್ಲೂ ಪುನೀತ್​ ರಾಜ್​ಕುಮಾರ್​ ಅವರು ಜನಮನ ಗೆದ್ದರು. ಹೀರೋ ಆಗಿ ಅವರನ್ನು ಜನರು ಪ್ರೀತಿಯಿಂದ ಸ್ವೀಕರಿಸಿದರು. ಬ್ಯಾಕ್​ ಟು ಬ್ಯಾಕ್​ ಸೂಪರ್​ ಹಿಟ್​ ಸಿನಿಮಾಗಳನ್ನು ನೀಡುತ್ತ ‘ಪವರ್​ ಸ್ಟಾರ್​’ ಆಗಿ ಪುನೀತ್​ ಬೆಳೆದರು. ಸ್ಟಾರ್​ ಕಿಡ್​ ಆಗಿದ್ದರೂ ಕೂಡ ತಮ್ಮದೇ ಸ್ವಂತ ಐಡೆಂಟಿಟಿ ಕಟ್ಟಿಕೊಳ್ಳುವಲ್ಲಿ ಪುನೀತ್​ ಯಶಸ್ವಿಯಾದರು. ಹೀಗೆ ಸ್ವಂತವಾಗಿ ದುಡಿದ ಹಣದಲ್ಲಿ ಐಷಾರಾಮಿ ಕಾರುಗಳನ್ನು ಖರೀದಿಸಿದರು.

ಇಂದು ಕೋಟ್ಯಂತರ ಅಭಿಮಾನಿಗಳ ಎದೆಯಲ್ಲಿ ಪುನೀತ್​ ರಾಜ್​ಕುಮಾರ್​ ಹೆಸರು ಶಾಶ್ವತವಾಗಿ ಉಳಿದುಕೊಂಡಿದೆ. ಮಾಡಿದ ಸಾಮಾಜಿಕ ಕಾರ್ಯ ಮತ್ತು ಸಿನಿಮಾಗಳ ಮೂಲಕ ಅವರನ್ನು ಮತ್ತೆ ಮತ್ತೆ ನೆನಪಿಸಿಕೊಳ್ಳಲಾಗುತ್ತಿದೆ. ಅನೇಕ ವೃತ್ತ, ಪಾರ್ಕ್​, ರಸ್ತೆಗಳಿಗೆ ಪುನೀತ್​ ಹೆಸರನ್ನು ಇಡಲಾಗಿದೆ. ಹಲವಾರು ಕಡೆಗಳಲ್ಲಿ ಅಪ್ಪು ಪ್ರತಿಮೆ, ಪುತ್ತಳಿ ರಾರಾಜಿಸುತ್ತಿವೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Follow Us
ಮ್ಯಾಜಿಕ್ ನಂಬರ್ ಗಿಂತಲೂ ಹೆಚ್ಚಿನ ಬೆಂಬಲ: ವಿಜಯ್​​ ಕೈ ಹಿಡಿದ ಪಕ್ಷಗಳಾವುವು
ಮ್ಯಾಜಿಕ್ ನಂಬರ್ ಗಿಂತಲೂ ಹೆಚ್ಚಿನ ಬೆಂಬಲ: ವಿಜಯ್​​ ಕೈ ಹಿಡಿದ ಪಕ್ಷಗಳಾವುವು
ತಮಿಳುನಾಡಿನಲ್ಲಿ TVK ಸರ್ಕಾರ ಫಿಕ್ಸ್‌, ಮ್ಯಾಜಿಕ್ ನಂಬರ್ ಹೊಂದಿಸಿದ ವಿಜಯ್
ತಮಿಳುನಾಡಿನಲ್ಲಿ TVK ಸರ್ಕಾರ ಫಿಕ್ಸ್‌, ಮ್ಯಾಜಿಕ್ ನಂಬರ್ ಹೊಂದಿಸಿದ ವಿಜಯ್
ನನ್ನ ಎಲ್ಲಾ ಅಸ್ತಿ ಅನಾಥ ಆಶ್ರಮಕ್ಕೆ ಕೊಡ್ತೇನೆ ಎಂದ ತಾಯಿ
ನನ್ನ ಎಲ್ಲಾ ಅಸ್ತಿ ಅನಾಥ ಆಶ್ರಮಕ್ಕೆ ಕೊಡ್ತೇನೆ ಎಂದ ತಾಯಿ
ತಮಿಳುನಾಡಿನ ಒಳರಾಜಕೀಯನ ಎಳೆಎಳೆಯಾಗಿ ಬಿಚ್ಚಿಟ್ಟ ಕಾಂಗ್ರೆಸ್ ಉಸ್ತುವಾರಿ
ತಮಿಳುನಾಡಿನ ಒಳರಾಜಕೀಯನ ಎಳೆಎಳೆಯಾಗಿ ಬಿಚ್ಚಿಟ್ಟ ಕಾಂಗ್ರೆಸ್ ಉಸ್ತುವಾರಿ
ಆಪ್ತ ಸಹಾಯಕನ ಅರಿಶಿಣ ಶಾಸ್ತ್ರದಲ್ಲಿ ಪತ್ನಿ ಜೊತೆ ಶರಣು ಸಲಗರ ಡ್ಯಾನ್ಸ್​​
ಆಪ್ತ ಸಹಾಯಕನ ಅರಿಶಿಣ ಶಾಸ್ತ್ರದಲ್ಲಿ ಪತ್ನಿ ಜೊತೆ ಶರಣು ಸಲಗರ ಡ್ಯಾನ್ಸ್​​
ಜಿಗಣಿ ಪೊಲೀಸರ ಭರ್ಜರಿ ಬೇಟೆ: ಕೋಟ್ಯಂತರ ರೂ ಮೌಲ್ಯದ 250 ಕೆಜಿ ಗಾಂಜಾ ಜಪ್ತಿ
ಜಿಗಣಿ ಪೊಲೀಸರ ಭರ್ಜರಿ ಬೇಟೆ: ಕೋಟ್ಯಂತರ ರೂ ಮೌಲ್ಯದ 250 ಕೆಜಿ ಗಾಂಜಾ ಜಪ್ತಿ
ಸಂಚಲನ ಮೂಡಿಸಿದ ಬಿಎಲ್ ಸಂತೋಷ್ ಪೋಸ್ಟ್
ಸಂಚಲನ ಮೂಡಿಸಿದ ಬಿಎಲ್ ಸಂತೋಷ್ ಪೋಸ್ಟ್
ಬಿಎಸ್​ವೈ ಅಭಿಮಾನೋತ್ಸವದಲ್ಲಿ ಮಾಜಿ ಸಿಎಂಗೆ ಅದೃಷ್ಟ ತಂದ ಕಾರಿನ ಪ್ರದರ್ಶನ
ಬಿಎಸ್​ವೈ ಅಭಿಮಾನೋತ್ಸವದಲ್ಲಿ ಮಾಜಿ ಸಿಎಂಗೆ ಅದೃಷ್ಟ ತಂದ ಕಾರಿನ ಪ್ರದರ್ಶನ
ಜಿಬಿಎ ಚುನಾವಣೆಗೆ ಕೊನೆಗೂ ಮುಹೂರ್ತ: ಎಲೆಕ್ಷನ್​​ ಯಾವಾಗ ಗೊತ್ತಾ?
ಜಿಬಿಎ ಚುನಾವಣೆಗೆ ಕೊನೆಗೂ ಮುಹೂರ್ತ: ಎಲೆಕ್ಷನ್​​ ಯಾವಾಗ ಗೊತ್ತಾ?
ವಿಜಯ್​​ರನ್ನು ದೇವರೇ ಕಾಪಾಡಬೇಕು ಎಂದ ಹೆಚ್​​ಡಿಕೆ: ಕಾರಣ ಇಲ್ಲಿದೆ
ವಿಜಯ್​​ರನ್ನು ದೇವರೇ ಕಾಪಾಡಬೇಕು ಎಂದ ಹೆಚ್​​ಡಿಕೆ: ಕಾರಣ ಇಲ್ಲಿದೆ