AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಮಾರಿಗೆ ಬಿಡಿ ದಾರಿ’ ಟೋಬಿಯಲ್ಲಿ ರಾಜ್ ಬಿ ಶೆಟ್ಟಿಯ ರಕ್ತ-ಸಿಕ್ತ ಅವತಾರ

Raj B Shetty: ರಾಜ್ ಬಿ ಶೆಟ್ಟಿ ನಟನೆಯ ಹೊಸ ಸಿನಿಮಾ ಟೋಬಿಯ ಫಸ್ಟ್ ಲುಕ್ ಟೀಸರ್ ಬಿಡುಗಡೆ ಆಗಿದೆ.

'ಮಾರಿಗೆ ಬಿಡಿ ದಾರಿ' ಟೋಬಿಯಲ್ಲಿ ರಾಜ್ ಬಿ ಶೆಟ್ಟಿಯ ರಕ್ತ-ಸಿಕ್ತ ಅವತಾರ
ಟೋಬಿ
ಮಂಜುನಾಥ ಸಿ.
|

Updated on: Jun 29, 2023 | 5:50 PM

Share

ರಾಜ್ ಬಿ ಶೆಟ್ಟಿ (Raj B Shetty) ನಟನೆಯ ಹೊಸ ಸಿನಿಮಾ ಟೋಬಿಯ (Toby) ಫಸ್ಟ್ ಲುಕ್ ಟೀಸರ್ ಇಂದು (ಜೂನ್ 29) ಬಿಡುಗಡೆ ಆಗಿದೆ. ಟೀಸರ್​ ತುಂಬೆಲ್ಲ ರಕ್ತದ ಕೆಂಪು ರಾಚುತ್ತಿದೆ. ಕಡು ಕೆಂಪು ಬಣ್ಣದ ರಾಜ್ ಬಿ ಶೆಟ್ಟಿಯ ಕಣ್ಣುಗಳು ಅಸೀಮ ದ್ವೇಷವನ್ನು ತುಂಬಿಕೊಂಡಂತೆ ತೋರುತ್ತಿದೆ. ಶೆಟ್ಟರ ಮೂಗಿನ ಹೊಳೆವ ಮೂಗುತಿಯ ಗುಟ್ಟು ಸಿನಿಮಾ ಬಿಡುಗಡೆಯಂದೇ ತಿಳಿಯಬೇಕಿದೆ. ಒಟ್ಟಾರೆ ಗರುಡ ಗಮನ ವೃಷಭ ವಾಹನ ಸಿನಿಮಾದ ಶಿವ ಪಾತ್ರದ ಅಪ್​ಡೇಟೆಡ್ ಆವೃತ್ತಿಯಂತೆ ಟೋಬಿಯಲ್ಲಿ ರಾಜ್ ಬಿ ಶೆಟ್ಟಿ ಕಾಣುತ್ತಿದ್ದಾರೆ.

ಟೀಸರ್ ಅನ್ನು ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ರಾಜ್ ಬಿ ಶೆಟ್ಟಿ, ‘ಕುರಿಯ ಕೆಣಕಿದ್ದಕ್ಕೆ ಧನ್ಯವಾದಗಳು. ಕುರಿ ಈಗ ಮಾರಿಯಾಗಿ ನಿಮ್ಮ ಮುಂದೆ, ಟೋಬಿ ಬಂದಿದ್ದಾನೆ…. ಮಾರಿಗೆ ದಾರಿ” ಎಂದಿದ್ದಾರೆ. ಮುಂದುವರೆದು, ಕೆಣಕಿದ ಕುರಿ ಈಗ ಮಾರಿಯಾಗಿದೆ. ಟೋಬಿ ಬಂದಾಗಿದೆ, ಮಾರಿಗೆ ದಾರಿ ಬಿಡಿ” ಎಂದು ಸಹ ಬರೆದುಕೊಂಡಿದ್ದಾರೆ.

ಶೆಟ್ಟರ ಟೋಬಿಯ ಫಸ್ಟ್​ ಲುಕ್​ನಲ್ಲಿ ಅವರ ಲುಕ್​ನಷ್ಟೆ ಗಮನ ಸೆಳೆಯುತ್ತಿರುವುದು ಹಿನ್ನೆಲೆ ಸಂಗೀತ. ಇಂಟೆನ್ಸ್ ಆದ ಹಿನ್ನೆಲೆ ಸಂಗೀತ ಕೆಲವೇ ಸೆಕೆಂಡ್​ಗಳ ಫಸ್ಟ್​ ಲುಕ್ ಟೀಸರ್ ನಲ್ಲಿದೆ. ಅಂದಹಾಗೆ ಸಿನಿಮಾಕ್ಕೆ ಸಂಗೀತ ನೀಡಿರುವುದು ಮಿಧುನ್ ಮುಕುಂದನ್. ಈ ಸಿನಿಮಾವು ದ್ವೇಷ ತೀರಿಕೊಳ್ಳುವ ಒಬ್ಬ ಸಾಮಾನ್ಯನ ಕತೆಯನ್ನು ಒಳಗೊಂಡಿದೆ. ಶೆಟ್ಟರ ಈ ಸಿನಿಮಾದಲ್ಲಿ ಮೊದಲ ಬಾರಿಗೆ ಆಕ್ಷನ್ ದೃಶ್ಯಗಳು ಇರಲಿವೆ ಎನ್ನಲಾಗುತ್ತಿದೆ.

ಇದನ್ನೂ ಓದಿ:ಚಿತ್ರೀಕರಣಕ್ಕೆ ಮುಂಚೆಯೇ ಶಿವಣ್ಣ, ಉಪ್ಪಿ, ರಾಜ್ ಬಿ ಶೆಟ್ಟಿಗೆ ಸಿನಿಮಾ ತೋರಿಸಿದ ಅರ್ಜುನ್ ಜನ್ಯ

ರಾಜ್ ಬಿ ಶೆಟ್ಟಿಯವರೇ ಕತೆ, ಚಿತ್ರಕತೆಯನ್ನು ಈ ಸಿನಿಮಾಕ್ಕೆ ಬರೆದಿದ್ದು ನಿರ್ದೇಶನದ ಜವಾಬ್ದಾರಿಯನ್ನು ತಮ್ಮದೇ ತಂಡದ ಬಾಸಿಲ್​ಗೆ ನೀಡಿದ್ದಾರೆ. ಸಿನಿಮಾದಲ್ಲಿ ಚೈತ್ರ ಆಚಾರ್ ಹಾಗೂ ಸಂಯುಕ್ತಾ ಹೊರನಾಡು ನಾಯಕಿಯರಾಗಿದ್ದಾರೆ. ಸಿನಿಮಾವನ್ನು ರಾಜ್ ಬಿ ಶೆಟ್ಟಿಯವರ ಲೈಟರ್ ಬುದ್ಧ ಫಿಲಮ್ಸ್ ಹಾಗೂ ಅಗಸ್ತ್ಯ ಫಿಲಮ್ಸ್ ಒಟ್ಟಾಗಿ ನಿರ್ಮಾಣ ಮಾಡುತ್ತಿದೆ. ಸಿನಿಮಾದ ಮೇಲೆ ಭರಪೂರ ನಿರೀಕ್ಷೆಯನ್ನು ಶೆಟ್ಟರು ಇರಿಸಿಕೊಂಡಿದ್ದಾರೆ. ಸಿನಿಮಾ ಆಗಸ್ಟ್ 25ಕ್ಕೆ ತೆರೆಗೆ ಬರಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ವಾರಾಣಸಿ-ಲಕ್ನೋ ರೈಲಿನೊಳಗೆ ಎರಡು ಗುಂಪುಗಳ ನಡುವೆ ಹೊಡೆದಾಟ
ವಾರಾಣಸಿ-ಲಕ್ನೋ ರೈಲಿನೊಳಗೆ ಎರಡು ಗುಂಪುಗಳ ನಡುವೆ ಹೊಡೆದಾಟ
ಗಾಯಗೊಂಡಿದ್ದ ಚಾಲಕ ಮೊಹಮ್ಮದ್ ರಫೀಕ್ ಸಾವು, ಗೋಳಾಡಿದ ಪತ್ನಿ
ಗಾಯಗೊಂಡಿದ್ದ ಚಾಲಕ ಮೊಹಮ್ಮದ್ ರಫೀಕ್ ಸಾವು, ಗೋಳಾಡಿದ ಪತ್ನಿ
ಉಡುಪಿ ಕೃಷ್ಣನಿಗಾಗಿ ಸಿದ್ಧವಾಯ್ತು ಚೆಂದದ ಚಿನ್ನದ ರಥ! ಹೇಗಿದೆ ನೋಡಿ
ಉಡುಪಿ ಕೃಷ್ಣನಿಗಾಗಿ ಸಿದ್ಧವಾಯ್ತು ಚೆಂದದ ಚಿನ್ನದ ರಥ! ಹೇಗಿದೆ ನೋಡಿ
ಚಿತ್ರದುರ್ಗ ಬಸ್ ಅಪಘಾತದಲ್ಲಿ ಗಾಯಗೊಂಡಿದ್ದ ಚಾಲಕ ಸಾವು
ಚಿತ್ರದುರ್ಗ ಬಸ್ ಅಪಘಾತದಲ್ಲಿ ಗಾಯಗೊಂಡಿದ್ದ ಚಾಲಕ ಸಾವು
ಮೃತರ ಕುಟುಂಬಗಳಿಗೆ ಶಾಸಕ ಪ್ರದೀಪ್ ಈಶ್ವರ್ ನೆರವಿನ ಭರವಸೆ
ಮೃತರ ಕುಟುಂಬಗಳಿಗೆ ಶಾಸಕ ಪ್ರದೀಪ್ ಈಶ್ವರ್ ನೆರವಿನ ಭರವಸೆ
2026 ಗುರು ಗ್ರಹದ ಸಂಚಾರದಿಂದ ಮಕರ ರಾಶಿಯವರಿಗೆ ಗುರುಬಲ ಮತ್ತು ಅದೃಷ್ಟ
2026 ಗುರು ಗ್ರಹದ ಸಂಚಾರದಿಂದ ಮಕರ ರಾಶಿಯವರಿಗೆ ಗುರುಬಲ ಮತ್ತು ಅದೃಷ್ಟ
ಪಕ್ಷದ ನಿರ್ದೇಶನ ಪಾಲಿಸೋದು ಕಾರ್ಯಕರ್ತರ ಕರ್ತವ್ಯ: ಯತೀಂದ್ರ ಟಾಂಗ್
ಪಕ್ಷದ ನಿರ್ದೇಶನ ಪಾಲಿಸೋದು ಕಾರ್ಯಕರ್ತರ ಕರ್ತವ್ಯ: ಯತೀಂದ್ರ ಟಾಂಗ್
ಫಾರಂ ಕೋಳಿ, ಮೊಟ್ಟೆ ತಿನ್ನೋ ಮುನ್ನ ಎಚ್ಚರ: ಕೆಲವು ಕಡೆ ಹೀಗೆಲ್ಲ ಮಾಡ್ತಾರೆ!
ಫಾರಂ ಕೋಳಿ, ಮೊಟ್ಟೆ ತಿನ್ನೋ ಮುನ್ನ ಎಚ್ಚರ: ಕೆಲವು ಕಡೆ ಹೀಗೆಲ್ಲ ಮಾಡ್ತಾರೆ!
ಮಕ್ಕಳಿಗೂ ಮಾಳು ಸ್ಟೈಲ್​​ನಲ್ಲೇ ಹೇರ್​ಸ್ಟೈಲ್; ಇಲ್ಲಿದೆ ಫನ್ ವಿಡಿಯೋ
ಮಕ್ಕಳಿಗೂ ಮಾಳು ಸ್ಟೈಲ್​​ನಲ್ಲೇ ಹೇರ್​ಸ್ಟೈಲ್; ಇಲ್ಲಿದೆ ಫನ್ ವಿಡಿಯೋ
ಜಾತ್ರೆ, ಪೆಟ್ರೋಲ್ ಬಂಕ್, ಎಲ್ಲೆಲ್ಲೂ ಕೋಟಾ ನೋಟು ಚಲಾಯಿಸ್ತಿದ್ದವರು ಅಂದರ್
ಜಾತ್ರೆ, ಪೆಟ್ರೋಲ್ ಬಂಕ್, ಎಲ್ಲೆಲ್ಲೂ ಕೋಟಾ ನೋಟು ಚಲಾಯಿಸ್ತಿದ್ದವರು ಅಂದರ್