AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಮಾರಿಗೆ ಬಿಡಿ ದಾರಿ’ ಟೋಬಿಯಲ್ಲಿ ರಾಜ್ ಬಿ ಶೆಟ್ಟಿಯ ರಕ್ತ-ಸಿಕ್ತ ಅವತಾರ

Raj B Shetty: ರಾಜ್ ಬಿ ಶೆಟ್ಟಿ ನಟನೆಯ ಹೊಸ ಸಿನಿಮಾ ಟೋಬಿಯ ಫಸ್ಟ್ ಲುಕ್ ಟೀಸರ್ ಬಿಡುಗಡೆ ಆಗಿದೆ.

'ಮಾರಿಗೆ ಬಿಡಿ ದಾರಿ' ಟೋಬಿಯಲ್ಲಿ ರಾಜ್ ಬಿ ಶೆಟ್ಟಿಯ ರಕ್ತ-ಸಿಕ್ತ ಅವತಾರ
ಟೋಬಿ
ಮಂಜುನಾಥ ಸಿ.
|

Updated on: Jun 29, 2023 | 5:50 PM

Share

ರಾಜ್ ಬಿ ಶೆಟ್ಟಿ (Raj B Shetty) ನಟನೆಯ ಹೊಸ ಸಿನಿಮಾ ಟೋಬಿಯ (Toby) ಫಸ್ಟ್ ಲುಕ್ ಟೀಸರ್ ಇಂದು (ಜೂನ್ 29) ಬಿಡುಗಡೆ ಆಗಿದೆ. ಟೀಸರ್​ ತುಂಬೆಲ್ಲ ರಕ್ತದ ಕೆಂಪು ರಾಚುತ್ತಿದೆ. ಕಡು ಕೆಂಪು ಬಣ್ಣದ ರಾಜ್ ಬಿ ಶೆಟ್ಟಿಯ ಕಣ್ಣುಗಳು ಅಸೀಮ ದ್ವೇಷವನ್ನು ತುಂಬಿಕೊಂಡಂತೆ ತೋರುತ್ತಿದೆ. ಶೆಟ್ಟರ ಮೂಗಿನ ಹೊಳೆವ ಮೂಗುತಿಯ ಗುಟ್ಟು ಸಿನಿಮಾ ಬಿಡುಗಡೆಯಂದೇ ತಿಳಿಯಬೇಕಿದೆ. ಒಟ್ಟಾರೆ ಗರುಡ ಗಮನ ವೃಷಭ ವಾಹನ ಸಿನಿಮಾದ ಶಿವ ಪಾತ್ರದ ಅಪ್​ಡೇಟೆಡ್ ಆವೃತ್ತಿಯಂತೆ ಟೋಬಿಯಲ್ಲಿ ರಾಜ್ ಬಿ ಶೆಟ್ಟಿ ಕಾಣುತ್ತಿದ್ದಾರೆ.

ಟೀಸರ್ ಅನ್ನು ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ರಾಜ್ ಬಿ ಶೆಟ್ಟಿ, ‘ಕುರಿಯ ಕೆಣಕಿದ್ದಕ್ಕೆ ಧನ್ಯವಾದಗಳು. ಕುರಿ ಈಗ ಮಾರಿಯಾಗಿ ನಿಮ್ಮ ಮುಂದೆ, ಟೋಬಿ ಬಂದಿದ್ದಾನೆ…. ಮಾರಿಗೆ ದಾರಿ” ಎಂದಿದ್ದಾರೆ. ಮುಂದುವರೆದು, ಕೆಣಕಿದ ಕುರಿ ಈಗ ಮಾರಿಯಾಗಿದೆ. ಟೋಬಿ ಬಂದಾಗಿದೆ, ಮಾರಿಗೆ ದಾರಿ ಬಿಡಿ” ಎಂದು ಸಹ ಬರೆದುಕೊಂಡಿದ್ದಾರೆ.

ಶೆಟ್ಟರ ಟೋಬಿಯ ಫಸ್ಟ್​ ಲುಕ್​ನಲ್ಲಿ ಅವರ ಲುಕ್​ನಷ್ಟೆ ಗಮನ ಸೆಳೆಯುತ್ತಿರುವುದು ಹಿನ್ನೆಲೆ ಸಂಗೀತ. ಇಂಟೆನ್ಸ್ ಆದ ಹಿನ್ನೆಲೆ ಸಂಗೀತ ಕೆಲವೇ ಸೆಕೆಂಡ್​ಗಳ ಫಸ್ಟ್​ ಲುಕ್ ಟೀಸರ್ ನಲ್ಲಿದೆ. ಅಂದಹಾಗೆ ಸಿನಿಮಾಕ್ಕೆ ಸಂಗೀತ ನೀಡಿರುವುದು ಮಿಧುನ್ ಮುಕುಂದನ್. ಈ ಸಿನಿಮಾವು ದ್ವೇಷ ತೀರಿಕೊಳ್ಳುವ ಒಬ್ಬ ಸಾಮಾನ್ಯನ ಕತೆಯನ್ನು ಒಳಗೊಂಡಿದೆ. ಶೆಟ್ಟರ ಈ ಸಿನಿಮಾದಲ್ಲಿ ಮೊದಲ ಬಾರಿಗೆ ಆಕ್ಷನ್ ದೃಶ್ಯಗಳು ಇರಲಿವೆ ಎನ್ನಲಾಗುತ್ತಿದೆ.

ಇದನ್ನೂ ಓದಿ:ಚಿತ್ರೀಕರಣಕ್ಕೆ ಮುಂಚೆಯೇ ಶಿವಣ್ಣ, ಉಪ್ಪಿ, ರಾಜ್ ಬಿ ಶೆಟ್ಟಿಗೆ ಸಿನಿಮಾ ತೋರಿಸಿದ ಅರ್ಜುನ್ ಜನ್ಯ

ರಾಜ್ ಬಿ ಶೆಟ್ಟಿಯವರೇ ಕತೆ, ಚಿತ್ರಕತೆಯನ್ನು ಈ ಸಿನಿಮಾಕ್ಕೆ ಬರೆದಿದ್ದು ನಿರ್ದೇಶನದ ಜವಾಬ್ದಾರಿಯನ್ನು ತಮ್ಮದೇ ತಂಡದ ಬಾಸಿಲ್​ಗೆ ನೀಡಿದ್ದಾರೆ. ಸಿನಿಮಾದಲ್ಲಿ ಚೈತ್ರ ಆಚಾರ್ ಹಾಗೂ ಸಂಯುಕ್ತಾ ಹೊರನಾಡು ನಾಯಕಿಯರಾಗಿದ್ದಾರೆ. ಸಿನಿಮಾವನ್ನು ರಾಜ್ ಬಿ ಶೆಟ್ಟಿಯವರ ಲೈಟರ್ ಬುದ್ಧ ಫಿಲಮ್ಸ್ ಹಾಗೂ ಅಗಸ್ತ್ಯ ಫಿಲಮ್ಸ್ ಒಟ್ಟಾಗಿ ನಿರ್ಮಾಣ ಮಾಡುತ್ತಿದೆ. ಸಿನಿಮಾದ ಮೇಲೆ ಭರಪೂರ ನಿರೀಕ್ಷೆಯನ್ನು ಶೆಟ್ಟರು ಇರಿಸಿಕೊಂಡಿದ್ದಾರೆ. ಸಿನಿಮಾ ಆಗಸ್ಟ್ 25ಕ್ಕೆ ತೆರೆಗೆ ಬರಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ