AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

RCB-Hombale: ಬೆಂಗಳೂರಿನ ಖದರ್ ವಿಶ್ವಕ್ಕೆ ಪಸರಿಸಲು ಹೊಂಬಾಳೆ ಜೊತೆ ಕೈಜೋಡಿಸಿದ ಆರ್​ಸಿಬಿ

ಬೆಂಗಳೂರಿನ ಎರಡು ಪವರ್​ಹೌಸ್​ಗಳಾದ ಆರ್​ಸಿಬಿ ಹಾಗೂ ಹೊಂಬಾಳೆ ಪರಸ್ಪರ ಕೈಜೋಡಿಸಿವೆ. ಅಭಿಮಾನಿಗಳ ನಿರೀಕ್ಷೆಗಳು ಬೆಟ್ಟದಷ್ಟು...

RCB-Hombale: ಬೆಂಗಳೂರಿನ ಖದರ್ ವಿಶ್ವಕ್ಕೆ ಪಸರಿಸಲು ಹೊಂಬಾಳೆ ಜೊತೆ ಕೈಜೋಡಿಸಿದ ಆರ್​ಸಿಬಿ
ಹೊಂಬಾಳೆ-ಆರ್​ಸಿಬಿ
Follow us
ಮಂಜುನಾಥ ಸಿ.
|

Updated on: Apr 02, 2023 | 6:23 PM

ಐಪಿಎಲ್ (IPL) ಹೊಸ ಸೀಸನ್ ಶುರುವಾಗಿದೆ. ಇಂದು (ಏಪ್ರಿಲ್ 2) ಈ ಸೀಸನ್​ನ ಮೊದಲ ಪಂದ್ಯವನ್ನು ಆರ್​ಸಿಬಿ ಆಡಲಿದೆ, ಅದೂ ಬೆಂಗಳೂರಿನಲ್ಲಿ. ಪಂದ್ಯ ಶುರುವಾಗಲು ಅಭಿಮಾನಿಗಳು ಕಾಯುತ್ತಿದ್ದು, ಪಂದ್ಯ ಶುರುವಾಗುವ ಮುನ್ನ ಆರ್​ಸಿಬಿ ಸಿಹಿ ಸುದ್ದಿಯೊಂದನ್ನು ಅಭಿಮಾನಿಗಳಿಗೆ ನೀಡಿದೆ. ಈ ಸೀಸನ್​ನಿಂದ ಆರ್​ಸಿಬಿಯು ರಾಷ್ಟ್ರಮಟ್ಟದಲ್ಲಿ ಛಾಪು ಮೂಡಿಸಿರುವ ಕರ್ನಾಟಕದ ಹೆಮ್ಮೆಯ ನಿರ್ಮಾಣ ಸಂಸ್ಥೆಯಾದ ಹೊಂಬಾಳೆ ಫಿಲಮ್ಸ್ (Hombale Films) ಜೊತೆ ಕೈಜೋಡಿಸಿದೆ. ಈ ಮಾಹಿತಿಯನ್ನು ಆರ್​ಸಿಬಿಯ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ.

”ನಾವು ಹೊಂಬಾಳೆ ಜೊತೆ ಕೈ ಜೋಡಿಸಿದ್ದೇವೆ, ಈಗಿನಿಂದ ಹೊಂಬಾಳೆಯು ನಮ್ಮ ಅಧಿಕೃತ ಡಿಜಿಟಲ್ ಪಾರ್ಟನರ್. ಆರ್​ಸಿಬಿಯ ಎಲ್ಲ ಅಧಿಕೃತ ವಿಡಿಯೋ ನಿರ್ಮಾಣ ಹಾಗೂ ಪ್ರಸಾರವನ್ನು ಇನ್ನು ಮುಂದೆ ಹೊಂಬಾಳೆ ಫಿಲಮ್ಸ್ ಮಾಡಲಿದೆ. ಹೊಂಬಾಳೆ ಹಾಗೂ ಆರ್​ಸಿಬಿ ಕಡೆಯಿಂದ ಹೊಸ ಕಂಟೆಂಟ್​ ಹೊರಗೆ ಬರುವುದನ್ನು ನಿರೀಕ್ಷಿಸಿ. ಬೆಂಗಳೂರಿನಲ್ಲಿ ಜನಿಸಿ ಭಾರತವನ್ನು ರಂಜಿಸುತ್ತಿದ್ದೇವೆ (Born In Bengaluru To Thrill The Nation)’ ಎಂಬ ಕ್ಯಾಚಿ ಟ್ಯಾಗ್ ಲೈನ್ ಅನ್ನು ಸಹ ಆರ್​ಸಿಬಿ ಹಂಚಿಕೊಂಡಿದೆ.

ಹೊಂಬಾಳೆ ಹಾಗೂ ಆರ್​ಸಿಬಿ ಕೈಜೋಡಿಸಿರುವ ಸುದ್ದಿಯಿಂದ ಥ್ರಿಲ್ ಆಗಿರುವ ಅಭಿಮಾನಿಗಳು ಖುಷಿಯಿಂದ ಕಮೆಂಟ್ ಮಾಡಿದ್ದಾರೆ. ‘ಸ್ವರ್ಗದಲ್ಲೇ ನಿಶ್ಚಯವಾದ ಜೋಡಿ ಇದು’, ‘ಬೆಂಗಳೂರಿಗೆ ಹೆಮ್ಮೆ ಮೂಡಿಸುತ್ತಿರುವ ಹೊಂಬಾಳೆ, ಆರ್​ಸಿಬಿ ಒಂದಾಗಿರುವುದು ಅದ್ಭುತ’, ‘ಆರ್​ಸಿಬಿಗೆ ಇನ್ನು ಮುಂದೆ ಹಿಟ್ ಮೇಲೆ ಹಿಟ್’, ‘ಎರಡು ಪವರ್​ಹೌಸ್​ಗಳು ಒಂದಾಗಿ ಸುನಾಮಿ ಸೃಷ್ಟಿಸಲಿವೆ’ ಇನ್ನೂ ಅನೇಕ ತರಹೇವಾರಿ ಕಮೆಂಟ್​ಗಳನ್ನು ಅಭಿಮಾನಿಗಳು ಮಾಡಿದ್ದಾರೆ.

ಈ ಹಿಂದೆ ಕೆಜಿಎಫ್ 2 ಸಿನಿಮಾ ಬಿಡುಗಡೆ ಆಗಿದ್ದಾಗ ಆರ್​ಸಿಬಿ ತಂಡಕ್ಕಾಗಿ ವಿಶೇಷ ಪ್ರದರ್ಶನವನ್ನು ಹೊಂಬಾಳೆ ಫಿಲಮ್ಸ್ ಹಂಚಿಕೊಂಡಿತ್ತು. ಅಂದು ಕೆಜಿಎಫ್ 2 ಸಿನಿಮಾ ನೋಡಿ ಆಟಗಾರರು ಥ್ರಿಲ್ ಆಗಿದ್ದರು. ಇದೀಗ ಹೊಂಬಾಳೆ-ಆರ್​ಸಿಬಿ ಜೊತೆ ಟೀಮಪ್ ಆಗಿದ್ದು ಹೊಸ ಮಾದರಿಯ ಕಂಟೆಂಟ್ ಅನ್ನು ವಿಡಿಯೋಗಳನ್ನು ಅಭಿಮಾನಿಗಳು ನಿರೀಕ್ಷಿಸುತ್ತಿದ್ದಾರೆ.

ಇದನ್ನೂ ಓದಿ: Sapthami Gowda: ‘ಯುವ’ ಚಿತ್ರಕ್ಕೆ ಸಪ್ತಮಿ ಗೌಡ ನಾಯಕಿ: ‘ಹೊಂಬಾಳೆ ಫಿಲ್ಮ್ಸ್​’ ಜೊತೆ ಮತ್ತೆ ಕೈ ಜೋಡಿಸಿದ ‘ಕಾಂತಾರ’ ನಟಿ

ಆರ್​ಸಿಬಿಯು ಹಲವು ವಿಧವಾದ ವಿಡಿಯೋಗಳನ್ನು ಬಿಡುಗಡೆ ಮಾಡುತ್ತಲೇ ಇರುತ್ತದೆ. ಆಟಗಾರರ ಸಂದರ್ಶನ, ಡ್ರೆಸ್ಸಿಂಗ್ ರೂಮ್​ನಲ್ಲಿ ನಡೆವ ಫನ್ ಘಟನೆಗಳ ವಿಡಿಯೋ, ಆಟಗಾರರ ಪ್ರಾಕ್ಟೀಸ್ ವಿಡಿಯೋಗಳು ಇವುಗಳ ಜೊತೆಗೆ ಮಿಸ್ಟರ್ ನ್ಯಾಗ್ಸ್​ ವಿಡಿಯೋವನ್ನು ಸಹ ಬಿಡುಗಡೆ ಮಾಡುತ್ತಾ ಅಭಿಮಾನಿಗಳೊಟ್ಟಿಗೆ ಸಂಪರ್ಕದಲ್ಲಿರುತ್ತದೆ. ಇದೀಗ ಹೊಂಬಾಳೆಯು ಆರ್​ಸಿಬಿಯ ವಿಡಿಯೋವನ್ನು ಮಾಡಲಿದ್ದು ಬೇರೆ ಏನು ನೀಡಬಹುದು ಎಂಬ ಕುತೂಹಲ ಮೂಡಿದೆ.

ಹೊಂಬಾಳೆಯು ಅತ್ಯಂತ ಕಡಿಮೆ ಅವಧಿಯಲ್ಲಿ ಭಾರತದ ಟಾಪ್ ನಿರ್ಮಾಣ ಸಂಸ್ಥೆಗಳಲ್ಲಿ ಒಂದಾಗಿ ಸ್ಥಾನಪಡೆದುಕೊಂಡಿದೆ. ಪುನೀತ್ ರಾಜ್​ಕುಮಾರ್ ನಟನೆಯ ನಿನ್ನಿಂದಲೆ ಸಿನಿಮಾ ಮೂಲಕ ನಿರ್ಮಾಣ ಆರಂಭಿಸಿ, ಈ ವರೆಗೆ ಏಳು ಸಿನಿಮಾಗಳನ್ನು ನಿರ್ಮಾಣ ಮಾಡಿದೆ. ಪ್ರಸ್ತುತ ಹಲವು ಪ್ರಾಜೆಕ್ಟ್​ಗಳಲ್ಲಿ ಹೊಂಬಾಳೆ ಬಂಡವಾಳ ಹೂಡಿದ್ದು, ಪ್ರಭಾಸ್ ನಟನೆಯ ಸಲಾರ್, ರಿಷಬ್ ಶೆಟ್ಟಿಯ ಕಾಂತಾರ 2, ಜಗ್ಗೇಶ್ ನಟನೆಯ ರಾಘವೇಂದ್ರ ಸ್ಟೋರ್ಸ್, ಶ್ರೀಮುರಳಿ ನಟನೆಯ ಬಘೀರ, ಫಹಾದ್ ಫಾಸಿಲ್ ನಟನೆಯ ಬಹುಭಾಷಾ ಸಿನಿಮಾ ಧೂಮಂ, ರಕ್ಷಿತ್ ಶೆಟ್ಟಿ ನಟಿಸಿ ನಿರ್ದೇಶನ ಮಾಡುತ್ತಿರುವ ರಿಚರ್ಡ್ ಆಂಟೊನಿ, ಮಲಯಾಳಂನ ಪೃಥ್ವಿರಾಜ್ ಸುಕುಮಾರ್ ನಿರ್ದೇಶನ ಮಾಡುತ್ತಿರುವ ಟೈಸನ್ ಸಿನಿಮಾಗಳ ಮೇಳೆ ಬಂಡವಾಳ ಹೂಡಿದೆ. ಇದರ ಜೊತೆಗೆ ಹಿಂದಿಯಲ್ಲಿಯೂ ಸಿನಿಮಾ ಒಂದನ್ನು ನಿರ್ಮಿಸಲು ಮುಂದಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪದ್ಮ ಭೂಷಣ ಪ್ರಶಸ್ತಿ ಪಡೆಯಲು ಬಂದ ಬಾಲಯ್ಯ ಗತ್ತು ಹೇಗಿತ್ತು ನೋಡಿ..
ಪದ್ಮ ಭೂಷಣ ಪ್ರಶಸ್ತಿ ಪಡೆಯಲು ಬಂದ ಬಾಲಯ್ಯ ಗತ್ತು ಹೇಗಿತ್ತು ನೋಡಿ..
ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ ಕೊಪ್ಪಳದ 96 ವರ್ಷದ ಭೀಮವ್ವ ಶಿಳ್ಳೆಕ್ಯಾತರ
ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ ಕೊಪ್ಪಳದ 96 ವರ್ಷದ ಭೀಮವ್ವ ಶಿಳ್ಳೆಕ್ಯಾತರ
ಸ್ಪಿನ್ ಲೆಜೆಂಡ್ ಆರ್​. ಅಶ್ವಿನ್​ಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ
ಸ್ಪಿನ್ ಲೆಜೆಂಡ್ ಆರ್​. ಅಶ್ವಿನ್​ಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ
ಕಪ್ಪು ಬಾವುಟ ಪ್ರದರ್ಶಿಶಿದ ಮಹಿಳೆಯರ ವಿರುದ್ಧ ಕೇಸ್ ದಾಖಲಾಗಿದೆ: ಐಜಿಪಿ
ಕಪ್ಪು ಬಾವುಟ ಪ್ರದರ್ಶಿಶಿದ ಮಹಿಳೆಯರ ವಿರುದ್ಧ ಕೇಸ್ ದಾಖಲಾಗಿದೆ: ಐಜಿಪಿ
Pahalgam Attack: ಪ್ರವಾಸಿಗರೊಬ್ಬರ ಕ್ಯಾಮರಾದಲ್ಲಿ ದಾಳಿ ಭೀಕರ ದೃಶ್ಯ!
Pahalgam Attack: ಪ್ರವಾಸಿಗರೊಬ್ಬರ ಕ್ಯಾಮರಾದಲ್ಲಿ ದಾಳಿ ಭೀಕರ ದೃಶ್ಯ!
ಸಿಎಂ ವರ್ತನೆಯಿಂದ ಅಧಿಕಾರಿ ಮಾನಸಿಕ ಕ್ಷೋಭೆಗೊಳಗಾಗಿರುತ್ತಾರೆ: ಶೆಟ್ಟರ್
ಸಿಎಂ ವರ್ತನೆಯಿಂದ ಅಧಿಕಾರಿ ಮಾನಸಿಕ ಕ್ಷೋಭೆಗೊಳಗಾಗಿರುತ್ತಾರೆ: ಶೆಟ್ಟರ್
ಪ್ರಧಾನಿ ಹೇಳಿದಂತೆ ಪಾಕ್​ ಅನ್ನು ನುಗ್ಗಿ ವೈರಿಗಳನ್ನು ಸದೆಬಡಿಯಬೇಕು: ಅರುಣ್
ಪ್ರಧಾನಿ ಹೇಳಿದಂತೆ ಪಾಕ್​ ಅನ್ನು ನುಗ್ಗಿ ವೈರಿಗಳನ್ನು ಸದೆಬಡಿಯಬೇಕು: ಅರುಣ್
ಇದು ಮನವಿ ಅಲ್ಲ ಎಚ್ಚರಿಕೆ ಮತ್ತು ಕಾಂಗ್ರೆಸ್ ಪಕ್ಷದ ಪ್ರತಿಜ್ಞೆ ಎಂದ ಡಿಕೆಶಿ
ಇದು ಮನವಿ ಅಲ್ಲ ಎಚ್ಚರಿಕೆ ಮತ್ತು ಕಾಂಗ್ರೆಸ್ ಪಕ್ಷದ ಪ್ರತಿಜ್ಞೆ ಎಂದ ಡಿಕೆಶಿ
ಪ್ರವಾದಿ, ಬಸವಣ್ಣ ಬಗ್ಗೆ ಯತ್ನಾಳ್​ಗೇನು ಗೊತ್ತು: ಕಾಶಪ್ಪನವರ್, ಶಾಸಕ
ಪ್ರವಾದಿ, ಬಸವಣ್ಣ ಬಗ್ಗೆ ಯತ್ನಾಳ್​ಗೇನು ಗೊತ್ತು: ಕಾಶಪ್ಪನವರ್, ಶಾಸಕ
ಸಿಎಂ ಸಿದ್ದರಾಮಯ್ಯ ಪಾಕಿಸ್ತಾನಕ್ಕೆ ನಿಜವಾದ ರಾಯಭಾರಿ!: ಆರ್ ಅಶೋಕ್
ಸಿಎಂ ಸಿದ್ದರಾಮಯ್ಯ ಪಾಕಿಸ್ತಾನಕ್ಕೆ ನಿಜವಾದ ರಾಯಭಾರಿ!: ಆರ್ ಅಶೋಕ್