AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Darshan: ರಿಯಲ್ ಸಾರಥಿ ಜೊತೆ ರೀಲ್​ ಸಾರಥಿ ಭೇಟಿ! ಡಿ ಬಾಸ್​ ದರ್ಶನ್​ ಬಾಲ್ಯದ ವಿಶೇಷ ವ್ಯಕ್ತಿ ಇವರು

ಸದ್ಯ ದರ್ಶನ್​ ಭೇಟಿಯಾಗಿರುವ ವಿಶೇಷ ವ್ಯಕ್ತಿಯ ಹೆಸರು ಸುಂದರ್​ ರಾಜ್​. ಶಾಲೆ ಮಕ್ಕಳು ಅವರನ್ನು ಪ್ರೀತಿಯಿಂದ ಸುಂದರ್​ ಅಂಕಲ್​ ಎಂದು ಕರೆಯುತ್ತಿದ್ದರು. ಅದೇ ಪ್ರೀತಿಯನ್ನು ದರ್ಶನ್​ ಇಂದಿಗೂ ಇಟ್ಟುಕೊಂಡಿದ್ದಾರೆ.

Darshan: ರಿಯಲ್ ಸಾರಥಿ ಜೊತೆ ರೀಲ್​ ಸಾರಥಿ ಭೇಟಿ! ಡಿ ಬಾಸ್​ ದರ್ಶನ್​ ಬಾಲ್ಯದ ವಿಶೇಷ ವ್ಯಕ್ತಿ ಇವರು
ದರ್ಶನ್​ - ಸುಂದರ್​ ರಾಜ್​
ಮದನ್​ ಕುಮಾರ್​
| Edited By: |

Updated on: Mar 23, 2021 | 8:48 AM

Share

ನಟ ದರ್ಶನ್​ ಅವರು ಆಗಾಗ ತಮ್ಮ ಸರಳತೆಯ ಕಾರಣದಿಂದ ಸುದ್ದಿ ಆಗುತ್ತಿರುತ್ತಾರೆ. ಎಷ್ಟೇ ದೊಡ್ಡ ಸ್ಟಾರ್​ ಆಗಿದ್ದರೂ ಅವರು ತಮ್ಮ ಹಳೇ ದಿನಗಳನ್ನು ಮರೆತಿಲ್ಲ. ತಾವು ನಡೆದುಬಂದ ಕಷ್ಟದ ದಿನಗಳ ಬಗ್ಗೆ, ಜೊತೆಗಿದ್ದ ಸ್ನೇಹಿತರ ಬಗ್ಗೆ ಡಿ ಬಾಸ್​ ಆಗಾಗ ಮಾತನಾಡುತ್ತಾರೆ. ವಿಶೇಷ ಏನೆಂದರೆ, ಈಗ ಓರ್ವ ಸ್ಪೆಷಲ್​ ವ್ಯಕ್ತಿಯನ್ನು ದರ್ಶನ್​ ಭೇಟಿಯಾಗಿದ್ದಾರೆ. ಆ ಭೇಟಿಯ ಸಂದರ್ಭದಲ್ಲಿ ಕ್ಲಿಕ್ಕಿಸಿದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿವೆ.

ದರ್ಶನ್​ ಅವರಿಗೆ ಮೈಸೂರಿನ ಜೊತೆ ವಿಶೇಷ ನಂಟು ಇದೆ. ಮೈಸೂರಿನಲ್ಲಿ ಅವರು ಬಾಲ್ಯ ಕಳೆದಿದ್ದಾರೆ. ಅಂದು ಅವರು ಶಾಲೆಗೆ ಹೋಗುತ್ತಿದ್ದ ಬಸ್​ನ ಚಾಲಕರನ್ನು ದರ್ಶನ್​ ಇಂದು ನೆನಪು ಮಾಡಿಕೊಂಡಿದ್ದಾರೆ. ಅವರ ಮನೆಗೆ ಭೇಟಿ ನೀಡಿ, ಕೆಲವು ಸಮಯ ಕಳೆದು ಬಂದಿದ್ದಾರೆ. ಆ ಖುಷಿಯನ್ನು ಅಭಿಮಾನಿಗಳ ಜೊತೆ ‘ಚಾಲೆಂಜಿಂಗ್​ ಸ್ಟಾರ್​’ ಹಂಚಿಕೊಂಡಿದ್ದಾರೆ.

‘ರಿಯಲ್​ ಸಾರಥಿ ಜೊತೆ ಸಾರಥಿಯ ಭೇಟಿ. ನಾವು ಶಾಲೆಗೆ ಹೋಗುತ್ತಿದ್ದ ಕೆಎಸ್​ಆರ್​ಟಿಸಿ ಬಸ್​ನ ಡ್ರೈವರ್​ ಇವರು. ಇಂದು ಅವರ 80ನೇ ಹುಟ್ಟುಹಬ್ಬದ ಸಲುವಾಗಿ ಭೇಟಿಯಾಗಿ ವಿಶ್​ ಮಾಡಿದ್ದೇನೆ. ಅವರ ಆಶೀರ್ವಾದ ಪಡೆದುಕೊಂಡಿದ್ದೇನೆ’ ಎಂದು ಟ್ವಿಟರ್​ನಲ್ಲಿ ದರ್ಶನ್​ ಬರೆದುಕೊಂಡಿದ್ದಾರೆ. ಈ ಫೋಟೋಗಳನ್ನು ಅಭಿಮಾನಿಗಳು ಎಲ್ಲೆಡೆ ಶೇರ್​ ಮಾಡುತ್ತಿದ್ದಾರೆ.

ಈಗಲೂ ದರ್ಶನ್​ಗೆ ಮೈಸೂರು ಎಂದರೆ ವಿಶೇಷ ಪ್ರೀತಿ. ಸಮಯ ಸಿಕ್ಕಾಗಲೆಲ್ಲ ಅವರು ಅಲ್ಲಿಗೆ ತೆರಳುತ್ತಾರೆ. ಶೂಟಿಂಗ್​ ಬಿಡುವಿನಲ್ಲಿ ಮೈಸೂರಿನ ತಮ್ಮ ಹಳೇ ಸ್ನೇಹಿತರನ್ನು ಭೇಟಿ ಮಾಡುತ್ತಾರೆ. ತಾವೊಬ್ಬ ಸೂಪರ್​ ಸ್ಟಾರ್​ ಎಂಬುದನ್ನು ಬದಿಗಿಟ್ಟು ಎಲ್ಲರ ಜೊತೆ ಬೆರೆಯುತ್ತಾರೆ. ಅದಕ್ಕೆ ಈ ಘಟನೆಯೇ ಲೇಟೆಸ್ಟ್​ ಉದಾಹರಣೆ. ಸದ್ಯ ದರ್ಶನ್​ ಭೇಟಿಯಾಗಿರುವ ವಿಶೇಷ ವ್ಯಕ್ತಿಯ ಹೆಸರು ಸುಂದರ್​ ರಾಜ್​. ಶಾಲೆ ಮಕ್ಕಳು ಅವರನ್ನು ಪ್ರೀತಿಯಿಂದ ಸುಂದರ್​ ಅಂಕಲ್​ ಎಂದು ಕರೆಯುತ್ತಿದ್ದರು. ಅದೇ ಪ್ರೀತಿಯನ್ನು ದರ್ಶನ್​ ಇಂದಿಗೂ ಇಟ್ಟುಕೊಂಡಿದ್ದಾರೆ.

ಸಿನಿಮಾ ವಿಚಾರಕ್ಕೆ ಬರುವುದಾದರೆ, ದರ್ಶನ್​ ನಟನೆಯ ‘ರಾಬರ್ಟ್​’ ಚಿತ್ರ ಭಾರಿ ಯಶಸ್ಸು ಕಂಡಿದೆ. ಮೊದಲ ವಾರ 78.36 ಕೋಟಿ ರೂ. ಗಳಿಸಿದ ಈ ಸಿನಿಮಾ ದರ್ಶನ್​ ವೃತ್ತಿ ಜೀವನಕ್ಕೆ ದೊಡ್ಡ ಮೈಲೇಜ್​ ನೀಡಿದೆ. ಪ್ರೇಕ್ಷಕರು ಎರಡನೇ ವಾರ ಕೂಡ ಚಿತ್ರಮಂದಿರಗಳತ್ತ ಹೆಜ್ಜೆ ಹಾಕುತ್ತಿದ್ದಾರೆ. ಫ್ಯಾಮಿಲಿ ಪ್ರೇಕ್ಷಕರು ಸಹ ರಾಬರ್ಟ್​ಗೆ ಮನ ಸೋತಿದ್ದಾರೆ. ಕೊರೊನಾ ಎರಡನೇ ಅಲೆ ಭೀತಿ ನಡುವೆಯೂ ಈ ಸಿನಿಮಾ ಸೂಪರ್​ ಹಿಟ್​ ಆಗಿದೆ.

ಇದನ್ನೂ ಓದಿ: ಮಂತ್ರಾಲಯದ ಗೋಶಾಲೆಯಲ್ಲಿ ಕಾಲ ಕಳೆದ ಡಿ ಬಾಸ್​ ದರ್ಶನ್​! ವಿಡಿಯೋ ವೈರಲ್​

Roberrt First Week Collection: ರಾಬರ್ಟ್​ ಗಳಿಕೆ ಒಂದು ವಾರಕ್ಕೆ 78.36 ಕೋಟಿ! ತೆಲುಗು ಕಲೆಕ್ಷನ್​ ಎಷ್ಟು?

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್