AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸ್ಯಾಂಡಲ್​ವುಡ್​ ಬೌಲಿಂಗ್ ಲೀಗ್‌ 2ನೇ ಸೀಸನ್​ಗೆ ಸೆಲೆಬ್ರಿಟಿಗಳ ಉತ್ಸಾಹ; ನಡೆಯುತ್ತಿದೆ ತಯಾರಿ

Sandalwood Bowling League: ಚಂದನವನದಲ್ಲಿ ನಿರ್ಮಾಪಕ ಕಮರ್​ ಅವರು ಬೌಲಿಂಗ್​ ಲೀಗ್​ ಪರಿಚಯಿಸಿದರು. ಮೊದಲ ಸೀಸನ್​ಗೆ ಎಲ್ಲರಿಂದ ಸಿಕ್ಕ ಪ್ರತಿಕ್ರಿಯೆ ಕಂಡು ಅವರು ಖುಷಿ ಆಗಿದ್ದಾರೆ. ಹಾಗಾಗಿ ಮತ್ತೊಮ್ಮೆ ಅಷ್ಟೇ ಉತ್ಸಾಹದಿಂದ 2ನೇ ಸೀಸನ್​ನ ಬೌಲಿಂಗ್​ ಲೀಗ್​ ನಡೆಸಲು ಅವರು ಸಜ್ಜಾಗಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಅವರು ಈ ಕುರಿತು ಒಂದಷ್ಟು ಮಾಹಿತಿ ಹಂಚಿಕೊಂಡಿದ್ದಾರೆ.

ಸ್ಯಾಂಡಲ್​ವುಡ್​ ಬೌಲಿಂಗ್ ಲೀಗ್‌ 2ನೇ ಸೀಸನ್​ಗೆ ಸೆಲೆಬ್ರಿಟಿಗಳ ಉತ್ಸಾಹ; ನಡೆಯುತ್ತಿದೆ ತಯಾರಿ
ಸ್ಯಾಂಡಲ್​ವುಡ್​ ಬೌಲಿಂಗ್​ ಲೀಗ್​ ಸುದ್ದಿಗೋಷ್ಠಿ
ಮದನ್​ ಕುಮಾರ್​
|

Updated on: Nov 05, 2023 | 2:38 PM

Share

ಸ್ಯಾಂಡಲ್​ವುಡ್​ (Sandalwood) ಮಂದಿಗೆ ಕ್ರೀಡೆಯಲ್ಲಿ ಸಖತ್​ ಆಸಕ್ತಿ. ಸಿನಿಮಾ ಕೆಲಸಗಳ ನಡುನಡುವೆ ಕ್ರಿಕೆಟ್​, ಟೆನಿಸ್​ ಮುಂತಾದ ಪಂದ್ಯಗಳಲ್ಲಿ ಚಂದನವನದ ತಾರೆಯರು ಭಾಗಿ ಆಗುತ್ತಾರೆ. ಕ್ರಿಕೆಟ್, ಬ್ಯಾಡ್ಮಿಂಟನ್, ಕಬ್ಬಡಿ ಲೀಗ್‌ ಸೇರಿದಂತೆ ಹಲವು ಲೀಗ್‌ಗಳ ಜೊತೆಗೆ ಇದೀಗ ಬೌಲಿಂಗ್ ಲೀಗ್ (Bowling League) ಸಹ ಸೆಲೆಬ್ರಿಟಿಗಳ ವಲಯದಲ್ಲಿ ಕ್ರೇಜ್​ ಹುಟ್ಟುಹಾಕಿದೆ. ಕನ್ನಡ ಚಿತ್ರರಂಗದ ತಾರೆಯರು ಈ ಬಗ್ಗೆ ಆಸಕ್ತಿ ತೋರಿಸಿದ್ದಾರೆ. ಬೌಲಿಂಗ್ ಲೀಗ್ 2ನೇ ಸೀಸನ್​ಗೆ ಸಕಲ ಸಿದ್ಧತೆ ಶುರುವಾಗಿದೆ. ನಿರ್ಮಾಪಕ ಕಮರ್​ (Kamar) ಅವರು ಇದರ ಆಯೋಜನೆಯ ಉಸ್ತುವಾರಿ ವಹಿಸಿಕೊಂಡಿದ್ದಾರೆ. ಆ ಮೂಲಕ ಕನ್ನಡ ಚಿತ್ರರಂಗದ ಅನೇಕ ಸೆಲೆಬ್ರಿಟಿಗಳನ್ನು ಅವರು ಒಂದೆಡೆ ಸೇರಿಸುತ್ತಿದ್ದಾರೆ.

ಕಳೆದ ಬಾರಿ ಸ್ಯಾಂಡಲ್‌ವುಡ್‌ನಲ್ಲಿ ಮೊದಲ ಸೀಸನ್​ನ ಬೌಲಿಂಗ್ ಲೀಗ್ ಯಶಸ್ವಿಯಾಗಿತ್ತು. ಅದರಲ್ಲಿ ಅನೇಕ ಸೆಲೆಬ್ರಿಟಿಗಳು ಭಾಗಿ ಆಗಿದ್ದರು. ಆ ಯಶಸ್ಸಿನ ಬೆನ್ನಲ್ಲೇ ಇದೀಗ 2ನೇ ಸೀಸನ್​ನ ಬೌಲಿಂಗ್ ಲೀಗ್‌ ಆಯೋಜನೆಗೊಳ್ಳುತ್ತಿದೆ. ಅದರಲ್ಲಿ ಪಾಲ್ಗೊಳ್ಳಲು ಕನ್ನಡ ಚಿತ್ರರಂಗದ ಸೆಲೆಬ್ರಿಟಿಗಳು ಉತ್ಸಾಹ ತೋರಿಸಿದ್ದಾರೆ. ಈ ಬಾರಿಯ ಬೌಲಿಂಗ್ ಲೀಗ್ ಆರಂಭಕ್ಕೂ ಮುನ್ನ ಸುದ್ದಿಗೋಷ್ಠಿ ನಡೆಸಲಾಗಿದೆ. ಶನಿವಾರ (ನವೆಂಬರ್​ 4) ಬೆಂಗಳೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಸೆಲೆಬ್ರಿಟಿಗಳು ತಮ್ಮ ಎಗ್ಸೈಟ್​ಮೆಂಟ್​ ಬಗ್ಗೆ ಮಾತನಾಡಿದ್ದಾರೆ.

ಇದನ್ನೂ ಓದಿ: ‘ಟಗರು ಪಲ್ಯ’ ಚಿತ್ರಕ್ಕೆ ಜನಮೆಚ್ಚುಗೆ; ನಿರ್ಮಾಪಕನಾಗಿ ಡಾಲಿ ಧನಂಜಯ್​ಗೆ ಹ್ಯಾಟ್ರಿಕ್​ ಗೆಲುವು

ಚಂದನವನದಲ್ಲಿ ನಿರ್ಮಾಪಕ ಕಮರ್​ ಅವರು ಬೌಲಿಂಗ್​ ಲೀಗ್​ ಪರಿಚಯಿಸಿದರು. ಮೊದಲ ಸೀಸನ್​ಗೆ ಎಲ್ಲರಿಂದ ಸಿಕ್ಕ ಪ್ರತಿಕ್ರಿಯೆ ಕಂಡು ಅವರು ಖುಷಿ ಆಗಿದ್ದಾರೆ. ಹಾಗಾಗಿ ಮತ್ತೊಮ್ಮೆ ಅಷ್ಟೇ ಉತ್ಸಾಹದಿಂದ 2ನೇ ಸೀಸನ್​ನ ಬೌಲಿಂಗ್​ ಲೀಗ್​ ನಡೆಸಲು ಅವರು ಸಜ್ಜಾಗಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಅವರು ಈ ಕುರಿತು ಒಂದಷ್ಟು ಮಾಹಿತಿ ಹಂಚಿಕೊಂಡಿದ್ದಾರೆ. ಈ ಸುದ್ದಿಗೋಷ್ಠಿಯಲ್ಲಿ ಕಾರುಣ್ಯ ರಾಮ್​, ರಚನಾ ಇಂದರ್​, ಧನ್ಯಾ ರಾಮ್​ಕುಮಾರ್​, ಬೃಂದಾ ಆಚಾರ್ಯಾ, ಸಾಕ್ಷಿ, ರಕ್ಷಿತಾ ಶೆಟ್ಟಿ, ಕೆಂಪೇಗೌಡ, ತರುಣ್​ ಚಂದ್ರ, ಭರತ್​ ಮುಂತಾದವರು ಭಾಗಿ ಆಗಿದ್ದರು.

ಇದನ್ನೂ ಓದಿ: ದೆವ್ವದ ಸಿನಿಮಾ ಶೂಟಿಂಗ್ ವೇಳೆ ಆದ ಅನುಭವಗಳ ಬಗ್ಗೆ ಪ್ರಿಯಾಂಕಾ ಉಪೇಂದ್ರ ಮಾತು

ಮೊದಲ ಸೀಸನ್​ನ ಬೌಲಿಂಗ್​ ಲೀಗ್​ನಲ್ಲಿ ಶ್ರೀನಗರ ಕಿಟ್ಟಿ ನೇತೃತ್ವದ ತಂಡ ಗೆಲುವು ಸಾಧಿಸಿತ್ತು. ಹಾಗಾದರೆ, ಬಾರಿಯ ಬೌಲಿಂಗ್ ಲೀಗ್‌ ಟ್ರೋಫಿ ಯಾರ ಪಾಲಾಗಲಿದೆ ಎಂಬುದನ್ನು ತಿಳಿಯುವ ಕೌತುಕ ಮೂಡಿದೆ. ಡಿಸೆಂಬರ್‌ ತಿಂಗಳಲ್ಲಿ ಲೀಗ್ ಆರಂಭ ಆಗಲಿದೆ. 2 ದಿನಗಳ ಕಾಲ ಲೀಗ್​ ನಡೆಯಲಿದೆ. ಇದರಲ್ಲಿ ಅನೇಕ ಸೆಲೆಬ್ರಿಟಿಗಳು ಪಾಲ್ಗೊಳ್ಳಲಿದ್ದಾರೆ. ಈ ಬಾರಿಯ ಬೌಲಿಂಗ್​ ಲೀಗ್​ನಲ್ಲಿ ಯಾವೆಲ್ಲ ವಿಶೇಷತೆಗಳು ಇರಲಿವೆ? ಭಾಗವಹಿಸುವ ಸೆಲೆಬ್ರಿಟಿಗಳು ಯಾರು ಎಂಬಿತ್ಯಾದಿ ವಿವರಗಳನ್ನು ‘ಕಮರ್​ ಫಿಲ್ಮ್​ ಫ್ಯಾಕ್ಟರ್​’ ಸದ್ಯದಲ್ಲೇ ನೀಡಲಿದೆ. ಈ ಬಾರಿ ಲೀಗ್‌ನಲ್ಲಿ 6 ತಂಡಗಳು ಇರಲಿದ್ದು, ಸೆಲೆಬ್ರಿಟಿಗಳ ಜೊತೆ ಪತ್ರಕರ್ತರು ಕೂಡ ಭಾಗವಹಿಸಲಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Follow Us
ಹೆಂಡ್ತಿ ರೆಡ್​ ಹ್ಯಾಂಡ್ ಸಿಕ್ಕಿಬಿದ್ದಾಗ ಬುದ್ದಿ ಹೇಳಿದ್ದೆ: ಪತಿ ಕಣ್ಣೀರು!
ಹೆಂಡ್ತಿ ರೆಡ್​ ಹ್ಯಾಂಡ್ ಸಿಕ್ಕಿಬಿದ್ದಾಗ ಬುದ್ದಿ ಹೇಳಿದ್ದೆ: ಪತಿ ಕಣ್ಣೀರು!
ಜೀವಜಲಕ್ಕಾಗಿ 2 ಕಿ.ಮೀ ನಡೆದುಕೊಂಡು ಹೋಗ್ಬೇಕು! ನರಲಗುಡ್ಡ ನಿವಾಸಿಗಳ ಪರದಾಟ!
ಜೀವಜಲಕ್ಕಾಗಿ 2 ಕಿ.ಮೀ ನಡೆದುಕೊಂಡು ಹೋಗ್ಬೇಕು! ನರಲಗುಡ್ಡ ನಿವಾಸಿಗಳ ಪರದಾಟ!
ನೆಲಮಂಗಲದಲ್ಲಿ ಹೊತ್ತಿ ಉರಿದ ಫ್ಲೈವುಡ್ ಗೋದಾಮು
ನೆಲಮಂಗಲದಲ್ಲಿ ಹೊತ್ತಿ ಉರಿದ ಫ್ಲೈವುಡ್ ಗೋದಾಮು
ಬಿರುಗಾಳಿ ಮಳೆಗೆ ಧರೆಗುರುಳಿದ ಬೃಹತ್​​ ಮರ: 15ಕ್ಕೂ ಹೆಚ್ಚು ಬೈಕ್​ಗಳು ಜಖಂ
ಬಿರುಗಾಳಿ ಮಳೆಗೆ ಧರೆಗುರುಳಿದ ಬೃಹತ್​​ ಮರ: 15ಕ್ಕೂ ಹೆಚ್ಚು ಬೈಕ್​ಗಳು ಜಖಂ
ಗೂಳಿ ಮತ್ತು ನಾಯಿ ನಡುವೆ ಕಾದಾಟ, ಇಬ್ಬರು ಮಹಿಳೆಯರಿಗೆ ಗಾಯ
ಗೂಳಿ ಮತ್ತು ನಾಯಿ ನಡುವೆ ಕಾದಾಟ, ಇಬ್ಬರು ಮಹಿಳೆಯರಿಗೆ ಗಾಯ
ಹುಬ್ಬಳ್ಳಿಯಲ್ಲಿ ಮತ್ತೊಮ್ಮೆ ಪ್ರಯಾಣಿಕರ ಎದೆ ನಡುಗಿಸಿದ 'ಫ್ಲೈ 91' ವಿಮಾನ
ಹುಬ್ಬಳ್ಳಿಯಲ್ಲಿ ಮತ್ತೊಮ್ಮೆ ಪ್ರಯಾಣಿಕರ ಎದೆ ನಡುಗಿಸಿದ 'ಫ್ಲೈ 91' ವಿಮಾನ
ಬೆಳಗಾವಿ, ಬೀದರ್​​ನಲ್ಲಿ ಬಿಸಿಲಿಗೆ ಸಾವಾಗಿಲ್ಲ: ಅಸಲಿ ಸತ್ಯ ರಿವೀಲ್​
ಬೆಳಗಾವಿ, ಬೀದರ್​​ನಲ್ಲಿ ಬಿಸಿಲಿಗೆ ಸಾವಾಗಿಲ್ಲ: ಅಸಲಿ ಸತ್ಯ ರಿವೀಲ್​
ಅತ್ತಿಕೋಣೆಯಲ್ಲಿಕುಡಿಯುವ ನೀರಿಗಾಗಿ ಅಪಾಯಕಾರಿ ದೋಣಿ ಯಾನದ ಸಾಹಸ!
ಅತ್ತಿಕೋಣೆಯಲ್ಲಿಕುಡಿಯುವ ನೀರಿಗಾಗಿ ಅಪಾಯಕಾರಿ ದೋಣಿ ಯಾನದ ಸಾಹಸ!
ಸ್ನೇಹಿತನ ಹೊಸ ಕಾರು ಓಡಿಸಿದ ಸಚಿವ ಪರಮೇಶ್ವರ್!
ಸ್ನೇಹಿತನ ಹೊಸ ಕಾರು ಓಡಿಸಿದ ಸಚಿವ ಪರಮೇಶ್ವರ್!
‘ಎಲ್ರ ಕಾಲೆಳಿತದೆ ಕಾಲ’ ಕನ್ನಡ ಸಿನಿಮಾ ಬಗ್ಗೆ ಅನುರಾಗ್ ಕಶ್ಯಪ್ ಮಾತು
‘ಎಲ್ರ ಕಾಲೆಳಿತದೆ ಕಾಲ’ ಕನ್ನಡ ಸಿನಿಮಾ ಬಗ್ಗೆ ಅನುರಾಗ್ ಕಶ್ಯಪ್ ಮಾತು