AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಪ್ತ ಸಾಗರದಾಚೆ ಎಲ್ಲೋ: ಸೈಡ್ ಬಿನಲ್ಲಿ ಬಣ್ಣ ಬದಲಿಸಿ ಕೆಂಪಾದ ಕತೆ

Sapta Sagaradache Ello Side B: ರಕ್ಷಿತ್ ಶೆಟ್ಟಿ-ರುಕ್ಮಿಣಿ ವಸಂತ್ ನಟಿಸಿದ್ದ ನವಿರು ಪ್ರೇಮಕತೆ ಸಪ್ತ ಸಾಗರದಾಚೆ ಎಲ್ಲೋ ಸಿನಿಮಾ ಪ್ರೇಕ್ಷಕರು ಹಾಗೂ ವಿಮರ್ಶಕರ ಮೆಚ್ಚುಗೆ ಗಳಿಸಿತ್ತು. ಈ ಸಿನಿಮಾದ ಎರಡನೇ ಭಾಗ ಬಿಡುಗಡೆಗೆ ಸಜ್ಜಾಗಿದ್ದು ಸಿನಿಮಾದ ಟ್ರೈಲರ್ ಬಿಡುಗಡೆ ಆಗಿದೆ.

ಸಪ್ತ ಸಾಗರದಾಚೆ ಎಲ್ಲೋ: ಸೈಡ್ ಬಿನಲ್ಲಿ ಬಣ್ಣ ಬದಲಿಸಿ ಕೆಂಪಾದ ಕತೆ
ಎಸ್​ಎಸ್​ಇ2
ಮಂಜುನಾಥ ಸಿ.
|

Updated on:Nov 04, 2023 | 7:12 PM

Share

ರಕ್ಷಿತ್ ಶೆಟ್ಟಿ (Rakshit Shetty), ರುಕ್ಮಿಣಿ ವಸಂತ್ (Rukmini Vasanth) ನಟನೆಯ ‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾ ಸೆಪ್ಟೆಂಬರ್ 1 ರಂದು ಬಿಡುಗಡೆ ಆಗಿ ಪ್ರೇಕ್ಷಕರು ಹಾಗೂ ವಿಮರ್ಶಕರ ಮೆಚ್ಚುಗೆಗೆ ಪಾತ್ರವಾಗಿತ್ತು. ಹೊಡಿ, ಬಡಿ ಸಿನಿಮಾಗಳ ಜಮಾನಾದಲ್ಲಿ ನವಿರು ಪ್ರೇಮಕತೆಯನ್ನು ಇಂಟೆನ್ಸ್​ ಆಗಿ ಹೇಳಿರುವ ರೀತಿಗೆ ಪ್ರೇಕ್ಷಕರು ಫಿದಾ ಆಗಿದ್ದರು. ಮನು ಹಾಗೂ ಪ್ರಿಯಾಳ ಜಗತ್ತಿನಲ್ಲಿ ತಾವೂ ಒಬ್ಬರಾಗಿ ಅವರ ಪ್ರೀತಿ, ಖುಷಿ, ದುಃಖಗಳನ್ನು ತಾವೂ ಅನುಭವಿಸಿ ಹೊಸ ರೀತಿಯ ಅನುಭವ ಪಡೆದಿದ್ದರು. ‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾವು ಒಂದು ಕುತೂಹಕಲಕಾರಿ ಘಟ್ಟದಲ್ಲಿ ಅಂತ್ಯವಾಗಿ, ಕತೆಯಲ್ಲಿ ಮುಂದೆ ಏನಾಯ್ತು ಎಂಬುದನ್ನು ಮುಂದಿನ ಭಾಗದಲ್ಲಿ ತೋರಿಸುವುದಾಗಿ ಹೇಳಿದ್ದರು ನಿರ್ದೇಶಕ ಹೇಮಂತ್ ರಾವ್.

ಅಂತೆಯೇ ಇದೀಗ ‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾದ ಸೈಡ್ ಬಿ ಅಥವಾ ಎರಡನೇ ಭಾಗದ ಟ್ರೈಲರ್ ಬಿಡುಗಡೆ ಆಗಿದೆ. ಮೊದಲ ಭಾಗದ ಟ್ರೈಲರ್​ನಲ್ಲಿ ನೀಲಿ ಬಣ್ಣ ಢಾಳಾಗಿ ಕಂಡಿತ್ತು, ಆದರೆ ಸೈಡ್ ಬಿನಲ್ಲಿ ನವಿರಾದ ನೀಲಿ ಬಣ್ಣದ ಸ್ಥಾನವನ್ನು ಕೆಂಪು ಬಣ್ಣ ಆಕ್ರಮಿಸಿದೆ. ಅಪ್ಪಟ ಪ್ರೇಮಿಯಾಗಿದ್ದ ಮನು, ಇಲ್ಲಿ ಅವತಾರ ಬದಲಿಸಿಕೊಂಡು ವೈಯಲೆಂಟ್ ಆಗಿದ್ದಾನೆ. ಕೈಯಲ್ಲಿ ಚಾಕು ಸಹ ಇದೆ.

ಮೊದಲ ಭಾಗದಲ್ಲಿ ಜೈಲು ಪಾಲಾಗಿ ತನ್ನ ಪ್ರೀತಿಗೆ ದೂರವಾಗುವ ಸನ್ನಿವೇಶ ತಂದುಕೊಂಡಿದ್ದ ಮನು, ಎರಡನೇ ಭಾಗದಲ್ಲಿ ಜೈಲಿನಿಂದ ಬಿಡುಗಡೆಯನ್ನೇನೋ ಪಡೆದಿದ್ದಾನೆ. ಆದರೆ ಪ್ರಿಯಾಳ ನೆನಪಿನಿಂದ ಹೊರಗೆ ಬಂದಿಲ್ಲ. ಪ್ರಿಯಾ ಈಗ ಭಿನ್ನ ಜಗತ್ತಿನಲ್ಲಿ ಬದುಕುತ್ತಿದ್ದಾಳೆ. ಎದುರು-ಬದುರು ಇದ್ದರೂ ಸಹ ಒಬ್ಬೊಬ್ಬರು ಒಂದೊಂದು ತೀರವಾಗಿಬಿಟ್ಟಿದ್ದಾರೆ ಪ್ರಿಯಾ ಹಾಗೂ ಮನು.

ಇದನ್ನೂ ಓದಿ:ನವೆಂಬರ್​ 17ಕ್ಕೆ ‘ಸಪ್ತ ಸಾಗರದಾಚೆ ಎಲ್ಲೋ ಸೈಡ್​ ಬಿ’ ಬಿಡುಗಡೆ; ಈ ಬಾರಿ ಏನು ಸ್ಪೆಷಲ್​?

ಟ್ರೈಲರ್​ನಲ್ಲಿ ಚೈತ್ರಾ ಆಚಾರ್ ಸಹ ಇದ್ದಾರೆ. ಮನು, ಪ್ರಿಯಾಳ ನೆನಪಿನಿಂದ ಹೊರಗೆ ಬರಲು ಚೈತ್ರಾ ಆಚಾರ್ ನಿರ್ವಹಿಸಿರುವ ಸುರಭಿ ಪಾತ್ರದ ಸಾಂಗತ್ಯಕ್ಕೆ ಜಾರುವ ಕೆಲವು ದೃಶ್ಯಗಳನ್ನು ಟ್ರೈಲರ್​ನಲ್ಲಿ ತೋರಿಸಲಾಗಿದೆ. ಮೊದಲ ಭಾಗದಲ್ಲಿ ಕಾಣಿಸಿಕೊಂಡಿದ್ದ ಅಚ್ಯುತ್ ಕುಮಾರ್ ಈ ಸಿನಿಮಾದಲ್ಲಿಯೂ ಕಾಣಿಸಿಕೊಳ್ಳಲಿದ್ದಾರೆ. ಎರಡನೇ ಭಾಗದಲ್ಲಿ ಗೋಪಾಲ ದೇಶಪಾಂಡೆ ಅವರಿಗೆ ಮಹತ್ವದ ಪಾತ್ರ ಇರುವಂತಿದೆ.

ಮೊದಲ ಭಾಗದಂತೆಯೇ ಎರಡನೇ ಭಾಗದಲ್ಲಿಯೂ ಸಂಗೀತ, ನಿರೂಪಣಾ ವಿಧಾನ, ಕ್ಯಾಮೆರಾ ಕೆಲಸಗಳು ಗಮನ ಸೆಳೆಯುವಂತಿದೆ. ಇದರ ಕೆಲವು ಝಲಕ್​ಗಳು ಟ್ರೈಲರ್​ನಲ್ಲಿಯೇ ಕಾಣ ಸಿಗುತ್ತವೆ. ಹೇಮಂತ್ ರಾವ್ ನಿರ್ದೇಶನದ ಈ ಸಿನಿಮಾಕ್ಕೆ ಚರಣ್ ರಾಜ್ ಸಂಗೀತ ನೀಡಿದ್ದಾರೆ. ನಿರ್ಮಾಣ ರಕ್ಷಿತ್ ಶೆಟ್ಟಿ ಅವರದ್ದೇ. ‘ಸಪ್ತ ಸಾಗರದಾಚೆ ಎಲ್ಲೋ ಸೈಡ್ ಬಿ’ ಸಿನಿಮಾ ನವೆಂಬರ್ 17ರಂದು ಕನ್ನಡ ಸೇರಿದಂತೆ ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಗಳಲ್ಲಿ ತೆರೆಗೆ ಬರಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 7:08 pm, Sat, 4 November 23

ಪ್ರಧಾನಿಯಾಗಿ ಇಂದಿರಾ ಗಾಂಧಿಯ ದಾಖಲೆ ಮುರಿದ ಮೋದಿಗೆ ಮುಯಿಝು ಅಭಿನಂದನೆ
ಪ್ರಧಾನಿಯಾಗಿ ಇಂದಿರಾ ಗಾಂಧಿಯ ದಾಖಲೆ ಮುರಿದ ಮೋದಿಗೆ ಮುಯಿಝು ಅಭಿನಂದನೆ
ಕೃಷ್ಣರಾಜ ಒಡೆಯರ್-ಸಿದ್ದರಾಮಯ್ಯ ಇಬ್ಬರೂ ಸಾಮಾಜಿಕ ಹರಿಕಾರರು: ಸಚಿವ
ಕೃಷ್ಣರಾಜ ಒಡೆಯರ್-ಸಿದ್ದರಾಮಯ್ಯ ಇಬ್ಬರೂ ಸಾಮಾಜಿಕ ಹರಿಕಾರರು: ಸಚಿವ
ಕರ್ನಾಟಕವೇ ದೇಶದಲ್ಲಿ ಪ್ರಥಮ ಬಾರಿಗೆ ಜಾತಿಗಣತಿ ಮಾಡಿಸಿದ್ದು: ಸಿದ್ದರಾಮಯ್ಯ
ಕರ್ನಾಟಕವೇ ದೇಶದಲ್ಲಿ ಪ್ರಥಮ ಬಾರಿಗೆ ಜಾತಿಗಣತಿ ಮಾಡಿಸಿದ್ದು: ಸಿದ್ದರಾಮಯ್ಯ
ಜಪಾನಿಗೆ ಬನ್ನೇರುಘಟ್ಟ ಸಾಕಾನೆಗಳ ಏರ್​ ಲಿಫ್ಟ್​ ಯಶಸ್ವಿ
ಜಪಾನಿಗೆ ಬನ್ನೇರುಘಟ್ಟ ಸಾಕಾನೆಗಳ ಏರ್​ ಲಿಫ್ಟ್​ ಯಶಸ್ವಿ
ಸುರ್ಜೇವಾಲಾ ಮಾಡಿದ್ದು ಸರಿಯಲ್ಲ ಅಂತ ರಾಜಣ್ಣನೇ ಹೇಳಿದ್ದಾರೆ: ರವಿಕುಮಾರ್
ಸುರ್ಜೇವಾಲಾ ಮಾಡಿದ್ದು ಸರಿಯಲ್ಲ ಅಂತ ರಾಜಣ್ಣನೇ ಹೇಳಿದ್ದಾರೆ: ರವಿಕುಮಾರ್
ಮಾಲ್ಡೀವ್ಸ್‌ನಲ್ಲಿ ಪ್ರಧಾನಿ ಮೋದಿಗೆ ಗೌರವದ ಸ್ವಾಗತ, ಭಾರತೀಯರಿಂದ ನೃತ್ಯ
ಮಾಲ್ಡೀವ್ಸ್‌ನಲ್ಲಿ ಪ್ರಧಾನಿ ಮೋದಿಗೆ ಗೌರವದ ಸ್ವಾಗತ, ಭಾರತೀಯರಿಂದ ನೃತ್ಯ
ಮಂತ್ರಿ ಮತ್ತು ಶಾಸಕರ ಜೊತೆ ಮಾತ್ರ ಸುರ್ಜೇವಾಲಾ ಮಾತುಕತೆ ನಡೆಸಿದರು: ಸಚಿವ
ಮಂತ್ರಿ ಮತ್ತು ಶಾಸಕರ ಜೊತೆ ಮಾತ್ರ ಸುರ್ಜೇವಾಲಾ ಮಾತುಕತೆ ನಡೆಸಿದರು: ಸಚಿವ
2023ರ ಕರ್ನಾಟಕ ಚುನಾವಣೆಯಲ್ಲಿ ಎಲ್ಲ ಸರಿಯಾಗಿತ್ತಾ? ಪ್ರಲ್ಹಾದ್ ಜೋಶಿ ಲೇವಡಿ
2023ರ ಕರ್ನಾಟಕ ಚುನಾವಣೆಯಲ್ಲಿ ಎಲ್ಲ ಸರಿಯಾಗಿತ್ತಾ? ಪ್ರಲ್ಹಾದ್ ಜೋಶಿ ಲೇವಡಿ
ಮಲ್ಲೇಶ್ವರಂ 11ನೇ ಮುಖ್ಯರಸ್ತೆಗೆ ಸರೋಜಾ ದೇವಿ ಹೆಸರು: ಶಾಸಕ ಅಶ್ವತ್ಥನಾರಾಯಣ
ಮಲ್ಲೇಶ್ವರಂ 11ನೇ ಮುಖ್ಯರಸ್ತೆಗೆ ಸರೋಜಾ ದೇವಿ ಹೆಸರು: ಶಾಸಕ ಅಶ್ವತ್ಥನಾರಾಯಣ
ನಮ್ಮ ನಿರ್ಮಾಣದ ಎರಡು ಸಿನಿಮಾಗಳ ಶೂಟಿಂಗ್ ನಡೆಯುತ್ತಿದೆ: ಹೆಬ್ಬಾಳ್ಕರ್
ನಮ್ಮ ನಿರ್ಮಾಣದ ಎರಡು ಸಿನಿಮಾಗಳ ಶೂಟಿಂಗ್ ನಡೆಯುತ್ತಿದೆ: ಹೆಬ್ಬಾಳ್ಕರ್