AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಲಾಕ್​ಡೌನ್​ ವೇಳೆ ಚಿತ್ರರಂಗದಲ್ಲಿ 4 ಕೋಟಿ ಡ್ರಗ್ಸ್​ ದಂಧೆ ನಡೆದಿದೆ -ನಿರ್ದೇಶಕ ಇಂದ್ರಜಿತ್

ಬೆಂಗಳೂರು: ಕನ್ನಡ ಚಿತ್ರರಂಗಕ್ಕೆ ಡ್ರಗ್ಸ್​ ಜಾಲದ ನಂಟಿರುವ ಆರೋಪಗಳು ಕೇಳಿ ಬರುತ್ತಿರುವ ಹಿನ್ನೆಲೆಯಲ್ಲಿ ಟಿವಿ9ಗೆ ನಿರ್ದೇಶಕ ಇಂದ್ರಜಿತ್ ಲಂಕೇಶ್ ಪ್ರತಿಕ್ರಿಯೆ ನೀಡಿದ್ದಾರೆ. ಇತ್ತೀಚೆಗೆ ಚಿತ್ರರಂಗಕ್ಕೆ ಬಂದಿರುವ 3ನೇ ಪೀಳಿಗೆಯವರಿಂದ ಹೀಗಾಗಿದೆ. ಮೂರನೇ ಪೀಳಿಗೆಯವರು ಸ್ಯಾಂಡಲ್​ವುಡ್​ನ ಕೆಡಿಸುತ್ತಿದ್ದಾರೆ ಎಂದು ಹೇಳಿದ್ದಾರೆ. ಕೆಲವು ನಟ, ನಟಿಯರು ಡ್ರಗ್ಸ್​ ದಂಧೆಯಲ್ಲಿ ಭಾಗಿಯಾಗಿದ್ದಾರೆ. ಚಿತ್ರೀಕರಣ ವೇಳೆ ರೇವ್​ ಪಾರ್ಟಿ ಸೇರಿ ಹಲವು ನಡೆಯುತ್ತೆ. ಈ ಹಿಂದೆ ಈ ರೀತಿ ಇರಲಿಲ್ಲ. ಈ ಹಿಂದೆ ನಮ್ಮ ಕನ್ನಡ ಚಿತ್ರರಂಗ ಸಾಂಪ್ರದಾಯಿಕವಾಗಿತ್ತು ಎಂದು ತಮ್ಮ ನೋವು […]

ಲಾಕ್​ಡೌನ್​ ವೇಳೆ ಚಿತ್ರರಂಗದಲ್ಲಿ 4 ಕೋಟಿ ಡ್ರಗ್ಸ್​ ದಂಧೆ ನಡೆದಿದೆ -ನಿರ್ದೇಶಕ ಇಂದ್ರಜಿತ್
KUSHAL V
| Edited By: ಸಾಧು ಶ್ರೀನಾಥ್​|

Updated on: Aug 29, 2020 | 12:31 PM

Share

ಬೆಂಗಳೂರು: ಕನ್ನಡ ಚಿತ್ರರಂಗಕ್ಕೆ ಡ್ರಗ್ಸ್​ ಜಾಲದ ನಂಟಿರುವ ಆರೋಪಗಳು ಕೇಳಿ ಬರುತ್ತಿರುವ ಹಿನ್ನೆಲೆಯಲ್ಲಿ ಟಿವಿ9ಗೆ ನಿರ್ದೇಶಕ ಇಂದ್ರಜಿತ್ ಲಂಕೇಶ್ ಪ್ರತಿಕ್ರಿಯೆ ನೀಡಿದ್ದಾರೆ. ಇತ್ತೀಚೆಗೆ ಚಿತ್ರರಂಗಕ್ಕೆ ಬಂದಿರುವ 3ನೇ ಪೀಳಿಗೆಯವರಿಂದ ಹೀಗಾಗಿದೆ. ಮೂರನೇ ಪೀಳಿಗೆಯವರು ಸ್ಯಾಂಡಲ್​ವುಡ್​ನ ಕೆಡಿಸುತ್ತಿದ್ದಾರೆ ಎಂದು ಹೇಳಿದ್ದಾರೆ.

ಕೆಲವು ನಟ, ನಟಿಯರು ಡ್ರಗ್ಸ್​ ದಂಧೆಯಲ್ಲಿ ಭಾಗಿಯಾಗಿದ್ದಾರೆ. ಚಿತ್ರೀಕರಣ ವೇಳೆ ರೇವ್​ ಪಾರ್ಟಿ ಸೇರಿ ಹಲವು ನಡೆಯುತ್ತೆ. ಈ ಹಿಂದೆ ಈ ರೀತಿ ಇರಲಿಲ್ಲ. ಈ ಹಿಂದೆ ನಮ್ಮ ಕನ್ನಡ ಚಿತ್ರರಂಗ ಸಾಂಪ್ರದಾಯಿಕವಾಗಿತ್ತು ಎಂದು ತಮ್ಮ ನೋವು ತೋಡಿಕೊಂಡಿದ್ದಾರೆ.

‘ಮಾಹಿತಿ ಇಟ್ಟುಕೊಂಡೇ ಆರೋಪ ಮಾಡುತ್ತಿರುವೆ’ ಆದರೆ ಈಗ ಡ್ರಗ್ಸ್​ ಪಾರ್ಟಿ ನಡೆಯುತ್ತಿದೆ. ಚಿತ್ರರಂಗದವರು ಸಿಕ್ಕಿ ಹಾಕಿಕೊಂಡರೂ ಕ್ರಮ ಕೈಗೊಂಡಿಲ್ಲ. ರಾಜಕೀಯ ಒತ್ತಡದಿಂದ ಯಾವುದೇ ಕ್ರಮ ಕೈಗೊಂಡಿಲ್ಲ. ಲಾಕ್​ಡೌನ್​ ವೇಳೆ ₹3.5ಯಿಂದ 4 ಕೋಟಿ ಡ್ರಗ್ಸ್​ ದಂಧೆ ನಡೆದಿದೆ ಎಂದು ನಾನು ಮಾಹಿತಿ ಇಟ್ಟುಕೊಂಡೇ ಆರೋಪ ಮಾಡುತ್ತಿರುವೆ ಎಂದು ಇಂದ್ರಜಿತ್​ ಲಂಕೇಶ್​ ಹೇಳಿದ್ದಾರೆ.

ಕೆಲವು ನಟರ ಎಸ್ಟೇಟ್​ಗಳಿಗೆ ಡ್ರಗ್ಸ್​ ಸರಬರಾಜಾಗುತ್ತಿವೆ. ಇದು ಅವರು ಬೆವರು ಸುರಿಸಿ ಕೊಟ್ಟಿರುವ ಹಣ ಅಲ್ಲ. ಜೊತೆಗೆ, ಕಾರು ಅಪಘಾತವಾದ ವೇಳೆ ಆ ನಟಿಯ ಹೆಸರು ಬಹಿರಂಗಪಡಿಸಲಿಲ್ಲ.

ಅವರ ವಿರುದ್ಧ ಯಾವುದೇ ಕ್ರಮ ಸಹ ಕೈಗೊಂಡಿಲ್ಲ. ಅಪಘಾತವಾದ ಕಾರ್​ನಲ್ಲಿ ಡ್ರಗ್ಸ್ ಸಿಕ್ಕಿದ್ದರೂ ಕ್ರಮ ಕೈಗೊಂಡಿಲ್ಲ. ಇವೆಲ್ಲದಕ್ಕೂ 4 ಪುಟಗಳ ದಾಖಲೆ ಇದೆ ನನ್ನ ಬಳಿ. ಹಣ ಪಾವತಿ ಮಾಡಿರುವ ಬಗ್ಗೆಯೂ ದಾಖಲೆ ಇದೆ. ಇಷ್ಟೆಲ್ಲಾ ಇದ್ದರೂ ಕ್ರಮ ಕೈಗೊಳ್ಳಲು ಹಿಂದೇಟು ಏಕೆ ಎಂದು ಇಂದ್ರಜಿತ್​ ಲಂಕೇಶ್​ ಪ್ರಶ್ನಿಸಿದ್ದಾರೆ.

ಜಾಲದಲ್ಲಿರುವ ನಟ, ನಟಿಯರ ಹೆಸರು ಬಹಿರಂಗವಾಗಿಲ್ಲ. ಇದರಲ್ಲಿ ರಾಜಕಾರಣಿಗಳು, ಅವರ ಪುತ್ರರ ಪ್ರಭಾವವಿದೆ. ನಟಿಯರ ಮೇಲಿನ ಮೋಹದಿಂದ ರಾಜಕಾರಣಿಗಳ ಮೇಲೆ ಒತ್ತಡ ಹೇರಲಾಗುತ್ತಿದೆ.

Follow Us
ಮೈದುಂಬಿದ ದೂದ್‌ಸಾಗರ ಜಲಪಾತ: ಫಾಲ್ಸ್​​ ಸೌಂದರ್ಯಕ್ಕೆ ಪ್ರವಾಸಿಗರು ಫಿದಾ
ಮೈದುಂಬಿದ ದೂದ್‌ಸಾಗರ ಜಲಪಾತ: ಫಾಲ್ಸ್​​ ಸೌಂದರ್ಯಕ್ಕೆ ಪ್ರವಾಸಿಗರು ಫಿದಾ
ಸಂಪುಟ ವಿಸ್ತರಣೆ ಚರ್ಚೆ: ಜು 17ರೊಳಗೆ ಸಚಿವಾಕಾಂಕ್ಷಿಗಳ ಪಟ್ಟಿ ಫೈನಲ್​?
ಸಂಪುಟ ವಿಸ್ತರಣೆ ಚರ್ಚೆ: ಜು 17ರೊಳಗೆ ಸಚಿವಾಕಾಂಕ್ಷಿಗಳ ಪಟ್ಟಿ ಫೈನಲ್​?
ಕುಡಿಯುವ ನೀರಿನ ಯೋಜನೆ ಕಾಮಗಾರಿ ವಿಳಂಬಕ್ಕೆ ಸಚಿವ ಯತೀಂದ್ರ ಗರಂ
ಕುಡಿಯುವ ನೀರಿನ ಯೋಜನೆ ಕಾಮಗಾರಿ ವಿಳಂಬಕ್ಕೆ ಸಚಿವ ಯತೀಂದ್ರ ಗರಂ
ಬಿಡದಿ ಟೌನ್​ಶಿಪ್ ವಿವಾದ: ಶಾಂತಿಯುತವಾಗಿ ಪ್ರತಿಭಟಿಸಿ; ಹೆಚ್​ಡಿಕೆ ಮನವಿ
ಬಿಡದಿ ಟೌನ್​ಶಿಪ್ ವಿವಾದ: ಶಾಂತಿಯುತವಾಗಿ ಪ್ರತಿಭಟಿಸಿ; ಹೆಚ್​ಡಿಕೆ ಮನವಿ
GBA ಅಸ್ತಿತ್ವಕ್ಕೆ ಬಂದರೂ ನಗರದಲ್ಲಿ ರಾರಾಜಿಸುತ್ತಿವೆ  BBMP ನಾಮಫಲಕಗಳು!
GBA ಅಸ್ತಿತ್ವಕ್ಕೆ ಬಂದರೂ ನಗರದಲ್ಲಿ ರಾರಾಜಿಸುತ್ತಿವೆ  BBMP ನಾಮಫಲಕಗಳು!
ವಿಪಕ್ಷ ನಾಯಕ ಆರ್​. ಅಶೋಕ್​​ಗೆ ರೈತರಿಂದ ಘೇರಾವ್​​
ವಿಪಕ್ಷ ನಾಯಕ ಆರ್​. ಅಶೋಕ್​​ಗೆ ರೈತರಿಂದ ಘೇರಾವ್​​
5 ದಿನ ಕಳೆದ್ರೂ ಸೆರೆಯಾಗದ ಚಿರತೆ! ರಸ್ತೆಯಲ್ಲಿ ಓಡಾಡಲೂ ಜನ ಹಿಂದೇಟು
5 ದಿನ ಕಳೆದ್ರೂ ಸೆರೆಯಾಗದ ಚಿರತೆ! ರಸ್ತೆಯಲ್ಲಿ ಓಡಾಡಲೂ ಜನ ಹಿಂದೇಟು
ಮೈಸೂರು ದಸರಾ ಕಂಬಳ ವಿವಾದ: ಅನುಮತಿ ಇಲ್ಲದೆ ಮರ‌ ಕಡಿದ ಆರೋಪ; FIR ದಾಖಲು
ಮೈಸೂರು ದಸರಾ ಕಂಬಳ ವಿವಾದ: ಅನುಮತಿ ಇಲ್ಲದೆ ಮರ‌ ಕಡಿದ ಆರೋಪ; FIR ದಾಖಲು
ಹುಲಿ ಹಿಡಿಯದಿದ್ರೆ ನಿಮ್ಮನ್ನೇ ಬೋನಿಗೆ ಹಾಕುತ್ತೇವೆ: ರೈತರ ಎಚ್ಚರಿಕೆ
ಹುಲಿ ಹಿಡಿಯದಿದ್ರೆ ನಿಮ್ಮನ್ನೇ ಬೋನಿಗೆ ಹಾಕುತ್ತೇವೆ: ರೈತರ ಎಚ್ಚರಿಕೆ
ರಾಮ ಮಂದಿರ ಟ್ರಸ್ಟ್, ಕೇಂದ್ರ ಮತ್ತು ಯುಪಿ ಸರ್ಕಾರಗಳಿಗೆ ಸುಪ್ರೀಂ ನೋಟಿಸ್
ರಾಮ ಮಂದಿರ ಟ್ರಸ್ಟ್, ಕೇಂದ್ರ ಮತ್ತು ಯುಪಿ ಸರ್ಕಾರಗಳಿಗೆ ಸುಪ್ರೀಂ ನೋಟಿಸ್