ರೋಹಿಣಿ ಸಿಂಧೂರಿ ಬಯೋಪಿಕ್​ ಬಗ್ಗೆ ಚರ್ಚೆ; ಅಕ್ಷತಾ ಪಾಂಡವಪುರ ಹೆಸರನ್ನು ಸೂಚಿಸಿದ ಹಿರಿಯ ಬರಹಗಾರ್ತಿ

ಕನ್ನಡ ಬಿಗ್ ಬಾಸ್ ಮಾಜಿ​ ಸ್ಪರ್ಧಿ ಹಾಗೂ ನಟಿ ಅಕ್ಷತಾ ಪಾಂಡವಪುರ ಅವರು ಫೇಸ್​ಬುಕ್​ನಲ್ಲಿ ರೋಹಿಣಿ ಅವರ ಫೋಟೋವನ್ನು ಪ್ರೊಫೈಲ್​ ಪಿಕ್ ಆಗಿ ಹಾಕಿಕೊಂಡಿದ್ದರು. ಈ ಮೂಲಕ ರೋಹಿಣಿ ಅವರನ್ನು ಬೆಂಬಲಿಸಿದ್ದರು.

ರೋಹಿಣಿ ಸಿಂಧೂರಿ ಬಯೋಪಿಕ್​ ಬಗ್ಗೆ ಚರ್ಚೆ; ಅಕ್ಷತಾ ಪಾಂಡವಪುರ ಹೆಸರನ್ನು ಸೂಚಿಸಿದ ಹಿರಿಯ ಬರಹಗಾರ್ತಿ
ಅಕ್ಷತಾ-ರೋಹಿಣಿ
Follow us
|

Updated on:Jun 06, 2021 | 9:19 PM

 ಮೈಸೂರು ಜಿಲ್ಲಾಧಿಕಾರಿಯಾಗಿದ್ದ ರೋಹಿಣಿ ಸಿಂಧೂರಿ ಅವರನ್ನು ವರ್ಗಾವಣೆ ಮಾಡಿರುವ ವಿಚಾರ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಈ ವಿಚಾರದ ಬಗ್ಗೆ ರಾಜಕೀಯ ಕೆಸರೆರೆಚಾಟ ಕೂಡ ನಡೆದಿದೆ. ಇನ್ನು, ರೋಹಿಣಿ ಅವರನ್ನು ಸಾಮಾಜಿಕ ಜಾಲತಾಣದಲ್ಲಿ ಬೆಂಬಲಿಸಿ ಪೋಸ್ಟ್​​ಗಳನ್ನು ಹಾಕಲಾಗುತ್ತಿದೆ. ಈಗ ಅವರ ಬಯೋಪಿಕ್​ ವಿಚಾರದ ಬಗ್ಗೆಯೂ ಚರ್ಚೆ ನಡೆದಿದೆ.

ಕನ್ನಡ ಬಿಗ್ ಬಾಸ್ ಮಾಜಿ​ ಸ್ಪರ್ಧಿ ಹಾಗೂ ನಟಿ ಅಕ್ಷತಾ ಪಾಂಡವಪುರ ಅವರು ಫೇಸ್​ಬುಕ್​ನಲ್ಲಿ ರೋಹಿಣಿ ಅವರ ಫೋಟೋವನ್ನು ಪ್ರೊಫೈಲ್​ ಪಿಕ್ ಆಗಿ ಹಾಕಿಕೊಂಡಿದ್ದರು. ಈ ಮೂಲಕ ರೋಹಿಣಿ ಅವರನ್ನು ಬೆಂಬಲಿಸಿದ್ದರು. ಈ ಫೋಟೋಗೆ ಬರಹಗಾರ್ತಿ ಸಂಧ್ಯಾ ರಾಣಿ ಕಮೆಂಟ್​ ಮಾಡಿದ್ದು, ‘ರೋಹಿಣಿ ಸಿಂಧೂರಿ ಅವರ ಬಯೋಪಿಕ್​ ಮಾಡಿದರೆ ನೀವು ಅದಕ್ಕೆ ಸೂಕ್ತ ಆಯ್ಕೆ’ ಎಂದಿದ್ದಾರೆ. ಈ ಕಮೆಂಟ್ ನೋಡಿ ಅಕ್ಷತಾ ಖುಷಿಪಟ್ಟಿದ್ದಾರೆ.

ಈ ಬಗ್ಗೆ ಟಿವಿ9 ಕನ್ನಡ ಡಿಜಿಟಿಲ್​ ಜತೆ ಮಾತನಾಡಿರುವ ಅಕ್ಷತಾ, ‘ ರೋಹಿಣಿ ಅವರನ್ನು ಇಷ್ಟಪಡದೆ ಇರೋಕೆ ಕಾರಣವೇ ಇಲ್ಲ. ಅವರು ಎಲ್ಲಿ ಹೋದರೂ ತಮ್ಮ ಕೆಲಸ ಮಾಡಿಕೊಂಡಿರುತ್ತಾರೆ. ಐ ಡೋಂಟ್​ ಕೇರ್​ ಎನ್ನುವ ವ್ಯಕ್ತಿತ್ವ ಅವರದ್ದು. ಯಾವುದು ಸರಿ ಎನಿಸುತ್ತೋ ಅದನ್ನು ಮಾತ್ರ ಮಾಡುತ್ತಾರೆ. ಅಂಥ ಪಾತ್ರ ಸಿಕ್ಕರೆ ಮಾಡೋಕೆ ನಿಜಕ್ಕೂ ಖುಷಿ ಆಗುತ್ತದೆ. ಅದರಲ್ಲೂ ನಾನು ರೋಹಿಣಿ ಪಾತ್ರದಲ್ಲಿ ನಟಿಸಬೇಕು ಎನ್ನುವ ಮಾತು ಸಂಧ್ಯಾ ರಾಣಿ ಅವರ ಮನಸ್ಸಿನಿಂದ ಬಂತು ಎನ್ನುವುದೇ ಸಂತಸದ ವಿಚಾರ. ಅವರ ಕಮೆಂಟ್​ ನೋಡಿ ನಿಜಕ್ಕೂ ನಾನು ಈ ಸಿನಿಮಾ ಶೂಟಿಂಗ್​ ಮುಗಿಸಿ ಮನೆಗೆ ಬಂದೆ ಎನ್ನುವಷ್ಟು ಖುಷಿ ಆಯ್ತು’ ಎನ್ನುತ್ತಾರೆ.

‘ರಂಗಭೂಮಿ ಹಿನ್ನೆಲೆಯಿಂದ ಬಂದವಳಾಗಿ, ಓರ್ವ ಕಲಾವಿದೆಯಾಗಿ ತುಂಬಾನೇ ಆಯ್ಕೆ ಮಾಡಿಕೊಂಡು ಸಿನಿಮಾ ಮಾಡುತ್ತೇನೆ. ನಾನು ಮಾಡಿರೋದು ಕೆಲವೇ ಸಿನಿಮಾಗಳು. ಸಿಕ್ಕ ಪಾತ್ರಕ್ಕೆ ತುಂಬಾ ಹೋಂ ವರ್ಕ್​ ಮಾಡಬೇಕು. ಪ್ರತಿ ಬಾರಿ ಪಾತ್ರವನ್ನು ಆಯ್ಕೆ ಮಾಡಿಕೊಳ್ಳುವಾಗ ಒಂದಕ್ಕಿಂತ ಒಂದು ಭಿನ್ನವಾಗಿರಬೇಕು ಎಂಬುದು ನನ್ನ ಥಿಯರಿ. ಹೀಗಿರುವಾಗ ರೋಹಿಣಿ ಅವರ ಪಾತ್ರಕ್ಕೆ ನನ್ನ ಹೆಸರನ್ನು ಒಬ್ಬರು ಸೂಚಿಸುತ್ತಾರೆ ಎಂದರೆ ನಿಜಕ್ಕೂ ಖುಷಿ ಆಗುತ್ತದೆ ಎಂಬುದು ಅಕ್ಷತಾ ಅಭಿಪ್ರಾಯ.

ಅಂದಹಾಗೆ, ಈ ಪೋಸ್ಟ್​ ಹಾಗೂ ಕಮೆಂಟ್​ಗಳನ್ನು ನೋಡಿದ ಯಾರಾದರೂ ರೋಹಿಣಿ ಸಿಂಧೂರಿ ಅವರ ಬಯೋಪಿಕ್​ ಮಾಡೋಕೆ ಮುಂದೆ ಬರುತ್ತಾರಾ? ಬಂದರೆ, ಅಕ್ಷತಾ ಅವರನ್ನೇ ಆಯ್ಕೆ ಮಾಡಿಕೊಳ್ಳುತ್ತಾರಾ ಎಂಬುದು ಸದ್ಯದ ಕುತೂಹಲ. ಪಲ್ಲಟ ಸಿನಿಮಾದ ಅಭಿನಯಕ್ಕಾಗಿ ಅಕ್ಷತಾ ಅವರಿಗೆ ಅತ್ಯುತ್ತಮ ಪೋಷಕ ನಟಿ ರಾಜ್ಯ ಪ್ರಶಸ್ತಿ ಸಿಕ್ಕಿತ್ತು.

ಇದನ್ನೂ ಓದಿ: ವರ್ಗಾವಣೆ ಬೆನ್ನಲ್ಲೇ ಸಿಎಂ ಯಡಿಯೂರಪ್ಪ ನಿವಾಸಕ್ಕೆ ರೋಹಿಣಿ ಸಿಂಧೂರಿ ಭೇಟಿ

Published On - 9:08 pm, Sun, 6 June 21

ಮುನಿರತ್ನರನ್ನು ದಿಢೀರ್​ ಜಯದೇವ ಆಸ್ಪತ್ರೆಗೆ ಕರೆದುಕೊಂಡು ಹೋದ ಪೊಲೀಸರು
ಮುನಿರತ್ನರನ್ನು ದಿಢೀರ್​ ಜಯದೇವ ಆಸ್ಪತ್ರೆಗೆ ಕರೆದುಕೊಂಡು ಹೋದ ಪೊಲೀಸರು
ಗ್ಯಾರಂಟಿ ಯೋಜನೆ ಜಾರಿ ನಂತರ ನನ್ನನ್ನು ಮುಗಿಸಲು ಷಡ್ಯಂತ್ರ; ಸಿದ್ದರಾಮಯ್ಯ
ಗ್ಯಾರಂಟಿ ಯೋಜನೆ ಜಾರಿ ನಂತರ ನನ್ನನ್ನು ಮುಗಿಸಲು ಷಡ್ಯಂತ್ರ; ಸಿದ್ದರಾಮಯ್ಯ
ಪ್ರವಾಹದಲ್ಲಿ ಸಿಲುಕಿದ 11 ಪ್ರವಾಸಿಗರ ಪ್ರಾಣ ಉಳಿಸಿದ ರಕ್ಷಣಾ ಪಡೆ
ಪ್ರವಾಹದಲ್ಲಿ ಸಿಲುಕಿದ 11 ಪ್ರವಾಸಿಗರ ಪ್ರಾಣ ಉಳಿಸಿದ ರಕ್ಷಣಾ ಪಡೆ
ನಡುರಸ್ತೆಯಲ್ಲಿ ಡೀಸೆಲ್‌ ಟ್ಯಾಂಕರ್‌ಗೆ ಬೆಂಕಿ; ತಪ್ಪಿದ ಭಾರೀ ಅನಾಹುತ
ನಡುರಸ್ತೆಯಲ್ಲಿ ಡೀಸೆಲ್‌ ಟ್ಯಾಂಕರ್‌ಗೆ ಬೆಂಕಿ; ತಪ್ಪಿದ ಭಾರೀ ಅನಾಹುತ
ಚಿತ್ರದುರ್ಗದಲ್ಲಿ ಈದ್ ಮಿಲಾದ್ ಮೆರವಣಿಗೆ ವೇಳೆ ಪ್ಯಾಲೆಸ್ತೀನ್ ಪರ ಘೋಷಣೆ
ಚಿತ್ರದುರ್ಗದಲ್ಲಿ ಈದ್ ಮಿಲಾದ್ ಮೆರವಣಿಗೆ ವೇಳೆ ಪ್ಯಾಲೆಸ್ತೀನ್ ಪರ ಘೋಷಣೆ
4,4,4,4,4... ಒಂದೇ ಓವರ್​ನಲ್ಲಿ 5 ಬೌಂಡರಿ ಬಾರಿಸಿದ ಬಾಬರ್ ಆಝಂ
4,4,4,4,4... ಒಂದೇ ಓವರ್​ನಲ್ಲಿ 5 ಬೌಂಡರಿ ಬಾರಿಸಿದ ಬಾಬರ್ ಆಝಂ
ನಾಗಮಂಗಲ ಗಲಭೆ: ಬಿಜೆಪಿ ನಾಯಕ ಅಶ್ವತ್ಥನಾರಾಯಣ ಹೇಳಿದ್ದೇನು ನೋಡಿ
ನಾಗಮಂಗಲ ಗಲಭೆ: ಬಿಜೆಪಿ ನಾಯಕ ಅಶ್ವತ್ಥನಾರಾಯಣ ಹೇಳಿದ್ದೇನು ನೋಡಿ
ಬೇಲೂರಿನಲ್ಲಿ ಮಿತಿಮೀರಿದ ಬೀಟಮ್ಮ ಗ್ಯಾಂಗ್ ಹಾವಳಿ
ಬೇಲೂರಿನಲ್ಲಿ ಮಿತಿಮೀರಿದ ಬೀಟಮ್ಮ ಗ್ಯಾಂಗ್ ಹಾವಳಿ
ಮೈಸೂರಿನಲ್ಲಿ ಭಾವೈಕ್ಯತೆ ಮೆರೆದ ಹಿಂದೂ-ಮುಸ್ಲಿಂ ಬಾಂಧವರು
ಮೈಸೂರಿನಲ್ಲಿ ಭಾವೈಕ್ಯತೆ ಮೆರೆದ ಹಿಂದೂ-ಮುಸ್ಲಿಂ ಬಾಂಧವರು
ಬಂಟ್ವಾಳದಲ್ಲಿ ಮುಸ್ಲಿಮರಿಗೆ ಸಿಹಿ ಹಂಚಿ ಭಾವೈಕ್ಯತೆ ಮೆರೆದ ಹಿಂದೂಗಳು
ಬಂಟ್ವಾಳದಲ್ಲಿ ಮುಸ್ಲಿಮರಿಗೆ ಸಿಹಿ ಹಂಚಿ ಭಾವೈಕ್ಯತೆ ಮೆರೆದ ಹಿಂದೂಗಳು