
ಸೈಮಾ ಪ್ರಶಸ್ತಿ ಪ್ರದಾನ ಸಮಾರಂಭ ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆಯಿತು. ಈ ವೇಳೆ ದಕ್ಷಿಣ ಚಿತ್ರರಂಗದ ಅನೇಕ ಸೆಲೆಬ್ರಿಟಿಗಳು ಹಾಜರಿ ಹಾಕಿದ್ದರು. ವೇದಿಕೆಯಲ್ಲಿ ತಮಿಳಿನ ಜನಪ್ರಿಯ ನಟ ವಿಕ್ರಮ್ ಅವರ ಮಗ ಧ್ರುವ ವಿಕ್ರಮ್ ಅವರು ಕನ್ನಡದಲ್ಲೇ ಮಾತನಾಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಕನ್ನಡ ಚಿತ್ರರಂಗದ ಹೆಮ್ಮೆಯ ನಟ ಹಾಗೂ ನಿರ್ದೇಶಕ ರಿಷಬ್ ಶೆಟ್ಟಿ ಅವರ ಬಗ್ಗೆ ಧ್ರುವ ವಿಕ್ರಮ್ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ಬೇರೆ ಭಾಷೆಯ ನಟರು ಬೆಂಗಳೂರಿಗೆ ಬಂದರೆ ಕನ್ನಡದಲ್ಲಿ ಮಾತನಾಡುವುದಿಲ್ಲ ಎನ್ನುವ ಆರೋಪ ಕೇಳಿ ಬರುತ್ತಲೇ ಇರುತ್ತದೆ. ಈ ಕಾರಣಕ್ಕೆ ಧ್ರುವ್ ಅವರು ಕನ್ನಡದಲ್ಲೇ ಭಾಷಣ ರೆಡಿ ಇಟ್ಟುಕೊಂಡು ಬಂದಿದ್ದರು. ವೇದಿಕೆ ಏರಿದ ಧ್ರುವ ವಿಕ್ರಮ್, ‘ಎಲ್ಲರಿಗೂ ನಮಸ್ಕಾರ’ ಎಂದು ಕನ್ನಡದಲ್ಲೇ ಮಾತು ಶುರು ಮಾಡಿದರು. ‘ನಾನು ನಿಮಗಾಗಿ ಕನ್ನಡದಲ್ಲಿ ಚಿಕ್ಕದಾಗಿ ಒಂದಷ್ಟು ವಿಷಯಗಳನ್ನು ಬರೆದುಕೊಂಡು ಬಂದಿದ್ದೇನೆ’ ಎಂದು ಪೇಪರ್ ನೋಡಿ ಕನ್ನಡದಲ್ಲೇ ಮನದಾಳದ ಮಾತುಗಳನ್ನು ಹಂಚಿಕೊಂಡರು.
‘ಕಾಂತಾರ ಚಿತ್ರಕ್ಕಾಗಿ ಬೆಸ್ಟ್ ಆಕ್ಟರ್ ಪ್ರಶಸ್ತಿ ಪಡೆದ ರಿಷಬ್ ಶೆಟ್ಟಿ ಸರ್ ಅವರಿಗೆ ನನ್ನ ಹೃದಯಪೂರ್ವಕ ಅಭಿನಂದನೆಗಳು. ನಿಮ್ಮ ಜೊತೆ, ನಾನು ಮಹಾನ್ ಸಿನಿಮಾಗೆ ಅತ್ಯುತ್ತಮ ನಟ ಪ್ರಶಸ್ತಿ ಪಡೆಯುತ್ತಿರುವುದು ನನಗೆ ತುಂಬಾ ತುಂಬಾ ಹೆಮ್ಮೆ ಮತ್ತು ಗೌರವದ ವಿಷಯ’ ಎಂದು ಸಂತಸ ವ್ಯಕ್ತಪಡಿಸಿದರು.
Dhruv Vikram son of Chiyaan Vikram speaks in Kannada on the SIIMA stage greeting Rishab Shetty ❤️ pic.twitter.com/RMPEbxLw77
— 𝗥𝗔JA KRISHNAPPA BAIR𝗬𝗔 🎟️ (@RKBTweetss) September 15, 2026
ಮುಂದುವರಿದು ಮಾತನಾಡಿದ ಧ್ರುವ್, ‘ರಿಷಬ್ ಸರ್, ನೀವು ನಿಜಕ್ಕೂ ಒಬ್ಬ ಲೆಜೆಂಡ್. ನಿಮ್ಮ ಕೆಲಸದಿಂದ ನಾನು ತುಂಬಾ ಸ್ಫೂರ್ತಿ ಪಡೆದಿದ್ದೇನೆ. ನೀವು ಒಬ್ಬ ಅದ್ಭುತ ತಂತ್ರಜ್ಞ ಹಾಗೂ ಕ್ರಿಯೇಟರ್. ನಿಮ್ಮಂತಹ ದಿಗ್ಗಜರ ಜೊತೆ ಒಂದೇ ವೇದಿಕೆಯಲ್ಲಿ ಪ್ರಶಸ್ತಿ ಪಡೆಯುತ್ತಿರುವುದಕ್ಕೆ ನಾನು ಕೃತಜ್ಞನಾಗಿದ್ದೇನೆ. ಈ ಕ್ಷಣವನ್ನು ನಾನು ಎಂದಿಗೂ ಮರೆಯುವುದಿಲ್ಲ’ ಎಂದು ಹೊಗಳಿದರು.
ಇದನ್ನೂ ಓದಿ: ಬಿಗ್ ಅಪ್ಡೇಟ್;ಕಾಂತಾರ: ಚಾಪ್ಟರ್ 2’ ಸ್ಕ್ರಿಪ್ಟ್ ಆರಂಭಿಸಿದ ರಿಷಬ್ ಶೆಟ್ಟಿ
ತಮಿಳು ನಟನೊಬ್ಬ ಕನ್ನಡದಲ್ಲೇ ಮಾತು ಸಿದ್ಧಪಡಿಸಿಕೊಂಡು ಬಂದು, ಕನ್ನಡದ ನಟ ಹಾಗೂ ಚಿತ್ರರಂಗಕ್ಕೆ ನೀಡಿದ ಗೌರವಕ್ಕೆ ಸೈಮಾ ವೇದಿಕೆಯಲ್ಲಿ ನೆರೆದಿದ್ದ ಪ್ರೇಕ್ಷಕರಿಂದ ಭಾರೀ ಚಪ್ಪಾಳೆ ಮತ್ತು ಪ್ರಶಂಸೆ ವ್ಯಕ್ತವಾಯಿತು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.