AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಿಧನರಾಗುವುದಕ್ಕೂ ಮುನ್ನ ಎಸ್.​ಪಿ. ಬಾಲಸುಬ್ರಹ್ಮಣ್ಯಂ ಮಾಡಿದ್ದರು ದೇವರು ಮೆಚ್ಚುವ ಕೆಲಸ

SPB: 2020ರ ಮಾರ್ಚ್​ನಲ್ಲಿ ಆಗಷ್ಟೇ ಕೊರೊನಾ ಹಾವಳಿ ಹೆಚ್ಚಾಗಿತ್ತು. ಯುವಜನತೆ ಕೂಡ ಅಸಹಾಯಕರಾಗಿ ಕೈಕಟ್ಟಿ ಕುಳಿತುಕೊಳ್ಳಬೇಕಾದ ಆ ಕಷ್ಟಕಾಲದಲ್ಲಿ 74ರ ಹರೆಯದ ಎಸ್​ಪಿಬಿ ಸಮಾಜಸೇವೆಗೆ ಮುಂದಾಗಿದ್ದರು.

ನಿಧನರಾಗುವುದಕ್ಕೂ ಮುನ್ನ ಎಸ್.​ಪಿ. ಬಾಲಸುಬ್ರಹ್ಮಣ್ಯಂ ಮಾಡಿದ್ದರು ದೇವರು ಮೆಚ್ಚುವ ಕೆಲಸ
ಎಸ್​ಪಿ ಬಾಲಸುಬ್ರಹ್ಮಣ್ಯಂ
Follow us
ಮದನ್​ ಕುಮಾರ್​
| Updated By: ರಾಜೇಶ್ ದುಗ್ಗುಮನೆ

Updated on:Jun 03, 2021 | 7:35 PM

ಭಾರತೀಯ ಚಿತ್ರರಂಗ ಕಂಡ ಮಹಾನ್​ ಸಾಧಕ ಎಸ್.​ಪಿ. ಬಾಲಸುಬ್ರಹ್ಮಣ್ಯಂ ಅವರು ಭೌತಿಕವಾಗಿ ಇಂದು ನಮ್ಮೊಂದಿಗಿಲ್ಲ. ಆದರೆ ಸಾವಿರಾರು ಸುಮಧುರ ಗೀತೆಗಳ ಮೂಲಕ ಅವರು ಸದಾ ನಮ್ಮೊಳಗೆ ಜೀವಂತವಾಗಿರುತ್ತಾರೆ. ಸಂಗೀತಪ್ರೇಮಿಗಳ ಪಾಲಿಗೆ ಎಸ್​ಪಿಬಿ ಹೆಸರು ಎಂದಿಗೂ ಅಮರ. ಜೂ.4 ಎಸ್​.ಪಿ. ಬಾಲಸುಬ್ರಹ್ಮಣ್ಯಂ ಅವರ ಜನ್ಮದಿನ. ಬದುಕಿದ್ದರೆ ಅವರು 75ನೇ ವಸಂತಕ್ಕೆ ಕಾಲಿಡುತ್ತಿದ್ದರು. ಕಳೆದ ವರ್ಷ ಅವರು ಅನಾರೋಗ್ಯಕ್ಕೆ ತುತ್ತಾಗಿ ಇಹಲೋಕ ತ್ಯಜಿಸಿದ್ದು ಅವರ ಅಭಿಮಾನಿಗಳಿಗೆ ಸಹಿಸಲಾರದಷ್ಟು ನೋವು ನೀಡಿತ್ತು. ಆರೋಗ್ಯ ಕೈಕೊಡುವುದಕ್ಕೂ ಕೆಲವೇ ದಿನಗಳ ಮುನ್ನ ಕೂಡ ಎಸ್​ಪಿಬಿ ಅವರು ಜನಪರ ಕಾರ್ಯದಲ್ಲಿ ನಿರತರಾಗಿದ್ದರು.

2020ರ ಮಾರ್ಚ್​ ತಿಂಗಳು. ಆಗಷ್ಟೇ ದೇಶದಲ್ಲಿ ಕೊರೊನಾ ಹಾವಳಿ ಹೆಚ್ಚಾಗಿತ್ತು. ಎಲ್ಲೆಡೆ ಲಾಕ್​ಡೌನ್​ ಘೋಷಿಸಲಾಗಿತ್ತು. ಮಹಾಮಾರಿಗೆ ಅನೇಕ ಹೆಣಗಳು ಬೀಳತೊಡಗಿದವು. ಆ ಸಂದರ್ಭದಲ್ಲಿ ಮನೆಯಿಂದ ಹೊರಬಂದು ಯಾರು ಯಾರಿಗೂ ಸಹಾಯ ಮಾಡಲಾಗದಂತಹ ಪರಿಸ್ಥಿತಿ ನಿರ್ಮಾಣ ಆಗಿತ್ತು. ಕೊರೊನಾ ವಿರುದ್ಧ ಹೋರಾಡಲು ಹಣದ ಅವಶ್ಯಕತೆ ಕೂಡ ಇತ್ತು. ಯುವಜನತೆ ಕೂಡ ಅಸಹಾಯಕರಾಗಿ ಕೈಕಟ್ಟಿ ಕುಳಿತುಕೊಳ್ಳಬೇಕಾದ ಆ ಕಷ್ಟಕಾಲದಲ್ಲಿ 74ರ ಹರೆಯದ ಎಸ್​ಪಿಬಿ ಸಮಾಜಸೇವೆಗೆ ಮುಂದಾಗಿದ್ದರು.

ಹಾಡುಗಾರಿಕೆಯೇ ಎಸ್​ಪಿಬಿ ಅವರ ಶಕ್ತಿ. ಆದರೆ ವಯೋಸಹಜ ಅನಾರೋಗ್ಯ ಎದುರಾಗುತ್ತಿದ್ದರಿಂದ ಮೊದಲಿನಂತೆ ಸರಾಗವಾಗಿ ಹಾಡಲು ಅವರಿಗೆ ಕಷ್ಟ ಆಗುತ್ತಿತ್ತು. ಅಂಥ ಕಷ್ಟದಲ್ಲೂ ಕೂಡ ಅವರು ಗಾಯನದ ಮೂಲಕವೇ ನಿಧಿ ಸಂಗ್ರಹ ಮಾಡುವ ಕೆಲಸಕ್ಕೆ ಮುಂದಾದರು. ‘ಎಸ್​ಪಿಬಿ ಫ್ಯಾನ್ಸ್​ ಚಾರಿಟೇಬಲ್​ ಫೌಂಡೇಶನ್​’ ಮೂಲಕ ಸಾಧ್ಯವಾದಷ್ಟು ದೇಣಿಗೆ ಸಂಗ್ರಹಿಸಿ, ಅದನ್ನು ಕೊರೊನಾ ವಿರುದ್ಧದ ಹೋರಾಟಕ್ಕೆ ಬಳಸಬೇಕು ಎಂದು ಅವರು ನಿರ್ಧರಿಸಿದರು.

ಅಭಿಮಾನಿಗಳ ಕೋರಿಕೆಯ ಮೇರೆಗೆ ಫೇಸ್​ಬುಕ್​ನಲ್ಲಿ ಲೈವ್​ ಬಂದು ಎಸ್​ಪಿಬಿ ಹಾಡಿದರು. ಯಾವ ಹಾಡು ಬೇಕು ಎಂದು ಕೋರಿಕೆ ಸಲ್ಲಿಸುವ ಅಭಿಮಾನಿಗಳು ತಮ್ಮ ಕೈಲಾದಷ್ಟು ಹಣವನ್ನು ‘ಎಸ್​ಪಿಬಿ ಫ್ಯಾನ್ಸ್​ ಚಾರಿಟೇಬಲ್​ ಫೌಂಡೇಶನ್​’ ಬ್ಯಾಂಕ್​ ಖಾತೆಗೆ ದೇಣಿಗೆಯಾಗಿ ನೀಡಿದರು. ಅಂಥ ಅಭಿಮಾನಿಗಳ ಹೆಸರನ್ನು ಲೈವ್​ನಲ್ಲಿ ಹೇಳಿ, ಧನ್ಯವಾದ ತಿಳಿಸಿದ ಬಳಿಕ ಎಸ್​ಪಿಬಿ ಹಾಡು ಹೇಳುತ್ತಿದ್ದರು.

ಯಾರು ಯಾವ ಹಾಡು ಬೇಕೆಂದು ಕೋರಿಕೆ ಸಲ್ಲಿಸುತ್ತಾರೆ ಎಂಬುದು ಮೊದಲೇ ಗೊತ್ತಾಗುತ್ತಿರಲಿಲ್ಲ. ಅದು ತಿಳಿದ ಬಳಿಕ ಆ ಹಾಡಿನ ಸಾಹಿತ್ಯವನ್ನು ಇನ್ನೊಮ್ಮೆ ನೋಡಿಕೊಳ್ಳಲು ಎಸ್​ಪಿಬಿಗೆ ಸಮಯ ಬೇಕಾಗುತ್ತಿತ್ತು. ಒಂದು ದಿನ ಸೂಕ್ತ ತಯಾರಿ ಮಾಡಿಕೊಂಡು ಮರುದಿನ ಲೈವ್​ ಬಂದು ಅವರು ಹಾಡುತ್ತಿದ್ದರು. ಇದಕ್ಕೆಲ್ಲ ತುಂಬ ಶ್ರಮ ಆಗುತ್ತಿತ್ತು. ಆದರೂ ಕೊರೊನಾ ಪರಿಸ್ಥಿತಿಯಲ್ಲಿ ಜನರಿಗೆ ಸಹಾಯ ಆಗಲಿ ಎಂಬ ಕಾರಣಕ್ಕೆ ಅವರು ಇಷ್ಟೆಲ್ಲ ಕಷ್ಟಪಡುತ್ತಿದ್ದರು.

ಎಸ್​ಪಿಬಿ ಅವರ ಈ ಕೆಲಸದಿಂದ ಲಕ್ಷಾಂತರ ರೂಪಾಯಿ ಸಂಗ್ರಹ ಆಯಿತು. ಅದನ್ನು ಅವರು ಚಾರಿಟಿಗೆ ಬಳಸಿದರು. ಆದರೆ ವಿಧಿ ಆಟ ಬೇರೆಯೇ ಇತ್ತು. ಕೊವಿಡ್​ ಸೋಂಕಿತರಿಗಾಗಿ ನಿಧಿ ಸಂಗ್ರಹ ಮಾಡಿದ ಎಸ್​ಪಿಬಿ ಅವರೇ ಸ್ವತಃ ಕೊರೊನಾ ಸೋಂಕಿಗೆ ಒಳಗಾದರು. ನಂತರ ಅವರನ್ನು ಚೆನ್ನೈನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. 52 ದಿನಗಳ ಕಾಲ ಚಿಕಿತ್ಸೆ ಪಡೆದ ಅವರು ಕೊನೆಗೂ ಮರಳಿ ಬರಲಿಲ್ಲ. ಆದರೂ ತಮ್ಮ ಕೊನೇ ದಿನಗಳಲ್ಲೂ ಅವರು ಹಾಡುಗಾರಿಕೆಯ ಮೂಲಕ ನಿಧಿ ಸಂಗ್ರಹಿಸಿ ದೇವರು ಮೆಚ್ಚುವ ಕೆಲಸ ಮಾಡಿದ್ದರು.

ಇದನ್ನೂ ಓದಿ:

ಎಸ್​ಪಿಬಿ​ ಜನ್ಮದಿನದ ವಿಶೇಷ; ಸ್ಟಾರ್​ ಸಿಂಗರ್​ಗಳಿಂದ 12 ಗಂಟೆ ನಾನ್​ ಸ್ಟಾಪ್​ ಹಾಡು, ನೀವು ಕೇಳಬಹುದು

ಮಹಾನ್ ಗಾಯಕನ ಆರೋಗ್ಯಕ್ಕಾಗಿ ರಮಣೀಯ ಹಿನ್ನೆಲೆಯಲ್ಲಿ ಹಾಡು ಸಂಯೋಜಿಸಿದ ನಾದ ಬ್ರಹ್ಮ

Published On - 7:17 pm, Thu, 3 June 21

ಮಂದ್ಸೌರ್ ಹೆದ್ದಾರಿಯಲ್ಲಿ ಕಾರನ್ನು 100 ಮೀಟರ್ ದೂರ ಎಳೆದೊಯ್ದ ಟ್ರಕ್
ಮಂದ್ಸೌರ್ ಹೆದ್ದಾರಿಯಲ್ಲಿ ಕಾರನ್ನು 100 ಮೀಟರ್ ದೂರ ಎಳೆದೊಯ್ದ ಟ್ರಕ್
ಮಕ್ಕಳ ಮಾನಸಿಕ, ದೈಹಿಕ ಆರೋಗ್ಯಕ್ಕೆ ಈ ಯೋಗಗಳು ಒಳ್ಳೆಯದು
ಮಕ್ಕಳ ಮಾನಸಿಕ, ದೈಹಿಕ ಆರೋಗ್ಯಕ್ಕೆ ಈ ಯೋಗಗಳು ಒಳ್ಳೆಯದು
ಬಿಜೆಪಿ ಭಿನ್ನರ ಸಭೆಯಲ್ಲಿ ಪ್ರತ್ಯಕ್ಷ: ಕೊನೆಗೂ ಸ್ಪಷ್ಟನೆ ಕೊಟ್ಟ ಸೋಮಣ್ಣ!
ಬಿಜೆಪಿ ಭಿನ್ನರ ಸಭೆಯಲ್ಲಿ ಪ್ರತ್ಯಕ್ಷ: ಕೊನೆಗೂ ಸ್ಪಷ್ಟನೆ ಕೊಟ್ಟ ಸೋಮಣ್ಣ!
ಸಿದ್ದೇಶ್ವರ ಬಂಡಾಯ ಬಿಜೆಪಿ ನಾಯಕರ ಗುಂಪಿನಲ್ಲಿ ಗುರುತಿಸಿಕೊಂಡಿದ್ದಾರೆ!
ಸಿದ್ದೇಶ್ವರ ಬಂಡಾಯ ಬಿಜೆಪಿ ನಾಯಕರ ಗುಂಪಿನಲ್ಲಿ ಗುರುತಿಸಿಕೊಂಡಿದ್ದಾರೆ!
ರಸ್ತೆ ಬದಿ ನಿಂತಿದ್ದ ಆಟೋಗೆ ಅಪ್ಪಳಿಸಿದ ಲಾರಿ ಚಕ್ರಗಳು: ಭಯಾನಕ ದೃಶ್ಯ ಸೆರೆ
ರಸ್ತೆ ಬದಿ ನಿಂತಿದ್ದ ಆಟೋಗೆ ಅಪ್ಪಳಿಸಿದ ಲಾರಿ ಚಕ್ರಗಳು: ಭಯಾನಕ ದೃಶ್ಯ ಸೆರೆ
ವಸತಿ ಯೋಜನೆ ಮೀಸಲಾತಿ, ಸದನದಲ್ಲಿ ಪ್ರಶ್ನೆ ಕೇಳಲಿ, ಉತ್ತರಿಸುವೆ: ಶಿವಕುಮಾರ್
ವಸತಿ ಯೋಜನೆ ಮೀಸಲಾತಿ, ಸದನದಲ್ಲಿ ಪ್ರಶ್ನೆ ಕೇಳಲಿ, ಉತ್ತರಿಸುವೆ: ಶಿವಕುಮಾರ್
ದೆಹಲಿ ಮೆಟ್ರೋದೊಳಗೆ ಬಂದಿತ್ತೇ ಹಾವು?
ದೆಹಲಿ ಮೆಟ್ರೋದೊಳಗೆ ಬಂದಿತ್ತೇ ಹಾವು?
ಜಂಗಲ್​​ರಾಜ್​ಗೆ ಬಿಹಾರ ಜನತೆ ಅಂತ್ಯ ಹಾಡಿದ್ದಾರೆ: ಮೋದಿ
ಜಂಗಲ್​​ರಾಜ್​ಗೆ ಬಿಹಾರ ಜನತೆ ಅಂತ್ಯ ಹಾಡಿದ್ದಾರೆ: ಮೋದಿ
ಜನ ನನಗೆ ಬಟ್ಟೆ ಕೊಡುತ್ತಾರೆ, ಪಾಪದ ಹಣದ ಬಟ್ಟೆ ಯಾರಿಗೆ ಬೇಕು? ಕುಮಾರಸ್ವಾಮಿ
ಜನ ನನಗೆ ಬಟ್ಟೆ ಕೊಡುತ್ತಾರೆ, ಪಾಪದ ಹಣದ ಬಟ್ಟೆ ಯಾರಿಗೆ ಬೇಕು? ಕುಮಾರಸ್ವಾಮಿ
ಉಡುಪಿ ಜನ ಶಾಂತಿಪ್ರಿಯರು, ಅದನ್ನು ಕದಡುವ ಪ್ರಯತ್ನ ಬೇಡ: ಹೆಬ್ಬಾಳ್ಕರ್
ಉಡುಪಿ ಜನ ಶಾಂತಿಪ್ರಿಯರು, ಅದನ್ನು ಕದಡುವ ಪ್ರಯತ್ನ ಬೇಡ: ಹೆಬ್ಬಾಳ್ಕರ್