‘ಟೈಮ್ ಪಾಸ್’ ಸಿನಿಮಾ: ಮನೆ ಮಠ ಮಾರಿ ಬೀದಿಗೆ ಬಂದ ನಿರ್ಮಾಪಕನ ಕಥೆ

ಸಿನಿಮಾ ಜಗತ್ತಿನ ಕಥೆ ಹೇಳುವ ‘ಟೈಮ್ ಪಾಸ್’ ಸಿನಿಮಾದ ಟ್ರೇಲರ್ ಬಿಡುಗಡೆ ಆಗಿದೆ. ಕೆ. ಚೇತನ್ ಜೋಡಿದಾರ್ ಅವರು ನಿರ್ದೇಶನ ಮಾಡಿರುವ ಈ ಸಿನಿಮಾದಲ್ಲಿ ರಿಲೀಸ್​​ಗೆ ಸಜ್ಜಾಗಿದೆ. ಅಕ್ಟೋಬರ್ 17ರಂದು ‘ಟೈಮ್ ಪಾಸ್’ ಸಿನಿಮಾ ಬಿಡುಗಡೆ ಆಗಲಿದೆ. ಇತ್ತೀಚೆಗೆ ಚಿತ್ರತಂಡ ಸುದ್ದಿಗೋಷ್ಠಿ ನಡೆಸಿತು.

‘ಟೈಮ್ ಪಾಸ್’ ಸಿನಿಮಾ: ಮನೆ ಮಠ ಮಾರಿ ಬೀದಿಗೆ ಬಂದ ನಿರ್ಮಾಪಕನ ಕಥೆ
Timepass Kannada Movie Poster

Updated on: Oct 09, 2025 | 7:40 PM

ದೊಡ್ಡ ಬಜೆಟ್ ಸಿನಿಮಾಗಳು ಮಾತ್ರವಲ್ಲದೇ ಕೆಲವು ಚಿಕ್ಕ ಸಿನಿಮಾಗಳು ಕೂಡ ಜನಮನ ಸೆಳೆಯುತ್ತವೆ. ಪ್ರತಿ ಸಿನಿಮಾದ ಮೇಕಿಂಗ್ ಹಿಂದೆ ಹಲವು ಕಥೆಗಳು ಇರುತ್ತವೆ. ಅಂತಹ ಕಥೆಯನ್ನು ಇಟ್ಟುಕೊಂಡು ‘ಟೈಮ್ ಪಾಸ್’ ಸಿನಿಮಾ (Timepass Movie) ಸಿದ್ಧವಾಗಿದೆ. ಈ ಚಿತ್ರದ ಶೀರ್ಷಿಕೆಯೇ ಗಮನ ಸೆಳೆಯುತ್ತಿದೆ. ಹಠ ಬಿಡದೇ ಸಿನಿಮಾ ಮಾಡುವ ಒಬ್ಬ ನಿರ್ದೇಶಕನ ಕಥೆ ಈ ಸಿನಿಮಾದಲ್ಲಿದೆ. ಅಲ್ಲದೇ, ನಷ್ಟವಾಗಿ ಮನೆ ಮಠ ಮಾರಿಕೊಂಡ ನಿರ್ಮಾಪಕನ ಕಥೆ ಕೂಡ ಈ ಚಿತ್ರದಲ್ಲಿದೆ. ‘ಟೈಮ್ ಪಾಸ್’ ಸಿನಿಮಾದ ಟ್ರೇಲರ್ (Timepass Movie Trailer) ಬಿಡುಗಡೆ ಆಗಿದ್ದು, ಚಿತ್ರದ ಕಥೆ ಬಗ್ಗೆ ಸುಳಿವು ನೀಡಲಾಗಿದೆ.

‘ಟೈಮ್ ಪಾಸ್’ ಸಿನಿಮಾಗೆ ಕೆ. ಚೇತನ್ ಜೋಡಿದಾರ್ ಅವರು ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾದ ರಿಲೀಸ್ ದಿನಾಂಕ ಘೋಷಣೆ ಆಗಿದೆ. ಅಕ್ಟೋಬರ್ 17ರಂದು ಈ ಚಿತ್ರ ಬಿಡುಗಡೆ ಆಗಲಿದೆ. ಈಗ ಟ್ರೇಲರ್ ಬಿಡುಗಡೆಯಾಗಿದೆ. ಆ ಪ್ರಯುಕ್ತ ಚಿತ್ರತಂಡದವರು ಸುದ್ದಿಗೋಷ್ಠಿ ನಡೆಸಿದರು. ಈ ವೇಳೆ ನಿರ್ದೇಶಕರು ಸಿನಿಮಾದ ಬಗ್ಗೆ ಒಂದಷ್ಟು ಮಾಹಿತಿ ಹಂಚಿಕೊಂಡರು.

Timepass Movie Team

‘ಸಿನಿಮಾ ಮಾಡುವ ಕನಸು ಇಟ್ಟುಕೊಂಡವರ ಏಳು-ಬೀಳಿನ ಕತೆಯನ್ನು ಈ ಸಿನಿಮಾ ಹೊಂದಿದೆ. ಸಿನಿಮಾದೊಳಗೆ ಮತ್ತೊಂದು ಸಿನಿಮಾದ ಕಥೆಯನ್ನು ಪ್ರೇಕ್ಷಕರ ಮುಂದೆ ಇರಿಸಲಾಗುತ್ತಿದೆ. ಕಾಂತಾರ ಚಾಪ್ಟರ್ 1 ಸಿನಿಮಾ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿರುವ ಈ ಸಂದರ್ಭದಲ್ಲಿ ನಮ್ಮ ಸಿನಿಮಾಗೂ ಅಂಥ ಉತ್ತೇಜನ ಕೊಡಬೇಕು’ ಎಂದು ಪ್ರೇಕ್ಷಕರಲ್ಲಿ ನಿರ್ದೇಶಕರು ಮನವಿ ಮಾಡಿಕೊಂಡಿದ್ದಾರೆ.

‘ಟೈಮ್ ಪಾಸ್’ ಸಿನಿಮಾ ಟ್ರೇಲರ್:

ಚೇತನ್ ಜೋಡಿದಾರ್ ಅವರು ನಿರ್ದೇಶನ ಮಾಡಿರುವ ಮೊದಲ ಸಿನಿಮಾ ಇದು. ಈವರೆಗೂ ಬೇರೆ ಯಾವುದೇ ನಿರ್ದೇಶಕರ ಬಳಿ ಅವರು ಕೆಲಸ ಮಾಡಿಲ್ಲ. ಯೂಟ್ಯೂಬ್ ಮೂಲಕವೇ ನಿರ್ದೇಶನ ಕಲಿತು ಟೈಮ್ ಪಾಸ್ ಸಿನಿಮಾ ಮಾಡಿದ್ದಾರೆ. ಪ್ರೇಕ್ಷಕರಿಗೆ ಈ ಪ್ರಯತ್ನ ಇಷ್ಟ ಆಗುತ್ತದೆ ಎಂಬ ವಿಶ್ವಾಸ ಅವರಿಗೆ ಇದೆ. ಈ ಚಿತ್ರಕ್ಕೆ ಗಿರೀಶ್ ಗೌಡ ಸಾಹಸ ನಿರ್ದೇಶನ ಮಾಡಿದ್ದಾರೆ. ವೈಷ್ಣವಿ ಸತ್ಯನಾರಾಯಣ್ ನೃತ್ಯ ನಿರ್ದೇಶನ ಮಾಡಿದ್ದಾರೆ. ರಾಜೀವ್ ಗಣೇಶ್ ಅವರ ಛಾಯಾಗ್ರಹಣ, ಹರಿ ಪರಮ್ ಅವರ ಸಂಕಲನ, ಡಿ.ಎಂ. ಉದಯ ಕುಮಾರ್ ಅವರ ಸಂಗೀತ ನಿರ್ದೇಶನ ಈ ಸಿನಿಮಾಗಿದೆ.

ಇದನ್ನೂ ಓದಿ: ರಾಜ್ಯ ಪ್ರಶಸ್ತಿ ಪುರಸ್ಕೃತ ನಟಿ ಅಕ್ಷತಾ ಪಾಂಡವಪುರ ಹೊಸ ಸಿನಿಮಾ ‘ಮೋಡ, ಮಳೆ ಮತ್ತು ಶೈಲ’

‘ಟೈಮ್ ಪಾಸ್’ ಸಿನಿಮಾವನ್ನು ಎಂ.ಹೆಚ್. ಕೃಷ್ಣಮೂರ್ತಿ, ಕಿರಣ್ ಕುಮಾರ್ ಶೆಟ್ಟಿ ಹಾಗೂ ಗುಂಡೂರ್ ಶೇಖರ್ ಅವರು ನಿರ್ಮಾಣ ಮಾಡಿದ್ದಾರೆ. ‘ಶ್ರೀ ಚೇತನ ಸರ್ವಿಸಸ್’ ಬ್ಯಾನರ್ ಮೂಲಕ ಸಿನಿಮಾ ಸಿದ್ಧವಾಗಿದೆ. ಇಮ್ರಾನ್ ಪಾಷಾ, ರತ್ಷಾರಾಮ್, ವೈಸಿರಿ ಕೆ. ಗೌಡ, ಕೆ. ಚೇತನ್ ಜೋಡಿದಾರ್, ಓಂ ಶ್ರೀ ಯಕ್ಷಶಿಫ್, ನವೀನ್ ಕುಮಾರ್, ಸಂಪತ್ ಕುಮಾರ್, ಅಶ್ವಿನಿ ಶ್ರೀನಿವಾಸ್, ಪ್ರಭಾಕರ್ ರಾವ್ ಅವರು ಪಾತ್ರವರ್ಗದಲ್ಲಿ ಇದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.