AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಾರು ಸಾಲ ತೀರಿಸೋಕ್ಕೆ ಆಯ್ತಿಲ್ಲ ಅಂತಾ ಕಾರನ್ನು ಮಾರಿಬಿಟ್ಟ ನಟ!

‘ಆ ದಿನಗಳು’ ಅಂದ್ರೆ ಕೊರೊನಾ ಅಟಕಾಯಿಸಿಕೊಳ್ಳುವುದಕ್ಕೆ ಮುನ್ನಾ ಕಾಲ ಸುಭಿಕ್ಷವಾಗಿತ್ತು. ಚೆಂದದ ಜೀವನ ಸಾಗಿಸೋಣ ಅಂತಾ ಸಾಲ ಮಾಡಿ ಕಾರು ಖರೀದಿಸಿದ್ದೆ. ಆದ್ರೆ ಈಗ ಸಾಲದ ಕಂತುಗಳನ್ನು ಕಟ್ಟೋಕ್ಕೆ ಆಗುತ್ತಿಲ್ಲ. ಹಾಗಾಗಿ ನನ್ನ ಕಾರನ್ನು ಮಾರಿಬಿಟ್ಟೆ ಅಂತಾ ಕಿರುತೆರೆಯ ನಟರೊಬ್ಬರು ತಮ್ಮ ಆರ್ಥಿಕ ಸಂಕಷ್ಟವನ್ನು ಹೇಳಿಕೊಂಡಿದ್ದಾರೆ! Thanks to CoronaVirus ಇದು ದೇಶ, ಜಗತ್ತಿನಲ್ಲಿ ಬಹುತೇಕ ಎಲ್ಲರ ದೀನಸ್ಥಿತಿಯೂ ಆಗಿದೆ ಅನ್ನಬಹುದು. ಬಾಂಬೆಯಲ್ಲಿ ದುಡ್ಡಿಲ್ಲದೆ ಬದುಕೋದು ಕಷ್ಟ ಕಷ್ಟ ಹೌದು, ಮುಂಬೈನಲ್ಲಿ ಟಿವಿ ನಟ ಮಾನಸ್ ಶಾ […]

ಕಾರು ಸಾಲ ತೀರಿಸೋಕ್ಕೆ ಆಯ್ತಿಲ್ಲ ಅಂತಾ ಕಾರನ್ನು ಮಾರಿಬಿಟ್ಟ ನಟ!
ಸಾಧು ಶ್ರೀನಾಥ್​
|

Updated on: May 28, 2020 | 5:05 PM

Share

‘ಆ ದಿನಗಳು’ ಅಂದ್ರೆ ಕೊರೊನಾ ಅಟಕಾಯಿಸಿಕೊಳ್ಳುವುದಕ್ಕೆ ಮುನ್ನಾ ಕಾಲ ಸುಭಿಕ್ಷವಾಗಿತ್ತು. ಚೆಂದದ ಜೀವನ ಸಾಗಿಸೋಣ ಅಂತಾ ಸಾಲ ಮಾಡಿ ಕಾರು ಖರೀದಿಸಿದ್ದೆ. ಆದ್ರೆ ಈಗ ಸಾಲದ ಕಂತುಗಳನ್ನು ಕಟ್ಟೋಕ್ಕೆ ಆಗುತ್ತಿಲ್ಲ. ಹಾಗಾಗಿ ನನ್ನ ಕಾರನ್ನು ಮಾರಿಬಿಟ್ಟೆ ಅಂತಾ ಕಿರುತೆರೆಯ ನಟರೊಬ್ಬರು ತಮ್ಮ ಆರ್ಥಿಕ ಸಂಕಷ್ಟವನ್ನು ಹೇಳಿಕೊಂಡಿದ್ದಾರೆ! Thanks to CoronaVirus ಇದು ದೇಶ, ಜಗತ್ತಿನಲ್ಲಿ ಬಹುತೇಕ ಎಲ್ಲರ ದೀನಸ್ಥಿತಿಯೂ ಆಗಿದೆ ಅನ್ನಬಹುದು.

ಬಾಂಬೆಯಲ್ಲಿ ದುಡ್ಡಿಲ್ಲದೆ ಬದುಕೋದು ಕಷ್ಟ ಕಷ್ಟ ಹೌದು, ಮುಂಬೈನಲ್ಲಿ ಟಿವಿ ನಟ ಮಾನಸ್ ಶಾ ನಟಿಸುತ್ತಿರುವ ‘ಹಮಾರಿ ಬಹು ಸಿಲ್ಕ್’ ಷೋ ನಿರ್ಮಾಪಕರು ಕೊರೊನಾದಿಂದಾಗಿ ತಮಗೆ ಪೇಮೆಂಟ್ ನೀಡಿಲ್ಲ. ಹಾಗಾಗಿ ಆರ್ಥಿಕವಾಗಿ ನನ್ನ ಜೀವನ ಕಷ್ಟಕ್ಕೆ ಸಿಲುಕಿದೆ. ನಾನು ನನ್ನ ನೆಚ್ಚಿನ ಕಾರನ್ನು ಮಾರಿ, ಜೀವನ ನಡೆಸಬೇಕಿದೆ. ನಾನು ಬಾಡಿಗೆ ಮನೆಯಲ್ಲಿದ್ದೆ. ಅದನ್ನೂ ತೊರೆದು ಈಗ ಲೋಖಂಡವಾಲಾದಲ್ಲಿರುವ ನನ್ನ ಸಂಬಂಧಿಯ ಮನೆಯಲ್ಲಿ ತಂಗಲು ಹೋಗಬೇಕಿದೆ ಎಂದು ಅಲವತ್ತುಕೊಂಡಿದ್ದಾರೆ.

ಭವಿಷ್ಯದಲ್ಲಿ ಇನ್ನೂ ಏನೆಲ್ಲ ಅನುಭವಿಸಬೇಕೋ ಕಳೆದ ವರ್ಷ ಮೇ 2 ರಿಂದ ಶೂಟಿಂಗ್​ನಲ್ಲಿ ಪಾಲ್ಗೊಂಡಿದ್ದೆ. ಆದ್ರೆ 2019ರ ಅಕ್ಟೋಬರ್ ತಿಂಗಳಿಂದ ನಮಗೆ ಪೇಮೆಂಟ್ ಆಗಿಲ್ಲ. ನನ್ನೂರು ಅಹಮದಾಬಾದಿನಲ್ಲಿರುವ ಅಪ್ಪ-ಅಮ್ಮ ಇದ್ದಾರೆ. ಅವರನ್ನೂ ನಾನು ನೋಡಿಕೊಳ್ಳಬೇಕಿದೆ. ಭವಿಷ್ಯದಲ್ಲಿ ಇನ್ನೂ ಏನೆಲ್ಲ ಅನುಭವಿಸಬೇಕೋ ಎಂದು ಚಿಂತಿಸುತ್ತಾ ನಟ ಮಾನಸ್ ಶಾ ಶೂನ್ಯದಲ್ಲಿ ಕಣ್ಣು ನೆಟ್ಟರು.

ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್
ಸಂಸತ್ತಿಗೆ ಸೈಕಲ್​​ನಲ್ಲಿ ಬಂದ ಸಂಸದ
ಸಂಸತ್ತಿಗೆ ಸೈಕಲ್​​ನಲ್ಲಿ ಬಂದ ಸಂಸದ