AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕರಗಿಲ್ಲ ವಿಜಯ್ ರಾಘವೇಂದ್ರ ಕಣ್ಣೀರು: ಹಂಚಿಕೊಂಡರು ಪತ್ನಿ ಸ್ಪಂದನಾ ಬಗ್ಗೆ ಹಲವು ವಿಷಯ

Vijay Raghavendra: ಜೀವನದ ಭಾಗವಾಗಿದ್ದ ಪತ್ನಿ ಸ್ಪಂದನಾರನ್ನು ಕಳೆದುಕೊಂಡಿರುವ ವಿಜಯ್ ರಾಘವೇಂದ್ರ, ಸ್ಪಂದನಾ ಬಗ್ಗೆ ಕೆಲವು ಅಪರೂಪದ ಸಂಗತಿಗಳನ್ನು ಹಂಚಿಕೊಂಡಿದ್ದಾರೆ. ನೋವಿನ್ನೂ ಸಿನಿಮಾ ಪ್ರಚಾರ ಮಾಡುತ್ತಿರುವ ವಿಜಯ್, ಇದಕ್ಕೆಲ್ಲ ಸ್ಪಂದನಾ ಸ್ಪೂರ್ತಿ ಆಗಿರುವುದು ಹೇಗೆಂದು ವಿವರಿಸಿದ್ದಾರೆ.

ಕರಗಿಲ್ಲ ವಿಜಯ್ ರಾಘವೇಂದ್ರ ಕಣ್ಣೀರು: ಹಂಚಿಕೊಂಡರು ಪತ್ನಿ ಸ್ಪಂದನಾ ಬಗ್ಗೆ ಹಲವು ವಿಷಯ
ವಿಜಯ್ ರಾಘವೇಂದ್ರ
Follow us
ಮಂಜುನಾಥ ಸಿ.
|

Updated on: Aug 31, 2023 | 7:04 PM

ವಿಜಯ್ ರಾಘವೇಂದ್ರ (Vijay Raghavendra) ಕನ್ನಡದ ಸಂಭಾವ್ಯ ನಟ. ಹಲವು ಕುಟುಂಬಗಳು ತಮ್ಮ ಮನೆ ಮಗನಂತೆ ವಿಜಯ್ ರಾಘವೇಂದ್ರರನ್ನು ಭಾವಿಸುತ್ತಾರೆ. ಕೌಟುಂಬಿಕ ವ್ಯಕ್ತಿಯಾಗಿರುವ ವಿಜಯ್ ರಾಘವೇಂದ್ರ ಇತ್ತೀಚೆಗಷ್ಟೆ ತಮ್ಮ ಜೀವನದ ಅತ್ಯಂತ ಮಹತ್ವದ ವ್ಯಕ್ತಿ ಪತ್ನಿ ಸ್ಪಂದನಾರನ್ನು ಕಳೆದುಕೊಂಡಿದ್ದಾರೆ. ಹಲವು ವರ್ಷ ಪ್ರೀತಿಸಿ, ಮನೆಯವರನ್ನು ಒಪ್ಪಿಸಿ ಸ್ಪಂದನಾರನ್ನು ವಿವಾಹವಾಗಿ 16 ವರ್ಷ ಅವರೊಟ್ಟಿಗೆ ಸಂಸಾರ ಮಾಡಿ ಈಗ ವಿಧಿಯಾಟದಿಂದ ಒಬ್ಬಂಟಿಯಾಗಿದ್ದಾರೆ. ನೋವಿನ ಸ್ಥಿತಿಯಲ್ಲಿಯೂ ಕರ್ತವ್ಯ ಮರೆಯದ ವಿಜಯ್ ರಾಘವೇಂದ್ರ ತಮ್ಮ ‘ಕದ್ದ ಚಿತ್ರ’ ಸಿನಿಮಾದ ಪ್ರಚಾರದಲ್ಲಿ ಭಾಗಿಯಾಗಿದ್ದು, ಟಿವಿ9ಗೆ ನೀಡಿರುವ ವಿಶೇಷ ಸಂದರ್ಶನದಲ್ಲಿ ಪತ್ನಿ ಬಗ್ಗೆ ಹಲವು ವಿಷಯಗಳನ್ನು ಹಂಚಿಕೊಂಡಿದ್ದಾರೆ.

”ಪ್ರತಿದಿನ ಎದ್ದಾಗಲೂ ಒಂದು ಎಚ್ಚರಿಕೆ ಇರುತ್ತಿತ್ತು, ನನ್ನ ಕುಟುಂಬಕ್ಕಾಗಿ ನಾನು ಕೆಲಸ ಮಾಡಬೇಕು, ಅವರಿಗೆ ಒಳ್ಳೆಯ ಜೀವನ ಕೊಡಬೇಕು, ನನಗೆ ಏನೂ ಆಗದಂತೆ ನೋಡಿಕೊಳ್ಳಬೇಕು, ಅವರು ಹೆಮ್ಮೆ ಪಡುವಂತೆ ಕೆಲಸ ಮಾಡಬೇಕು ಎಂದು. ಆದರೆ ಈಗ ಅದೆಲ್ಲವೂ ಅರ್ಥ ಕಳೆದುಕೊಂಡಂತೆ ಅನ್ನಿಸುತ್ತಿದೆ. ಆದರೆ ಮಗ ಶೌರ್ಯನಿಗಾಗಿ ನಾನು ಅದನ್ನೆಲ್ಲ ಮುಂದುವರೆಸಬೇಕಿದೆ. ನಾನು ನೋವುಂಡರೆ ಅವನಿಗೆ ಗೊತ್ತಾಗಿಬಿಡುತ್ತದೆ. ಒಬ್ಬನೇ ಇದ್ದಾಗಷ್ಟೆ ಕಣ್ಣೀರು ಹಾಕುತ್ತಿದ್ದೇನೆ” ಎಂದು ನೋವು ಅದುಮಿಟ್ಟುಕೊಂಡೆ ಹೇಳಿದರು ವಿಜಯ್ ರಾಘವೇಂದ್ರ.

ಇದನ್ನೂ ಓದಿ:‘ಮರೆಯದೆ ತೊರೆಯದೆ ಎದೆಗೊತ್ತಿ ಪ್ರೀತಿಸುವೆ’; ವಿವಾಹ ವಾರ್ಷಿಕೋತ್ಸವಕ್ಕೆ ಭಾವುಕ ವಿಡಿಯೋ ಹಂಚಿಕೊಂಡ ವಿಜಯ್ ರಾಘವೇಂದ್ರ

”ನನ್ನ ಜೀವನದ ನಗು, ಶಕ್ತಿ, ಸ್ಪೂರ್ತಿ ಎಲ್ಲವೂ ಆಗಿದ್ದಳು ಸ್ಪಂದನಾ. ಹದಿನಾರು ವರ್ಷದ ಹಿಂದೆ ನಾನು ಬೇರೆಯದ್ದೇ ಆಗಿದ್ದೆ. ಆದರೆ ಸ್ಪಂದನಾ ಬಾಳಿಗೆ ಬಂದ ಬಳಿಕ ನಾನು ಜೀವನವನ್ನು ನೋಡುವ ದೃಷ್ಟಿಕೋನ ಬದಲಾಯ್ತು. 16 ವರ್ಷ ನನಗೆ ಬೆನ್ನೆಲುಬಾಗಿ ನಿಂತು ಶಕ್ತಿ ತುಂಬಿದಳು. ಕಳೆದ ಎರಡು ವರ್ಷಗಳಿಂದ ಅಂತೂ ಅವಳು ನನ್ನನ್ನು ನೋಡಿಕೊಂಡ ರೀತಿಯೇ ಬೇರೆ ಥರಹದಲ್ಲಿತ್ತು. ಯಾವುದಕ್ಕೋ ನನ್ನನ್ನು ಅಣಿಗೊಳಿಸುತ್ತಿದ್ದಳೇನೋ ಎಂದು ಈಗ ಅನ್ನಿಸುತ್ತಿದೆ. ಸದಾ ಬ್ಯುಸಿಯಾಗಿರುತ್ತಿದ್ದಳು, ನಾನೂ ಸಹ ಬ್ಯುಸಿಯಾಗಿರುವಂತೆ ನೋಡಿಕೊಳ್ಳುತ್ತಿದ್ದಳು. ಧೈರ್ಯ ತುಂಬುತ್ತಿದ್ದಳು, ಅವಳೂ ಸಹ ಸಿನಿಮಾ ವಿಷಯಗಳಲ್ಲಿ ಹೆಚ್ಚು ಸಕ್ರಿಯವಾಗತೊಡಗಿದ್ದಳು” ಎಂದು ನೆನಪು ಮಾಡಿಕೊಂಡರು.

”ಈಗ ಎಲ್ಲವೂ ಬದಲಾಗಿದೆ. ಆದರೆ ನನ್ನ ಕರ್ತವ್ಯವನ್ನು ನಾನು ಮುಂದುವರೆಸಬೇಕಿದೆ. ಮಗನಿಗಾಗಿ, ಅವನ ಮೇಲೆ ಸ್ಪಂದನಾ ಇಟ್ಟಿದ್ದ ಕನಸುಗಳನ್ನು ಈಡೇರಿಸಲು ಕೆಲಸ ಮಾಡಬೇಕಿದೆ. ಅವಳು ನಮ್ಮನ್ನೆಲ್ಲ ಆವರಿಸಿಕೊಂಡು ಬಿಟ್ಟಿದ್ದಳು, ನನ್ನ ತಾಯಿಗೆ ತಾಯಿಯಾಗಿದ್ದಳು. ನನ್ನ ಅಮ್ಮನಿಗೆ ಆರೋಗ್ಯ ಸರಿಯಿಲ್ಲ. ಅವರನ್ನು ಬಹಳ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದಳು. ನನ್ನ ತಂದೆಯೂ ಸಹ, ಆಕೆಯನ್ನು ಬಹಳ ಹಚ್ಚಿಕೊಂಡಿದ್ದರು. ‘ನಿನ್ನೊಂದಿಗೆ ಏನು ಮಾತನಾಡೋದು, ನೀನು ಬಾರಮ್ಮ ಇಲ್ಲಿ’ ಎಂದು ಅವಳನ್ನು ಕರೆದು ವಿಷಯಗಳನ್ನು ಚರ್ಚಿಸುತ್ತಿದ್ದಳು. ನಮ್ಮ ಬದುಕನ್ನು ಅವಳು ಆವರಿಸಿಕೊಂಡಿದ್ದಳು” ಎಂದು ಭಾವುಕರಾಗಿ ಕಣ್ಣೀರು ಹಾಕಿದ್ದಾರೆ ವಿಜಯ್.

” ಸಿನಿಮಾದವರು ನಮಗೆ ಹಣ ಕೊಡುತ್ತಾರೆ, ಹೆಸರು ಕೊಡುತ್ತಾರೆ. ಇಂಥಹಾ ಸಮಯದಲ್ಲಿ ನಾನು ನಿರ್ಮಾಪಕರಿಗೆ ಸಹಾಯ ಅಥವಾ ನನ್ನ ಕರ್ತವ್ಯವನ್ನು ನಾನು ಮಾಡದೇ ಇದ್ದರೆ ಹೇಗೆ. ಅದೂ ಅಲ್ಲದೆ, ನಾನು ಸುಮ್ಮನೆ ಕುಳಿತುಕೊಳ್ಳುವುದು ಸ್ಪಂದನಾಗೆ ಇಷ್ಟವಾಗುವುದಿಲ್ಲ. ಒಂದು ಕೆಲಸ ಪ್ರಾರಂಭಿಸಿದರೆ ಮುಗಿಸದೇ ಬಿಡುತ್ತಿರಲಿಲ್ಲ. ಅದೂ ಅಲ್ಲದೆ ‘ಕದ್ದ ಚಿತ್ರ’ ಸಿನಿಮಾ ತಂಡದ ಬಗ್ಗೆ ಸ್ಪಂದನಾಗೆ ವಿಶೇಷ ಅಕ್ಕರೆ ಇತ್ತು. ನಾನು ಇಂದು ಬೇಸರ ಮಾಡಿಕೊಂಡು ಮನೆಯಲ್ಲಿ ಕೂತಿದ್ದರೆ ಅದು ಸ್ಪಂದನಾಗೆ ಇಷ್ಟವಾಗುತ್ತಿರಲಿಲ್ಲ. ನಾನು ಮಾಡುತ್ತಿರುವ ಈ ಕರ್ತವ್ಯದಲ್ಲಿ, ನಿರ್ವಹಿಸುತ್ತಿರುವ ಜವಾಬ್ದಾರಿಯಲ್ಲಿ ಸ್ಪಂದನಾರನ್ನು ಕಾಣುತ್ತಿದ್ದೇನೆ” ಎಂದಿದ್ದಾರೆ ವಿಜಯ್ ರಾಘವೇಂದ್ರ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಬೆಂಗಳೂರಿನ ಜಯನಗರದಲ್ಲಿ ಧರೆಗೆ ಉರುಳಿದ ಮರ
ಬೆಂಗಳೂರಿನ ಜಯನಗರದಲ್ಲಿ ಧರೆಗೆ ಉರುಳಿದ ಮರ
ನೆಲೆಮಂಗಲ: ಮನೆ ಮುಂದೆ ಕಟ್ಟಿದ್ದ ಹಸುಗಳನ್ನ ಕದ್ದು ಪರಾರಿ, ರೈತ ಕಂಗಾಲು
ನೆಲೆಮಂಗಲ: ಮನೆ ಮುಂದೆ ಕಟ್ಟಿದ್ದ ಹಸುಗಳನ್ನ ಕದ್ದು ಪರಾರಿ, ರೈತ ಕಂಗಾಲು
ಗಂಗಾವತಿ ಉಪ ಚುನಾವಣೆಗೆ ಅನ್ಸಾರಿ ಟಿಕೆಟ್ ಬಯಸಿದ್ದರೆ ತಪ್ಪಿಲ್ಲ: ಸಂಗಣ್ಣ
ಗಂಗಾವತಿ ಉಪ ಚುನಾವಣೆಗೆ ಅನ್ಸಾರಿ ಟಿಕೆಟ್ ಬಯಸಿದ್ದರೆ ತಪ್ಪಿಲ್ಲ: ಸಂಗಣ್ಣ
ದೇಶಕ್ಕಿಂತ ದೊಡ್ಡವರು ಯಾರೂ ಇಲ್ಲ, ದೇಶವುಳಿದರೆ ನಾವು ಉಳಿದಂತೆ: ಶಾಸಕ
ದೇಶಕ್ಕಿಂತ ದೊಡ್ಡವರು ಯಾರೂ ಇಲ್ಲ, ದೇಶವುಳಿದರೆ ನಾವು ಉಳಿದಂತೆ: ಶಾಸಕ
ತಿಂಗಳ ಅವಧಿಯಲ್ಲಿ ಭಕ್ತರಿಂದ ಹುಂಡಿಯಲ್ಲಿ ₹59, 28, 876 ಕಾಣಿಕೆ ಸಂಗ್ರಹ
ತಿಂಗಳ ಅವಧಿಯಲ್ಲಿ ಭಕ್ತರಿಂದ ಹುಂಡಿಯಲ್ಲಿ ₹59, 28, 876 ಕಾಣಿಕೆ ಸಂಗ್ರಹ
ಎರಡು ವರ್ಷಗಳಿಂದ ತಮ್ಮಯ್ಯ-ರವಿ ಮಧ್ಯೆ ಆಗಾಗ್ಗೆ ನಡೆಯುತ್ತಿದೆ ಮಾತಿನ ಕಲಹ
ಎರಡು ವರ್ಷಗಳಿಂದ ತಮ್ಮಯ್ಯ-ರವಿ ಮಧ್ಯೆ ಆಗಾಗ್ಗೆ ನಡೆಯುತ್ತಿದೆ ಮಾತಿನ ಕಲಹ
ಡಿಜೆ ಸೌಂಡ್, ಅತಿಯಾದ ಬೆಳಕು ಹೃದಯಾಘಾತಕ್ಕೆ ಕಾರಣವಾಗುತ್ತದೆಯೇ?
ಡಿಜೆ ಸೌಂಡ್, ಅತಿಯಾದ ಬೆಳಕು ಹೃದಯಾಘಾತಕ್ಕೆ ಕಾರಣವಾಗುತ್ತದೆಯೇ?
ಐಪಿಎಲ್: ಬೆಂಗಳೂರಿನ ಈ ರಸ್ತೆಗಳಲ್ಲಿ ಕಿಲೋಮೀಟರ್​ಗಟ್ಟಲೇ ಟ್ರಾಫಿಕ್ ಜಾಮ್
ಐಪಿಎಲ್: ಬೆಂಗಳೂರಿನ ಈ ರಸ್ತೆಗಳಲ್ಲಿ ಕಿಲೋಮೀಟರ್​ಗಟ್ಟಲೇ ಟ್ರಾಫಿಕ್ ಜಾಮ್
ಒಡಿಷಾದಿಂದ ಬಂದಿರುವ ಕೊಹ್ಲಿ ಕಟ್ಟಾಭಿಮಾನಿಗೆ ಟಿಕೆಟ್ ಸಿಕ್ಕಿಲ್ಲ
ಒಡಿಷಾದಿಂದ ಬಂದಿರುವ ಕೊಹ್ಲಿ ಕಟ್ಟಾಭಿಮಾನಿಗೆ ಟಿಕೆಟ್ ಸಿಕ್ಕಿಲ್ಲ
ತಾಳಿ ಕಟ್ಟಿದ ಕೆಲವೇ ಕ್ಷಣದಲ್ಲಿ ಮದುಮಗ ಸಾವು: ಅಸಲಿಗೆ ಆಗಿದ್ದೇನು?
ತಾಳಿ ಕಟ್ಟಿದ ಕೆಲವೇ ಕ್ಷಣದಲ್ಲಿ ಮದುಮಗ ಸಾವು: ಅಸಲಿಗೆ ಆಗಿದ್ದೇನು?