AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಬಂಧನ 2’ ಚಿತ್ರಕ್ಕೆ ಡೆಡ್ಲಿ ಆದಿತ್ಯ ಹೀರೋ; ಇದು ವಿಷ್ಣುವರ್ಧನ್​ ನಟನೆಯ ಕ್ಲಾಸಿಕ್​ ಸಿನಿಮಾದ ಮುಂದಿನ ಭಾಗ

Bandhana 2: ‘ಬಂಧನ’ ನಿರ್ದೇಶಿಸಿದ್ದ ಎಸ್​.ವಿ. ರಾಜೇಂದ್ರ ಸಿಂಗ್​ ಬಾಬು ಅವರೇ ಈಗ ‘ಬಂಧನ 2’ ಚಿತ್ರಕ್ಕೆ ನಿರ್ದೇಶನ ಮಾಡಲಿದ್ದಾರೆ ಅನ್ನೋದು ವಿಶೇಷ. ಚಿತ್ರದಲ್ಲಿ ಇಬ್ಬರು ನಾಯಕಿಯರು ಇರಲಿದ್ದಾರೆ. ಅವರು ಯಾರು ಎಂಬುದು ಸದ್ಯದಲ್ಲೇ ರಿವೀಲ್​ ಆಗಲಿದೆ.

‘ಬಂಧನ 2’ ಚಿತ್ರಕ್ಕೆ ಡೆಡ್ಲಿ ಆದಿತ್ಯ ಹೀರೋ; ಇದು ವಿಷ್ಣುವರ್ಧನ್​ ನಟನೆಯ ಕ್ಲಾಸಿಕ್​ ಸಿನಿಮಾದ ಮುಂದಿನ ಭಾಗ
‘ಬಂಧನ 2’ ಚಿತ್ರಕ್ಕೆ ಡೆಡ್ಲಿ ಆದಿತ್ಯ ಹೀರೋ
TV9 Web
| Edited By: |

Updated on: Sep 19, 2021 | 12:22 PM

Share

ನಟ ವಿಷ್ಣುವರ್ಧನ್​ ಅಭಿನಯದ ದಿ ಬೆಸ್ಟ್​ ಸಿನಿಮಾಗಳನ್ನು ಪಟ್ಟಿ ಮಾಡಿದರೆ ಅದರಲ್ಲಿ ‘ಬಂಧನ’ ಚಿತ್ರ ಕೂಡ ಸ್ಥಾನ ಪಡೆದುಕೊಳ್ಳುತ್ತದೆ. ಇಂದಿಗೂ ಆ ಸಿನಿಮಾವನ್ನು ಜನರು ಆಸಕ್ತಿಯಿಂದ ವೀಕ್ಷಿಸುತ್ತಾರೆ. ಅದರಲ್ಲಿನ ಪ್ರೇಮಕಥೆ ಮನಮುಟ್ಟುವಂತಿದೆ. ಕೌಟುಂಬಿಕ ಪ್ರೇಕ್ಷಕರನ್ನು ಭರಪೂರ ಸೆಳೆದುಕೊಂಡ ಆ ಚಿತ್ರದಲ್ಲಿ ವಿಷ್ಣುವರ್ಧನ್​ ಜೊತೆ ಸುಹಾಸಿನಿ, ಜೈ ಜಗದೀಶ್​ ಮೊದಲಾದವರು ನಟಿಸಿದ್ದರು. ಈಗ ಅದಕ್ಕೆ ಸೀಕ್ವೆಲ್​ ತಯಾರಿಸಲು ಸಿದ್ಧತೆ ನಡೆದಿದೆ. ಅಂದು ‘ಬಂಧನ’ ನಿರ್ದೇಶಿಸಿದ್ದ ಎಸ್​.ವಿ. ರಾಜೇಂದ್ರ ಸಿಂಗ್​ ಬಾಬು ಅವರೇ ಈಗ ‘ಬಂಧನ 2’ ಚಿತ್ರಕ್ಕೆ ನಿರ್ದೇಶನ ಮಾಡಲಿದ್ದಾರೆ ಅನ್ನೋದು ವಿಶೇಷ.

ಚಂದನವನದಲ್ಲಿ ಹಲವು ಚಿತ್ರಗಳಿಗೆ ಛಾಯಾಗ್ರಾಹಕರಾಗಿ ಕೆಲಸ ಮಾಡಿ, ನಿರ್ಮಾಪಕನಾಗಿಯೂ ಗುರುತಿಸಿಕೊಂಡಿರುವ ಅಣಜಿ ನಾಗರಾಜ್ ಅವರು ‘ಬಂಧನ 2’ ಚಿತ್ರಕ್ಕೆ ಬಂಡವಾಳ ಹೂಡಲಿದ್ದಾರೆ. ವಿಷ್ಣುವರ್ಧನ್​ ಜನ್ಮದಿನದ ಪ್ರಯುಕ್ತ ಈ ಸಿನಿಮಾದ ಪೋಸ್ಟರ್​ ಬಿಡುಗಡೆ ಆಗಿದೆ. ಅದರಲ್ಲಿ ವಿಷ್ಣುವರ್ಧನ್​ ಫೋಟೋ ಹೈಲೈಟ್​ ಆಗಿದೆ. ಹಾಗಾದರೆ ಈ ಪಾರ್ಟ್​ 2ಗೆ ಹೀರೋ ಯಾರು ಎಂಬ ಪ್ರಶ್ನೆ ಸಿನಿಪ್ರಿಯರ ಮನದಲ್ಲಿ ಮೂಡುವುದು ಸಹಜ. ರಾಜೇಂದ್ರ ಸಿಂಗ್​ ಬಾಬು ಅವರ ಪುತ್ರ, ನಟ ಆದಿತ್ಯ ‘ಬಂಧನ 2’ ಚಿತ್ರಕ್ಕೆ ಹೀರೋ ಎಂದು ಸ್ವತಃ ನಿರ್ಮಾಪಕ ಅಣಜಿ ನಾಗರಾಜ್​ ಅವರು ಮಾಹಿತಿ ಹಂಚಿಕೊಂಡಿದ್ದಾರೆ.

ಸೂಪರ್​ ಹಿಟ್​ ಸಿನಿಮಾಗಳಿಗೆ ಸೀಕ್ವೆಲ್​ ಮಾಡುವ ಬಹುತೇಕರು ಪ್ರತ್ಯೇಕ ಕಥೆಯನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಆದರೆ ‘ಬಂಧನ 2’ ಚಿತ್ರತಂಡ ಹಾಗಲ್ಲ. ‘ಬಂಧನ’ ಚಿತ್ರದ ಮುಂದುವರಿದ ಕಥೆಯೇ ‘ಬಂಧನ 2’ ಚಿತ್ರದಲ್ಲಿ ಇರಲಿದೆ ಎಂದು ಅಣಜಿ ನಾಗರಾಜ್​ ಹೇಳಿದ್ದಾರೆ. ಅ.22ರಂದು ರಾಜೇಂದ್ರ ಸಿಂಗ್​ ಬಾಬು ಅವರ ಜನ್ಮದಿನ. ಅಂದು ಈ ಸಿನಿಮಾ ಸೆಟ್ಟೇರಲಿದೆ. ಚಿತ್ರದಲ್ಲಿ ಇಬ್ಬರು ನಾಯಕಿಯರು ಇರಲಿದ್ದಾರೆ. ಅವರು ಯಾರು ಎಂಬುದು ಸದ್ಯದಲ್ಲೇ ರಿವೀಲ್​ ಆಗಲಿದೆ.

ಬಂಧನ ಚಿತ್ರ 1984ರಲ್ಲಿ ತೆರೆಕಂಡಿತ್ತು. ನಿರ್ದೇಶನದ ಜೊತೆಗೆ ನಿರ್ಮಾಣವನ್ನೂ ರಾಜೇಂದ್ರ ಸಿಂಗ್​ ಬಾಬು ಅವರು ಮಾಡಿದ್ದರು. ಎಂ. ರಂಗರಾವ್​ ಸಂಗೀತ ನಿರ್ದೇಶನ ಮಾಡಿದ ಹಾಡುಗಳು ಸೂಪರ್​ ಹಿಟ್​ ಆಗಿದ್ದವು. ‘ನೂರೊಂದು ನೆನಪು ಎದೆಯಾಳದಿಂದ..’, ‘ಪ್ರೇಮದ ಕಾದಂಬರಿ..’, ‘ಈ ಬಂಧನ..’, ‘ಬಣ್ಣ ನನ್ನ ಒಲವಿನ ಬಣ್ಣ..’ ಹಾಡುಗಳು ಈಗಲೂ ಕೇಳುಗರ ಫೇವರಿಟ್​ ಆಗಿ ಉಳಿದುಕೊಂಡಿವೆ. ಅಂತಹ ಮ್ಯೂಸಿಕಲ್​ ಹಿಟ್​ ಚಿತ್ರಕ್ಕೆ ಸೀಕ್ವೆಲ್​ ಮಾಡುವುದು ನಿಜಕ್ಕೂ ಚಾಲೆಂಜಿಂಗ್​ ಕೆಲಸ.

ಇದನ್ನೂ ಓದಿ:

‘ವಿಷ್ಣುವರ್ಧನ್​ಗೆ ‘ಸಾಹಸ ಸಿಂಹ’ ಎಂಬ ಬಿರುದು ಸಿಕ್ಕಿದ್ದು ಬರೀ ಪಾತ್ರದ ಕಾರಣಕ್ಕಲ್ಲ’; ತೆರೆ ಹಿಂದಿನ ವಿಚಾರ ತೆರೆದಿಟ್ಟ ನಾಗತಿಹಳ್ಳಿ

‘ವಿಷ್ಣುವರ್ಧನ್​ ರಾತ್ರೋರಾತ್ರಿ ಸಾಹಸ ಸಿಂಹ ಆಗಲಿಲ್ಲ; ಅವರ ಬಗ್ಗೆ ಪುಸ್ತಕ ಬರಲಿದೆ’: ನಟ ಅನಿರುದ್ಧ

Follow Us
ಸಂಪುಟ ವಿಸ್ತರಣೆ ಕ್ಲೈಮ್ಯಾಕ್ಸ್: ಕುತೂಹಲ ಮೂಡಿಸಿದ ರಾಹುಲ್ ಗಾಂಧಿ ನಡೆ
ಸಂಪುಟ ವಿಸ್ತರಣೆ ಕ್ಲೈಮ್ಯಾಕ್ಸ್: ಕುತೂಹಲ ಮೂಡಿಸಿದ ರಾಹುಲ್ ಗಾಂಧಿ ನಡೆ
ಯಾದಗಿರಿಯಲ್ಲಿ ಒಂದೂವರೆ ಗಂಟೆ ಅಬ್ಬರಿಸಿದ ಮಳೆ: ನಿಟ್ಟುಸಿರುವ ಬಿಟ್ಟ ರೈತರು
ಯಾದಗಿರಿಯಲ್ಲಿ ಒಂದೂವರೆ ಗಂಟೆ ಅಬ್ಬರಿಸಿದ ಮಳೆ: ನಿಟ್ಟುಸಿರುವ ಬಿಟ್ಟ ರೈತರು
ಬೆಂಗಳೂರಿನ ಬ್ಯಾಡರಹಳ್ಳಿಯಲ್ಲಿ ಐದನೇ ಬಾರಿ ಚಿರತೆ ಪ್ರತ್ಯಕ್ಷ!
ಬೆಂಗಳೂರಿನ ಬ್ಯಾಡರಹಳ್ಳಿಯಲ್ಲಿ ಐದನೇ ಬಾರಿ ಚಿರತೆ ಪ್ರತ್ಯಕ್ಷ!
ತಾಯಿ ನಮ್ಮನ್ನಗಲಿದ್ದಾರೆ ಎನ್ನುವುದು ನೆನಸಿಕೊಳ್ಳಲಿಕ್ಕೂ ಸಾಧ್ಯವಿಲ್ಲ: hdk
ತಾಯಿ ನಮ್ಮನ್ನಗಲಿದ್ದಾರೆ ಎನ್ನುವುದು ನೆನಸಿಕೊಳ್ಳಲಿಕ್ಕೂ ಸಾಧ್ಯವಿಲ್ಲ: hdk
37 ಟಿಎಂಸಿ ಸಾಮರ್ಥ್ಯದ ಹೇಮಾವತಿಯಲ್ಲಿ ಉಳಿದಿದ್ದು ಕೇವಲ 24 ಟಿಎಂಸಿ
37 ಟಿಎಂಸಿ ಸಾಮರ್ಥ್ಯದ ಹೇಮಾವತಿಯಲ್ಲಿ ಉಳಿದಿದ್ದು ಕೇವಲ 24 ಟಿಎಂಸಿ
ಕಾವೇರಿ ಜಲ ವಿವಾದ: ಸಂಕಷ್ಟ ಸೂತ್ರ ಪಾಲಿಸುವಂತೆ CWRC ಸಲಹೆ
ಕಾವೇರಿ ಜಲ ವಿವಾದ: ಸಂಕಷ್ಟ ಸೂತ್ರ ಪಾಲಿಸುವಂತೆ CWRC ಸಲಹೆ
ಭೋಪಾಲ್‌ನಲ್ಲಿ ಹಿಂಸಾಚಾರಕ್ಕೆ ತಿರುಗಿದ ರೈತರ ಪ್ರತಿಭಟನೆ
ಭೋಪಾಲ್‌ನಲ್ಲಿ ಹಿಂಸಾಚಾರಕ್ಕೆ ತಿರುಗಿದ ರೈತರ ಪ್ರತಿಭಟನೆ
ಕುತೂಹಲಕಾರಿ ಘಟ್ಟ ತಲುಪಿದ ಸಂಪುಟ ವಿಸ್ತರಣೆ ಕಸರತ್ತು
ಕುತೂಹಲಕಾರಿ ಘಟ್ಟ ತಲುಪಿದ ಸಂಪುಟ ವಿಸ್ತರಣೆ ಕಸರತ್ತು
ರಾಜ್ಯದ ಜಲ ಪ್ರದೇಶ ನೋಡಲು ತಮಿಳುನಾಡು ಸಿಎಂಗೆ ಹೆಲಿಕಾಪ್ಟರ್ ವ್ಯವಸ್ಥೆ
ರಾಜ್ಯದ ಜಲ ಪ್ರದೇಶ ನೋಡಲು ತಮಿಳುನಾಡು ಸಿಎಂಗೆ ಹೆಲಿಕಾಪ್ಟರ್ ವ್ಯವಸ್ಥೆ
ಸಿನಿಮಾಕ್ಕೆ ‘ಲವ್ ಕಾಕ್ಟೆಲ್’ ಎಂದು ಹೆಸರಿಟ್ಟಿದ್ದೇಕೆ? ಹರೀಶ್ ರಾಜ್ ಉತ್ತರ
ಸಿನಿಮಾಕ್ಕೆ ‘ಲವ್ ಕಾಕ್ಟೆಲ್’ ಎಂದು ಹೆಸರಿಟ್ಟಿದ್ದೇಕೆ? ಹರೀಶ್ ರಾಜ್ ಉತ್ತರ