ರಶ್ಮಿಕಾಗೋಸ್ಕರ ಅತಿಥಿ ಪಾತ್ರ ಮಾಡಲು ರೆಡಿ ಆಗಿದ್ದ ಸಂದೀಪ್ ವಂಗ; ನೋ ಎಂದಿದ್ದೇಕೆ?

ರಶ್ಮಿಕಾ ಮಂದಣ್ಣ ಅವರು ‘ದಿ ಗರ್ಲ್​ಫ್ರೆಂಡ್’ ಚಿತ್ರದಲ್ಲಿ ನಟಿಸಿದ್ದಾರೆ. ಈ ಸಿನಿಮಾಗೆ ದೀಕ್ಷಿತ್ ಶೆಟ್ಟಿ ಹೀರೋ. ಈ ಚಿತ್ರದ ಟ್ರೇಲರ್ ಇತ್ತೀಚೆಗೆ ರಿಲೀಸ್ ಆಗಿ ಮೆಚ್ಚುಗೆ ಪಡೆದಿದೆ. ಹುಡುಗ ಹಾಗೂ ಹುಡುಗಿ ಮಧ್ಯೆ ಇರೋ ಪ್ರೀತಿ ವಿಚಾರವನ್ನು ಸಿನಿಮಾದಲ್ಲಿ ಹೇಳಲಾಗುತ್ತಿದೆ. ಈ ಚಿತ್ರದಲ್ಲಿ ಸಂದೀಪ್ ಅವರು ಅತಿಥಿ ಪಾತ್ರ ಮಾಡಬೇಕಿತ್ತು.

ರಶ್ಮಿಕಾಗೋಸ್ಕರ ಅತಿಥಿ ಪಾತ್ರ ಮಾಡಲು ರೆಡಿ ಆಗಿದ್ದ ಸಂದೀಪ್ ವಂಗ; ನೋ ಎಂದಿದ್ದೇಕೆ?
ರಶ್ಮಿಕಾ-ಸಂದೀಪ್

Updated on: Oct 28, 2025 | 12:54 PM

ಸಂದೀಪ್ ರೆಡ್ಡಿ ವಂಗ (Sandeep Reddy Vanga) ಆಗಾಗ ಸುದ್ದಿ ಆಗುತ್ತಾ ಇರುತ್ತಾರೆ. ಅವರು ನಿರ್ದೇಶನ ಮಾಡುತ್ತಿರುವ ‘ಸ್ಪಿರಿಟ್’ ಚಿತ್ರದಲ್ಲಿ ದೀಪಿಕಾ ಪಡುಕೋಣೆ ಅವರು ಅತಿಥಿ ಪಾತ್ರ ಮಾಡಬೇಕಿತ್ತು. ಆದರೆ, ಕೊನೆಯ ಕ್ಷಣದಲ್ಲಿ ಅವರು ನೋ ಎಂದರು. ಈ ವಿಚಾರ ಸಾಕಷ್ಟು ಚರ್ಚೆ ಆಯಿತು. ಈ ಬಗ್ಗೆ ಪರ ವಿರೋಧ ಚರ್ಚೆಗಳು ನಡೆದವು. ಈಗ ಸಂದೀಪ್ ರೆಡ್ಡಿ ವಂಗ ಅವರೇ ಸಿನಿಮಾ ಒಂದರಲ್ಲಿ ನಟಿಸೋದಾಗಿ ಹೇಳಿ ಆ ಬಳಿಕ ನೋ ಎಂದಿದ್ದಾರೆ ಎಂದು ವರದಿ ಆಗಿದೆ.

ರಶ್ಮಿಕಾ ಮಂದಣ್ಣ ಅವರು ‘ದಿ ಗರ್ಲ್​ಫ್ರೆಂಡ್’ ಚಿತ್ರದಲ್ಲಿ ನಟಿಸಿದ್ದಾರೆ. ಈ ಸಿನಿಮಾಗೆ ದೀಕ್ಷಿತ್ ಶೆಟ್ಟಿ ಹೀರೋ. ಈ ಚಿತ್ರದ ಟ್ರೇಲರ್ ಇತ್ತೀಚೆಗೆ ರಿಲೀಸ್ ಆಗಿ ಮೆಚ್ಚುಗೆ ಪಡೆದಿದೆ. ಹುಡುಗ ಹಾಗೂ ಹುಡುಗಿ ಮಧ್ಯೆ ಇರೋ ಪ್ರೀತಿ ವಿಚಾರವನ್ನು ಸಿನಿಮಾದಲ್ಲಿ ಹೇಳಲಾಗುತ್ತಿದೆ. ಈ ಚಿತ್ರದಲ್ಲಿ ಸಂದೀಪ್ ಅವರು ಅತಿಥಿ ಪಾತ್ರ ಮಾಡಬೇಕಿತ್ತು. ಆದರೆ, ಕೊನೇ ಕ್ಷಣದಲ್ಲಿ ಅವರು ಇದನ್ನು ತಿರಸ್ಕರಿಸಿದರು ಎನ್ನಲಾಗಿದೆ.

ಸಂದೀಪ್ ನಿರ್ದೇಶನದ ‘ಅನಿಮಲ್’ ಸಿನಿಮಾಗೆ ರಶ್ಮಿಕಾ ನಾಯಕಿ. ಈ ಚಿತ್ರ ಸೂಪರ್ ಹಿಟ್ ಆಗಿತ್ತು. ಹೀಗಾಗಿ, ರಶ್ಮಿಕಾ ಹಾಗೂ ಸಂದೀಪ್ ಮಧ್ಯೆ ಒಳ್ಳೆಯ ಗೆಳೆತನ ಬೆಳೆದಿದೆ. ಈ ಗೆಳೆತನದ ಕಾರಣದಿಂದಲೇ ರಶ್ಮಿಕಾ ಮಂದಣ್ಣ ಅವರು ಸಂದೀಪ್ ಬಳಿ ‘ಗರ್ಲ್​ಫ್ರೆಂಡ್ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ನಟಿಸುವಂತೆ ಕೋರಿದ್ದರು. ಇದಕ್ಕೆ ಸಂದೀಪ್ ಒಪ್ಪಿದ್ದರು. ಆದರೆ, ಅವರಿಗೆ ಈ ಪಾತ್ರ ತಮಗೆ ಸೂಕ್ತ ಅಲ್ಲ ಎನಿಸಿತು.

ಇದನ್ನೂ ಓದಿ
ಪುನೀತ್ ಪ್ರೀತಿ ವಿಚಾರ ಹೇಳಿದಾಗ ರಾಜ್​ಕುಮಾರ್ ರಿಯಾಕ್ಷನ್ ಹೇಗಿತ್ತು?
ಸಾವಿರ ಕೋಟಿ ತಲುಪಲ್ಲ ‘ಕಾಂತಾರ: ಚಾಪ್ಟರ್ 1’ ಕಲೆಕ್ಷನ್; ದೊಡ್ಡ ಕನಸು ಭಗ್ನ
‘ಜಾನ್ವಿ ಗೆಳೆತನದಿಂದ ನನಗೆ ಕಳಂಕ ಬಂದಿದೆ’; ಬದಲಾದ ಅಶ್ವಿನಿ ಗೌಡ
‘ಕಾಂತಾರ: ಚಾಪ್ಟರ್ 1’ ಚಿತ್ರದಲ್ಲಿ ರಿಷಬ್ ಮಾಯಕಾರನಾಗಲು ಬೇಕಾಯ್ತು 6 ಗಂಟೆ

ಇದನ್ನೂ ಓದಿ: ಸಂದೀಪ್ ರೆಡ್ಡಿ ವಂಗ ಯಾವಾಗಲೂ ಕುರ್ತಾ ಧರಿಸೋದು ಏಕೆ? ಆ ಘಟನೆಯೇ ಕಾರಣ

ಸಂದೀಪ್​ಗೆ ಕೊಡಲಾದ ಪಾತ್ರ ಕೇವಲ ಅತಿಥಿ ಪಾತ್ರ ಆಗಿರಲಿಲ್ಲ. ಇದಕ್ಕೆ ಸಾಕಷ್ಟು ತೂಕ ಇದೆಯಂತೆ. ಇದನ್ನು ತಾವು ಮಾಡೋ ಬದಲು ಅದಕ್ಕೆ ಸೂಕ್ತ ಎನಿಸಿದ ಕಲಾವಿದರೇ ಮಾಡಲಿ ಎಂಬುದು ಸಂದೀಪ್ ಅವರ ಅಭಿಪ್ರಾಯ ಆಗಿತ್ತು. ಈ ಕಾರಣದಿಂದಲೇ ಅವರು ತಾವು ನಟಿಸೋದಿಲ್ಲ ಎಂದರು. ನಂತರ ಇದನ್ನು ವೆನ್ನಲ್ಲ ಕಿಶೋರ್​ಗೆ ನೀಡಲಾಯಿತು. ಅವರು ಕೂಡ ಆಫರ್ ತಿರಸ್ಕರಿಸಿದರು. ಕೊನೆಗೆ ಚಿತ್ರದ ನಿರ್ದೇಶಕ ರಾಹುಲ್ ರವೀಂದ್ರನ್ ಅವರೇ ಈ ಚಿತ್ರದಲ್ಲಿ ನಟಿಸಬೇಕಾಯಿತು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ರಾಜೇಶ್ ದುಗ್ಗುಮನೆ

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More
Follow Us