AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Sarath Babu: ಕೊನೆಗೂ ಈಡೇರಲಿಲ್ಲ ನಟ ಶರತ್ ಬಾಬು ಕೊನೆಯ ಆಸೆ

Sarath Babu: ಹಿರಿಯ ನಟ ಶರತ್ ಬಾಬು ಮೇ 22 ರಂದು ಹೈದರಾಬಾದ್​ನಲ್ಲಿ ನಿಧನ ಹೊಂದಿದ್ದಾರೆ. ಐದು ದಶಕದಿಂದ ಚಿತ್ರರಂಗದಲ್ಲಿದ್ದು ಸಾಕಷ್ಟು ಹಣ, ಆಸ್ತಿ ಹೆಸರು ಗಳಿಸಿದ್ದ ಶರತ್ ಬಾಬು ಅವರ ಕೊನೆಯ ಆಸೆ ಈಡೇರಿಲ್ಲ.

Sarath Babu: ಕೊನೆಗೂ ಈಡೇರಲಿಲ್ಲ ನಟ ಶರತ್ ಬಾಬು ಕೊನೆಯ ಆಸೆ
ಶರತ್ ಬಾಬು
ಮಂಜುನಾಥ ಸಿ.
|

Updated on:May 23, 2023 | 8:28 PM

Share

ಬಹುಭಾಷಾ ಹಿರಿಯ ನಟ ಶರತ್ ಬಾಬು (Sarath Babu) ನಿನ್ನೆ ಹೈದರಾಬಾದ್​ನಲ್ಲಿ (Hyderabad) ನಿಧನ ಹೊಂದಿದರು. ಅವರಿಗೆ 71 ವರ್ಷ ವಯಸ್ಸಾಗಿತ್ತು. ಹಲವು ದಿನಗಳಿಂದಲೂ ಅನಾರೋಗ್ಯದಿಂದ ಬಳಲಿದ್ದ ಶರತ್ ಬಾಬುಗೆ ಬೆಂಗಳೂರು, ಚೆನ್ನೈ ಹಾಗೂ ಹೈದರಾಬಾದ್​ಗಳಲ್ಲಿ ಚಿಕಿತ್ಸೆ ನೀಡಲಾಗಿತ್ತು. ಶರತ್ ಬಾಬು ಆರೋಗ್ಯಕ್ಕಾಗಿ ಆತ್ಮೀಯರು, ಅಭಿಮಾನಿಗಳು ಪ್ರಾರ್ಥಿಸಿದ್ದರು ಆದರೆ ಯಾವುದೂ ಫಲಿಸಲಿಲ್ಲ. ಮೇ 22 ರಂದು ಹೈದರಾಬಾದ್​ನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

ಶರತ್ ಕೊನೆಯ ದಿನಗಳ ಹಿತಕರವಾಗಿರಲಿಲ್ಲ. ಸುಮಾರು ಎರಡು ತಿಂಗಳಿಗೂ ಹೆಚ್ಚು ಕಾಲ ಅವರು ಆಸ್ಪತ್ರೆಯ ಬೆಡ್​ ಮೇಲೆ ಐಸಿಯುವಿನ ಉಪಕರಣಗಳ ನಡುವೆಯೇ ಕಳೆದರು. ಶರತ್ ಅವರನ್ನು ಉಳಿಸಿಕೊಳ್ಳಲು ಅವರ ಕುಟುಂಬ ಸದಸ್ಯರು ಬಹಳ ಪ್ರಯತ್ನಪಟ್ಟರಾದರೂ ಅದು ಸಾಧ್ಯವಾಗಿಲ್ಲ. ಆದರೆ ಶರತ್ ಬಾಬು ಅವರ ಕೊನೆಯ ಆಸೆಯೊಂದು ಈಡೇರದೆ ಉಳಿಯಿತು ಎಂಬುದು ಅವರ ಕುಟುಂಬ, ಆಪ್ತೇಷ್ಟರಿಗೆ ಬೇಸರದ ಸಂಗತಿ.

ಸಿನಿಮಾದಿಂದ ತುಸು ಅಂತರ ಕಾಯ್ದುಕೊಂಡಿದ್ದ ಶರತ್ ಕುಮಾರ್, ಆಗೊಮ್ಮೆ ಈಗೊಮ್ಮೆ ಸಣ್ಣ ಪುಟ್ಟ ಪಾತ್ರಗಳಲ್ಲಿ ಮಾತ್ರವೇ ನಟಿಸುತ್ತಿದ್ದರು. ಬರೋಬ್ಬರಿ ಐವತ್ತು ವರ್ಷಗಳ ಕಾಲ ಚಿತ್ರರಂಗದಲ್ಲಿದ್ದ ಶರತ್ ಬಾಬು ಸಿನಿಮಾ ಮುಖೇನ ಒಳ್ಳೆಯ ಹಣ, ಆಸ್ತಿ ಗಳಿಸಿದ್ದರು. ಅವರಿಗೆ ತಮ್ಮ ವಿಶ್ರಾಂತ ಜೀವನಕ್ಕಾಗಿ ಒಂದು ಐಶಾರಾಮಿ ಮನೆಯನ್ನು ಕಟ್ಟಿಕೊಳ್ಳುವ ಆಸೆಯಿತ್ತು. ಅದರಲ್ಲಿಯೂ ಹೈದರಾಬಾದ್​ನ ಹಾರ್ಸ್ಲೆ ಹಿಲ್​ನಲ್ಲಿಯೇ ಮನೆ ಕಟ್ಟು ಆಸೆ ಅವರಿಗಿತ್ತು.

ಅದನ್ನು ನೆರವೇರಿಸಿಕೊಳ್ಳುವ ಪ್ರಯತ್ನದಲ್ಲಿದ್ದ ಶರತ್ ಬಾಬು, ಹಾರ್ಸ್ಲೆ ಹಿಲ್​ನಲ್ಲಿ ಜಾಗ ಖರೀದಿಸಿ ಐಶಾರಾಮಿ ಮನೆ ನಿರ್ಮಾಣವನ್ನು ಸಹ ಆರಂಭಿಸಿದ್ದರು. ಮನೆ ನಿರ್ಮಾಣ ಕಾರ್ಯ ನಡೆಯುತ್ತಿರುವಾಗಲೇ ಶರತ್ ಬಾಬು ಆರೋಗ್ಯದಲ್ಲಿ ವ್ಯತ್ಯಯವವಾಯಿತು. ಅಚಾನಕ್ಕಾಗಿ ಅವರು ಹಾಸಿಗೆ ಹಿಡಿದರು. ಮೊದಲಿಗೆ ಅವರಿಗೆ ಚೆನ್ನೈನಲ್ಲಿಯೇ ಚಿಕಿತ್ಸೆ ನೀಡಲಾಯಿತು. ಆ ಬಳಿಕ ಅವರನ್ನು ಬೆಂಗಳೂರಿಗೆ ಕರೆತಂದು ಚಿಕಿತ್ಸೆ ನೀಡಲಾಯಿತು. ಇಲ್ಲಿ ತುಸು ಚೇತರಿಸಿಕೊಂಡ ಕಾರಣ ಅವರನ್ನು ಹೈದರಾಬಾದ್ ನಿವಾಸಕ್ಕೆ ಕರೆದುಕೊಂಡು ಹೋದರು. ಅಲ್ಲಿ ಹೋದ ಬಳಿಕ ಮತ್ತೆ ಅನಾರೋಗ್ಯ ಕಾಣಿಸಿಕೊಂಡ ಕಾರಣ ಏಪ್ರಿಲ್ 20 ರಂದು ಅವರನ್ನು ಆಸ್ಪತ್ರೆಗೆ ಸೇರಿಸಲಾಯಿತು. ಅದಾದ ಬಳಿಕ ಅಲ್ಲಿಂದ ಹೊರಬರಲೇ ಇಲ್ಲ ಶರತ್ ಬಾಬು.

ಶರತ್ ಬಾಬು ತಮ್ಮ 21ನೇ ವಯಸ್ಸಿನಲ್ಲಿಯೇ ಸಿನಿಮಾದಲ್ಲಿ ನಟಿಸಲು ಆರಂಭಿಸಿದರು. ತಂದೆಯ ವಿರೋಧದ ನಡುವೆಯೂ, ಸ್ನೇಹಿತರ ಹಾಗೂ ತಾಯಿಯ ಬೆಂಬಲದಿಂದ ಸಿನಿಮಾದಲ್ಲಿ ನಟಿಸಲು ಆರಂಭಿಸಿದರು. ನೋಡಲು ಸ್ಪುರದ್ರೂಪಿಯಾಗಿದ್ದ ಶರತ್ ಬಾಬುಗೆ ಕೇಳಿದ ಕೂಡಲೇ ಅವಕಾಶ ದೊರಕಿತು. ಮೊದಲ ಸಿನಿಮಾ ಬಳಿಕ ಶರತ್ ಬಾಬು ಹಿಂತಿರುಗಿ ನೋಡಿದ್ದೇ ಇಲ್ಲ. ಒಂದು ಕಾಲದಲ್ಲಿ ತಮಿಳು-ತೆಲುಗಿನಲ್ಲಿ ದೊಡ್ಡ ಸ್ಟಾರ್ ಆಗಿ ಶರತ್ ಬಾಬು ಮೆರೆದರು. ಕನ್ನಡದಲ್ಲಿ ಅಮೃತವರ್ಷಿಣಿ, ನೀಲಾ, ತುಳಸಿದಳ, ಉಷಾ, ರಣಚಂಡಿ, ಶಕ್ತಿ, ಕಂಪನ, ಗಾಯ, ಹೃದಯ ಹೃದಯ, ಓ ಪ್ರಿಯತಮ, ನಮ್ಮೆಜಮಾನ್ರು, ಬೃಂದಾವನ, ಆರ್ಯನ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ಪ್ರೀತಿಗಾಗಿ ಧಾರಾವಾಹಿಯಲ್ಲಿಯೂ ನಟಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 6:54 pm, Tue, 23 May 23

ಸುಳ್ಳು ಹೇಳಿದ್ರೆ ಒದ್ದು ಒಳಗೆ ಹಾಕ್ತೀನಿ: ಸಚಿವ ಎಂಬಿ ಪಾಟೀಲ್
ಸುಳ್ಳು ಹೇಳಿದ್ರೆ ಒದ್ದು ಒಳಗೆ ಹಾಕ್ತೀನಿ: ಸಚಿವ ಎಂಬಿ ಪಾಟೀಲ್
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ