AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶಮಂತ್​ ತ್ಯಾಗಕ್ಕೆ ನಿಬ್ಬೆರಗಾದ ಮನೆಮಂದಿ; ತೆಗಳುತ್ತಿದ್ದವರು ಗಪ್​-ಚುಪ್​

ಬಿಗ್​ ಬಾಸ್​ ಎಲ್ಲಾ ಸೌಲಭ್ಯಗಳನ್ನು ಹಿಂಪಡೆದಿದ್ದಾರೆ. ನಿದ್ರಿಸಲು ಹಾಸಿಗೆ ಇಲ್ಲ. ಹಾಕಿಕೊಳ್ಳೋಕೆ ಬಟ್ಟೆ ಇಲ್ಲ. ಸ್ನಾನ ಮಾಡೋಕೆ ಸಾಮಗ್ರಿ ಇಲ್ಲ. ಟಾಸ್ಕ್​ ಮೂಲಕ ಮನೆಯ ಸೌಲಭ್ಯಗಳನ್ನು ಹಿಂಪಡೆಯಬೇಕು.

ಶಮಂತ್​ ತ್ಯಾಗಕ್ಕೆ ನಿಬ್ಬೆರಗಾದ ಮನೆಮಂದಿ; ತೆಗಳುತ್ತಿದ್ದವರು ಗಪ್​-ಚುಪ್​
ಶಮಂತ್​ ಬ್ರೋ ಗೌಡ
ರಾಜೇಶ್ ದುಗ್ಗುಮನೆ
| Edited By: |

Updated on: Apr 22, 2021 | 8:17 AM

Share

ಬಿಗ್​ ಬಾಸ್​ ಮನೆಯಲ್ಲಿ ಅತಿ ಹೆಚ್ಚು ತೆಗಳಿಕೆಗೆ ಒಳಗಾದ ಸ್ಪರ್ಧಿ ಎಂದರೆ ಅದು ಶಮಂತ್​ ಬ್ರೋ ಗೌಡ. ಆರಂಭದಲ್ಲಿ ಎರಡು ಬಾರಿ ಕ್ಯಾಪ್ಟನ್​ ಆದ ವಿಚಾರದಿಂದ ಹಿಡಿದು ಸಾಕಷ್ಟು ವಿಷಯಗಳಲ್ಲಿ ಶಮಂತ್​ ಮನೆಯವರಿಂದ ಬೈಸಿಕೊಂಡಿದ್ದಾರೆ. ಆದರೆ, ಈಗ ಶಮಂತ್​ ಮಾಡಿದ ತ್ಯಾಗಕ್ಕೆ ಎಲ್ಲರೂ ನಿಬ್ಬೆರಗಿದ್ದಾರೆ. ಅಷ್ಟೇ ಅಲ್ಲ, ಸಿಕ್ಕ ಸಿಕ್ಕ ವಿಚಾರಕ್ಕೆ ಶಮಂತ್​ ಅವರನ್ನು ಬಯ್ಯುತ್ತಿದ್ದವರು ಈಗ ಸುಮ್ಮನಾಗಿದ್ದಾರೆ. 

ಶಮಂತ್​ ಮೈಕ್​ ಇಲ್ಲದೆ ಮಾತನಾಡಿದ್ದಕ್ಕೆ ಸುದೀಪ್​ ಶಿಕ್ಷೆ ಒಂದನ್ನು ನೀಡಿದ್ದರು. ಅವರು ನೇರವಾಗಿ ಎಲಿಮಿನೇಷನ್​ಗೆ ನಾಮಿನೇಟ್​ ಆಗಬೇಕು ಅಥವಾ ಮನೆಯ ಎಲ್ಲಾ ಸದಸ್ಯರು ಬೆಡ್​​ ರೂಂ ಬಿಟ್ಟುಕೊಡಬೇಕು. ಆಗ ಎಲ್ಲರ ಬಳಿ ಹೋಗಿ​  ಬೆಡ್​ರೂಂ ಬಿಟ್ಟುಕೊಡುವಂತೆ ಶಮಂತ್ ಕನ್ವಿನ್ಸ್​ ಮಾಡಿದ್ದರು. ಈ ಮೂಲಕ ಎಲಿಮಿನೇಷನ್​ನಿಂದ ತಾತ್ಕಾಲಿಕವಾಗಿ ಪಾರಾಗಿದ್ದರು. ಈ ವಿಚಾರಕ್ಕೆ  ಶಮಂತ್​ ಸಾಕಷ್ಟು ತೆಗಳಿಕೆ ಒಳಗಾಗಿದ್ದರು. ಈಗ ಶಮಂತ್​ ಹೀರೋ ಆಗಿದ್ದಾರೆ.

ಬಿಗ್​ ಬಾಸ್​ ಎಲ್ಲಾ ಸೌಲಭ್ಯಗಳನ್ನು ಹಿಂಪಡೆದಿದ್ದಾರೆ. ನಿದ್ರಿಸಲು ಹಾಸಿಗೆ ಇಲ್ಲ. ಹಾಕಿಕೊಳ್ಳೋಕೆ ಬಟ್ಟೆ ಇಲ್ಲ. ಸ್ನಾನ ಮಾಡೋಕೆ ಸಾಮಗ್ರಿ ಇಲ್ಲ. ಟಾಸ್ಕ್​ ಮೂಲಕ ಮನೆಯ ಸೌಲಭ್ಯಗಳನ್ನು ಹಿಂಪಡೆಯಬೇಕು. ಆದರೆ ಸೂಟ್​ಕೇಸ್​ ಪಡೆದುಕೊಳ್ಳುವ ಟಾಸ್ಕ್​ನಲ್ಲಿ ಮನೆಯ ಸದಸ್ಯರು ಸೋತಿದ್ದರು. ಈ ವೇಳೆ ಬಿಗ್​ ಬಾಸ್​ ಆಯ್ಕೆ ಒಂದನ್ನು ನೀಡಿದ್ದರು.

ಮನೆಯ ಒಬ್ಬ ಸದಸ್ಯ  ಸೂಟ್​ಕೇಸ್​ ತ್ಯಾಗ ಮಾಡೋಕೆ ರೆಡಿ ಇದ್ದರೆ ಮನೆ ಉಳಿದ ಸದಸ್ಯರಿಗೆ ಸೂಟ್​ಕೇಸ್​ ಸಿಗಲಿದೆ ಎಂದು ಬಿಗ್​ ಬಾಸ್​ ಹೇಳಿದ್ದರು. ಈ ವೇಳೆ ಶಮಂತ್​ ಬಿಗ್​ ಬಾಸ್​ ಮನೆಯಲ್ಲಿ ತ್ಯಾಗಕ್ಕೆ ಮುಂದಾದರು. ನನ್ನಿಂದಾಗಿ ನೀವೆಲ್ಲರೂ ಲೀವಿಂಗ್​ ಏರಿಯಾ ಬಿಟ್ಟುಕೊಟ್ಟಿದ್ದಿರಿ. ಹೀಗಾಗಿ, ನಾನು ಈ ಬಾರಿ ತ್ಯಾಗ ಮಾಡುತ್ತೇನೆ. ಈ ಮೂಲಕ ನನ್ನ ಮೇಲಿರುವ ಋಣ ತೀರಿಸುತ್ತೇನೆ ಎಂದರು. ಇದನ್ನು ಕೇಳಿ ಬಿಗ್​ ಬಾಸ್​ ಮನೆ ಸದಸ್ಯರು ತುಂಬಾನೇ ಖುಷಿಪಟ್ಟರು. ಈ ಮೂಲಕ ಎಲ್ಲಾ ಸದಸ್ಯರಿಗೆ ಸೂಟ್​ಕೇಸ್​ ಸಿಕ್ಕಿದೆ.

ಇದನ್ನೂ ಓದಿ: ಯಾವ ಬಾಯಲ್ಲಿ ಅಕ್ಕ ಅಂತೀಯಾ? ಅದೇ ಬಾಯಲ್ಲಿ ಏನೇನೋ ಹೇಳಿದ್ದೀಯ! ಶಮಂತ್​ಗೆ ದಿವ್ಯಾ ಪಂಚ್​!

Kichcha Sudeep Salary: ಬಿಗ್​ ಬಾಸ್​ ಸೀಸನ್​ 8ಗೆ ಕಿಚ್ಚ ಸುದೀಪ್​ ಪಡೆದ ಸಂಭಾವನೆ ಎಷ್ಟು?

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್