AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶಮಂತ್​ ತ್ಯಾಗಕ್ಕೆ ನಿಬ್ಬೆರಗಾದ ಮನೆಮಂದಿ; ತೆಗಳುತ್ತಿದ್ದವರು ಗಪ್​-ಚುಪ್​

ಬಿಗ್​ ಬಾಸ್​ ಎಲ್ಲಾ ಸೌಲಭ್ಯಗಳನ್ನು ಹಿಂಪಡೆದಿದ್ದಾರೆ. ನಿದ್ರಿಸಲು ಹಾಸಿಗೆ ಇಲ್ಲ. ಹಾಕಿಕೊಳ್ಳೋಕೆ ಬಟ್ಟೆ ಇಲ್ಲ. ಸ್ನಾನ ಮಾಡೋಕೆ ಸಾಮಗ್ರಿ ಇಲ್ಲ. ಟಾಸ್ಕ್​ ಮೂಲಕ ಮನೆಯ ಸೌಲಭ್ಯಗಳನ್ನು ಹಿಂಪಡೆಯಬೇಕು.

ಶಮಂತ್​ ತ್ಯಾಗಕ್ಕೆ ನಿಬ್ಬೆರಗಾದ ಮನೆಮಂದಿ; ತೆಗಳುತ್ತಿದ್ದವರು ಗಪ್​-ಚುಪ್​
ಶಮಂತ್​ ಬ್ರೋ ಗೌಡ
ರಾಜೇಶ್ ದುಗ್ಗುಮನೆ
| Edited By: |

Updated on: Apr 22, 2021 | 8:17 AM

Share

ಬಿಗ್​ ಬಾಸ್​ ಮನೆಯಲ್ಲಿ ಅತಿ ಹೆಚ್ಚು ತೆಗಳಿಕೆಗೆ ಒಳಗಾದ ಸ್ಪರ್ಧಿ ಎಂದರೆ ಅದು ಶಮಂತ್​ ಬ್ರೋ ಗೌಡ. ಆರಂಭದಲ್ಲಿ ಎರಡು ಬಾರಿ ಕ್ಯಾಪ್ಟನ್​ ಆದ ವಿಚಾರದಿಂದ ಹಿಡಿದು ಸಾಕಷ್ಟು ವಿಷಯಗಳಲ್ಲಿ ಶಮಂತ್​ ಮನೆಯವರಿಂದ ಬೈಸಿಕೊಂಡಿದ್ದಾರೆ. ಆದರೆ, ಈಗ ಶಮಂತ್​ ಮಾಡಿದ ತ್ಯಾಗಕ್ಕೆ ಎಲ್ಲರೂ ನಿಬ್ಬೆರಗಿದ್ದಾರೆ. ಅಷ್ಟೇ ಅಲ್ಲ, ಸಿಕ್ಕ ಸಿಕ್ಕ ವಿಚಾರಕ್ಕೆ ಶಮಂತ್​ ಅವರನ್ನು ಬಯ್ಯುತ್ತಿದ್ದವರು ಈಗ ಸುಮ್ಮನಾಗಿದ್ದಾರೆ. 

ಶಮಂತ್​ ಮೈಕ್​ ಇಲ್ಲದೆ ಮಾತನಾಡಿದ್ದಕ್ಕೆ ಸುದೀಪ್​ ಶಿಕ್ಷೆ ಒಂದನ್ನು ನೀಡಿದ್ದರು. ಅವರು ನೇರವಾಗಿ ಎಲಿಮಿನೇಷನ್​ಗೆ ನಾಮಿನೇಟ್​ ಆಗಬೇಕು ಅಥವಾ ಮನೆಯ ಎಲ್ಲಾ ಸದಸ್ಯರು ಬೆಡ್​​ ರೂಂ ಬಿಟ್ಟುಕೊಡಬೇಕು. ಆಗ ಎಲ್ಲರ ಬಳಿ ಹೋಗಿ​  ಬೆಡ್​ರೂಂ ಬಿಟ್ಟುಕೊಡುವಂತೆ ಶಮಂತ್ ಕನ್ವಿನ್ಸ್​ ಮಾಡಿದ್ದರು. ಈ ಮೂಲಕ ಎಲಿಮಿನೇಷನ್​ನಿಂದ ತಾತ್ಕಾಲಿಕವಾಗಿ ಪಾರಾಗಿದ್ದರು. ಈ ವಿಚಾರಕ್ಕೆ  ಶಮಂತ್​ ಸಾಕಷ್ಟು ತೆಗಳಿಕೆ ಒಳಗಾಗಿದ್ದರು. ಈಗ ಶಮಂತ್​ ಹೀರೋ ಆಗಿದ್ದಾರೆ.

ಬಿಗ್​ ಬಾಸ್​ ಎಲ್ಲಾ ಸೌಲಭ್ಯಗಳನ್ನು ಹಿಂಪಡೆದಿದ್ದಾರೆ. ನಿದ್ರಿಸಲು ಹಾಸಿಗೆ ಇಲ್ಲ. ಹಾಕಿಕೊಳ್ಳೋಕೆ ಬಟ್ಟೆ ಇಲ್ಲ. ಸ್ನಾನ ಮಾಡೋಕೆ ಸಾಮಗ್ರಿ ಇಲ್ಲ. ಟಾಸ್ಕ್​ ಮೂಲಕ ಮನೆಯ ಸೌಲಭ್ಯಗಳನ್ನು ಹಿಂಪಡೆಯಬೇಕು. ಆದರೆ ಸೂಟ್​ಕೇಸ್​ ಪಡೆದುಕೊಳ್ಳುವ ಟಾಸ್ಕ್​ನಲ್ಲಿ ಮನೆಯ ಸದಸ್ಯರು ಸೋತಿದ್ದರು. ಈ ವೇಳೆ ಬಿಗ್​ ಬಾಸ್​ ಆಯ್ಕೆ ಒಂದನ್ನು ನೀಡಿದ್ದರು.

ಮನೆಯ ಒಬ್ಬ ಸದಸ್ಯ  ಸೂಟ್​ಕೇಸ್​ ತ್ಯಾಗ ಮಾಡೋಕೆ ರೆಡಿ ಇದ್ದರೆ ಮನೆ ಉಳಿದ ಸದಸ್ಯರಿಗೆ ಸೂಟ್​ಕೇಸ್​ ಸಿಗಲಿದೆ ಎಂದು ಬಿಗ್​ ಬಾಸ್​ ಹೇಳಿದ್ದರು. ಈ ವೇಳೆ ಶಮಂತ್​ ಬಿಗ್​ ಬಾಸ್​ ಮನೆಯಲ್ಲಿ ತ್ಯಾಗಕ್ಕೆ ಮುಂದಾದರು. ನನ್ನಿಂದಾಗಿ ನೀವೆಲ್ಲರೂ ಲೀವಿಂಗ್​ ಏರಿಯಾ ಬಿಟ್ಟುಕೊಟ್ಟಿದ್ದಿರಿ. ಹೀಗಾಗಿ, ನಾನು ಈ ಬಾರಿ ತ್ಯಾಗ ಮಾಡುತ್ತೇನೆ. ಈ ಮೂಲಕ ನನ್ನ ಮೇಲಿರುವ ಋಣ ತೀರಿಸುತ್ತೇನೆ ಎಂದರು. ಇದನ್ನು ಕೇಳಿ ಬಿಗ್​ ಬಾಸ್​ ಮನೆ ಸದಸ್ಯರು ತುಂಬಾನೇ ಖುಷಿಪಟ್ಟರು. ಈ ಮೂಲಕ ಎಲ್ಲಾ ಸದಸ್ಯರಿಗೆ ಸೂಟ್​ಕೇಸ್​ ಸಿಕ್ಕಿದೆ.

ಇದನ್ನೂ ಓದಿ: ಯಾವ ಬಾಯಲ್ಲಿ ಅಕ್ಕ ಅಂತೀಯಾ? ಅದೇ ಬಾಯಲ್ಲಿ ಏನೇನೋ ಹೇಳಿದ್ದೀಯ! ಶಮಂತ್​ಗೆ ದಿವ್ಯಾ ಪಂಚ್​!

Kichcha Sudeep Salary: ಬಿಗ್​ ಬಾಸ್​ ಸೀಸನ್​ 8ಗೆ ಕಿಚ್ಚ ಸುದೀಪ್​ ಪಡೆದ ಸಂಭಾವನೆ ಎಷ್ಟು?

ನೀವೆಲ್ಲರೂ ನನ್ನ ರಕ್ಷಣೆಗೆ ಬರಬೇಕು: ಸದನದಲ್ಲಿ ಪರಿಪರಿಯಾಗಿ ಬೇಡಿಕೊಂಡ ಶಾಸಕ
ನೀವೆಲ್ಲರೂ ನನ್ನ ರಕ್ಷಣೆಗೆ ಬರಬೇಕು: ಸದನದಲ್ಲಿ ಪರಿಪರಿಯಾಗಿ ಬೇಡಿಕೊಂಡ ಶಾಸಕ
ಗರ್ಭಿಣಿ ಸೊಸೆಯನ್ನು ಮಾವ ಹತ್ಯೆ ಮಾಡಿದ್ಯಾಕೆ? ಸ್ಫೋಟಕ ಕಾರಣ ಬಿಚ್ಚಿಟ್ಟ SP
ಗರ್ಭಿಣಿ ಸೊಸೆಯನ್ನು ಮಾವ ಹತ್ಯೆ ಮಾಡಿದ್ಯಾಕೆ? ಸ್ಫೋಟಕ ಕಾರಣ ಬಿಚ್ಚಿಟ್ಟ SP
ಧಮ್ಕಿ ಕೇಸ್ ಆರೋಪಿ ರಾಜೀವ್ ಗೌಡ ಪತ್ನಿ ವಿಧಾನಸೌಧದಲ್ಲಿ ಪ್ರತ್ಯಕ್ಷ
ಧಮ್ಕಿ ಕೇಸ್ ಆರೋಪಿ ರಾಜೀವ್ ಗೌಡ ಪತ್ನಿ ವಿಧಾನಸೌಧದಲ್ಲಿ ಪ್ರತ್ಯಕ್ಷ
ಸದನದಲ್ಲಿ ಪೆನ್​ಡ್ರೈವ್ ತೋರಿಸಿದ ಆರ್​ ಅಶೋಕ್: ಯಾವ ಮ್ಯಾಟರ್ ಗೊತ್ತಾ?
ಸದನದಲ್ಲಿ ಪೆನ್​ಡ್ರೈವ್ ತೋರಿಸಿದ ಆರ್​ ಅಶೋಕ್: ಯಾವ ಮ್ಯಾಟರ್ ಗೊತ್ತಾ?
ನಿವೃತ್ತಿ ಬಗ್ಗೆ ಸ್ಫೋಟಕ ಹೇಳಿಕೆ ನೀಡಿದ ಕೆಎಲ್ ರಾಹುಲ್
ನಿವೃತ್ತಿ ಬಗ್ಗೆ ಸ್ಫೋಟಕ ಹೇಳಿಕೆ ನೀಡಿದ ಕೆಎಲ್ ರಾಹುಲ್
‘ದರ್ಶನ್ ‘ಲ್ಯಾಂಡ್​ಲಾರ್ಡ್’ ನೋಡಿದ್ದರೆ ಏನೆನ್ನುತ್ತಿದ್ದರು?’
‘ದರ್ಶನ್ ‘ಲ್ಯಾಂಡ್​ಲಾರ್ಡ್’ ನೋಡಿದ್ದರೆ ಏನೆನ್ನುತ್ತಿದ್ದರು?’
ಅಜಿತ್ ಪವಾರ್ ಅಂತ್ಯಕ್ರಿಯೆಗೆ ಸೇರಿದ್ದ ಜನಸಾಗರ ನೋಡಿ!
ಅಜಿತ್ ಪವಾರ್ ಅಂತ್ಯಕ್ರಿಯೆಗೆ ಸೇರಿದ್ದ ಜನಸಾಗರ ನೋಡಿ!
ಈ ವರ್ಷ ನಟಿ ರಚಿತಾ ರಾಮ್ ಮದುವೆ: ವಿಷಯ ಖಚಿತಪಡಿಸಿದ ಡಿಂಪಲ್ ಕ್ವೀನ್
ಈ ವರ್ಷ ನಟಿ ರಚಿತಾ ರಾಮ್ ಮದುವೆ: ವಿಷಯ ಖಚಿತಪಡಿಸಿದ ಡಿಂಪಲ್ ಕ್ವೀನ್
ಸಚಿವ ಸ್ಥಾನಕ್ಕೆ ರಾಜೀನಾಮೆ ಸುದ್ದಿ: ಈ ಬಗ್ಗೆ ಕೆಜೆ ಜಾರ್ಜ್ ಹೇಳಿದ್ದೇನು?
ಸಚಿವ ಸ್ಥಾನಕ್ಕೆ ರಾಜೀನಾಮೆ ಸುದ್ದಿ: ಈ ಬಗ್ಗೆ ಕೆಜೆ ಜಾರ್ಜ್ ಹೇಳಿದ್ದೇನು?
ಅಜಿತ್ ಪವಾರ್ ಅಂತ್ಯಕ್ರಿಯೆ; ಮಕ್ಕಳಿಂದ ಅಪ್ಪನ ಚಿತೆಗೆ ಅಗ್ನಿಸ್ಪರ್ಶ
ಅಜಿತ್ ಪವಾರ್ ಅಂತ್ಯಕ್ರಿಯೆ; ಮಕ್ಕಳಿಂದ ಅಪ್ಪನ ಚಿತೆಗೆ ಅಗ್ನಿಸ್ಪರ್ಶ