AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಯಾವ ಬಾಯಲ್ಲಿ ಅಕ್ಕ ಅಂತೀಯಾ? ಅದೇ ಬಾಯಲ್ಲಿ ಏನೇನೋ ಹೇಳಿದ್ದೀಯ! ಶಮಂತ್​ಗೆ ದಿವ್ಯಾ ಪಂಚ್​!

Bigg Boss Kannada: ‘ಮೊದಲು ಶಮಂತ್​ ನನಗೆ ಲೈನ್​ ಹೊಡೀತಿದ್ದ. ಆದರೆ ಈಗ ಅಕ್ಕ ಅಂತಿದ್ದಾನೆ. ಅದು ಗಲೀಜು ಅಲ್ಲವಾ?’ ಎಂದು ದಿವ್ಯಾ ಉರುಡುಗ ಹೇಳಿದ್ದಾರೆ. ಈ ವಿಚಾರ ವೀಕೆಂಡ್​ನಲ್ಲೂ ಚರ್ಚೆ ಆಗಿದೆ.

ಯಾವ ಬಾಯಲ್ಲಿ ಅಕ್ಕ ಅಂತೀಯಾ? ಅದೇ ಬಾಯಲ್ಲಿ ಏನೇನೋ ಹೇಳಿದ್ದೀಯ! ಶಮಂತ್​ಗೆ ದಿವ್ಯಾ ಪಂಚ್​!
ಶಮಂತ್​ ಬ್ರೋ ಗೌಡ - ದಿವ್ಯಾ ಉರುಡುಗ
ಮದನ್​ ಕುಮಾರ್​
|

Updated on: Apr 12, 2021 | 12:22 PM

Share

ಬಿಗ್​ ಬಾಸ್​ ಮನೆಯಲ್ಲಿ ಏನು ಬೇಕಾದರೂ ನಡೆಯಬಹುದು. ಎಂಥ ಟ್ವಿಸ್ಟ್​ ಸಿಕ್ಕರೂ ಕೂಡ ಅದನ್ನು ಸ್ವೀಕರಿಸಲು ಪ್ರೇಕ್ಷಕರು ಸಿದ್ಧರಾಗಿರಬೇಕು. ಏ.12ರ ಎಪಿಸೋಡ್​ನಲ್ಲಿ ಶಮಂತ್​ ಬ್ರೋ ಗೌಡ ಅವರು ಅಂಥ ಒಂದು ಸಡನ್​ ಟ್ವಿಸ್ಟ್​ ನೀಡಿದ್ದಾರೆ. ಅದರ ಬಗ್ಗೆ ಎಲ್ಲರೂ ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ. ಬಿಗ್​ ಬಾಸ್​ ಮನೆಗೆ ಕಾಲಿಟ್ಟ ಪ್ರಾರಂಭದಲ್ಲಿ ದಿವ್ಯಾ ಉರುಡುಗ ಬಗ್ಗೆ ಬೇರೆ ರೀತಿಯ ಭಾವನೆ ಇಟ್ಟುಕೊಂಡಿದ್ದ ಅವರು ಈಗ ಏಕಾಏಕಿ ಅಕ್ಕ ಎಂದು ಕರೆಯುವ ಮೂಲಕ ವರಸೆ ಬದಲಾಯಿಸಿದ್ದಾರೆ! ಆ ಮಾತಿಗೆ ದಿವ್ಯಾ ಉರುಡುಗ ಕೊಟ್ಟ ಪ್ರತಿಕ್ರಿಯೆ ಕೂಡ ಅಷ್ಟೇ ಖಡಕ್​ ಆಗಿತ್ತು.

ಇತ್ತೀಚೆಗೆ ಶಮಂತ್​ ಬ್ರೋ ಗೌಡ ಅವರಿಗೆ ಕುತ್ತಿಗೆ ನೋವಾಗಿತ್ತು. ಅದನ್ನು ಸರಿಪಡಿಸುತ್ತೇನೆ ಎಂದು ದಿವ್ಯಾ ಉರುಡುಗ ಪ್ರಯತ್ನಿಸುತ್ತಿದ್ದರು. ಆಗ ದಿವ್ಯಾಗೆ ಶಮಂತ್​ ಅವರು ಅಕ್ಕ ಎಂದು ಕರೆದರು. ‘ಯಾವ ಬಾಯಲ್ಲಿ ಅಕ್ಕ ಅಂತೀಯಾ? ಅದೇ ಬಾಯಲ್ಲಿ ಏನೇನೋ ಹೇಳಿದೀಯ. ಮೊದಲು ನನ್ನನ್ನು ಹೇಗೆ ಮಾತನಾಡಿಸುತ್ತಿದ್ದೆ? ಆದರೆ ಈಗ ಈ ರೀತಿ ಹೇಳುತ್ತಿದ್ದೀಯ’ ಎಂದು ದಿವ್ಯಾ ತಕ್ಷಣ ತಿರುಗೇಟು ನೀಡಿದರು. ಅದನ್ನೆಲ್ಲ ನಟಿ ವೈಜಯಂತಿ ಅಡಿಗ ನೋಡುತ್ತಿದ್ದರು.

‘ಮೊದಲು ಶಮಂತ್​ ನನಗೆ ಲೈನ್​ ಹೊಡೀತಿದ್ದ. ಆದರೆ ಈಗ ಅಕ್ಕ ಅಂತಿದ್ದಾನೆ. ಅದು ಗಲೀಜು ಅಲ್ಲವಾ? ಅದರ ಬದಲು ಫ್ರೆಂಡ್​ ಅಂತ ಹೇಳಬಹುದು. ಅವನು ತುಂಬ ಮುಗ್ಧ ಎಂದು ನನಗೆ ಅನಿಸುತ್ತದೆ. ತುಂಬ ಒಳ್ಳೆಯವನು. ನನಗಿಂತ ಚಿಕ್ಕವನು’ ಎಂದು ವೈಜಯಂತಿಗೆ ದಿವ್ಯಾ ಉರುಡುಗ ಎಲ್ಲವನ್ನೂ ಬಿಡಿಸಿ ಹೇಳಿದ್ದಾರೆ.

ಆರಂಭದ ದಿನಗಳಲ್ಲಿ ಶಮಂತ್​ ಅವರು ದೊಡ್ಮನೆಯ ಹುಡುಗಿಯರ ಬಗ್ಗೆ ಸಾಕಷ್ಟು ಆಸಕ್ತಿ ತೋರಿಸುತ್ತಿದ್ದರು. ಆದರೆ ಅವರಿಗೆ ಯಾರೂ ಮನಸೋಲಲೇ ಇಲ್ಲ. ಇದು ಬಿಗ್​ ಬಾಸ್​ ಮನೆಯಲ್ಲಿ ಆಗಾಗ ಚರ್ಚೆ ಆಗುತ್ತಲೇ ಇರುತ್ತದೆ. ಒಬ್ಬಳನ್ನಾದರೂ ಪಟಾಯಿಸಿ ತೋರಿಸು ಅಂತ ಶಮಂತ್​ಗೆ ಶುಭಾ ಪೂಂಜಾ ಬಹಿರಂಗ ಸವಾಲು ಹಾಕಿದ್ದರು. ಅದರಲ್ಲೂ ಶಮಂತ್​ ವಿಫಲರಾದರು. ಈಗ ಅವರು ದಿವ್ಯಾಗೆ ಅಕ್ಕ ಎಂದು ಹೇಳಿರುವುದು ಸುದೀಪ್​ ಗಮನಕ್ಕೂ ಬಂದಿದೆ. ವೀಕೆಂಡ್​ ಎಪಿಸೋಡ್​ನಲ್ಲಿ ಶಮಂತ್​ಗೆ ಇದೇ ವಿಚಾರವಾಗಿ ಸುದೀಪ್​ ಪ್ರಶ್ನಿಸಿದರು.

ಅದೇನೇ ಇರಲಿ, ಸದ್ಯಕ್ಕಂತೂ ಅರವಿಂದ್​ ಕೆಪಿ ಜೊತೆಗೆ ದಿವ್ಯಾ ಉರುಡುಗ ಅವರ ಆಪ್ತತೆ ಹೆಚ್ಚಾಗಿದೆ. ಇಬ್ಬರ ನಡುವಿನ ಸ್ನೇಹ-ಪ್ರೀತಿ ಕಂಡು ಮನೆಯ ಸದಸ್ಯರು ಅಚ್ಚರಿಪಡುತ್ತಿದ್ದಾರೆ. ಬಿಗ್​ ಬಾಸ್​ನಿಂದ ಹೊರಬಂದ ಬಳಿಕ ಅವರಿಬ್ಬರು ಮದುವೆ ಆದರೂ ಅಚ್ಚರಿ ಏನಿಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ. ಅವರ ಜೊತೆಗೆ ದಿವ್ಯಾ ಸುರೇಶ್​ ಮತ್ತು ಮಂಜು ಪಾವಗಡ ಕೂಡ ಜೋಡಿಹಕ್ಕಿಗಳ ರೀತಿಯಲ್ಲಿ ಬಿಗ್​ ಬಾಸ್​ ಕನ್ನಡ ಸೀಸನ್​ 8ರಲ್ಲಿ ಗಮನ ಸೆಳೆಯುತ್ತಿದ್ದಾರೆ.

ಇದನ್ನೂ ಓದಿ: ವೈಷ್ಣವಿಗೆ ತುರ್ತಾಗಿ ಗಂಡ ಬೇಕಂತೆ! ಬಿಗ್​ ಬಾಸ್​ ಮನೆಯಲ್ಲಿ ಸನ್ನಿಧಿಯ ಹೊಸ ಬೇಡಿಕೆ

(Bigg Boss Kannada 8 : Shamanth Bro Gowda calls Divya Uruduga as his sister BBK8)

ಕೃಷ್ಣಭೈರೇಗೌಡ ವಿರುದ್ಧ ಭೂಕಬಳಿಕೆ ಆರೋಪ: ಆ ಭೂಮಿ ಎಲ್ಲಿ? ಹೇಗಿದೆ ನೋಡಿ
ಕೃಷ್ಣಭೈರೇಗೌಡ ವಿರುದ್ಧ ಭೂಕಬಳಿಕೆ ಆರೋಪ: ಆ ಭೂಮಿ ಎಲ್ಲಿ? ಹೇಗಿದೆ ನೋಡಿ
ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!