AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಲೈಟ್​ ಆಫ್​ ಆದಾಗ ಅರವಿಂದ್​-ದಿವ್ಯಾ ಕಣ್​ ಕಣ್ಣ ಸಲಿಗೆ! ಕದ್ದು ನೋಡಿದ ಶಮಂತ್​-ರಘು

Bigg Boss Kannada: ರಾತ್ರಿ ವೇಳೆ ದಿವ್ಯಾ ಉರುಡುಗ ಮತ್ತು ಅರವಿಂದ್​ ಕೆ.ಪಿ. ಏನೆಲ್ಲ ಮಾಡುತ್ತಾರೆ ಎಂಬುದನ್ನು ಶಮಂತ್​ ಬ್ರೋ ಗೌಡ ಮತ್ತು ರಘು ಗೌಡ ಕದ್ದು ನೋಡಿದ್ದಾರೆ! ರಾತ್ರಿ ನಡೆದ ಸಂಗತಿಯ ಬಗ್ಗೆ ಬೆಳಗ್ಗೆ ಮನೆಯ ಇತರೆ ಸದಸ್ಯರಿಗೆ ಅವರು ವರದಿ ಒಪ್ಪಿಸಿದ್ದಾರೆ.

ಲೈಟ್​ ಆಫ್​ ಆದಾಗ ಅರವಿಂದ್​-ದಿವ್ಯಾ ಕಣ್​ ಕಣ್ಣ ಸಲಿಗೆ! ಕದ್ದು ನೋಡಿದ ಶಮಂತ್​-ರಘು
ಅರವಿಂದ್​ - ದಿವ್ಯಾ ಉರುಡುಗ
ಮದನ್​ ಕುಮಾರ್​
| Edited By: |

Updated on: Apr 10, 2021 | 3:31 PM

Share

ಬಿಗ್​ ಬಾಸ್​ ಮನೆಯಲ್ಲಿ ಟಾಸ್ಕ್​ ಒಂದು ಕಡೆಯಾದರೆ, ಲವ್​ ಸ್ಟೋರಿಗಳು ಇನ್ನೊಂದು ಕಡೆ ಹೈಲೈಟ್ ಆಗುತ್ತಿವೆ. ಅದರಲ್ಲೂ ಅರವಿಂದ್​ ಕೆ.ಪಿ. ಹಾಗೂ ದಿವ್ಯಾ ಉರುಡುಗ ನಡುವಿನ ಆಪ್ತತತೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಅದು ಮನೆಯ ಸದಸ್ಯರ ಕಣ್ಣು ಕುಕ್ಕುತ್ತಿದೆ. ವೀಕ್ಷಕರ ವಲಯದಲ್ಲೂ ಈ ಬಗ್ಗೆ ಚರ್ಚೆ ಜೋರಾಗಿದೆ. ಆದರೆ ಅದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದ ಈ ಜೋಡಿಹಕ್ಕಿಗಳು ತಮ್ಮ ಪಾಡಿಗೆ ತಾವು ಹಾಯಾಗಿವೆ. ಇತ್ತೀಚೆಗೆ ದೊಡ್ಮನೆಯಲ್ಲಿ ಅವರಿಬ್ಬರ ಒಂದು ವಿಲಕ್ಷಣ ವರ್ತನೆ ಬೆಳಕಿಗೆ ಬಂದಿದೆ.

ಬಿಗ್​ ಬಾಸ್​ ಮನೆಯಲ್ಲಿ ರಾತ್ರಿ ಬೆಡ್​ ರೂಮ್​ ಲೈಟ್​ ಆಫ್​ ಆದ ಬಳಿಕ ಎಲ್ಲರೂ ಮಲಗುತ್ತಾರೆ. ಇನ್ನೊಬ್ಬರ ನಿದ್ರೆಗೆ ತೊಂದರೆ ಆಗಬಾರದು ಎಂದು ಪಿಸುಮಾತಿನಲ್ಲಿ ಸಂವಹನ ನಡೆಸುತ್ತಾರೆ. ಇಂಥ ಸಮಯದಲ್ಲಿ ದಿವ್ಯಾ ಉರುಡುಗ ಮತ್ತು ಅರವಿಂದ್​ ಕೆ.ಪಿ. ಕಣ್ಸನ್ನೆಯಲ್ಲೇ ಏನೇನೋ ಮಾತನಾಡಿಕೊಂಡಿದ್ದಾರೆ. ಏ.9ರ ಎಪಿಸೋಡ್​ನಲ್ಲಿ ಈ ದೃಶ್ಯಗಳು ಪ್ರಸಾರ ಆಗಿವೆ. ಇಬ್ಬರ ನಡುವೆ ಆಪ್ತತೆ ಹೆಚ್ಚಿದೆ ಎಂಬುದಕ್ಕೆ ಈ ಸಂಗತಿಯೇ ಸಾಕ್ಷಿ ಒದಗಿಸುತ್ತಿದೆ.

ಅಷ್ಟೇ ಅಲ್ಲ, ರಾತ್ರಿ ವೇಳೆ ದಿವ್ಯಾ ಉರುಡುಗ ಮತ್ತು ಅರವಿಂದ್​ ಕೆ.ಪಿ. ಏನೆಲ್ಲ ಮಾಡುತ್ತಾರೆ ಎಂಬುದನ್ನು ಶಮಂತ್​ ಬ್ರೋ ಗೌಡ ಮತ್ತು ರಘು ಗೌಡ ಕದ್ದು ನೋಡಿದ್ದಾರೆ! ರಾತ್ರಿ ನಡೆದ ಸಂಗತಿಯ ಬಗ್ಗೆ ಬೆಳಗ್ಗೆ ಮನೆಯ ಇತರೆ ಸದಸ್ಯರಿಗೆ ಅವರು ವರದಿ ಒಪ್ಪಿಸಿದ್ದಾರೆ. ‘ದಿವ್ಯಾ ಉರುಡುಗ ಪದೇ ಪದೇ ಹೋಗಿ ಅರವಿಂದ್​ರನ್ನು ಮುಟ್ಟಿ ಬರುತ್ತಿದ್ದರು. ಸೊಳ್ಳೆ ಇರಬಹುದು ಎಂದುಕೊಂಡು ಅರವಿಂದ್​ ತೋಳಿಗೆ ಹೊಡೆದುಕೊಂಡರು’ ಎಂದು ರಘು ಮತ್ತು ಶಮಂತ್​ ಎಲ್ಲವನ್ನೂ ಬಹಿರಂಗ ಮಾಡಿದ್ದಾರೆ.

‘ಮಸಲ್​ ತೋರಿಸುವ ಸಲುವಾಗಿ ಅರವಿಂದ್​ ಆ ರೀತಿ ತೋಳಿಗೆ ಹೊಡೆದುಕೊಂಡಿರುತ್ತಾರೆ. ಒಂದು ನವಿಲು ಇನ್ನೊಂದು ನವಿಲನ್ನು ಆಕರ್ಷಿಸಲು ಗರಿ ಬಿಚ್ಚುತ್ತದೆ. ಇದೂ ಕೂಡ ಹಂಗೆ. ಇಬ್ಬರೂ ಆಚೆ ಹೋಗಿ ಮಾತನಾಡಬಹುದು. ಆದರೆ ಬೆಡ್​ ಮೇಲೆ ಕುಳಿತು ಮಾತನಾಡುವ ಮಜವೇ ಬೇರೆ’ ಎಂದು ರಘು ಕಾಮಿಡಿ ಮಾಡಿದ್ದಾರೆ. ಇದನ್ನೆಲ್ಲ ಕೇಳಿಸಿಕೊಂಡು ದಿವ್ಯಾ ಉರುಡುಗ ನಾಚಿ ನೀರಾಗಿದ್ದಾರೆ.

ಇದನ್ನೂ ಓದಿ: ಬಿಗ್​ ಬಾಸ್​ ಸ್ಪರ್ಧಿಯ ಲಿಪ್​ಲಾಕ್​ ವಿಡಿಯೋ ವೈರಲ್! ಪೂರ್ತಿ ಎಪಿಸೋಡ್​ ಪ್ರಸಾರ ಯಾವಾಗ?

ಮಂಜು ಬೇಡಿಕೆ ಈಡೇರಿಸಿದ ಬಿಗ್​ ಬಾಸ್​; ಒಂದೇ ದಿನ ಇಬ್ಬರು ಹೆಣ್ಮಕ್ಳು ವೈಲ್ಡ್​ ಕಾರ್ಡ್​ ಎಂಟ್ರಿ!

ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ
ಮೋದಿಯಿಂದ ನಾಳೆ ಉದ್ಘಾಟನೆಯಾಗಲಿದೆ ಅಸ್ಸಾಂನ ಅತಿದೊಡ್ಡ ವಿಮಾನ ನಿಲ್ದಾಣ
ಮೋದಿಯಿಂದ ನಾಳೆ ಉದ್ಘಾಟನೆಯಾಗಲಿದೆ ಅಸ್ಸಾಂನ ಅತಿದೊಡ್ಡ ವಿಮಾನ ನಿಲ್ದಾಣ
ಶಾಲೆಗೆ ಬರುವ ಮಕ್ಕಳನ್ನ ಗಾರೆ ಕೆಲಸಕ್ಕಚ್ಚಿದ ಮೇಸ್ಟ್ರು, ವಿಡಿಯೋ ವೈರಲ್
ಶಾಲೆಗೆ ಬರುವ ಮಕ್ಕಳನ್ನ ಗಾರೆ ಕೆಲಸಕ್ಕಚ್ಚಿದ ಮೇಸ್ಟ್ರು, ವಿಡಿಯೋ ವೈರಲ್
ಸಂಸತ್ ಅಧಿವೇಶನ ಮುಕ್ತಾಯ; ಮೋದಿ ಸೇರಿ ಎಲ್ಲ ಸಂಸದರಿಗೆ ಸ್ಪೀಕರ್ ಟೀ ಪಾರ್ಟಿ
ಸಂಸತ್ ಅಧಿವೇಶನ ಮುಕ್ತಾಯ; ಮೋದಿ ಸೇರಿ ಎಲ್ಲ ಸಂಸದರಿಗೆ ಸ್ಪೀಕರ್ ಟೀ ಪಾರ್ಟಿ
ಬಾಲಕನನ್ನು ಫುಟ್ಬಾಲ್​​ನಂತೆ ಒದ್ದ ಜಿಮ್ ಟ್ರೈನರ್​​ನ ಮತ್ತಷ್ಟು ಕೃತ್ಯಗಳು
ಬಾಲಕನನ್ನು ಫುಟ್ಬಾಲ್​​ನಂತೆ ಒದ್ದ ಜಿಮ್ ಟ್ರೈನರ್​​ನ ಮತ್ತಷ್ಟು ಕೃತ್ಯಗಳು
ವಕ್ಫ್ ಆಸ್ತಿಗಾಗಿ ಸಂಘರ್ಷ: 11 ಎಕರೆ ಜಮೀನಿಗಾಗಿ ಕುಟುಂಬಗಳ‌ ಮಧ್ಯೆ ಬಡಿದಾಟ
ವಕ್ಫ್ ಆಸ್ತಿಗಾಗಿ ಸಂಘರ್ಷ: 11 ಎಕರೆ ಜಮೀನಿಗಾಗಿ ಕುಟುಂಬಗಳ‌ ಮಧ್ಯೆ ಬಡಿದಾಟ
ದೇವಿ ದರ್ಶನ ಬಳಿಕ ಡಿಸಿಎಂ ಸ್ಫೋಟಕ ಹೇಳಿಕೆ: ಸಂಚಲನ ಮೂಡಿಸಿದ ಡಿಕೆಶಿ ಸಂದೇಶ
ದೇವಿ ದರ್ಶನ ಬಳಿಕ ಡಿಸಿಎಂ ಸ್ಫೋಟಕ ಹೇಳಿಕೆ: ಸಂಚಲನ ಮೂಡಿಸಿದ ಡಿಕೆಶಿ ಸಂದೇಶ