AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶಂಕರ್​ ಅಶ್ವತ್ಥ್​-ಶಮಂತ್​ ನಡುವೆ ಫೈಟ್​; ಮೂಗಲ್ಲಿ ರಕ್ತ ಎಂದು ಕೂಗಿದ ಸಂಬರಗಿ

ಶಂಕರ್​-ಬ್ರೋ ಗೌಡ ನಡುವೆ ನಡೆದಿದ್ದು ಗಂಭೀರ ಫೈಟ್​ ಅಲ್ಲ. ಮನೆಯಲ್ಲಿ ಟೈಮ್​ಪಾಸ್​ಗೆ ಸ್ಪರ್ಧಿಗಳು ನಾಟಕವಾಡುತ್ತಾರೆ, ಹರಟೆ ಹೊಡೆಯುತ್ತಾರೆ, ತರಲೆ ಮಾಡುತ್ತಾರೆ. ಇಂದು ನಡೆದಿದ್ದು ಕೂಡ ಅದೇ.

ಶಂಕರ್​ ಅಶ್ವತ್ಥ್​-ಶಮಂತ್​ ನಡುವೆ ಫೈಟ್​; ಮೂಗಲ್ಲಿ ರಕ್ತ ಎಂದು ಕೂಗಿದ ಸಂಬರಗಿ
ಬಿಗ್​ ಬಾಸ್​ನಲ್ಲಿ ಶಂಕರ್​ ಅಶ್ವತ್ಥ್​ - ಶಮಂತ್​
ರಾಜೇಶ್ ದುಗ್ಗುಮನೆ
| Edited By: |

Updated on: Mar 18, 2021 | 3:21 PM

Share

ಬಿಗ್ ಬಾಸ್​ ಮನೆಯಲ್ಲಿ ಜಗಳಗಳು ನಡೆಯೋದು ಕಾಮನ್​! ಆದರೆ, ಒಬ್ಬರ ಮೇಲೆ ಒಬ್ಬರು ಕೈಮಾಡಿಕೊಂಡ ಪ್ರಕರಣ ತುಂಬಾನೇ ಅಪರೂಪ. ಒಂದೊಮ್ಮೆ ಒಬ್ಬರ ಮೇಲೆ ಒಬ್ಬರು ಕೈಮಾಡಿದರೆ ಅಂಥ ಸ್ಪರ್ಧಿಗಳ ವಿರುದ್ಧ ಬಿಗ್​ ಬಾಸ್​ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳುತ್ತಾರೆ. ಈಗ ಬಿಗ್​ ಬಾಸ್​ ಮನೆಯಲ್ಲಿ ಶಂಕರ್​ ಅಶ್ವತ್ಥ್​-ಶಮಂತ್​ ಬ್ರೋ ಗೌಡ ನಡುವೆ ಫೈಟ್​ ನಡೆದಿದೆ. ಇದು ಅಂತಿಂಥ ಹೊಡೆದಾಟವಲ್ಲ, ಮೂಗಲ್ಲಿ ರಕ್ತ ಬರುವಷ್ಟು ದೊಡ್ಡ ಫೈಟ್​. ಇಷ್ಟೆಲ್ಲ ಆಗುವಾಗ ಮನೆ ಮಂದಿ ಏನು ಮಾಡುತ್ತಿದ್ದರು? ಬಿಗ್​ ಬಾಸ್​ ಏನೂ ಕ್ರಮ ಕೈಗೊಂಡಿಲ್ಲವೇ ಎನ್ನುವ ಪ್ರಶ್ನೆಯೇ? ಈ ಎಲ್ಲ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ. ಶಂಕರ್​-ಬ್ರೋ ಗೌಡ ನಡುವೆ ನಡೆದಿದ್ದು ಗಂಭೀರ ಫೈಟ್​ ಅಲ್ಲ. ಮನೆಯಲ್ಲಿ ಟೈಮ್​ಪಾಸ್​ಗೆ ಸ್ಪರ್ಧಿಗಳು ನಾಟಕವಾಡುತ್ತಾರೆ, ಹರಟೆ ಹೊಡೆಯುತ್ತಾರೆ, ತರಲೆ ಮಾಡುತ್ತಾರೆ. ಇಂದು ನಡೆದಿದ್ದು ಕೂಡ ಅದೇ. ಶಂಕರ್​ ಅಶ್ವತ್ಥ್​ ಹಾಗೂ ಶಮಂತ್​ ಫೈಟಿಂಗ್​ಗೆ ಇಳಿದಿದ್ದರು. ನಾಟಕೀಯವಾಗಿ ಕೈ ಕೈ ಮಿಲಾಯಿಸಿಕೊಂಡಿದ್ದರು. ಮೊದಲ ಬಾರಿ ಶಂಕರ್​ ಅಶ್ವತ್ಥ್​ ನೆಲಕ್ಕೆ ಬಿದ್ದಂತೆ ನಾಟಕ ಮಾಡಿದರೆ, ಎರಡನೇ ಬಾರಿಗೆ ಶಮಂತ್​ ನೆಲಕ್ಕೆ ಬಿದ್ದಿದ್ದಾರೆ.

ಇನ್ನು ಇವರ ಫೈಟ್​ ನಡೆಯುವಾಗ ಮನೆ ಮಂದಿಯೆಲ್ಲ ಕೂತು ಮನರಂಜನೆ ತೆಗೆದುಕೊಳ್ಳುತ್ತಿದ್ದರು. ಕೆಲವರು ಶಂಕರ್​ ಅಶ್ವತ್ಥ್​ ಅವರನ್ನು ಬೆಂಬಲಿಸಿದರೆ ಇನ್ನೂ ಕೆಲವರು ಶಮಂತ್​ ಅವರಿಗೆ ಜೈಕಾರ ಹಾಕಿದ್ದಾರೆ. ಈ ವೇಳೆ ಬೇಕಂತಲೇ ಪ್ರಶಾಂತ್​ ಅವರು, ಶಮಂತ್​ ಮೂಗಲ್ಲಿ ರಕ್ತ ಎಂದು ಕೂಗಿದ್ದಾರೆ. ಕಲರ್ಸ್​ ಕನ್ನಡ ವಾಹಿನಿ ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪ್ರೋಮೋ ಹಂಚಿಕೊಂಡಿದೆ. ಈ ವಿಡಿಯೋದಲ್ಲಿ ಮನೆ ಮಂದಿ ಸಖತ್​ ಎಂಜಾಯ್​ ಮಾಡಿದಂತೆ ಕಂಡು ಬಂದಿದೆ.

ಇಲ್ಲಿ ಮತ್ತೊಂದು ವಿಚಾರವನ್ನು ಗಮನಿಸಬೇಕು. ಶಂಕರ್​ ಅಶ್ವತ್ಥ್​ ಹಿರಿಯರು ಎನ್ನುವ ಕಾರಣಕ್ಕೆ ಆರಂಭದಲ್ಲಿ ಅವರನ್ನು ಎಲ್ಲರೂ ಬೇರೆ ತಕ್ಕಡಿಯಲ್ಲೇ ಇಟ್ಟು ತೂಗುತ್ತಿದ್ದರು. ಆದರೆ, ಈಗ ಶಂಕರ್ ಅಶ್ವತ್ಥ್​ ಮನೆಯ ಎಲ್ಲ ಸದಸ್ಯರ ಜೊತೆ ಬೆರೆಯುತ್ತಿದ್ದಾರೆ. ಈ ಪ್ರೋಮೋ ಇದಕ್ಕೆ ತಾಜಾ ಉದಾಹರಣೆ.

ಇದನ್ನೂ ಓದಿ: ಬಿಗ್​ ಬಾಸ್​ ಮನೆಯಲ್ಲಿ ಅಶ್ವತ್ಥ್​ ಶಂಕರ್​ ನಿಜವಾದ ಬಣ್ಣ ಬಯಲು..

Follow Us
ಹಳೇ ಹುಬ್ಬಳ್ಳಿ ಆಸಾರ ಓಣಿ ಪುಷ್ಕರಣಿ ವಿವಾದ: ಹಿಂದೂಪರ ಸಂಘಟನೆಗಳ ಪ್ರತಿಭಟನೆ
ಹಳೇ ಹುಬ್ಬಳ್ಳಿ ಆಸಾರ ಓಣಿ ಪುಷ್ಕರಣಿ ವಿವಾದ: ಹಿಂದೂಪರ ಸಂಘಟನೆಗಳ ಪ್ರತಿಭಟನೆ
28 ಕೈದಿಗಳ ಬಿಡುಗಡೆಗೆ ಸಚಿವ ಸಂಪುಟ ಅಸ್ತು
28 ಕೈದಿಗಳ ಬಿಡುಗಡೆಗೆ ಸಚಿವ ಸಂಪುಟ ಅಸ್ತು
ಇಂದು ಶ್ರಾವಣ ಶನಿವಾರ; ವೆಂಕಟೇಶ್ವರನ ದರ್ಶನ ಹಾಗೂ ನಾಮಸ್ಮರಣೆಗೆ ಶುಭ ದಿನ
ಇಂದು ಶ್ರಾವಣ ಶನಿವಾರ; ವೆಂಕಟೇಶ್ವರನ ದರ್ಶನ ಹಾಗೂ ನಾಮಸ್ಮರಣೆಗೆ ಶುಭ ದಿನ
ಬಾಗಲಕೋಟೆಯಲ್ಲಿ ಅಜಾನ್ ವಿವಾದ: ಸಿಡಿದೆದ್ದ ಬಿಜೆಪಿ, ಹಿಂದೂ ಸಂಘಟನೆಗಳು
ಬಾಗಲಕೋಟೆಯಲ್ಲಿ ಅಜಾನ್ ವಿವಾದ: ಸಿಡಿದೆದ್ದ ಬಿಜೆಪಿ, ಹಿಂದೂ ಸಂಘಟನೆಗಳು
ಭಾರತ-ಬಾಂಗ್ಲಾ ಗಡಿ ಭದ್ರಪಡಿಸದೆ ಬಂಗಾಳ ಭದ್ರವಾಗಲು ಸಾಧ್ಯವಿಲ್ಲ; ಅಮಿತ್ ಶಾ
ಭಾರತ-ಬಾಂಗ್ಲಾ ಗಡಿ ಭದ್ರಪಡಿಸದೆ ಬಂಗಾಳ ಭದ್ರವಾಗಲು ಸಾಧ್ಯವಿಲ್ಲ; ಅಮಿತ್ ಶಾ
ಮಠದಲ್ಲೇ ಅಪ್ರಾಪ್ತೆ ಮೇಲೆರಗಿ ಅಟ್ಟಹಾಸ: ಸ್ವಾಮೀಜಿ ಅರೆಸ್ಟ್
ಮಠದಲ್ಲೇ ಅಪ್ರಾಪ್ತೆ ಮೇಲೆರಗಿ ಅಟ್ಟಹಾಸ: ಸ್ವಾಮೀಜಿ ಅರೆಸ್ಟ್
ನೈಸರ್ಗಿಕವಾಗಿ ಬಾಳೆಕಾಯಿ ಹಣ್ಣು ಮಾಡುವ ವಿಧಾನ ಹೇಗೆ? ವಿಡಿಯೋ ನೋಡಿ
ನೈಸರ್ಗಿಕವಾಗಿ ಬಾಳೆಕಾಯಿ ಹಣ್ಣು ಮಾಡುವ ವಿಧಾನ ಹೇಗೆ? ವಿಡಿಯೋ ನೋಡಿ
ನಾಗೇಂದ್ರ ಮತ್ತಷ್ಟು ಸಂಕಷ್ಟ: ಪ್ರಾಸಿಕ್ಯೂಷನ್‌ಗೆ ಅನುಮತಿ ಸಿಬಿಐ ಪತ್ರ!
ನಾಗೇಂದ್ರ ಮತ್ತಷ್ಟು ಸಂಕಷ್ಟ: ಪ್ರಾಸಿಕ್ಯೂಷನ್‌ಗೆ ಅನುಮತಿ ಸಿಬಿಐ ಪತ್ರ!
ಹೇಗೆ ನಡೀತಿದೆ ‘ಟಾಕ್ಸಿಕ್’ ಕಟೌಟ್ ತಯಾರಿ? ವಿಡಿಯೋ ನೋಡಿ
ಹೇಗೆ ನಡೀತಿದೆ ‘ಟಾಕ್ಸಿಕ್’ ಕಟೌಟ್ ತಯಾರಿ? ವಿಡಿಯೋ ನೋಡಿ
2 ಕೋಟಿ ರೂ. ವೆಚ್ಚದಲ್ಲಿ 700 ವರ್ಷಗಳ ಪುರಾತನ ದೇಗುಲ ಜೀರ್ಣೋದ್ಧಾರ
2 ಕೋಟಿ ರೂ. ವೆಚ್ಚದಲ್ಲಿ 700 ವರ್ಷಗಳ ಪುರಾತನ ದೇಗುಲ ಜೀರ್ಣೋದ್ಧಾರ