AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶಂಕರ್​ ಅಶ್ವತ್ಥ್​-ಶಮಂತ್​ ನಡುವೆ ಫೈಟ್​; ಮೂಗಲ್ಲಿ ರಕ್ತ ಎಂದು ಕೂಗಿದ ಸಂಬರಗಿ

ಶಂಕರ್​-ಬ್ರೋ ಗೌಡ ನಡುವೆ ನಡೆದಿದ್ದು ಗಂಭೀರ ಫೈಟ್​ ಅಲ್ಲ. ಮನೆಯಲ್ಲಿ ಟೈಮ್​ಪಾಸ್​ಗೆ ಸ್ಪರ್ಧಿಗಳು ನಾಟಕವಾಡುತ್ತಾರೆ, ಹರಟೆ ಹೊಡೆಯುತ್ತಾರೆ, ತರಲೆ ಮಾಡುತ್ತಾರೆ. ಇಂದು ನಡೆದಿದ್ದು ಕೂಡ ಅದೇ.

ಶಂಕರ್​ ಅಶ್ವತ್ಥ್​-ಶಮಂತ್​ ನಡುವೆ ಫೈಟ್​; ಮೂಗಲ್ಲಿ ರಕ್ತ ಎಂದು ಕೂಗಿದ ಸಂಬರಗಿ
ಬಿಗ್​ ಬಾಸ್​ನಲ್ಲಿ ಶಂಕರ್​ ಅಶ್ವತ್ಥ್​ - ಶಮಂತ್​
ರಾಜೇಶ್ ದುಗ್ಗುಮನೆ
| Edited By: |

Updated on: Mar 18, 2021 | 3:21 PM

Share

ಬಿಗ್ ಬಾಸ್​ ಮನೆಯಲ್ಲಿ ಜಗಳಗಳು ನಡೆಯೋದು ಕಾಮನ್​! ಆದರೆ, ಒಬ್ಬರ ಮೇಲೆ ಒಬ್ಬರು ಕೈಮಾಡಿಕೊಂಡ ಪ್ರಕರಣ ತುಂಬಾನೇ ಅಪರೂಪ. ಒಂದೊಮ್ಮೆ ಒಬ್ಬರ ಮೇಲೆ ಒಬ್ಬರು ಕೈಮಾಡಿದರೆ ಅಂಥ ಸ್ಪರ್ಧಿಗಳ ವಿರುದ್ಧ ಬಿಗ್​ ಬಾಸ್​ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳುತ್ತಾರೆ. ಈಗ ಬಿಗ್​ ಬಾಸ್​ ಮನೆಯಲ್ಲಿ ಶಂಕರ್​ ಅಶ್ವತ್ಥ್​-ಶಮಂತ್​ ಬ್ರೋ ಗೌಡ ನಡುವೆ ಫೈಟ್​ ನಡೆದಿದೆ. ಇದು ಅಂತಿಂಥ ಹೊಡೆದಾಟವಲ್ಲ, ಮೂಗಲ್ಲಿ ರಕ್ತ ಬರುವಷ್ಟು ದೊಡ್ಡ ಫೈಟ್​. ಇಷ್ಟೆಲ್ಲ ಆಗುವಾಗ ಮನೆ ಮಂದಿ ಏನು ಮಾಡುತ್ತಿದ್ದರು? ಬಿಗ್​ ಬಾಸ್​ ಏನೂ ಕ್ರಮ ಕೈಗೊಂಡಿಲ್ಲವೇ ಎನ್ನುವ ಪ್ರಶ್ನೆಯೇ? ಈ ಎಲ್ಲ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ. ಶಂಕರ್​-ಬ್ರೋ ಗೌಡ ನಡುವೆ ನಡೆದಿದ್ದು ಗಂಭೀರ ಫೈಟ್​ ಅಲ್ಲ. ಮನೆಯಲ್ಲಿ ಟೈಮ್​ಪಾಸ್​ಗೆ ಸ್ಪರ್ಧಿಗಳು ನಾಟಕವಾಡುತ್ತಾರೆ, ಹರಟೆ ಹೊಡೆಯುತ್ತಾರೆ, ತರಲೆ ಮಾಡುತ್ತಾರೆ. ಇಂದು ನಡೆದಿದ್ದು ಕೂಡ ಅದೇ. ಶಂಕರ್​ ಅಶ್ವತ್ಥ್​ ಹಾಗೂ ಶಮಂತ್​ ಫೈಟಿಂಗ್​ಗೆ ಇಳಿದಿದ್ದರು. ನಾಟಕೀಯವಾಗಿ ಕೈ ಕೈ ಮಿಲಾಯಿಸಿಕೊಂಡಿದ್ದರು. ಮೊದಲ ಬಾರಿ ಶಂಕರ್​ ಅಶ್ವತ್ಥ್​ ನೆಲಕ್ಕೆ ಬಿದ್ದಂತೆ ನಾಟಕ ಮಾಡಿದರೆ, ಎರಡನೇ ಬಾರಿಗೆ ಶಮಂತ್​ ನೆಲಕ್ಕೆ ಬಿದ್ದಿದ್ದಾರೆ.

ಇನ್ನು ಇವರ ಫೈಟ್​ ನಡೆಯುವಾಗ ಮನೆ ಮಂದಿಯೆಲ್ಲ ಕೂತು ಮನರಂಜನೆ ತೆಗೆದುಕೊಳ್ಳುತ್ತಿದ್ದರು. ಕೆಲವರು ಶಂಕರ್​ ಅಶ್ವತ್ಥ್​ ಅವರನ್ನು ಬೆಂಬಲಿಸಿದರೆ ಇನ್ನೂ ಕೆಲವರು ಶಮಂತ್​ ಅವರಿಗೆ ಜೈಕಾರ ಹಾಕಿದ್ದಾರೆ. ಈ ವೇಳೆ ಬೇಕಂತಲೇ ಪ್ರಶಾಂತ್​ ಅವರು, ಶಮಂತ್​ ಮೂಗಲ್ಲಿ ರಕ್ತ ಎಂದು ಕೂಗಿದ್ದಾರೆ. ಕಲರ್ಸ್​ ಕನ್ನಡ ವಾಹಿನಿ ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪ್ರೋಮೋ ಹಂಚಿಕೊಂಡಿದೆ. ಈ ವಿಡಿಯೋದಲ್ಲಿ ಮನೆ ಮಂದಿ ಸಖತ್​ ಎಂಜಾಯ್​ ಮಾಡಿದಂತೆ ಕಂಡು ಬಂದಿದೆ.

ಇಲ್ಲಿ ಮತ್ತೊಂದು ವಿಚಾರವನ್ನು ಗಮನಿಸಬೇಕು. ಶಂಕರ್​ ಅಶ್ವತ್ಥ್​ ಹಿರಿಯರು ಎನ್ನುವ ಕಾರಣಕ್ಕೆ ಆರಂಭದಲ್ಲಿ ಅವರನ್ನು ಎಲ್ಲರೂ ಬೇರೆ ತಕ್ಕಡಿಯಲ್ಲೇ ಇಟ್ಟು ತೂಗುತ್ತಿದ್ದರು. ಆದರೆ, ಈಗ ಶಂಕರ್ ಅಶ್ವತ್ಥ್​ ಮನೆಯ ಎಲ್ಲ ಸದಸ್ಯರ ಜೊತೆ ಬೆರೆಯುತ್ತಿದ್ದಾರೆ. ಈ ಪ್ರೋಮೋ ಇದಕ್ಕೆ ತಾಜಾ ಉದಾಹರಣೆ.

ಇದನ್ನೂ ಓದಿ: ಬಿಗ್​ ಬಾಸ್​ ಮನೆಯಲ್ಲಿ ಅಶ್ವತ್ಥ್​ ಶಂಕರ್​ ನಿಜವಾದ ಬಣ್ಣ ಬಯಲು..

Follow Us
ವೈಟ್ ಟ್ಯಾಪಿಂಗ್ ಮಾಡೋದೇಕೆ?:ಅಧಿಕಾರಿಗಳಿಗೆ ಕೃಷ್ಣಭೈರೇಗೌಡ ಕ್ಲಾಸ್
ವೈಟ್ ಟ್ಯಾಪಿಂಗ್ ಮಾಡೋದೇಕೆ?:ಅಧಿಕಾರಿಗಳಿಗೆ ಕೃಷ್ಣಭೈರೇಗೌಡ ಕ್ಲಾಸ್
ಸಿಎಂ ಆದೇಶ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಷ್ಟು ಪಾಲನೆ ಆಗ್ತಿದೆ ನೋಡಿ
ಸಿಎಂ ಆದೇಶ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಷ್ಟು ಪಾಲನೆ ಆಗ್ತಿದೆ ನೋಡಿ
ಮುಸ್ಲಿಂ ಧರ್ಮಗುರುಗಳಿಂದ ಸಿಎಂ, ಕೆಪಿಸಿಸಿ ಅಧ್ಯಕ್ಷರ ಭೇಟಿ: ಮಹತ್ವದ ಬೇಡಿಕೆ
ಮುಸ್ಲಿಂ ಧರ್ಮಗುರುಗಳಿಂದ ಸಿಎಂ, ಕೆಪಿಸಿಸಿ ಅಧ್ಯಕ್ಷರ ಭೇಟಿ: ಮಹತ್ವದ ಬೇಡಿಕೆ
ಜೆಸ್ಕಾಂ ನಿರ್ಲಕ್ಷ್ಯ: ಬೆಳೆಗೆ ನೀರುಣಿಸಲು ವಿದ್ಯುತ್‌ಗಾಗಿ ರೈತರ ಹರಸಾಹಸ
ಜೆಸ್ಕಾಂ ನಿರ್ಲಕ್ಷ್ಯ: ಬೆಳೆಗೆ ನೀರುಣಿಸಲು ವಿದ್ಯುತ್‌ಗಾಗಿ ರೈತರ ಹರಸಾಹಸ
ಧರ್ಮಸ್ಥಳದಲ್ಲಿ BJP ಶಾಸಕರಿಂದ ಆಣೆ ಪ್ರಮಾಣ: ಪ್ರಿಯಾಂಕ್​​ ಖರ್ಗೆ ವ್ಯಂಗ್ಯ
ಧರ್ಮಸ್ಥಳದಲ್ಲಿ BJP ಶಾಸಕರಿಂದ ಆಣೆ ಪ್ರಮಾಣ: ಪ್ರಿಯಾಂಕ್​​ ಖರ್ಗೆ ವ್ಯಂಗ್ಯ
ವಿದ್ಯಾರ್ಥಿಗಳು ನೀಟ್ ಪರೀಕ್ಷೆಯಿಂದ ವಂಚಿತರಾಗಲು ಕಾಂಗ್ರೆಸ್ ಕಾರಣ ಎಂದ ಅಶೋಕ
ವಿದ್ಯಾರ್ಥಿಗಳು ನೀಟ್ ಪರೀಕ್ಷೆಯಿಂದ ವಂಚಿತರಾಗಲು ಕಾಂಗ್ರೆಸ್ ಕಾರಣ ಎಂದ ಅಶೋಕ
ಎಡೆ ಹೊಡೆಯಲು ಎತ್ತುಗಳಂತೆ ನೊಗಕ್ಕೆ ಹೆಗಲು ಕೊಟ್ಟ ರೈತ ಕುಟುಂಬಸ್ಥರು!
ಎಡೆ ಹೊಡೆಯಲು ಎತ್ತುಗಳಂತೆ ನೊಗಕ್ಕೆ ಹೆಗಲು ಕೊಟ್ಟ ರೈತ ಕುಟುಂಬಸ್ಥರು!
ಅಮೆರಿಕದಿಂದ ಇರಾನ್​ಗೆ 300 ಡಾಲರ್ ಆರ್ಥಿಕ ನೆರವು
ಅಮೆರಿಕದಿಂದ ಇರಾನ್​ಗೆ 300 ಡಾಲರ್ ಆರ್ಥಿಕ ನೆರವು
ಬೆಂಗಳೂರಿನಲ್ಲಿ ನಕಲಿ ನಾಗಸಾಧುಗಳಿಂದ ಉಂಗುರ ಕಳ್ಳತನ
ಬೆಂಗಳೂರಿನಲ್ಲಿ ನಕಲಿ ನಾಗಸಾಧುಗಳಿಂದ ಉಂಗುರ ಕಳ್ಳತನ
ಕೋಲಾರದಲ್ಲಿ ವಾಹನಗಳನ್ನು ತಡೆದು ಮಾವು ಬೆಳೆಗಾರರ ಪ್ರತಿಭಟನೆ!
ಕೋಲಾರದಲ್ಲಿ ವಾಹನಗಳನ್ನು ತಡೆದು ಮಾವು ಬೆಳೆಗಾರರ ಪ್ರತಿಭಟನೆ!