AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇಬ್ಬರನ್ನು ಹೊಡೆದು ಠಾಣೆಗೆ ಹೋಗಿದ್ದರಂತೆ ಈ ಯುವ ನಟಿ, ಮಗಳ ಬಗ್ಗೆ ಶರತ್​ಕುಮಾರ್ ಹಂಚಿಕೊಂಡ ಅಪರೂಪದ ಮಾಹಿತಿ

ತಮ್ಮ ಮಗಳು, ನಟಿ ವರಲಕ್ಷ್ಮಿ ಇಬ್ಬರನ್ನು ಹೊಡೆದು ಪೊಲೀಸ್ ಠಾಣೆಗೆ ಹೋಗಿದ್ದ ವಿಷಯವನ್ನು ಬಹುಭಾಷಾ ನಟ ಶರತ್ ಕುಮಾರ್ ಹೇಳಿದ್ದಾರೆ.

ಇಬ್ಬರನ್ನು ಹೊಡೆದು ಠಾಣೆಗೆ ಹೋಗಿದ್ದರಂತೆ ಈ ಯುವ ನಟಿ, ಮಗಳ ಬಗ್ಗೆ ಶರತ್​ಕುಮಾರ್ ಹಂಚಿಕೊಂಡ ಅಪರೂಪದ ಮಾಹಿತಿ
ವರಲಕ್ಷ್ಮಿ ಶರತ್​ಕುಮಾರ್
ಮಂಜುನಾಥ ಸಿ.
|

Updated on: Mar 03, 2023 | 10:51 PM

Share

ಬಹುಭಾಷಾ ನಟ ಶರತ್ ಕುಮಾರ್ (Sharat Kumar), ಕನ್ನಡಕ್ಕೆ ಚಿರಪರಿಚಿತರೇ. ಕನ್ನಡದ ‘ರಾಜಕುಮಾರ’, ‘ಜೇಮ್ಸ್’, ‘ಸೀತಾರಾಮ ಕಲ್ಯಾಣ’, ‘ಮೈನ’ ಇನ್ನೂ ಕೆಲವು ಸಿನಿಮಾಗಳಲ್ಲಿ ಇವರು ನಟಿಸಿದ್ದಾರೆ. ಶರತ್ ಕುಮಾರ್ ಅವರ ಪತ್ನಿ ರಾಧಿಕಾ ಹಾಗೂ ಮಕ್ಕಳು ಸಹ ಸಿನಿಮಾ ನಟರೆ. ಅವರ ಪುತ್ರಿ ವರಮಹಾಲಕ್ಷ್ಮಿ ಕನ್ನಡದ ಕೆಲವು ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಇತ್ತೀಚೆಗಿನ ಸಂದರ್ಶನವೊಂದರಲ್ಲಿ ತಮ್ಮ ಪುತ್ರಿಯ ಬಗ್ಗೆ ಅಪರೂಪದ ಮಾಹಿತಿಯೊಂದನ್ನು ನಟ ಶರತ್ ಕುಮಾರ್ ಹಂಚಿಕೊಂಡಿದ್ದಾರೆ.

ಸಂದರ್ಶನದಲ್ಲಿ ಶರತ್​ಕುಮಾರ್ ತಮ್ಮ ಮಗಳು ವರಲಕ್ಷ್ಮಿ ಬಗ್ಗೆ ಮಾತನಾಡುತ್ತಾ, ಆಕೆ ಬಹಳ ಧೈರ್ಯವಂತೆ. ಒಮ್ಮೆ ರಾತ್ರಿ ಸಮಯ ನನಗೆ ಪೊಲೀಸ್ ಠಾಣೆಯೊಂದರಿಂದ ಫೋನ್ ಬಂತು. ನಿಮ್ಮ ಮಗಳು ಠಾಣೆಯಲ್ಲಿದ್ದಾರೆ ಬೇಗ ಬನ್ನಿ ಎಂದರು. ನಾನು ಕೂಡಲೇ ಠಾಣೆಗೆ ಹೋದೆ. ನೋಡಿದರೆ ನನ್ನ ಮಗಳು ಇಬ್ಬರು ಹುಡುಗರನ್ನು ಹೊಡೆದಿದ್ದಳು ಎಂದಿದ್ದಾರೆ ಶರತ್.

ನನ್ನ ಮಗಳು ಚಲಾಯಿಸುತ್ತಿದ್ದ ಕಾರಿಗೆ ಬೈಕ್​ನಲ್ಲಿ ಬಂದ ಇಬ್ಬರು ಯುವಕರು ಢಿಕ್ಕಿ ಹೊಡೆದಿದ್ದರು. ಪ್ರಶ್ನೆ ಮಾಡಿದ್ದಕ್ಕೆ ಮಗಳ ಮೇಲೆ ಜಗಳ ಮಾಡಲು ಹೋಗಿದ್ದರು, ಅದಕ್ಕಾಗಿ ಸಿಟ್ಟೇರಿ ನನ್ನ ಮಗಳು ಇಬ್ಬರು ಹುಡುಗರನ್ನು ಹಿಗ್ಗಾ-ಮುಗ್ಗ ಥಳಿಸಿದ್ದಳು ಎಂದು ಶರತ್ ಕುಮಾರ್ ಹೇಳಿದ್ದಾರೆ.

ಶರತ್ ಕುಮಾರ್ ಅವರ ಸಂದರ್ಶನದ ವಿಡಿಯೋ ಇದೀಗ ವೈರಲ್ ಆಗಿದ್ದು, ನಟಿ ವರಲಕ್ಷ್ಮಿಯ ಧೈರ್ಯಕ್ಕೆ ಸಾಮಾಜಿಕ ಜಾಲತಾಣದಲ್ಲಿ ಪ್ರಶಂಸೆ ವ್ಯಕ್ತವಾಗಿದೆ.

ವರಲಕ್ಷ್ಮಿ 2012 ರಲ್ಲಿ ತಮಿಳು ಸಿನಿಮಾ ಒಂದರ ಮೂಲಕ ನಟನೆಗೆ ಪದಾರ್ಪಣೆ ಮಾಡಿದರು. 2014 ರಲ್ಲಿ ಸುದೀಪ್ ನಟನೆಯ ಮಾಣಿಕ್ಯ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದರು. ಬಳಿಕ ಸುದೀಪ್ ನಟನೆಯ ರನ್ನ ಸಿನಿಮಾದಲ್ಲಿ ವಿಶೇಷ ಹಾಡೊಂದರಲ್ಲಿ ಕಾಣಿಸಿಕೊಂಡರು. ಬಳಿಕ, ಅರ್ಜುನ್ ಸರ್ಜ ನಟನೆಯ ವಿಸ್ಮಯ, ಚಿರಂಜೀವಿ ಸರ್ಜಾ ನಟನೆಯ ರಣಂ ಸಿನಿಮಾಗಳಲ್ಲಿ ನಟಿಸಿದರು. ಇದೀಗ ಲಗಾಮು ಕನ್ನಡ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಬಹು ಬ್ಯುಸಿ ನಟಿಯರಲ್ಲಿ ಒಬ್ಬರಾಗಿರುವ ವರಲಕ್ಷ್ಮಿ ನಟನೆಯ ಮೂರು ಸಿನಿಮಾಗಳು ಈವರ್ಷ ಈಗಾಗಲೇ ತೆರೆಗೆ ಬಂದಿದ್ದು ಇನ್ನೂ ಆರು ಸಿನಿಮಾಗಳು ತೆರೆಗೆ ಬರಲಿವೆ.

ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಲಕ್ಕುಂಡಿಯಲ್ಲಿ ಸಿಕ್ಕಿದ್ದು ನಿಧಿಯೇ ಅಲ್ಲ ಅಂತಾ ಅಧಿಕಾರಿ ಹೇಳಿದ್ಯಾಕೆ?
ಲಕ್ಕುಂಡಿಯಲ್ಲಿ ಸಿಕ್ಕಿದ್ದು ನಿಧಿಯೇ ಅಲ್ಲ ಅಂತಾ ಅಧಿಕಾರಿ ಹೇಳಿದ್ಯಾಕೆ?