AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಈ ಬಾರಿ ಬಿಗ್​ ಬಾಸ್​ ಫೈನಲ್​ನಲ್ಲಿ ನಾಲ್ಕು ಜನ ಹೆಣ್ಮಕ್ಳು! ಮನೆಯಲ್ಲಿ ನಡೆದಿದೆ ಹೊಸ ಪ್ಲ್ಯಾನ್​

ನಾವು ಪ್ರತಿ ಬಾರಿ ರಾಜೀವ್​, ಮಂಜು, ಅರವಿಂದ್​ ಅವರ ಹೆಸರನ್ನು ಆಯ್ಕೆ ಮಾಡುತ್ತೇವೆ. ಆದರೆ, ಅವರು ಒಂದು ಬಾರಿಯಾದರೂ ನಮ್ಮ ಹೆಸರನ್ನು ಎತ್ತಿಕೊಂಡರಾ ಎಂದು ಶುಭಾ ಬೇಸರ ಹೊರ ಹಾಕಿದರು.

ಈ ಬಾರಿ ಬಿಗ್​ ಬಾಸ್​ ಫೈನಲ್​ನಲ್ಲಿ ನಾಲ್ಕು ಜನ ಹೆಣ್ಮಕ್ಳು! ಮನೆಯಲ್ಲಿ ನಡೆದಿದೆ ಹೊಸ ಪ್ಲ್ಯಾನ್​
ಶುಭಾ ಪೂಂಜಾ - ನಿಧಿ ಸುಬ್ಬಯ್ಯ
ರಾಜೇಶ್ ದುಗ್ಗುಮನೆ
| Edited By: |

Updated on: Mar 22, 2021 | 3:45 PM

Share

ಕನ್ನಡ ಬಿಗ್​ ಬಾಸ್​​ನಲ್ಲಿ ಒಟ್ಟೂ 7 ಸೀಸನ್​ಗಳು ಪೂರ್ಣಗೊಂಡಿವೆ. ಆರು ಸೀಸನ್​ಗಳಲ್ಲಿ ಪುರುಷರೇ ವಿನ್​ ಆಗಿದ್ದಾರೆ. ಒಂದು ಸೀಸನ್​ನಲ್ಲಿ ಮಾತ್ರ ನಟಿ ಶ್ರುತಿ ಬಿಗ್​ ಬಾಸ್​ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ. ಈಗ ಬಿಗ್​ ಬಾಸ್​ ಮನೆ ಸೇರಿರುವ ಮಹಿಳಾ ಸ್ಪರ್ಧಿಗಳಿಗೂ ಶ್ರುತಿ ಮಾದರಿ ಆಗಿದ್ದಾರೆ. ಅಷ್ಟೇ ಅಲ್ಲ, ಅವರಂತೆ ನಾವೂ ಈ ಬಾರಿ ಬಿಗ್​ ಬಾಸ್​ ಕಿರೀಟ ಗೆಲ್ಲಬೇಕು ಎನ್ನುವ ಕನಸನ್ನು ಕಾಣುತ್ತಿದ್ದಾರೆ.

ಬಿಗ್​ ಬಾಸ್​ ಮನೆಯಲ್ಲಿ ಶುಭಾ ಪೂಂಜಾ ಹಾಗೂ ನಿಧಿ ಸುಬ್ಬಯ್ಯ ಮಾತನಾಡುತ್ತಿದ್ದರು. ಈ ವೇಳೆ ಹೆಣ್ಣುಮಕ್ಕಳು ಪುರುಷರನ್ನೇ ಫೇವರಿಟ್​ ಸ್ಪರ್ಧಿಗಳು ಎಂದು ಆಯ್ಕೆ ಮಾಡುತ್ತಿರುವುದಕ್ಕೆ ಇಬ್ಬರೂ ಬೇಸರ ಹೊರ ಹಾಕಿದರು.

ನಾವು ಪ್ರತಿ ಬಾರಿ ರಾಜೀವ್​, ಮಂಜು, ಅರವಿಂದ್​ ಅವರ ಹೆಸರನ್ನು ಆಯ್ಕೆ ಮಾಡುತ್ತೇವೆ. ಆದರೆ, ಅವರು ಒಂದು ಬಾರಿಯಾದರೂ ನಮ್ಮ ಹೆಸರನ್ನು ಎತ್ತಿಕೊಂಡರಾ? ಗಂಡುಮಕ್ಕಳು ಟಾಸ್ಕ್​ ಆಧಾರದಮೇಲೆ ದಿವ್ಯಾ ಉರುಡುಗ, ದಿವ್ಯಾ ಸುರೇಶ್​ ಅವರ ಹೆಸರನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ. ನಾವು ಬಕೆಟ್​ ಹಿಡ್ಯಲ್ಲ. ಇದ್ದಿದ್ದು ಇದ್ದಂಗೆ ಹೇಳ್ತೀವಿ ಎಂದರು ನಿಧಿ.

ಈ ಬಾರಿಯ ಸೀಸನ್​ ಹೇಗಿರಬೇಕು ಎಂದರೆ ಫಿನಾಲೆಗೆ ಐದರಲ್ಲಿ ನಾಲ್ಕು ಜನ ಹೆಣ್ಮಕ್ಳೇ ಇರಬೇಕು. ನಾಲ್ಕು ಅಲ್ಲದಿದ್ದರೆ ಮೂರಾದರೂ ಹೆಣ್ಮಕ್ಳು ಇರಬೇಕು. ಪ್ರತಿ ಬಾರಿ ಗಂಡಸರೇ ಏಕೆ ವಿನ್​ ಆಗುತ್ತಾರೆ ಎನ್ನುವ ಪ್ರಶ್ನೆ ನನಗೆ ಸದಾ ಕಾಡುತ್ತದೆ. ಶ್ರುತಿ ಅಮ್ಮ ಒಬ್ಬರೆ ಆಟವಾಡಿದ್ದರು. ಅವರು ನಮ್ಮ ತರ ಗುಂಪಲ್ಲಿ ಗೋವಿಂದ ಆಗಿರಲಿಲ್ಲ. ಅದಕ್ಕೆ ಅವರು ವಿನ್​ ಆಗಿದ್ದರು ಎಂದು ಹೇಳುವ ಮೂಲಕ ಇದೇ ತಂತ್ರವನ್ನು ಮನೆಯಲ್ಲಿ ಉಪಯೋಗಿಸಬೇಕು ಎಂದು ಪರೋಕ್ಷವಾಗಿ ಸೂಚಿಸಿದರು.

ಈಗಾಗಲೇ ಬಿಗ್​ ಬಾಸ್​ ಮನೆಯಿಂದ ಮೂರು ಸ್ಪರ್ಧಿಗಳು ಹೊರ ಬಿದ್ದಿದ್ದಾರೆ. ಈ ಮೂವರು ಹೆಣ್ಣುಮಕ್ಕಳೇ ಅನ್ನೋದು ಇಲ್ಲಿ ಗಮನಿಸಬೇಕಾದ ವಿಚಾರ. ಬಿಗ್​ ಬಾಸ್​ ಮನೆಯಲ್ಲಿ ಹೆಣ್ಣುಮಕ್ಕಳ ಸಂಖ್ಯೆ ಕಡಿಮೆ ಆಗುತ್ತಿರುವ ವಿಚಾರ ಕೂಡ ಮನೆಯಲ್ಲಿರುವ ಮಹಿಳಾ ಸ್ಪರ್ಧಿಗಳ ಆತಂಕಕ್ಕೆ ಕಾರಣವಾಗಿದೆ.

ಇದನ್ನೂ ಓದಿ: BBK8: ತನ್ನನ್ನೇ ತಾನು ನಂಬದ ಶಮಂತ್​ ಮೇಲೆ ಜನರಿಗೆ ಯಾಕಿಷ್ಟು ನಂಬಿಕೆ? ಇದು ಬಿಗ್​ ಬಾಸ್ ರಹಸ್ಯ!

ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ
ಮೋದಿಯಿಂದ ನಾಳೆ ಉದ್ಘಾಟನೆಯಾಗಲಿದೆ ಅಸ್ಸಾಂನ ಅತಿದೊಡ್ಡ ವಿಮಾನ ನಿಲ್ದಾಣ
ಮೋದಿಯಿಂದ ನಾಳೆ ಉದ್ಘಾಟನೆಯಾಗಲಿದೆ ಅಸ್ಸಾಂನ ಅತಿದೊಡ್ಡ ವಿಮಾನ ನಿಲ್ದಾಣ