AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bigg Boss 8: ಬಿಗ್​ ಬಾಸ್​ ಮನೆಯಿಂದ ಹೊರ ಬಂದಮೇಲೆ ಮಾಧ್ಯಮದವರಿಗೆ ಸಂದರ್ಶನ ಕೊಡಲ್ಲ; ಶುಭಾ ಹೀಗೆ ಹೇಳಿದ್ದೇಕೆ?

Shubha Poonja: ಧನುಶ್ರೀ, ನಿರ್ಮಲಾ ಚೆನ್ನಪ್ಪ ಮುಂತಾದವರು ಬಿಗ್​ ಬಾಸ್​ ಮನೆಯಿಂದ ಎಲಿಮಿನೇಟ್​ ಆಗಿ ಹೊರ ಬಂದ ನಂತರದಲ್ಲಿ ಮಾಧ್ಯಮಗಳು ಅವರ ಸಂದರ್ಶನ ಪಡೆದಿದ್ದವು.

Bigg Boss 8: ಬಿಗ್​ ಬಾಸ್​ ಮನೆಯಿಂದ ಹೊರ ಬಂದಮೇಲೆ ಮಾಧ್ಯಮದವರಿಗೆ ಸಂದರ್ಶನ ಕೊಡಲ್ಲ; ಶುಭಾ ಹೀಗೆ ಹೇಳಿದ್ದೇಕೆ?
ಶುಭಾ ಪೂಂಜಾ - ನಿಧಿ ಸುಬ್ಬಯ್ಯ
ರಾಜೇಶ್ ದುಗ್ಗುಮನೆ
| Edited By: |

Updated on:May 07, 2021 | 4:48 PM

Share

ಬಿಗ್​ ಬಾಸ್​ ಮನೆಯಲ್ಲಿ ಶುಭಾ ಮಾಡುವ ಚೇಷ್ಟೆಗಳು ಬಹುತೇಕರಿಗೆ ಇಷ್ಟವಾಗುತ್ತಿದೆ. ಸಣ್ಣ ಮಕ್ಕಳಂತೆ ಆಡುವುದು, ಬೇರೆಯವರ ಕಾಲೆಳೆಯುವುದನ್ನು ಅವರು ನಿರಂತರವಾಗಿ ಮಾಡುತ್ತಲೇ ಇರುತ್ತಾರೆ. ಮೊನ್ನೆ ಅರ್ಥವಾಗದ ಭಾಷೆಯಲ್ಲಿ ಶುಭಾ ಮಾತನಾಡಿದ್ದು ಭಾರೀ ವೈರಲ್​ ಆಗಿತ್ತು. ಈಗ ಅವರು ಬಿಗ್​ ಬಾಸ್​ ಮನೆಯಲ್ಲಿ ಶಪಥವೊಂದನ್ನು ಮಾಡಿದ್ದಾರೆ.

ಬಿಗ್​ ಬಾಸ್​ ಮನೆಯಿಂದ ಹೊರ ಬಂದ ಸ್ಪರ್ಧಿಗಳು ಮಾಧ್ಯಮಗಳಿಗೆ ಸಂದರ್ಶನ ಕೊಡೋದು ವಾಡಿಕೆ. ಧನುಶ್ರೀ, ನಿರ್ಮಲಾ ಚೆನ್ನಪ್ಪ ಮುಂತಾದವರು ಬಿಗ್​ ಬಾಸ್​ ಮನೆಯಿಂದ ಎಲಿಮಿನೇಟ್​ ಆಗಿ ಹೊರ ಬಂದ ನಂತರದಲ್ಲಿ ಮಾಧ್ಯಮಗಳು ಅವರ ಸಂದರ್ಶನ ಪಡೆದಿದ್ದವು. ಆದರೆ, ಶುಭಾ ಮನೆಯಿಂದ ಹೊರ ಬಂದ ನಂತರ ಒಂದು ವಾರ ಯಾರಿಗೂ ಸಂದರ್ಶನ ನೀಡುವುದಿಲ್ಲವಂತೆ. ಅವರು ಹೀಗೆ ಹೇಳುವುದಕ್ಕೂ ಬಲವಾದ ಕಾರಣವಿದೆ.

ಶುಭಾ ಪೂಂಜಾ ಬಿಗ್​ ಬಾಸ್​ ಮನೆಯಲ್ಲಿ ಹಾಯಾಗಿದ್ದಾರೆ. ಅವರ ಫಿಯಾನ್ಸಿ ಸುಮಂತ್​ ಅವರನ್ನು ನೆನಪು ಮಾಡಿಕೊಂಡು ಆಗಾಗ ಬೇಸರಗೊಂಡಿದ್ದಿದೆ. ಆದರೆ, ಉಳಿದಂತೆ ಅವರು ಸ್ಟ್ರಾಂಗ್​ ಆಗಿದ್ದಾರೆ. ಪ್ರತಿ ವಾರ ಉತ್ತಮ ಪ್ರದರ್ಶನ ನೀಡುವ ಮೂಲಕ ನಾಮಿನೇಷನ್​ನಿಂದ ಬಚಾವ್​ ಆಗುತ್ತಿದ್ದಾರೆ. ಈಗ ಬಿಗ್​ ಬಾಸ್​ ಮನೆಯಲ್ಲಿ ಇರೋದು ಅವರಿಗೆ ಕಷ್ಟವಾಗುತ್ತಿದೆಯಂತೆ.

ಈ ಬಗ್ಗೆ ಮೇ 6ರ ಎಪಿಸೋಡ್​ನಲ್ಲಿ ಶುಭಾ ಮಾತನಾಡಿದ್ದಾರೆ. ನಾನು ಇಲ್ಲಿಂದ ಹೊರ ಹೋದಮೇಲೆ ಒಂದು ವಾರ ಹಾಯಾಗಿರಬೇಕು. ನಾನು ಮಾಧ್ಯಮದವರಿಗೆ ಒಂದು ವಾರ ನನ್ನ ಸುದ್ದಿಗೆ ಬರಬೇಡ್ರಪ್ಪ, ನಾನು ಯಾವ ಸಂದರ್ಶನವನ್ನೂ ಕೊಡಲ್ಲ ಎಂದು ಹೇಳಿಬಿಡ್ತೀನಿ ಎಂದಿದ್ದಾರೆ. ಈ ಮೂಲಕ ಮನೆಯಲ್ಲೇ ಅವರು ಹಾಯಾಗಿ ಕಾಲ ಕಳೆಯುವ ಆಲೋಚನೆಯಲ್ಲಿದ್ದಾರೆ.

ಕಳೆದ ಒಂದು ವಾರಗಳಿಂದ ಶುಭಾ ಸಣ್ಣಸಣ್ಣ ವಿಚಾರಕ್ಕೂ ಎಮೋಷನಲ್​​ ಆಗುತ್ತಿದ್ದಾರೆ. ಒಂದು ವಾರದಿಂದ ನಿಜವಾಗಲೂ ಎಮೋಷನಲಿ ಟಫ್​ ಆಗ್ತಿದೆ ಎಂದು ಅವರೇ ಹೇಳಿಕೊಂಡಿದ್ದರು. ದಿವ್ಯಾ ಉರುಡುಗ ಅನಾರೋಗ್ಯಕ್ಕೆ ತುತ್ತಾಗಿ ಮನೆಯಿಂದ ಹೊರ ಹೋಗಿರುವುದಕ್ಕೆ ಶುಭಾ ಅತ್ತಿದ್ದರು.

ಇದನ್ನೂ ಓದಿ: Shubha Poonja: ನನ್ನ ಹುಡುಗನಿಗೆ ಪ್ರಪೋಸ್​​ ಮಾಡಿದ್ದು ನಾನಲ್ಲ, ನನ್ನ ಅಮ್ಮ; ಶುಭಾ ಪೂಂಜಾ ಪ್ರೇಮಕಥೆ ಕೇಳಿ ಬಿಗ್​ ಬಾಸ್​ ಮಂದಿ ಶಾಕ್

Shubha Poonja: ಕೆಲವೊಮ್ಮೆ ಸೈಕ್​ ಮಾಡಿ ಬಿಡುತ್ತದೆ; ಬಿಗ್​ ಬಾಸ್​ ಮನೆ ಅನುಭವ ಹಂಚಿಕೊಂಡ ಶುಭಾ ಪೂಂಜಾ

Published On - 4:45 pm, Fri, 7 May 21

ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು
ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ದೇವದತ್ ಪಡಿಕ್ಕಲ್ ಶತಕ; ಕ್ವಾರ್ಟರ್ ಫೈನಲ್​ಗೇರಿದ ಕರ್ನಾಟಕ
ದೇವದತ್ ಪಡಿಕ್ಕಲ್ ಶತಕ; ಕ್ವಾರ್ಟರ್ ಫೈನಲ್​ಗೇರಿದ ಕರ್ನಾಟಕ
ಮದ್ವೆಯಾಗಿ 5 ವರ್ಷವಾದರೂ ಅವ್ನ ಕೈಯಲ್ಲಿ ಮಗು ಮಾಡಿಕೊಳ್ಳಲಾಗಿಲ್ಲ
ಮದ್ವೆಯಾಗಿ 5 ವರ್ಷವಾದರೂ ಅವ್ನ ಕೈಯಲ್ಲಿ ಮಗು ಮಾಡಿಕೊಳ್ಳಲಾಗಿಲ್ಲ
ಕೇಂದ್ರ ಬಜೆಟ್ ಬಗ್ಗೆ ವ್ಯಂಗ್ಯ ಮಾಡುತ್ತಲ್ಲೇ ಕಟುವಾಗಿ ಟೀಕಿಸಿದ ಸಿಎಂ!
ಕೇಂದ್ರ ಬಜೆಟ್ ಬಗ್ಗೆ ವ್ಯಂಗ್ಯ ಮಾಡುತ್ತಲ್ಲೇ ಕಟುವಾಗಿ ಟೀಕಿಸಿದ ಸಿಎಂ!
ಆಸ್ಟ್ರೇಲಿಯನ್ ಓಪನ್ ಗೆದ್ದು ಇತಿಹಾಸ ನಿರ್ಮಿಸಿದ ಕಾರ್ಲೋಸ್ ಅಲ್ಕರಾಝ್
ಆಸ್ಟ್ರೇಲಿಯನ್ ಓಪನ್ ಗೆದ್ದು ಇತಿಹಾಸ ನಿರ್ಮಿಸಿದ ಕಾರ್ಲೋಸ್ ಅಲ್ಕರಾಝ್
ಚಿಮುಲ್ ಚುನಾವಣೆ: ಮತದಾರರಿಗೆ ಲಕ್ಷ ಲಕ್ಷ ನಗದು, ಬೆಳ್ಳಿ ತಟ್ಟೆ!
ಚಿಮುಲ್ ಚುನಾವಣೆ: ಮತದಾರರಿಗೆ ಲಕ್ಷ ಲಕ್ಷ ನಗದು, ಬೆಳ್ಳಿ ತಟ್ಟೆ!
ಟ್ಯಾಕ್ಸ್‌ ಟೆರರಿಸಂ: ಐಟಿ ದಾಳಿ ವಿರುದ್ಧ ತಿರುಗಿಬಿದ್ದ ಮೋಹನ್ ದಾಸ್ ಪೈ
ಟ್ಯಾಕ್ಸ್‌ ಟೆರರಿಸಂ: ಐಟಿ ದಾಳಿ ವಿರುದ್ಧ ತಿರುಗಿಬಿದ್ದ ಮೋಹನ್ ದಾಸ್ ಪೈ