AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ನಮ್ಮ ಬಗ್ಗೆ ಆ ರೀತಿ ಮಾತಾಡಬೇಡಿ’- ರಘು ವಿಚಾರದಲ್ಲಿ ವೈಷ್ಣವಿಗೆ ಘಾಸಿ ಮಾಡಿದ ಶುಭಾ ಪೂಂಜಾ!

ಬಿಗ್​ ಬಾಸ್​ ಮನೆಯಲ್ಲಿ ವೈಷ್ಣವಿ ಕಿಚನ್​ನಲ್ಲಿ ಕೆಲಸ ಮಾಡುತ್ತಿದ್ದರು. ರಘು ಗೌಡ ಕೂಡ ಅಲ್ಲಿಯೇ ಇದ್ದರು. ಅಲ್ಲಿಗೆ ಬಂದ ಶುಭಾ ಪೂಂಜಾ ಆ್ಯಂಡ್​ ಗ್ಯಾಂಗ್​, ವೈಷ್ಣವಿ ಕಾಲೆಳೆಯೋಕೆ ಪ್ರಯತ್ನಿಸಿದರು.

'ನಮ್ಮ ಬಗ್ಗೆ ಆ ರೀತಿ ಮಾತಾಡಬೇಡಿ'- ರಘು ವಿಚಾರದಲ್ಲಿ ವೈಷ್ಣವಿಗೆ ಘಾಸಿ ಮಾಡಿದ ಶುಭಾ ಪೂಂಜಾ!
ರಘು-ವೈಷ್ಣವಿ ಗೌಡ
ರಾಜೇಶ್ ದುಗ್ಗುಮನೆ
| Updated By: ಮದನ್​ ಕುಮಾರ್​|

Updated on: May 08, 2021 | 9:12 AM

Share

ಬಿಗ್​ ಬಾಸ್​ ಮನೆಯಲ್ಲಿ ವೈಷ್ಣವಿ ಹಾಗೂ ರಘು ತುಂಬಾನೇ ಕ್ಲೋಸ್​ ಆಗಿದ್ದಾರೆ. ಇಬ್ಬರ ನಡುವೆ ಒಳ್ಳೆಯ ಗೆಳೆತನವಿದೆ. ಇದು ಬಿಗ್​ ಬಾಸ್​ ಸ್ಪರ್ಧಿಗಳಿಗೂ ಗೊತ್ತಿದೆ. ಇದೇ ವಿಚಾರ ಇಟ್ಟುಕೊಂಡು ಅವರಿಗೆ ಕೆಲವರು ಟಾಂಟ್​ ಕೊಟ್ಟಿದ್ದಿದೆ. ಈಗ ಮನೆಯಲ್ಲಿ ಈ ವಿಚಾರ ತುಂಬಾನೇ ಗಂಭೀರ ಸ್ವರೂಪ ಪಡೆದುಕೊಂಡಿದೆ.

ಬಿಗ್​ ಬಾಸ್​ ಮನೆಯಲ್ಲಿ ವೈಷ್ಣವಿ ಕಿಚನ್​ನಲ್ಲಿ ಕೆಲಸ ಮಾಡುತ್ತಿದ್ದರು. ರಘು ಗೌಡ ಕೂಡ ಅಲ್ಲಿಯೇ ಇದ್ದರು. ಅಲ್ಲಿಗೆ ಬಂದ ಶುಭಾ ಪೂಂಜಾ ಆ್ಯಂಡ್​ ಗ್ಯಾಂಗ್​, ವೈಷ್ಣವಿ ಕಾಲೆಳೆಯೋಕೆ ಪ್ರಯತ್ನಿಸಿದರು. ಆದರೆ, ಇದು ರಾಂಗ್​ ಆಗಿದೆ. ಈ ವಿಚಾರ ತುಂಬಾನೇ ಗಂಭೀರ ಸ್ವರೂಪ ಪಡೆದುಕೊಂಡಿತು. ಅಲ್ಲದೆ, ಶುಭಾಗೆ ವೈಷ್ಣವಿ ಎಚ್ಚರಿಕೆ ಕೂಡ ನೀಡಿದರು.

ಅಲ್ವೋ ರಘು ಕಿಚನ್​ನಲ್ಲೂ ವೈಷ್ಣವಿ ಜತೆಯಲ್ಲೇ ಇರುತ್ತೀಯಲ್ಲ. ಅಡುಗೆ ಮಾಡುವಾಗಲೂ ಅವಳ ಹಿಂದೇ ಇರಬೇಕಾ? ನೀವಿಬ್ಬರೇ ಹೋಗಿ ಒಂದು ಬಿಗ್​ ಬಾಸ್​ ಮಾಡಿಕೊಳ್ಳಿ ಎಂದು ಕೊಂಕಾಗಿ ಶುಭಾ ಮಾತಿಗೆ ಇಳಿದರು. ಇದು ವೈಷ್ಣವಿಗೆ ಬೇಸರ ಮೂಡಿಸಿದೆ. ತಮ್ಮಿಬ್ಬರ ಗೆಳೆತನ ಬೇರೆ ರೀತಿಯಲ್ಲ ಅರ್ಥ ಮಾಡಿಕೊಳ್ಳುತ್ತಿದ್ದಾರಾ ಎಂದು ಅವರಿಗೆ ಭಯವಾಗಿದೆ.

ಹೀಗಾಗಿ, ವೈಷ್ಣವಿ ದಯವಿಟ್ಟು ಆ ರೀತಿ ಮಾತನಾಡಬೇಡಿ. ಚೆನ್ನಾಗಿ ಕಾಣಿಸುವುದಿಲ್ಲ. ಅವರಿಗೆ ಮದುವೆಯಾಗಿ ಮಗುವಿದೆ ಎಂದು ಎಚ್ಚರಿಸಿದರು. ಈ ಹೇಳಿಕೆ ನಂತರದಲ್ಲಿ ಶುಭಾ ಸುಮ್ಮನಾದರು.

ಇದೇ ವೇಳೆ ಮನೆಯಲ್ಲಿ ಅನ್ನ ಕಡಿಮೆ ಆಯಿತು. ಊಟಕ್ಕೆ ತಡವಾಗುತ್ತಿದೆ ಎನ್ನುವ ಮಾತು ಕೂಡ ಕೇಳಿ ಬಂತು. ಕಿಚನ್​ ಡಿಪಾರ್ಟ್​ಮೆಂಟ್​ನಲ್ಲಿದ್ದಿದ್ದು ವೈಷ್ಣವಿ. ಹೀಗಾಗಿ, ಅವರಿಗೆ ಈ ವಿಚಾರವೂ ಬೇಸರ ತರಿಸಿತ್ತು. ಹೀಗಾಗಿ ಒಮ್ಮೆಲೇ ಅವರು ಅಳೋಕೆ ಪ್ರಾರಂಭಿಸಿದರು.

ಇದನ್ನೂ ಓದಿ: Vaishnavi Gowda: ನಾನು ಜೀವನವನ್ನು ಒಂಟಿಯಾಗಿ ಕಳೆದಿದ್ದೇನೆ, ಈಗ ಮದುವೆ ಆಗೋಕೆ ತುದಿಗಾಲಲ್ಲಿ ನಿಂತಿದ್ದೇನೆ; ವೈಷ್ಣವಿ

ಇದೇ ಮೊದಲ ಬಾರಿಗೆ ವೈಷ್ಣವಿ ವಿರುದ್ಧ ಒಟ್ಟಾಗಿ ತಿರುಗಿಬಿದ್ದ ಮನೆ ಮಂದಿ; ಬಿಕ್ಕಿ ಬಿಕ್ಕಿ ಅತ್ತ ಸನ್ನಿಧಿ

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ