ಮೆಚ್ಚುಗೆ ಪಡೆದ ಸಿಂಬು ಲುಕ್​; ‘ಥಗ್​ ಲೈಫ್​’ ಪೋಸ್ಟರ್​ ನೋಡಿ ಹೊಗಳಿದ ಫ್ಯಾನ್ಸ್​

ಕಮಲ್​ ಹಾಸನ್​, ಮಣಿರತ್ನಂ ಅವರ ಕಾಂಬಿನೇಷನ್​ನಿಂದ ‘ಥಗ್​ ಲೈಫ್​’ ಸಿನಿಮಾ ಭಾರಿ ನಿರೀಕ್ಷೆ ಹುಟ್ಟುಹಾಕಿದೆ. ಈಗ ಈ ಚಿತ್ರತಂಡಕ್ಕೆ ಕಾಲಿವುಡ್​ನ ಖ್ಯಾತ ನಟ ಸಿಲಂಬರಸನ್​ ಅವರು ಸೇರ್ಪಡೆ ಆಗಿದ್ದಾರೆ. ಹೊಸ ಪೋಸ್ಟರ್ ಮೂಲಕ ಅವರ ಪಾತ್ರವನ್ನು ಪರಿಚಯಿಸಲಾಗಿದೆ. ಈ ಪೋಸ್ಟರ್​ ನೋಡಿ ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದಾರೆ.

ಮೆಚ್ಚುಗೆ ಪಡೆದ ಸಿಂಬು ಲುಕ್​; ‘ಥಗ್​ ಲೈಫ್​’ ಪೋಸ್ಟರ್​ ನೋಡಿ ಹೊಗಳಿದ ಫ್ಯಾನ್ಸ್​
ಸಿಲಂಬರಸನ್​

Updated on: May 10, 2024 | 9:02 PM

ಕಾಲಿವುಡ್​ನ ಬಹುನಿರೀಕ್ಷಿತ ಸಿನಿಮಾಗಳಲ್ಲಿ ‘ಥಗ್​ ಲೈಫ್​’ (Thug Life) ಚಿತ್ರ ಕೂಡ ಮುಂಚೂಣಿಯಲ್ಲಿದೆ. ಈ ಸಿನಿಮಾದ ಮೇಲೆ ಅಭಿಮಾನಿಗಳು ನಿರೀಕ್ಷೆ ಇಟ್ಟುಕೊಳ್ಳಲು ಅನೇಕ ಕಾರಣಗಳಿವೆ. ಮೂರು ದಶಕಗಳ ಬಳಿಕ ಖ್ಯಾತ ನಟ ಕಮಲ್ ಹಾಸನ್ (Kamal Haasan) ಹಾಗೂ ದಿಗ್ಗಜ ನಿರ್ದೇಶಕ ಮಣಿರತ್ನಂ ಅವರು ಈ ಚಿತ್ರದ ಮೂಲಕ ಕೈ ಜೋಡಿಸಿದ್ದಾರೆ. ಬರೋಬ್ಬರಿ 36 ವರ್ಷಗಳ ಹಿಂದೆ ಗ್ಯಾಂಗ್‌ಸ್ಟರ್ ಕಥೆಯುಳ್ಳ ‘ನಾಯಕನ್’ ಸಿನಿಮಾದಲ್ಲಿ ಈ ನಟ-ನಿರ್ದೇಶಕನ ಕಾಂಬಿನೇಷನ್​ ಮೋಡಿ ಮಾಡಿತ್ತು. ಈಗ ಅವರು ಮತ್ತೆ ‘ಥಗ್​ ಲೈಫ್​’ ಚಿತ್ರದಲ್ಲಿ ಒಂದಾಗಿದ್ದು, ಇವರಿಬ್ಬರ ಜೊತೆಗೆ ಸಿಲಂಬರಸ್ (Silambarasan)​ ಅಲಿಯಾಸ್​ ಸಿಂಬು ಕೂಡ ಸೇರಿಕೊಂಡಿದ್ದಾರೆ ಎಂಬುದು ವಿಶೇಷ.

‘ಥಗ್ ಲೈಫ್’ ಸಿನಿಮಾ ಅನೌನ್ಸ್​ ಆದಾಗಿನಿಂದಲೂ ಅಭಿಮಾನಿಗಳ ವಲಯದಲ್ಲಿ ಕ್ರೇಜ್​ ಸೃಷ್ಟಿ ಆಗಿದೆ. ಟೈಟಲ್ ಟೀಸರ್ ನೋಡಿದ ಎಲ್ಲರೂ ವಾವ್​ ಎಂದಿದ್ದಾರೆ. ಈಗ ಕಾಲಿವುಡ್​ನ ಖ್ಯಾತ ಸಿಲಂಬರಸನ್ ಕೂಡ ಈ ಚಿತ್ರತಂಡಕ್ಕೆ ಸೇರ್ಪಡೆ ಆಗಿರುವುದರಿಂದ ಸಿನಿಮಾದ ಸ್ಟಾರ್​ ಮೆಗುರು ಹೆಚ್ಚಿದೆ. ಸಿಂಬು ಅವರನ್ನು ಸ್ವಾಗತಿಸಲು ಖಡಕ್​ ಆದ ಪೋಸ್ಟರ್​ ಬಿಡುಗಡೆ ಮಾಡಲಾಗಿದೆ.

ಎಂಟ್ರಿಯಲ್ಲೇ ಸಿಲಂಬರಸನ್ ಅವರು ಖಡಕ್​ ಲುಕ್​ ನೀಡಿದ್ದಾರೆ. ಮರುಭೂಮಿಯಲ್ಲಿ ಕಾರ್ ಚೇಸ್​ ಮಾಡುತ್ತಾ ಗನ್ ಹಿಡಿದು ಅವರು ದಾಳಿಗೆ ಮುಂದಾಗಿದ್ದಾರೆ. ಅವರ ಈ ಲುಕ್​ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಇದೇ ಸಿನಿಮಾದಲ್ಲಿ ತ್ರಿಶಾ ಕೂಡ ನಟಿಸುತ್ತಿದ್ದಾರೆ. ಅದ್ದೂರಿ ಬಜೆಟ್​ನಲ್ಲಿ ಈ ಸಿನಿಮಾ ನಿರ್ಮಾಣ ಆಗುತ್ತಿದೆ. ಕಮಲ್​, ಮಣಿರತ್ನಂ ಕಾಂಬಿನೇಷನ್​ನಲ್ಲಿ ಹೊಸ ಮೈಲುಗಲ್ಲು ಸೃಷ್ಟಿ ಆಗಲಿದೆ ಎಂದು ಫ್ಯಾನ್ಸ್ ನಿರೀಕ್ಷಿಸಿದ್ದಾರೆ.

ಇದನ್ನೂ ಓದಿ: ‘ಮಾನಾಡು’ ನಟ ಸಿಂಬುಗೆ ಗೌರವ ಡಾಕ್ಟರೇಟ್​; ಚಿತ್ರರಂಗದಲ್ಲಿ ಈ ಕಲಾವಿದನ ಸಾಧನೆ ಏನು?

‘ರಾಜ್​ಕಮಲ್​ ಇಂಟರ್​ನ್ಯಾಷನಲ್​’, ‘ಮದ್ರಾಸ್​ ಟಾಕೀಸ್​’, ‘ರೆಡ್​ಜೈಂಟ್​ ಮೂವೀಸ್​’ ಸಂಸ್ಥೆಗಳು ಜಂಟಿಯಾಗಿ ‘ಥಗ್​ ಲೈಫ್​’ ಸಿನಿಮಾವನ್ನು ನಿರ್ಮಿಸುತ್ತಿವೆ. ಕಮಲ್‌ ಹಾಸನ್‌, ಮಣಿರತ್ನಂ, ಆರ್‌. ಮಹೇಂದ್ರನ್‌, ಶಿವ ಅನಂತ್‌ ಅವರು ಜತೆಯಾಗಿ ಬಂಡವಾಳ ಹೂಡುತ್ತಿದ್ದಾರೆ. ಘಟಾನುಘಟಿ ಕಲಾವಿದರು ಪರದೆ ಮೇಲೆ ಕಾಣಿಸಿಕೊಂಡರೆ, ಪರದೆ ಹಿಂದೆ ಘಟಾನುಘಟಿ ತಂತ್ರಜ್ಞರು ಕೆಲಸ ಮಾಡುತ್ತಿದ್ದಾರೆ. ಈ ಸಿನಿಮಾಗೆ ಎ.ಆರ್‌. ರೆಹಮಾನ್‌ ಸಂಗೀತ ನೀಡುತ್ತಿದ್ದಾರೆ. ಶ್ರೀಕರ್‌ ಪ್ರಸಾದ್‌ ಸಂಕಲನ ಮಾಡುತ್ತಿದ್ದು, ರವಿ ಕೆ. ಚಂದ್ರನ್‌ ಅವರ ಛಾಯಾಗ್ರಹಣ ಮಾಡುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us