AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿವಾದ ಸೃಷ್ಟಿಸಿದ್ದ ‘ಫ್ಯಾಮಿಲಿ ಮ್ಯಾನ್​ 2’ನಲ್ಲಿತ್ತು ಸಾಜಿದ್​-ರಾಜಿ ಪ್ರೇಮ ಕಥೆ; ನಿರ್ದೇಶಕರು ಆ ದೃಶ್ಯಕ್ಕೆ ಕತ್ತರಿ ಹಾಕಿದ್ದೇಕೆ?

ನಮ್ಮನ್ನು ಉಗ್ರಗಾಮಿಗಳ ರೀತಿಯಲ್ಲಿ ತೋರಿಸಲಾಗಿದೆ ಎಂಬುದು ತಮಿಳರ ಆರೋಪವಾಗಿತ್ತು. ‘ಫ್ಯಾಮಿಲಿ ಮ್ಯಾನ್​ 2’ ಟ್ರೇಲರ್​ ನೋಡಿದ ತಮಿಳಿಯನ್ನರು, ಈ ವೆಬ್​ ಸೀರಿಸ್​ ಬ್ಯಾನ್​ ಮಾಡುವಂತೆ ಆಗ್ರಹಿಸಿದ್ದರು.

ವಿವಾದ ಸೃಷ್ಟಿಸಿದ್ದ ‘ಫ್ಯಾಮಿಲಿ ಮ್ಯಾನ್​ 2’ನಲ್ಲಿತ್ತು ಸಾಜಿದ್​-ರಾಜಿ ಪ್ರೇಮ ಕಥೆ; ನಿರ್ದೇಶಕರು ಆ ದೃಶ್ಯಕ್ಕೆ ಕತ್ತರಿ ಹಾಕಿದ್ದೇಕೆ?
ವಿವಾದ ಸೃಷ್ಟಿಸಿದ್ದ ‘ಫ್ಯಾಮಿಲಿ ಮ್ಯಾನ್​ 2’ನಲ್ಲಿತ್ತು ಸಾಜಿದ್​-ರಾಜಿ ಪ್ರೇಮ ಕಥೆ; ನಿರ್ದೇಶಕರು ಈ ದೃಶ್ಯಕ್ಕೆ ಕತ್ತರಿ ಹಾಕಿದ್ದೇಕೆ?
ರಾಜೇಶ್ ದುಗ್ಗುಮನೆ
|

Updated on:Jun 25, 2021 | 10:37 PM

Share

ಸಾಕಷ್ಟು ವಿವಾದ ಸೃಷ್ಟಿಸಿದ್ದ ‘ದಿ ಫ್ಯಾಮಿಲಿ ಮ್ಯಾನ್​ 2’ ವೆಬ್​ ಸೀರಿಸ್​ನಲ್ಲಿಸಾಜಿದ್​ ಹೆಸರಿನ ಉಗ್ರನ ಪಾತ್ರದಲ್ಲಿ ಶಹಾಬ್​ ಅಲಿ ಕಾಣಿಸಿಕೊಂಡಿದ್ದಾರೆ. ನಟಿ ಸಮಂತಾ ಶ್ರೀಲಂಕಾ ತಮಿಳು ಯುವತಿ ರಾಜಿಯಾಗಿ ಮಿಂಚಿದ್ದಾರೆ. ಇಬ್ಬರ ನಡುವೆ ಒಂದು ಪ್ರೇಮ ಕಥೆಯನ್ನು ವೆಬ್​ ಸೀರಿಸ್​ನಲ್ಲಿ ಹೆಣೆಯಲಾಗಿತ್ತು. ಆದರೆ, ಕೊನೆಯ ಕ್ಷಣದಲ್ಲಿ ಈ ದೃಶ್ಯಕ್ಕೆ ಕತ್ತರಿ ಬಿದ್ದಿದೆ.

ನಮ್ಮನ್ನು ಉಗ್ರಗಾಮಿಗಳ ರೀತಿಯಲ್ಲಿ ತೋರಿಸಲಾಗಿದೆ ಎಂಬುದು ತಮಿಳರ ಆರೋಪವಾಗಿತ್ತು. ‘ಫ್ಯಾಮಿಲಿ ಮ್ಯಾನ್​ 2’ ಟ್ರೇಲರ್​ ನೋಡಿದ ತಮಿಳಿಯನ್ನರು, ಈ ವೆಬ್​ ಸೀರಿಸ್​ ಬ್ಯಾನ್​ ಮಾಡುವಂತೆ ಆಗ್ರಹಿಸಿದ್ದರು. ವೆಬ್​ ಸೀರಿಸ್​ ರಿಲೀಸ್​ ಆದ ನಂತರದಲ್ಲಿ ಈ ವಿವಾದ ಸ್ವಲ್ಪ ತಣ್ಣಗಾಗಿತ್ತು. ಈಗ ಶಹಾಬ್​ ಅವರು ಸಂದರ್ಶನವೊಂದರಲ್ಲಿ ಅಚ್ಚರಿಯ ಮಾಹಿತಿ ಬಿಚ್ಚಿಟ್ಟಿದ್ದಾರೆ.

‘ಫ್ಯಾಮಿಲಿ ಮ್ಯಾನ್​ 2’ ವೆಬ್​ ಸೀರಿಸ್​ನಲ್ಲಿ ಬರುವ ಪ್ರಧಾನ ಮಂತ್ರಿ ವಿರುದ್ಧದ ಸಂಚಿನಲ್ಲಿ ಸಾಜಿದ್ ಹಾಗೂ ರಾಜಿ ಒಂದಾಗುತ್ತಾರೆ. ರಾಜಿ ಕಂಡರೆ ಸಾಜಿದ್​ಗೆ ಕಾಳಜಿ. ಕೊನೆಯ ಬಾರಿ ರಾಜಿಗೆ ಬಾಯ್​ ಹೇಳುವಾಗ ‘ನಿನ್ನಷ್ಟು ಧೈರ್ಯವಂತ ಸೋಲ್ಜರ್​​ಅನ್ನು ನಾನು ಎಲ್ಲಿಯೂ ನೋಡಿಲ್ಲ’ ಎನ್ನುತ್ತಾನೆ ಸಾಜಿದ್. ಇದೇ ವೇಳೆ ಇಬ್ಬರ ನಡುವೆ ಪ್ರೀತಿ ಹುಟ್ಟುವ ದೃಶ್ಯ ಇತ್ತಂತೆ. ಆದರೆ, ನಿರ್ದೇಶಕರು ಇದಕ್ಕೆ ಕತ್ತರಿ ಹಾಕಿದ್ದಾರೆ.

ಈ ಬಗ್ಗೆ ಮಾತನಾಡಿರುವ ಶಹಾಬ್​, ‘ಇದೊಂದು ದೊಡ್ಡ ವೆಬ್​ ಸೀರಿಸ್​. ಇಲ್ಲಿ ಎಲ್ಲವನ್ನೂ ತೋರಿಸೋಕೆ ಆಗುವುದಿಲ್ಲ. ಕೆಲವೊಂದು ದೃಶ್ಯಗಳಿಗೆ ಕತ್ತರಿ ಹಾಕಲೇಬೇಕಾಗುತ್ತದೆ. ಈ ಕಾರಣಕ್ಕೆ, ಎಡಿಟಿಂಗ್​ನಲ್ಲಿ ಆ ದೃಶ್ಯಗಳನ್ನು ಕತ್ತರಿಸಲಾಗಿದೆ. ಇದು ಬಿಟ್ಟು ಬೇರೆ ಯಾವುದೇ ಉದ್ದೇಶವಿಲ್ಲ’ ಎಂದಿದ್ದಾರೆ.

‘ನನ್ನ ಹಾಗೂ ಸಮಂತಾ ನಡುವೆ ಕೆಲ ಆಪ್ತ ದೃಶ್ಯಗಳಿದ್ದವು. ಅದು ನಾವಿಬ್ಬರೂ ಪ್ರೀತಿಯಲ್ಲಿ ಬಿದ್ದಿದ್ದೇವೆ ಎಂಬುದನ್ನು ಸೂಚಿಸುವಂತಿತ್ತು. ಆದರೆ, ಅದನ್ನು ಕೊನೆಯ ಹಂತದಲ್ಲಿ ಕಟ್​ ಮಾಡಲಾಗಿದೆ. ಬಹುಶಃ ನಿರ್ದೇಶಕರಿಗೆ ಅದು ಸರಿ ಅನಿಸಿಲ್ಲದೇ ಇರಬಹುದು. ಈ ಕಾರಣಕ್ಕೆ ಅವರು ಕತ್ತರಿ ಹಾಕಿರಬಹುದು’ ಎಂದಿದ್ದಾರೆ ಅವರು.

ಇದನ್ನೂ ಓದಿ:  ದಿ ಫ್ಯಾಮಿಲಿ ಮ್ಯಾನ್​ 2ನಲ್ಲಿ ಸಮಂತಾ ಆ್ಯಕ್ಷನ್​ ನೋಡಿದ ರಶ್ಮಿಕಾ ಮಂದಣ್ಣ ಹೇಳಿದ್ದೇನು?

Samantha Akkineni: ಸಮಂತಾನೇ ಬೇಕೆಂದು ಹಠ ಹಿಡಿದು ಕುಳಿತ ನೆಟ್​ಫ್ಲಿಕ್ಸ್​; ಸಂಭಾವನೆ ಮೊತ್ತ ಅಬ್ಬಬ್ಬಾ ಇಷ್ಟೊಂದಾ?

Published On - 9:53 pm, Fri, 25 June 21

ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?