ಶಾರುಖ್ ಖಾನ್-ಸನ್ನಿ ಡಿಯೋಲ್ ವೈರತ್ವ ಅಂತ್ಯ; ಮುಕ್ತವಾಗಿ ಮಾತನಾಡಿದ ‘ಗದರ್ 2’ ಹೀರೋ

‘ಗದರ್ 2’ ಚಿತ್ರವನ್ನು ನೋಡಿದ ಶಾರುಖ್, ಸನ್ನಿ ಡಿಯೋಲ್​​ಗೆ ಫೋನ್ ಮಾಡಿ ಅಭಿನಂದನೆ ಸಲ್ಲಿಸಿದ್ದಾರೆ. ಈ ಯಶಸ್ಸಿಗೆ ಸನ್ನಿ ಅರ್ಹ ಎಂದು ತಿಳಿಸಿದ್ದಾರಂತೆ. ಅಷ್ಟೇ ಅಲ್ಲದೆ ಶಾರುಖ್ ಪತ್ನಿ ಗೌರಿ ಖಾನ್, ಪುತ್ರ ಆರ್ಯನ್ ಖಾನ್ ಜೊತೆಯೂ ಸನ್ನಿ ಮಾತನಾಡಿದ್ದರು. ಅವರು ಶೀಘ್ರವೇ ಸಿನಿಮಾ ನೋಡಲಿದ್ದೇವೆ ಎಂದಿದ್ದರು. ಬಳಿಕ ‘ಗದರ್ 2’ ಸಿನಿಮಾ ನೋಡಿ ಶಾರುಖ್ ಟ್ವೀಟ್ ಕೂಡ ಮಾಡಿದ್ದರು.

ಶಾರುಖ್ ಖಾನ್-ಸನ್ನಿ ಡಿಯೋಲ್ ವೈರತ್ವ ಅಂತ್ಯ; ಮುಕ್ತವಾಗಿ ಮಾತನಾಡಿದ ‘ಗದರ್ 2’ ಹೀರೋ
ಶಾರುಖ್-ಸನ್ನಿ ಡಿಯೋಲ್
Follow us
| Updated By: ರಾಜೇಶ್ ದುಗ್ಗುಮನೆ

Updated on: Aug 30, 2023 | 2:02 PM

‘ಗದರ್ 2’ ಚಿತ್ರ ನಿರೀಕ್ಷೆಗೂ ಮೀರಿ ಯಶಸ್ಸು ಪಡೆದುಕೊಂಡಿದೆ. ನಟ ಸನ್ನಿ ಡಿಯೋಲ್​ಗೆ ಬಹು ಕಾಲದ ನಂತರ ಭರ್ಜರಿ ಯಶಸ್ಸು ದೊರೆತಿದೆ. ಅವರು ಗೆಲುವಿನ ಖುಷಿಯಲ್ಲಿದ್ದಾರೆ. ಶಾರುಖ್ ಖಾನ್ ಜೊತೆ ಇದ್ದ ವೈಮನಸ್ಸಿನ ಬಗ್ಗೆ ಸನ್ನಿ ಡಿಯೋಲ್ ಮುಕ್ತವಾಗಿ ಮಾತನಾಡಿದ್ದಾರೆ. ಬಹುಕಾಲದಿಂದ ಒಬ್ಬರ ಮುಖ ಒಬ್ಬರು ನೋಡುತ್ತಿರಲಿಲ್ಲ. ನಂತರ ಹೇಗೆ ಎಲ್ಲವನ್ನು ಸರಿಪಡಿಸಿಕೊಂಡರು ಎಂಬುದನ್ನು ಅವರು ವಿವರಿಸಿದ್ದಾರೆ. ಶಾರುಖ್ (Shah Rukh Khan) ಮತ್ತು ಸನ್ನಿ ಬರೋಬ್ಬರಿ 16 ವರ್ಷಗಳಿಂದ ಮಾತನಾಡುತ್ತಿರಲಿಲ್ಲ. ‘ಡರ್’ ಸಿನಿಮಾದಿಂದ ಆರಂಭವಾದ ವೈಮನಸ್ಸು ಈಗ ಮುಕ್ತಾಯಗೊಂಡಿದೆ. ಸದ್ಯ ಇಬ್ಬರ ಮಧ್ಯೆ ಎಲ್ಲವೂ ಸರಿ ಆಗಿದೆ.

‘ಗದರ್ 2’ ಚಿತ್ರವನ್ನು ನೋಡಿದ ಶಾರುಖ್, ಸನ್ನಿ ಡಿಯೋಲ್​​ಗೆ ಫೋನ್ ಮಾಡಿ ಅಭಿನಂದನೆ ಸಲ್ಲಿಸಿದ್ದಾರೆ. ಈ ಯಶಸ್ಸಿಗೆ ಸನ್ನಿ ಅರ್ಹ ಎಂದು ತಿಳಿಸಿದ್ದಾರಂತೆ. ಅಷ್ಟೇ ಅಲ್ಲದೆ ಶಾರುಖ್ ಪತ್ನಿ ಗೌರಿ ಖಾನ್, ಪುತ್ರ ಆರ್ಯನ್ ಖಾನ್ ಜೊತೆಯೂ ಸನ್ನಿ ಮಾತನಾಡಿದ್ದರು. ಅವರು ಶೀಘ್ರವೇ ಸಿನಿಮಾ ನೋಡಲಿದ್ದೇವೆ ಎಂದಿದ್ದರು. ಬಳಿಕ ‘ಗದರ್ 2’ ಸಿನಿಮಾ ನೋಡಿ ಶಾರುಖ್ ಟ್ವೀಟ್ ಕೂಡ ಮಾಡಿದ್ದರು.

‘ಇದೆಲ್ಲವೂ ಸುಂದರವಾಗಿತ್ತು. ನಾವು ಹಲವು ಬಾರಿ ಕರೆ ಮಾಡಿ ಹಲವು ವಿಷಯಗಳ ಬಗ್ಗೆ ಆಲೋಚನೆಗಳನ್ನು ಹಂಚಿಕೊಂಡಿದ್ದೇವೆ. ಹಿಂದಿನ ಸಮಸ್ಯೆಗಳೇನೇ ಇದ್ದರೂ ಸಮಯ ಎಲ್ಲವನ್ನೂ ಗುಣಪಡಿಸುತ್ತದೆ. ನಾವು ಮುಂದುವರೆಯಲೇಬೇಕು. ಜೀವನ ಹೀಗೆಯೇ ಇರಬೇಕು’ ಎಂದು ಸನ್ನಿ ಡಿಯೋಲ್ ಅವರು ಹೇಳಿದ್ದಾರೆ.

ಸನ್ನಿ ಮತ್ತು ಶಾರುಖ್ ‘ಡರ್’ ಚಿತ್ರದಲ್ಲಿ ಒಟ್ಟಿಗೆ ನಟಿಸಿದ್ದರು. ಈ ಚಿತ್ರದಲ್ಲಿ ಸನ್ನಿ ಡಿಯೋಲ್ ಹೀರೋ ಆಗಿದ್ದರು. ಶಾರುಖ್ ವಿಲನ್ ಪಾತ್ರ ಮಾಡಿದ್ದರು. ಈ ಚಿತ್ರದಲ್ಲಿ ಶಾರುಖ್ ಖಾನ್ ಪಾತ್ರವನ್ನು ಹೈಲೈಟ್ ಮಾಡಲಾಯಿತು. ಈ ಬಗ್ಗೆ ಸನ್ನಿ ಡಿಯೋಲ್ ಅಸಮಾಧಾನಗೊಂಡಿದ್ದರು. ‘ಆಪ್ ಕಿ ಅದಾಲತ್’ ಶೋನಲ್ಲಿ ಭಾಗವಹಿಸಿದ್ದ ಸನ್ನಿ ಡಿಯೋಲ್ ಅವರು ಈ ಬಗ್ಗೆ ಮಾತನಾಡಿದ್ದರು. ‘ಜನರು ಚಿತ್ರವನ್ನು ಇಷ್ಟಪಟ್ಟರು ಎಂಬುದಷ್ಟೇ ನಮಗೆ ಬೇಕಾಗಿರುವುದು. ಈ ಚಿತ್ರದಲ್ಲಿ ಶಾರುಖ್ ಖಾನ್ ಪಾತ್ರವನ್ನು ಜನರು ಮೆಚ್ಚಿಕೊಂಡರು. ನನಗೆ ವಿಲನ್ ಪಾತ್ರವನ್ನು ವೈಭವೀಕರಿಸಲಾಗುತ್ತದೆ ಎಂಬುದು ಗೊತ್ತಿರಲಿಲ್ಲ. ನಾನು ಯಾವಾಗಲೂ ಮುಕ್ತ ಮನಸ್ಸಿನಿಂದ ಕೆಲಸ ಮಾಡುತ್ತೇನೆ ಮತ್ತು ಜನರನ್ನು ನಂಬುತ್ತೇನೆ. ನಂಬಿಕೆಯ ಮೇಲೆ ನಾನು ಕೆಲಸ ಮಾಡುತ್ತೇನೆ. ಆದರೆ, ದುರಾದೃಷ್ಟ ಎಂದರೆ ಎಲ್ಲರೂ ಇದೇ ರೀತಿಯಲ್ಲಿ ಕೆಲಸ ಮಾಡುವುದಿಲ್ಲ. ಬಹುಶಃ ಅವರು ಸ್ಟಾರ್​​ಡಂನ ಹೀಗೆ ಪಡೆಯಬಹುದು’ ಎಂದು ಹೇಳಿದ್ದರು. ಆ ಬಳಿಕ ಶಾರುಖ್ ಖಾನ್ ಹಾಗೂ ಸನ್ನಿ ಮಧ್ಯೆ ವೈಮನಸ್ಸು ಮೂಡಿತು.

ಇದನ್ನೂ ಓದಿ: ಶಾರುಖ್ ಖಾನ್ ನಿವಾಸದ ಎದುರು ಭಾರೀ ಪ್ರತಿಭಟನೆ; ಮನ್ನತ್​ಗೆ ಬಿಗಿ ಭದ್ರತೆ ನೀಡಿದ ಪೊಲೀಸರು

‘ಗದರ್ 2’ ಸಿನಿಮಾ 450 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಈ ಮೂಲಕ ಅತೀ ಕಡಿಮೆ ಅವಧಿಯಲ್ಲಿ 450 ಕೋಟಿ ರೂ. ಗಳಿಸಿದ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಮೊದಲು ‘ಪಠಾಣ್’ ಸಿನಿಮಾ ಈ ಹೆಗ್ಗಳಿಕೆಗೆ ಪಾತ್ರವಾಗಿತ್ತು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ