AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Sushant Singh Rajput: ಸುಶಾಂತ್​ ಸಾವಿನ ನಂತರ ಮಾಜಿ ಪ್ರೇಯಸಿ ರಿಯಾ ಚಕ್ರವರ್ತಿ ನೀಡಿದ ಅಚ್ಚರಿಯ​ ಹೇಳಿಕೆಗಳು

Sushant Singh Rajput Death Anniversary: ಆ ದುರ್ಘಟನೆ ನಡೆಯುವುದಕ್ಕಿಂತ ಕೆಲವೇ ದಿನಗಳ ಹಿಂದೆ ಸುಶಾಂತ್​ ಜೊತೆ ಜಗಳ ಮಾಡಿಕೊಂಡು ರಿಯಾ ದೂರಾಗಿದ್ದರು. ಪ್ರಿಯಕರನ ಸಾವಿನ ಬಳಿಕ ಅವರು ಸಂದರ್ಶನ ನೀಡಿದರು.

Sushant Singh Rajput: ಸುಶಾಂತ್​ ಸಾವಿನ ನಂತರ ಮಾಜಿ ಪ್ರೇಯಸಿ ರಿಯಾ ಚಕ್ರವರ್ತಿ ನೀಡಿದ ಅಚ್ಚರಿಯ​ ಹೇಳಿಕೆಗಳು
ಸುಶಾಂತ್​ ಸಿಂಗ್ ರಜಪೂತ್​, ರಿಯಾ ಚಕ್ರವರ್ತಿ
ಮದನ್​ ಕುಮಾರ್​
|

Updated on:Jun 13, 2021 | 10:10 AM

Share

ಜನಪ್ರಿಯ ನಟ ಸುಶಾಂತ್​ ಸಿಂಗ್​ ರಜಪೂರ್​ ನಿಧನರಾಗಿ 1 ವರ್ಷ ಕಳೆದಿದೆ. 2020ರ ಜೂನ್​ 14ರಂದು ಅವರು ಮೃತರಾದ ಸುದ್ದಿ ಹೊರಬಿದ್ದಿತ್ತು. ಅವರದ್ದು ಕೊಲೆಯೋ ಆತ್ಮಹತ್ಯೆಯೋ ಎಂಬುದು ಇನ್ನೂ ಬಗೆಹರಿಯದ ರಹಸ್ಯವಾಗಿ ಉಳಿದುಕೊಂಡಿದೆ. ಸುಶಾಂತ್​ ಸಾವಿನ ನಂತರ ಅವರ ಪ್ರೇಯಸಿ ರಿಯಾ ಚಕ್ರವರ್ತಿ ಮೇಲೆ ಎಲ್ಲರ ಅನುಮಾನದ ದೃಷ್ಟಿ ಹರಿಯಿತು. ಯಾಕೆಂದರೆ ಸುಶಾಂತ್​ ಜೊತೆ ಸಿಕ್ಕಾಪಟ್ಟೆ ಆಪ್ತವಾಗಿದ್ದ ಅವರು ಆ ದುರ್ಘಟನೆ ನಡೆಯುವುದಕ್ಕಿಂತ ಕೆಲವೇ ದಿನಗಳ ಹಿಂದೆ ಸುಶಾಂತ್​ ಜೊತೆ ಜಗಳ ಮಾಡಿಕೊಂಡು ದೂರಾಗಿದ್ದರು. ಪ್ರಿಯಕರನ ಸಾವಿನ ಬಳಿಕ ರಿಯಾ ಹೇಳಿದ ಕೆಲವು ಅಚ್ಚರಿಯ​ ಮಾತುಗಳು ಇಲ್ಲವೆ..

ಕನಸಿನಲ್ಲಿ ಸುಶಾಂತ್ ಬಂದಿದ್ದ

‘ಸುಶಾಂತ್​ ನನ್ನ ಕನಸಿನಲ್ಲಿ ಬಂದಿದ್ದ. ಅದೇ ರೀತಿ ಅನೇಕರ ಕನಸಿನಲ್ಲಿ ಬಂದಿರಬಹುದು. ಎಲ್ಲರ ಎದುರು ನಿಜ ಹೇಳು. ನೀನು ಏನು ಎಂಬುದನ್ನು ಎಲ್ಲರಿಗೂ ತಿಳಿಸಿ ಹೇಳು ಅಂತ ಹೇಳಿದ್ದಾನೆ’ ಎಂದು ಸುಶಾಂತ್​ ಸಾವಿನ ಬಳಿಕ ರಿಯಾ ನೀಡಿದ ಮೊದಲ ಸಂದರ್ಶನದಲ್ಲಿ ಹೇಳಿದ್ದರು.

ನಾವು ಮದುವೆ ಬಗ್ಗೆ ಮಾತನ್ನೇ ಆಡಿಲ್ಲ!

‘2013ರಲ್ಲಿ ನಾವು ಮೊದಲ ಬಾರಿಗೆ ಯಶ್ ರಾಜ್​ ಸ್ಟುಡಿಯೋದ ಜಿಮ್​ನಲ್ಲಿ ಭೇಟಿ ಆದೆವು. ಎಂದಿಗೂ ನಾವು ಮದುವೆ ಬಗ್ಗೆ ಮಾತಾಡಿಲ್ಲ. ಆದರೆ ನನಗೊಬ್ಬ ಪುಟಾಣಿ ಸುಶಾಂತ್​ ಬೇಕು ಎಂದು ನಾನು ಆಗಾಗ ಹೇಳುತ್ತಿದ್ದೆ’ ಎಂದಿದ್ದರು ರಿಯಾ.

ಕೊಡಗಿಗೆ ಹೋಗಬೇಕು ಎಂದುಕೊಂಡಿದ್ದ

‘ಸುಶಾಂತ್​ಗೆ ಸಿನಿಮಾ ರಂಗದಲ್ಲಿ ಮುಂದುವರಿಯುವ ಆಲೋಚನೆ ಇರಲಿಲ್ಲ. ಆತ ಕೊಡಗಿಗೆ ಹೋಗಿ ಕೃಷಿ ಮಾಡಬೇಕು ಎಂದು ಪ್ಲ್ಯಾನ್​ ಮಾಡಿದ್ದ’ ಎಂದಿದ್ದರು ರಿಯಾ.

ಸುಶಾಂತ್​ ಗಾಂಜಾ ಸೇದುತ್ತಿದ್ದ

‘ಒಬ್ಬರು ನಿಧನರಾದ ಬಳಿಕ ಈ ರೀತಿ ಹೇಳುವುದು ಸರಿಯಲ್ಲ ಹೌದು. ಆದರೆ ಈಗ ನನ್ನ ಬಳಿ ಬೇರೆ ಯಾವುದೇ ಆಯ್ಕೆ ಉಳಿದಿಲ್ಲ. ಸುಶಾಂತ್​ ಗಾಂಜಾ ಸೇದುತ್ತಿದ್ದ. ಪದೇಪದೇ ಗಾಂಜಾ ಸೇದುವ ಚಟ ಅವನಿಗೆ ಇತ್ತು’

ನಾನೂ ಆತ್ಮಹತ್ಯೆಗೆ ಯೋಚಿಸಿದ್ದೆ

‘ನಾನು ಮತ್ತು ನನ್ನ ಕುಟುಂಬದವರು ಕೂಡ ಆತ್ಮಹತ್ಯೆ ಮಾಡಿಕೊಳ್ಳಬೇಕು ಎನಿಸುತ್ತದೆ. ಇಲ್ಲವಾದರೆ, ನಮ್ಮನ್ನು ಗುಂಡು ಹೊಡೆದು ಸಾಯಿಸಿ. ಈ ರೀತಿ ಅವಮಾನದಿಂದ ಬದುಕಲು ಸಾಧ್ಯವಿಲ್ಲ. ನಾವು ಮಧ್ಯಮವರ್ಗದವರು’ ಎಂದು ರಿಯಾ ಕಣ್ಣೀರು ಹಾಕಿದ್ದರು.

ಅಪ್ಪನ ಜೊತೆ ಸುಶಾಂತ್​ ಸಂಬಂಧ ಕೆಟ್ಟಿತ್ತು

‘ಅವರ ತಂದೆಯ ಜೊತೆಗೆ ಸುಶಾಂತ್​ ಸಂಬಂಧ ಚೆನ್ನಾಗಿ ಇರಲಿಲ್ಲ. ಚಿಕ್ಕ ವಯಸ್ಸಿನಿಂದಲೂ ಕೂಡ ತಂದೆಯ ಜೊತೆ ಅಸಮಾಧಾನ ಇತ್ತು ಎಂಬುದನ್ನು ಆತ ನನ್ನ ಬಳಿ ಹೇಳಿಕೊಂಡಿದ್ದ’ ಎಂದು ಎಲ್ಲರಿಗೂ ರಿಯಾ ಶಾಕ್​ ನೀಡಿದ್ದರು.

ಸುಶಾಂತ್​ಗೆ ಇತ್ತು ಡಿಪ್ರೆಷನ್​

‘ಬಹಳ ಹಿಂದೆಯೇ ತೀರಿಹೋದ ಅಮ್ಮನ ನೆನಪಿನಲ್ಲಿ ಸುಶಾಂತ್​ ಇರುತ್ತಿದ್ದ. ಅದೇ ಕಾರಣಕ್ಕೆ ಅವನಿಗೆ ಡಿಪ್ರೆಷನ್​ ಕಾಡುತ್ತಿತ್ತು. ಅವರ ತಾಯಿ ಕೂಡ ಮಾನಸಿಕ ಖಾಯಿಲೆಯಿಂದ ನಿಧನರಾಗಿದ್ದರು’ ಎನ್ನುವ ಮೂಲಕ ಸುಶಾಂತ್​ ಕುಟುಂಬದ ಗುಟ್ಟುಗಳನ್ನು ರಿಯಾ ತೆರೆದಿಟ್ಟಿದ್ದರು.

Published On - 9:59 am, Sun, 13 June 21

Follow Us
ಅತಿಯಾಗಿ ಮಾತನಾಡುವ ಬಿಗ್ ಬಾಸ್ ಸ್ಪರ್ಧಿಗಳಿಗೆ ವಾರ್ನಿಂಗ್ ಕೊಟ್ಟ ಅವಿನಾಶ್
ಅತಿಯಾಗಿ ಮಾತನಾಡುವ ಬಿಗ್ ಬಾಸ್ ಸ್ಪರ್ಧಿಗಳಿಗೆ ವಾರ್ನಿಂಗ್ ಕೊಟ್ಟ ಅವಿನಾಶ್
ಚರ್ಚೆಗೆ ಗ್ರಾಸವಾಯ್ತು ಬಿಜೆಪಿ ಎಂಎಲ್​​ಗೆ ಸಚಿವ ಮಲ್ಲಿಕಾರ್ಜುನ್ ಬೈದ ಬೈಗುಳ
ಚರ್ಚೆಗೆ ಗ್ರಾಸವಾಯ್ತು ಬಿಜೆಪಿ ಎಂಎಲ್​​ಗೆ ಸಚಿವ ಮಲ್ಲಿಕಾರ್ಜುನ್ ಬೈದ ಬೈಗುಳ
ಒಂದೇ ಗೋರಿಗೆ ಹಿಂದೂ-ಮುಸ್ಲಿಂ ಪೂಜೆ: ಬೀದರ್​​ನಲ್ಲೊಂದು ಭಾವೈಕ್ಯತೆಯ ಜಾತ್ರೆ
ಒಂದೇ ಗೋರಿಗೆ ಹಿಂದೂ-ಮುಸ್ಲಿಂ ಪೂಜೆ: ಬೀದರ್​​ನಲ್ಲೊಂದು ಭಾವೈಕ್ಯತೆಯ ಜಾತ್ರೆ
ಚಾಮರಾಜನಗರದಲ್ಲಿ ಕಾಡುಗಳ್ಳರು ಮತ್ತೆ ಆ್ಯಕ್ಟಿವ್: ವಾರದಲ್ಲೇ ಎರಡು ಶಿಕಾರಿ
ಚಾಮರಾಜನಗರದಲ್ಲಿ ಕಾಡುಗಳ್ಳರು ಮತ್ತೆ ಆ್ಯಕ್ಟಿವ್: ವಾರದಲ್ಲೇ ಎರಡು ಶಿಕಾರಿ
ಸಿಎಂ ಡಿಕೆ ಶಿವಕುಮಾರ್​ ನಡೆಗೆ ಹೈಕೋರ್ಟ್‌ನಿಂದ ಪ್ರಶಂಸೆ
ಸಿಎಂ ಡಿಕೆ ಶಿವಕುಮಾರ್​ ನಡೆಗೆ ಹೈಕೋರ್ಟ್‌ನಿಂದ ಪ್ರಶಂಸೆ
ಸೌತ್ ರುಚೀಸ್ ಹೋಟೆಲ್ ಮೇಲೆ ಎಫ್​ಡಿಎ ದಾಳಿ
ಸೌತ್ ರುಚೀಸ್ ಹೋಟೆಲ್ ಮೇಲೆ ಎಫ್​ಡಿಎ ದಾಳಿ
ಇಡಿ ದಾಳಿ: ಬೆಂಗಳೂರಿನಲ್ಲಿ ಸತೀಶ್ ಜಾರಕಿಹೊಳಿ ಬೆಂಬಲಿಗರಿಂದ ಹೈಡ್ರಾಮಾ!
ಇಡಿ ದಾಳಿ: ಬೆಂಗಳೂರಿನಲ್ಲಿ ಸತೀಶ್ ಜಾರಕಿಹೊಳಿ ಬೆಂಬಲಿಗರಿಂದ ಹೈಡ್ರಾಮಾ!
ಕುಡುಕರ ಆಶ್ರಯತಾಣವಾಯ್ತು ಕೋಟೆನಾಡಿನ ಗುರುಭವನ
ಕುಡುಕರ ಆಶ್ರಯತಾಣವಾಯ್ತು ಕೋಟೆನಾಡಿನ ಗುರುಭವನ
ಕೆಪಿಎಸ್‌ಸಿ ಅಕ್ರಮ: ಕಲಬುರ್ಗಿಯ ಅಭ್ಯರ್ಥಿಗೆ ಶಾಕ್​​ ಕೊಟ್ಟ ಸಿಐಡಿ
ಕೆಪಿಎಸ್‌ಸಿ ಅಕ್ರಮ: ಕಲಬುರ್ಗಿಯ ಅಭ್ಯರ್ಥಿಗೆ ಶಾಕ್​​ ಕೊಟ್ಟ ಸಿಐಡಿ
ಸಿಡಬ್ಲ್ಯೂಆರ್‌ಸಿ ಆದೇಶ ಪ್ರಶ್ನಿಸಿ ಸುಪ್ರೀಂಗೆ ಹೋಗಲು ಸಿಎಂ ಸೂಚನೆ
ಸಿಡಬ್ಲ್ಯೂಆರ್‌ಸಿ ಆದೇಶ ಪ್ರಶ್ನಿಸಿ ಸುಪ್ರೀಂಗೆ ಹೋಗಲು ಸಿಎಂ ಸೂಚನೆ