ಸುಶಾಂತ್​ ಸಿಂಗ್​ ರಜಪೂತ್​ ಸಾವು ಪ್ರಕರಣ ಮತ್ತೆ ಜೀವಂತ; ಹೈದರಾಬಾದ್​​ನಲ್ಲಿ ನಟ ಸುಶಾಂತ್​ ಅಪಾರ್ಟ್​ಮೆಂಟ್​ ವಾಸಿ ಅರೆಸ್ಟ್

Sushant Singh Rajput death Case: ಕಳೆದ ವರ್ಷ ಮೃತಪಟ್ಟ ಸುಶಾಂತ್​ ಸಿಂಗ್​ ರಾಜಪುತ್​ ಸಾವಿನ ಪ್ರಕರಣದಲ್ಲಿ ಸಿದ್ಧಾರ್ಥ ಪಿಠಾಣಿ ಎಂಬ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು NCB ಅಧಿಕಾರಿಗಳು ತಿಳಿಸಿದ್ದಾರೆ.

ಸುಶಾಂತ್​ ಸಿಂಗ್​ ರಜಪೂತ್​ ಸಾವು ಪ್ರಕರಣ ಮತ್ತೆ ಜೀವಂತ; ಹೈದರಾಬಾದ್​​ನಲ್ಲಿ ನಟ ಸುಶಾಂತ್​ ಅಪಾರ್ಟ್​ಮೆಂಟ್​ ವಾಸಿ ಅರೆಸ್ಟ್
ಸುಶಾಂತ್​ ಸಿಂಗ್​ ರಾಜಪುತ್​ ಸಾವು ಪ್ರಕರಣ: ಹೈದರಾಬಾದ್​​ನಲ್ಲಿ ನಟ ಸುಶಾಂತ್​ನ​ ಸಹ ವಾಸಿ ಅರೆಸ್ಟ್
ಸಾಧು ಶ್ರೀನಾಥ್​

Updated on: May 28, 2021 | 1:09 PM

ಹೈದರಾಬಾದ್: ಅಕಾಲಿಕ ಸಾವು ಕಂಡ ಬಾಲಿವುಡ್​ ಯುವ ನಟ ಸುಶಾಂತ್​ ಸಿಂಗ್​ ರಜಪೂತ್​ ಸಾವಿನ ಪ್ರಕರಣ ಮತ್ತೆ ಜೀವ ಪಡೆದುಕೊಂಡಿದೆ. ನಟ ಸುಶಾಂತ್​ನ ಅಪಾರ್ಟ್​​ಮೆಂಟ್​​ನಲ್ಲಿ ವಾಸಿಸುತ್ತಿದ್ದ ಸಿದ್ಧಾರ್ಥ ಪಿಠಾಣಿ ಎಂಬ ವ್ಯಕ್ತಿಯನ್ನು ಮಾದಕವಸ್ತು ನಿಯಂತ್ರಣ ಬ್ಯೂರೋ ಪೊಲೀಸರು (NCB) ಹೈದರಾಬಾದ್​​ನಲ್ಲಿ ಇಂದು ಅರೆಸ್ಟ್ ಮಾಡಿದ್ದಾರೆ. ಕಳೆದ ವರ್ಷ ಮೃತಪಟ್ಟ ಸುಶಾಂತ್​ ಸಿಂಗ್​ ರಜಪೂತ್​​ ಸಾವಿನ ಪ್ರಕರಣದಲ್ಲಿ ಈತನನ್ನು ಬಂಧಿಸಲಾಗಿದೆ ಎಂದು NCB ಅಧಿಕಾರಿಗಳು ತಿಳಿಸಿದ್ದಾರೆ.

ಸಿಬಿಐ ಮತ್ತು NCB ಅಧಿಕಾರಿಗಳು ಈ ಹಿಂದೆಯೂ ಸುಶಾಂತ್ ಸಹ ವಾಸಿ ಸಿದ್ಧಾರ್ಥ ಪಿಠಾಣಿನನ್ನು ಅನೇಕ ಬಾರಿ ವಿಚಾರಣೆಗೊಳಪಡಿಸಿದ್ದರು. ಈ ಬಾರಿ ಸುಶಾಂತ್​ ಸಿಂಗ್​ ರಾಜಪುತ್​ ಸಾವಿಗೆ ಇನ್ನೇನು ಒಂದು ವರ್ಷ ತುಂಬುತ್ತಿರುವಾಗ ಹೈದರಾಬಾದಿನಲ್ಲಿ ಬಂಧಿಸಿದ್ದಾರೆ. ಕಳೆದ ವರ್ಷ ಜೂನ್​ 14ರಂದು ಮುಂಬೈನ ಬಾಂದ್ರಾ ಅಪಾರ್ಟ್​ಮೆಂಟ್ನಲ್ಲಿ ನಟ ಸುಶಾಂತ್​ ಸಿಂಗ್​ ರಜಪೂತ್​​ ಮೃತದೇಹ ಪತ್ತೆಯಾಗಿತ್ತು.

(Sushant Singh Rajput death Case: Siddharth Pithani the Sushant Singh flatmate Arrested in Hyderabad by NCB)

ಧೋನಿ ಪಾತ್ರಧಾರಿ ಸುಶಾಂತ್​, ಪ್ರತಿಷ್ಠಿತ ಸ್ಟ್ಯಾನ್​ಫರ್ಡ್​ ಶಿಕ್ಷಣ ತೊರೆಯಲು ಕಾರಣ ಆಕೆ..?!

Published On - 12:55 pm, Fri, 28 May 21

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us