AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆರಾಧ್ಯಾಳ ಆನ್​ಲೈನ್ ತರಗತಿಗಳಿಗೆ ಸಹಾಯ ಮಾಡುವವರು ಯಾರು?; ಅಮಿತಾಭ್ ಹಂಚಿಕೊಂಡರು ಅಚ್ಚರಿಯ ಮಾಹಿತಿ

Amitabh Bachchan: ಕೆಬಿಸಿ 13ರ ಇತ್ತೀಚಿನ ಸಂಚಿಕೆಯೊಂದರಲ್ಲಿ ಅಮಿತಾಭ್ ತಮ್ಮ ಮೊಮ್ಮಗಳಾದ ಆರಾಧ್ಯಾಳ ಆನ್​ಲೈನ್ ತರಗತಿಯ ಕುರಿತು ಮಾತನಾಡಿದ್ದಾರೆ. ಈ ಕುರಿತು ಅವರು ಹಂಚಿಕೊಂಡಿರುವ ಅಚ್ಚರಿಯ ಮಾಹಿತಿಗಳು ಇಲ್ಲಿವೆ.

ಆರಾಧ್ಯಾಳ ಆನ್​ಲೈನ್ ತರಗತಿಗಳಿಗೆ ಸಹಾಯ ಮಾಡುವವರು ಯಾರು?; ಅಮಿತಾಭ್ ಹಂಚಿಕೊಂಡರು ಅಚ್ಚರಿಯ ಮಾಹಿತಿ
ಐಶ್ವರ್ಯಾ, ಅಭಿಷೇಕ್, ಆರಾಧ್ಯಾ (ಎಡ ಚಿತ್ರ), ಅಮಿತಾಭ್, ಆರಾಧ್ಯಾ (ಬಲ ಚಿತ್ರ)
TV9 Web
| Edited By: |

Updated on: Sep 07, 2021 | 10:25 AM

Share

KBC 13: ಕೌನ್ ಬನೇಗಾ ಕರೋಡ್​ಪತಿಯ 13ನೇ ಸೀಸನ್​ ಭರ್ಜರಿಯಾಗಿ ಮೂಡಿಬರುತ್ತಿದ್ದು, ವೀಕ್ಷಕರಿಗೆ ಇಷ್ಟವಾಗುತ್ತಿದೆ. ಇದರಲ್ಲಿ ಭಾಗಿಯಾಗುವ ಸೆಲೆಬ್ರಿಟಿಗಳು, ಸಾಮಾನ್ಯರು ಹಲವು ಕುತೂಹಲಕರ ಮಾಹಿತಿಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಅವರೊಂದಿಗೆ ಮಾತನಾಡುವಾಗ ನಿರೂಪಕ ಅಮಿತಾಭ್ ಬಚ್ಚನ್ ಕೂಡ ಹಲವು ಅಚ್ಚರಿಯ ಸಂಗತಿಗಳನ್ನು ಹೇಳಿಕೊಳ್ಳುತ್ತಾರೆ. ಇತ್ತೀಚೆಗೆ ನಡೆದ ಸಂಚಿಕೆಯಲ್ಲಿ ಅಮಿತಾಭ್, ಸ್ಪರ್ಧಿಯೊಂದಿಗೆ ಆನ್​ಲೈನ್ ತರಗತಿಗಳ ಕುರಿತಾಗಿ ಮಾತನಾಡುತ್ತಾ, ಅವರ ಮೊಮ್ಮಗಳು ಆರಾಧ್ಯ ಬಚ್ಚನ್​ಗೆ ಆನ್​ಲೈನ್ ಕ್ಲಾಸ್​ಗೆ ಯಾರು ಸಹಾಯ ಮಾಡುತ್ತಾರೆ ಎಂಬುದನ್ನು ತಿಳಿಸಿದ್ದಾರೆ.

ಕೆಬಿಸಿ 13ರ ಇತ್ತೀಚಿನ ಸಂಚಿಕೆಯಲ್ಲಿ ಗ್ವಾಲಿಯರ್​ನ ಶಾಲೆಯೊಂದರ ಮುಖ್ಯೋಪಾಧ್ಯಾಯೆಯಾದ ಕಲ್ಪನಾ ಸಿಂಗ್ ಭಾಗವಹಿಸಿದ್ದರು. ಅವರೊಂದಿಗೆ ಮಾತನಾಡುವಾಗ ಅಮಿತಾಭ್, ಕೊರೊನಾ ಕಾಲಘಟ್ಟದ ನಂತರ ರೂಪುಗೊಂಡಿರುವ ಹೊಸ ಪದ್ಧತಿಯಾದ ಶಾಲಾ ಮಕ್ಕಳ ಆನ್​ಲೈನ್ ತರಗತಿಗಳ ಕುರಿತು ಚರ್ಚಿಸಿದ್ದಾರೆ. ಆ ಸಂದರ್ಭದಲ್ಲಿ ಅಮಿತಾಭ್ ತಮ್ಮ ಮನೆಯ ಅನುಭವವನ್ನು ಹೇಳಿಕೊಂಡಿದ್ದಾರೆ.

ಆರಾಧ್ಯಾಳ ಆನ್​ಲೈನ್ ತರಗತಿಗೆ ಪೋಷಕರಾದ ಐಶ್ವರ್ಯಾ ರೈ ಹಾಗೂ ಅಭಿಷೇಕ್ ಬಚ್ಚನ್ ಸಹಾಯ ಮಾಡುತ್ತಾರಂತೆ. ‘‘ನಮ್ಮ ಮನೆಯಲ್ಲೂ ಆನ್​ಲೈನ್ ತರಗತಿಗೆ ಹಾಜರಾಗುವ ಪುಟಾಣಿಯೊಬ್ಬಳಿದ್ದಾಳೆ. ಇಡೀ ದಿನವೂ ಅವಳು ಕ್ಲಾಸ್​ಗಳಲ್ಲಿ ಬ್ಯುಸಿಯಾಗಿರುತ್ತಾಳೆ. ಪೋಷಕರು ಅವಳಿಗೆ ಕಂಪ್ಯೂಟರ್ ಬಳಸುವ ಕುರಿತು, ಪ್ರೆಸೆಂಟೇಶನ್​ಗಳನ್ನು ಮಾಡುವುದರ ಕುರಿತು ಹೇಳಿಕೊಡುತ್ತಾರೆ’’ ಎಂದಿದ್ದಾರೆ ಅಮಿತಾಭ್.

‘‘ಕೆಲವೊಮ್ಮೆ ಅವಳು ಕಂಪ್ಯೂಟರ್ ಮುಂದೆ ಕುಳಿತು ಯೋಗ ಕ್ಲಾಸ್​ನಲ್ಲಿ ಭಾಗಿಯಾಗಿರುವುದನ್ನೂ ನೋಡಿ ಅಚ್ಚರಿಗೊಂಡಿದ್ದೇನೆ. ನಾನು ಕೂಡ ಆರಾಧ್ಯಾಳ ಕೆಲವು ತರಗತಿಗಳನ್ನು ಕೇಳಿದ್ದು, ಅವುಗಳ ವಾತಾವರಣ ಉತ್ತಮವಾಗಿದೆ’‘ ಎಂದಿದ್ದಾರೆ ಬಾಲಿವುಡ್​ ಬಿಗ್​ಬಿ. 2019ರಲ್ಲಿ ನೀಡಿದ್ದ ಸಂದರ್ಶನವೊಂದರಲ್ಲಿ ಆರಾಧ್ಯಾ ಕೆಬಿಸಿ ಶೋವನ್ನು ವೀಕ್ಷಿಸುವುದರ ಕುರಿತು ಅಮಿತಾಭ್ ಮಾತನಾಡಿದ್ದರು. ‘‘ಪತ್ನಿ ಜಯಾ ಬಚ್ಚನ್ ಒಂದು ದಿನವೂ ಶೋ ತಪ್ಪಿಸುವುದಿಲ್ಲ. ಐಶ್ವರ್ಯಾ ಹಾಗೂ ಶ್ವೇತಾ(ಅಮಿತಾಭ್ ಮಗಳು)- ಈರ್ವರೂ ಪೈಪೋಟಿಯಲ್ಲಿ ಉತ್ತರಗಳನ್ನು ಹೇಳುತ್ತಾ ಶೋವನ್ನು ಎಂಜಾಯ್ ಮಾಡುತ್ತಾರೆ. ಪುಟಾಣಿ ಆರಾಧ್ಯಾ ಕೂಡ ಕೆಬಿಸಿಯನ್ನು ಇಷ್ಟಪಟ್ಟು ನೋಡುತ್ತಾಳೆ’’ ಎಂದಿದ್ದರು ಅಮಿತಾಭ್.

ಕೌನ್ ಬನೇಗಾ ಕರೋಡ್​ಪತಿ ಚೆನ್ನಾಗಿ ಮೂಡಿಬರುತ್ತಿದ್ದು, ಕಳೆದ ವಾರದ ಸೆಲೆಬ್ರಿಟಿ ಶೋನಲ್ಲಿ ಸೌರವ್ ಗಂಗೂಲಿ ಹಾಗೂ ವೀರೇಂದ್ರ ಸೆಹ್ವಾಗ್ ಭಾಗವಹಿಸಿದ್ದರು. ಪ್ರತೀ ಶುಕ್ರವಾರ ಮೂಡಿಬರುವ ಸೆಲೆಬ್ರಿಟಿ ಸಂಚಿಕೆಯ ಕಾರ್ಯಕ್ರಮದಲ್ಲಿ ಈ ವಾರ, ಬಾಲಿವುಡ್​ನ ಖ್ಯಾತ ನಟಿ ದೀಪಿಕಾ ಪಡುಕೋಣೆ ಹಾಗೂ ಫರ್ಹಾ ಖಾನ್ ಭಾಗವಹಿಸಿದ ಸಂಚಿಕೆ ಪ್ರಸಾರವಾಗಲಿದೆ. ಈಗಾಗಲೇ ಇದರ ಪ್ರೊಮೊಗಳು ವೀಕ್ಷಕರಲ್ಲಿ ಕುತೂಹಲ ಮೂಡಿಸಿವೆ.

ಇದನ್ನೂ ಓದಿ:

ಸ್ವಂತ ತಮ್ಮನನ್ನೇ ಬೆಳೆಸಲಿಲ್ಲ ಆಮಿರ್​ ಖಾನ್​; ನಟನೆ ಬರಲ್ಲ ಅಂತ ಬೈಯಿಸಿಕೊಂಡಿದ್ದ ಫೈಸಲ್​ ಖಾನ್​​ ಬಿಚ್ಚಿಟ್ಟ ರಹಸ್ಯ

‘ಹಾಗಲ್ಲ ಸರ್​..’ ಎಂದು ಅಮಿತಾಭ್​ಗೆ ನಟನೆ ಹೇಳಿಕೊಟ್ಟ ದೀಪಿಕಾ, ಫರ್ಹಾ ಖಾನ್​; ವಿಡಿಯೋ ವೈರಲ್​

(Amitabh Bachchan reveals who helps Aradhya with her online classes)

Follow Us
ಯುಎಇ ದೇಶಕ್ಕೆ ರಫ್ತಾಗಲಿವೆ ಬ್ರಹ್ಮೋಸ್, ಆಕಾಶ್ ಕ್ಷಿಪಣಿಗಳು!
ಯುಎಇ ದೇಶಕ್ಕೆ ರಫ್ತಾಗಲಿವೆ ಬ್ರಹ್ಮೋಸ್, ಆಕಾಶ್ ಕ್ಷಿಪಣಿಗಳು!
ಬೆಂಗಳೂರು ರಸ್ತೆ ಅಭಿವೃದ್ಧಿ ಅನುದಾನದ ಬಗ್ಗೆ ತೇಜಸ್ವಿ ಸೂರ್ಯ ವಾಗ್ದಾಳಿ
ಬೆಂಗಳೂರು ರಸ್ತೆ ಅಭಿವೃದ್ಧಿ ಅನುದಾನದ ಬಗ್ಗೆ ತೇಜಸ್ವಿ ಸೂರ್ಯ ವಾಗ್ದಾಳಿ
ಮುಮ್ಮಡಿ ನಿರ್ವಾಣ ಸ್ವಾಮೀಜಿ ಅಂತಿಮ ದರ್ಶನದ ವೇಳೆ ಸಿಎಂ ಡಿಕೆಶಿ ಭಾವುಕ
ಮುಮ್ಮಡಿ ನಿರ್ವಾಣ ಸ್ವಾಮೀಜಿ ಅಂತಿಮ ದರ್ಶನದ ವೇಳೆ ಸಿಎಂ ಡಿಕೆಶಿ ಭಾವುಕ
ಧರ್ಮಸ್ಥಳದಲ್ಲಿ ಶಾಸಕರ ಆಣೆ ಪ್ರಮಾಣ ನಿರ್ಧಾರದಿಂದ ಹಿಂದೆ ಸರಿದ ಬಿಜೆಪಿ
ಧರ್ಮಸ್ಥಳದಲ್ಲಿ ಶಾಸಕರ ಆಣೆ ಪ್ರಮಾಣ ನಿರ್ಧಾರದಿಂದ ಹಿಂದೆ ಸರಿದ ಬಿಜೆಪಿ
‘ಹೀರೋಗಳು ವರ್ಷಕ್ಕೆ ಒಂದಾದರೂ ಸಿನಿಮಾ ಕೊಡಬೇಕು, ಆಗ ಇಂಡಸ್ಟ್ರಿ ಉಳಿಯುತ್ತೆ’
‘ಹೀರೋಗಳು ವರ್ಷಕ್ಕೆ ಒಂದಾದರೂ ಸಿನಿಮಾ ಕೊಡಬೇಕು, ಆಗ ಇಂಡಸ್ಟ್ರಿ ಉಳಿಯುತ್ತೆ’
ರಾಕಸಕೊಪ್ಪ ಡ್ಯಾಂ ಖಾಲಿ: ಬೆಳಗಾವಿ ನಗರದ ಕುಡಿಯುವ ನೀರಿನ ಸಮಸ್ಯೆ ತೀವ್ರ
ರಾಕಸಕೊಪ್ಪ ಡ್ಯಾಂ ಖಾಲಿ: ಬೆಳಗಾವಿ ನಗರದ ಕುಡಿಯುವ ನೀರಿನ ಸಮಸ್ಯೆ ತೀವ್ರ
ಬಿಳಿಗಿರಿರಂಗನಾಥಸ್ವಾಮಿ ಬೆಟ್ಟದಲ್ಲಿ ಒಂಟಿ ಸಲಗದ ಅಟಾಟೋಪ
ಬಿಳಿಗಿರಿರಂಗನಾಥಸ್ವಾಮಿ ಬೆಟ್ಟದಲ್ಲಿ ಒಂಟಿ ಸಲಗದ ಅಟಾಟೋಪ
ಕನಕಪುರ ದೇಗುಲ ಮಠದ ಹಿರಿಯ ಶ್ರೀ ಮುಮ್ಮಡಿ ನಿರ್ವಾಣ ಸ್ವಾಮೀಜಿ ಲಿಂಗೈಕ್ಯ
ಕನಕಪುರ ದೇಗುಲ ಮಠದ ಹಿರಿಯ ಶ್ರೀ ಮುಮ್ಮಡಿ ನಿರ್ವಾಣ ಸ್ವಾಮೀಜಿ ಲಿಂಗೈಕ್ಯ
ನಿರ್ಮಲಾನಂದನಾಥಶ್ರೀ ಭೇಟಿಯಾದ ಸಿಎಂ ಡಿಕೆ ಶಿವಕುಮಾರ್
ನಿರ್ಮಲಾನಂದನಾಥಶ್ರೀ ಭೇಟಿಯಾದ ಸಿಎಂ ಡಿಕೆ ಶಿವಕುಮಾರ್
ಇಂದು ಈ ರಾಶಿಯವರಿಗೆ ಹಳೆಯ ಖಾಯಿಲೆಗಳು ಮರುಕಳಿಸುವ ಸಾಧ್ಯತೆ
ಇಂದು ಈ ರಾಶಿಯವರಿಗೆ ಹಳೆಯ ಖಾಯಿಲೆಗಳು ಮರುಕಳಿಸುವ ಸಾಧ್ಯತೆ