
‘ಅಮೃತಧಾರೆ’ ಧಾರಾವಾಹಿಯಲ್ಲಿ ಸಾಕಷ್ಟು ತಿರುವುಗಳು ಬರುತ್ತಿವೆ. ಇದರಲ್ಲಿ ಜಯದೇವ್ ವಿಷಯ ಕೂಡ ಒಂದು. ಆತ, ಸದಾ ಒಂದಿಲ್ಲೊಂದು ವಿಷಯಕ್ಕೆ ಗೌತಮ್ ವಿರುದ್ಧ ಸೇಡು ತೀರಿಸಿಕೊಳ್ಳಲು ಮುಂದಾಗುತ್ತಿದ್ದ. ಈ ವಿಷಯದಲ್ಲಿ ಈಗಾಗಲೇ ಸಾಕಷ್ಟು ಪ್ರಯತ್ನ ನಡೆದಿದೆ. ಆದರೆ, ಅದು ಸಾಧ್ಯವೇ ಆಗುತ್ತಾ ಇರಲಿಲ್ಲ. ಈಗ ಗೌತಮ್ ಅವರು ಜಯದೇವ್ಗೆ ಶಾಕ್ ಕೊಟ್ಟಿದ್ದಾನೆ. ಲೋಗೋ ವಿಷಯದ ಪ್ರಕರಣದಲ್ಲಿ ಎಲ್ಲವೂ ಗೌತಮ್ ಪರ ಆಗಿದೆ.
ಆಸ್ತಿ ವಿಷಯಕ್ಕೆ ಗೌತಮ್ ಸಾಕಷ್ಟು ಕಷ್ಟಪಟ್ಟಿದ್ದ. ಆದರೆ, ಇದನ್ನು ಕಬಳಿಸಿಕೊಂಡ ಜಯದೇವ್. ಆ ಬಳಿಕ ಅವನ ಆಸೆ ಈಡೇರಲೇ ಇಲ್ಲ. ಆತ ಬೇರೆಯದೇ ಪ್ಲ್ಯಾನ್ ಮಾಡಿದ. ಗೌತಮ್ಗೆ ತೊಂದರೆಕೊಡಬೇಕು ಎಂದು ಪ್ರಯತ್ನಿಸಿದ. ಈಗ ಗೌತಮ್ ಬಿಸ್ನೆಸ್ ಆರಂಭಿಸಿದ್ದಾನೆ ಮತ್ತು ಈ ಬಿಸ್ನೆಸ್ಗೆ ದೀವಾನ್ ಕಂಪನಿಯ ಲೋಗೋ ಬಳಕೆ ಮಾಡಿದ್ದಾನೆ.
ಇದು ಚರ್ಚೆಯ ವಿಷಯ ಆಯಿತು. ಜಯದೇವ್ ಲೋಗೋ ತನ್ನದು ಎಂದು ಬೀಗುತ್ತಿದ್ದ. ಹೀಗಿರುವಾಗಲೇ ದೀವಾನ್ ಕಂಪನಿಯ ಲೋಗೋ ಗೌತಮ್ ಹೆಸರಿಗೆ ನೋಂದಣಿ ಆಗಿರುವ ಪತ್ರ ಸಿಕ್ಕಿತು. ಈ ಪತ್ರವನ್ನು ಜಯದೇವ್ ತಮ್ಮ ಪಾರ್ಥ ಗೌತಮ್ಗೆ ನೀಡಿದ್ದಾನೆ. ಈ ಮೂಲಕ ಲೋಗೋ ಗೌತಮ್ ಹೆಸರಲ್ಲಿ ಇದೆ ಎಂದು ಸಾಬೀತಾಗಿದೆ. ಇದರಿಂದ ಜಯದೇವ್ಗೆ ದೊಡ್ಡ ಮುಖಭಂಗ ಆಗಿದೆ. ಮುಂದೇನಾಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ.
ಇದನ್ನೂ ಓದಿ: ‘ಅಮೃತಧಾರೆ’: ದೊಡ್ಡ ಸಾಧನೆ ಮಾಡಿದ ಮಲ್ಲಿ; ಜಯದೇವ್ ಬಾಳಲ್ಲಿ ಕತ್ತಲು
ಜಯದೇವ್ ಸದಾ ಕೆಟ್ಟದನ್ನು ಮಾಡಲು ಪ್ರಯತ್ನಿಸುತ್ತಲೇ ಇರುವವನು ಎಂಬುದು ಗೊತ್ತೇ ಇದೆ. ಈಗಲೂ ಆತ ಹಾಗೆಯೇ ಮಾಡುವ ಎಲ್ಲಾ ಸಾಧ್ಯತೆ ಇದೆ. ಆದರೆ, ಹೀರೋ ಎಂದಮೇಲೆ ಗೆಲುವು ಆತನ ಕಡೆಗೆ ಒಲಿಯಲೇ ಬೇಕಲ್ಲವೇ? ಹೀಗಾಗಿ. ಪ್ರತಿ ಹಂತದಲ್ಲೂ ಗೌತಮ್ಗೆ ಗೆಲುವು ಸಿಗುತ್ತಾ ಹೋಗುತ್ತಿದೆ ಎಂಬುದು ವಿಶೇಷ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.