AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಅಮೃತಧಾರೆ’: ದೊಡ್ಡ ಸಾಧನೆ ಮಾಡಿದ ಮಲ್ಲಿ; ಜಯದೇವ್ ಬಾಳಲ್ಲಿ ಕತ್ತಲು

ಅಮೃತಧಾರೆ ಧಾರಾವಾಹಿಯಲ್ಲಿ ಮಹತ್ವದ ತಿರುವು! ಮಲ್ಲಿಗೆ ಮೋಸ ಮಾಡಲು ಜಯದೇವ್ ರೂಪಿಸಿದ್ದ ಸಂಚು ತಿರುಮಂತ್ರವಾಗಿದೆ. ಸುನೀಲ್ ಮಲ್ಲಿಗೆಯನ್ನು ನಿಜವಾಗಿ ಪ್ರೀತಿಸಿ ಮದುವೆಯಾಗಿದ್ದಾನೆ. ಇತ್ತ ಮಲ್ಲಿಗೆ ಸಿವಿಲ್ ಪರೀಕ್ಷೆಯಲ್ಲಿ ಉತ್ತೀರ್ಣಳಾಗಿ ಸರ್ಕಾರಿ ನೌಕರಳಾಗಿದ್ದಾಳೆ. ಹೀಗಾಗಿ, ಆಕೆಗೆ ತೊಂದರೆ ನೀಡಲು ಹೊರಟರೆ ಜಯದೇವ್ ತಾನೇ ಸಂಕಷ್ಟಕ್ಕೆ ಸಿಲುಕುವ ಪರಿಸ್ಥಿತಿ ಬಂದಿದೆ.

‘ಅಮೃತಧಾರೆ’: ದೊಡ್ಡ ಸಾಧನೆ ಮಾಡಿದ ಮಲ್ಲಿ; ಜಯದೇವ್ ಬಾಳಲ್ಲಿ ಕತ್ತಲು
ಅಮೃತಧಾರೆ
 ಶ್ರೀಲಕ್ಷ್ಮೀ ಎಚ್
| Edited By: |

Updated on: Apr 03, 2026 | 7:57 AM

Share

ಅಮೃತಧಾರೆ (Amruthadhaare) ಧಾರವಾಹಿಯು ಒಂದು ಮಹತ್ವದ ಘಟ್ಟ ತಲುಪಿದೆ ಎಂದರೂ ತಪ್ಪಾಗಲಾರದು. ಏಕೆಂದರೆ ಮಲ್ಲಿಗೆ ಮೋಸ ಮಾಡಬೇಕು ಎಂಬುದು ಜಯದೇವ್ ಅಲೋಚನೆ ಆಗಿತ್ತು ಮತ್ತು ಆ ಆಲೋಚನೆ ತಪ್ಪಾಯಿತು. ಇದು ಅವನಿಗೆ ತಿರುಮಂತ್ರವಾಗಿದೆ ಎಂದರೂ ತಪ್ಪಾಗಲಾರದು. ಈಗ ‘ಅಮೃತಧಾರೆ’ ಧಾರಾವಾಹಿ ಹೊಸ ತಿರುವನ್ನು ಪಡೆದುಕೊಂಡು ಸಾಗಲು ರೆಡಿ ಆಗಿದೆ. ಆ ಬಗ್ಗೆ ಇಲ್ಲಿ ನೋಡೋಣ.

ಮಲ್ಲಿಗೆ ಮೋಸ ಮಾಡಬೇಕು ಎಂಬುದು ಜಯದೇವ್ ಆಲೋಚನೆ ಆಗಿತ್ತು. ಇದಕ್ಕಾಗಿ ಸುನೀಲ್ ಎಂಬ ವ್ಯಕ್ತಿಯನ್ನು ಮುಂದಕ್ಕೆ ಬಿಡಲಾಯಿತು. ಆತ ಮೋಸ ಮಾಡುವ ಆಲೋಚನೆಯಲ್ಲಿ ಬಂದಿದ್ದ. ಆದರೆ, ಮಲ್ಲಿ ಮೇಲೆ ನಿಜವಾದ ಪ್ರೀತಿ ಆಯಿತು. ಹೀಗಾಗಿ, ಜಯದೇವ್ಗೆ ಮೋಸ ಮಾಡುವ ನಿರ್ಧಾರಕ್ಕೆ ಬಂದನು.

ಮದುವೆ ಮನೆಯಿಂದ ಅರ್ಧಕ್ಕೆ ಓಡಿ ಬರುವಂತೆ ಜಯದೇವ್ ಹೇಳಿದ್ದ. ಇದಕ್ಕೆ ಒಪ್ಪಿಗೆ ಸೂಚಿಸಿದ್ದ ಸುನೀಲ್. ಆದರೆ, ಹಾಗಾಗಲಿಲ್ಲ. ಆತ ಮದುವೆ ಆಗುವ ನಿರ್ಧಾರಕ್ಕೆ ಬಂದ. ಆಗಲೂ ಆತ ಸಬೂಬು ನೀಡಿದನು. ನಾನು ಮದುವೆ ಆಗುತ್ತೇನೆ ಮತ್ತು ಆ ಬಳಿಕ ಅವಳನ್ನು ಬಿಟ್ಟು ಹೋಗುತ್ತೇನೆ ಎಂದು ಆತ ಹೇಳಿದ್ದ. ಅಂತೆಯೇ ಮದುವೆ ಆದ. ಆ ಬಳಿಕ ಮಲ್ಲಿ ಜೊತೆ ಜಯದೇವ್ ಮನೆಗೆ ಬಂದ. ಇದರಿಂದ ಖುಷಿಯಾದ ಜಯದೇವ್ ಆಕೆಗೆ ಬಾಯಿಗೆ ಬಂದಂತೆ ಬೈದ. ಇದೆಲ್ಲ ನಂದೇ ಪ್ಲ್ಯಾನ್ ಎಂದು ಹೆಮ್ಮೆಯಿಂದ ಬೀಗಿದ.

ಇದನ್ನೂ ಓದಿ: ಅಮೃತಧಾರೆ: ಹೆಣ್ಣಿನ ಕಣ್ಣೀರು ಯುದ್ಧದ ಆರಂಭ; ಜೆಡಿಗೆ ಮಲ್ಲಿಯ ಎಚ್ಚರಿಕೆ

ಆದರೆ ಕೊನೆಗೆ ಮೋಸ ಹೋಗಿದ್ದು ತಾನೇ ಎಂಬುದು ಆತನಿಗೆ ಗೊತ್ತಾಗಿದೆ. ನಿಜವಾಗಿ ನಡೆದಿದ್ದು ಏನು ಎಂಬುದನ್ನು ವಿವರಿಸಲಾಗಿದೆ. ಈ ಎಲ್ಲಾ ಕಾರಣದಿಂದ ಆತ ಶಾಕ್ ಆಗಿದ್ದಾನೆ. ಇದೇ ವೇಳೆ ಮಲ್ಲಿ ಕಡೆಯಿಂದ ಗುಡ್ ನ್ಯೂಸ್ ಸಿಕ್ಕಿದೆ. ಆಕೆ ಸಿವಿಲ್ ಪರೀಕ್ಷೆಯಲ್ಲಿ ಪಾಸ್ ಆಗಿದ್ದಾಳೆ. ಅಂದರೆ ಇನ್ನು ಆಕೆ ಸರ್ಕಾರಿ ನೌಕರಿಯಲ್ಲಿ ಇರುವವಳು. ಇಷ್ಟು ದಿನ ಆಕೆಯ ಮೇಲೆ ಸ್ಕೆಚ್ ಹಾಕಿದಾಗ ಆಕೆ ಸಾಮಾನ್ಯ ವ್ಯಕ್ತಿ ಆಗಿದ್ದಳು. ಆದರೆ, ಈಗ ಆಕೆ ಸರ್ಕಾರಿ ನೌಕರಳಾದ್ದರಿಂದ ಆಕೆಯನ್ನು ಮುಟ್ಟಲು ಬಂದರೆ ಜಯದೇವ್ ಸಾಕಷ್ಟು ತೊಂದರೆ ಎದುರಿಸಬೇಕಾಗುತ್ತದೆ. ಇದರಿಂದ ಆತನ ಬಾಳಲ್ಲಿ ಕತ್ತಲು ಬರಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us