ನಂಗೆ ಹಣ ಅಲ್ಲ, ಧರ್ಮ ಮುಖ್ಯ ಎಂದು ಬಿಗ್ ಬಾಸ್​ಗೆ ಬೈದಿದ್ದ ಅಧ್ಯಾತ್ಮ ಗುರು ದೊಡ್ಮನೆಗೆ ಎಂಟ್ರಿ

ಅಧ್ಯಾತ್ಮ ವಿಚಾರಗಳಿಂದ ಅನಿರುದ್ಧ್ ಆಚಾರ್ಯ ಅವರು ಸಾಕಷ್ಟು ಸುದ್ದಿ ಆಗಿದ್ದರು. ಅವರ ಹಲವು ವಿಡಿಯೋಗಳು ಇತ್ತೀಚೆಗೆ ವೈರಲ್ ಆಗಿದ್ದವು. ಈ ವಿಡಿಯೋಗಳಲ್ಲಿ ಅವರು ಸನಾತನ ಧರ್ಮ, ಧರ್ಮದ ವಿಶೇಷತೆಗಳ ಬಗ್ಗೆ ಮಾತನಾಡಿದ್ದರು. ಅವರು ‘ಬಿಗ್ ಬಾಸ್​’ಗೆ ಎಂಟ್ರಿ ಕೊಟ್ಟು ಟ್ರೋಲ್ ಆಗಿದ್ದಾರೆ.

ನಂಗೆ ಹಣ ಅಲ್ಲ, ಧರ್ಮ ಮುಖ್ಯ ಎಂದು ಬಿಗ್ ಬಾಸ್​ಗೆ ಬೈದಿದ್ದ ಅಧ್ಯಾತ್ಮ ಗುರು ದೊಡ್ಮನೆಗೆ ಎಂಟ್ರಿ
ಅನಿರುದ್ಧ ಆಚಾರ್ಯ
Follow us
|

Updated on: Oct 07, 2024 | 10:30 AM

ಬಿಗ್ ಬಾಸ್​ಗೆ ಬರಲ್ಲ ಎಂದು ಹೇಳಿಕೊಂಡು ಈ ಮನೆಗೆ ಹೋದವರು ಅನೇಕರಿದ್ದಾರೆ. ಅಲ್ಲಿ ದುಡ್ಡು ಸಿಗುತ್ತದೆ ಅನ್ನೋದು ಒಂದಾದರೆ, ದುಡ್ಡಿನ ಜೊತೆಗೆ ಜನಪ್ರಿಯತೆ ಕೂಡ ಹೆಚ್ಚುತ್ತದೆ. ಕೆಲವರಿಗೆ ಬಿಗ್ ಬಾಸ್​ಮನೆಯಲ್ಲಿ ಜಗಳ ಆಗುತ್ತದೆ ಎನ್ನುವ ಭಯ ಇರುತ್ತದೆ. ಇದೆಲ್ಲವನ್ನೂ ಮೀರಿ ಕೆಲವರು ಈ ಮನೆಗೆ ಹೋಗುತ್ತಾರೆ. ಈ ಮೊದಲು ಬಿಗ್ ಬಾಸ್ ಮನೆಯ ಬಗ್ಗೆ ಆತಂಕ ಹೊರಹಾಕಿದ್ದ ಆಧ್ಯಾತ್ಮ ಗುರು ಅನಿರುದ್ಧ್​ ಆಚಾರ್ಯ ಅವರು ದೊಡ್ಮನೆಗೆ ಬಂದಿದ್ದಾರೆ. ಅವರ ಆಗಮನ ಅನೇಕರಿಗೆ ಶಾಕಿಂಗ್ ಎನಿಸಿದೆ. ಈ ವಿಚಾರಕ್ಕೆ ಅವರು ಟ್ರೋಲ್ ಕೂಡ ಆಗಿದ್ದಾರೆ.

ಅಧ್ಯಾತ್ಮ ವಿಚಾರಗಳಿಂದ ಅನಿರುದ್ಧ್ ಆಚಾರ್ಯ ಅವರು ಸಾಕಷ್ಟು ಸುದ್ದಿ ಆಗಿದ್ದರು. ಅವರ ಹಲವು ವಿಡಿಯೋಗಳು ಇತ್ತೀಚೆಗೆ ವೈರಲ್ ಆಗಿದ್ದವು. ಈ ವಿಡಿಯೋಗಳಲ್ಲಿ ಅವರು ಸನಾತನ ಧರ್ಮ, ಧರ್ಮದ ವಿಶೇಷತೆಗಳ ಬಗ್ಗೆ ಮಾತನಾಡಿದ್ದರು. ಇದರ ಜೊತೆಗೆ ಅರು ಬಿಗ್ ಬಾಸ್​ಗೆ ಬಾಯಿಗೆ ಬಂದಂತೆ ಬೈದಿದ್ದರು. ಈಗ ಅವರು ‘ಬಿಗ್ ಬಾಸ್ ಹಿಂದಿ ಸೀಸನ್ 18’ಕ್ಕೆ ಎಂಟ್ರಿ ಪಡೆದಿದ್ದಾರೆ. ಇದು ಅನೇಕರಿಗೆ ಅಚ್ಚರಿ ಎನಿಸಿದೆ.

‘ಬಿಗ್ ಬಾಸ್​ನಿಂದ​ ನನಗೆ ಆಫರ್ ಬಂದಿತ್ತು. ಕೋಟಿ ಕೊಡೋಕೆ ರೆಡಿ ಇದ್ದರು. ಆದರೆ, ನಾನು ಆಫರ್ ಒಪ್ಪಿಲ್ಲ. ಅದು ನಮ್ಮ ಸಂಸ್ಕೃತಿಗೆ ಮ್ಯಾಚ್ ಆಗಲ್ಲ. ಅಲ್ಲಿರೋರಿಗೆ ಸಂಸ್ಕೃತಿ ಇರಲ್ಲ. ಬಾಯಿಗೆ ಬಂದಂತೆ ಬಯ್ಯುತ್ತಾರೆ. ನಾನು ಅಲ್ಲಿ ಹೋಗೋದು ಸರಿ ಆಗಲ್ಲ. ಕೋಟಿ ರೂಪಾಯಿ ಆಫರ್ ಎಂದಾಗ ಅದನ್ನು ನಾನು ಮಾಡಬಹುದಿತ್ತು. ಆದರೆ, ಹಣಕ್ಕಿಂತ ಸಂಸ್ಕೃತಿ, ಧರ್ಮ ಮುಂದಿದೆ’ ಎಂದು ಅವರು ಈ ಮೊದಲು ಹೇಳಿಕೊಂಡಿದ್ದರು.

ಇದನ್ನೂ ಓದಿ: ‘ಬಿಗ್ ಬಾಸ್ ಅನ್ನ ತಿಂದವನಿಗೆ ಆ ಶೋ ಬಗ್ಗೆ ನಿಯತ್ತಿಲ್ಲ’; ಜಗದೀಶ್ ವಿರುದ್ಧ ಛೀಮಾರಿ 

ಈಗ ಅವರು ‘ಹಿಂದಿ ಬಿಗ್ ಬಾಸ್ ಸೀಸನ್ 18’ರ ಸ್ಪರ್ಧಿ ಆಗಿದ್ದಾರೆ. ಅವರ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ನಡೆಯುತ್ತಿದೆ. ಹಣಕ್ಕಾಗಿ ಅವರು ದೊಡ್ಮನೆಗೆ ಕಾಲಿಟ್ಟರೇ ಎನ್ನುವ ಪ್ರಶ್ನೆ ಮೂಡಿದೆ. ಅವರನ್ನು ಟೀಕಿಸುವ ಕೆಲಸ ಸೋಶಿಯಲ್ ಮೀಡಿಯಾದಲ್ಲಿ ಆಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.