AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಂಗೆ ಹಣ ಅಲ್ಲ, ಧರ್ಮ ಮುಖ್ಯ ಎಂದು ಬಿಗ್ ಬಾಸ್​ಗೆ ಬೈದಿದ್ದ ಅಧ್ಯಾತ್ಮ ಗುರು ದೊಡ್ಮನೆಗೆ ಎಂಟ್ರಿ

ಅಧ್ಯಾತ್ಮ ವಿಚಾರಗಳಿಂದ ಅನಿರುದ್ಧ್ ಆಚಾರ್ಯ ಅವರು ಸಾಕಷ್ಟು ಸುದ್ದಿ ಆಗಿದ್ದರು. ಅವರ ಹಲವು ವಿಡಿಯೋಗಳು ಇತ್ತೀಚೆಗೆ ವೈರಲ್ ಆಗಿದ್ದವು. ಈ ವಿಡಿಯೋಗಳಲ್ಲಿ ಅವರು ಸನಾತನ ಧರ್ಮ, ಧರ್ಮದ ವಿಶೇಷತೆಗಳ ಬಗ್ಗೆ ಮಾತನಾಡಿದ್ದರು. ಅವರು ‘ಬಿಗ್ ಬಾಸ್​’ಗೆ ಎಂಟ್ರಿ ಕೊಟ್ಟು ಟ್ರೋಲ್ ಆಗಿದ್ದಾರೆ.

ನಂಗೆ ಹಣ ಅಲ್ಲ, ಧರ್ಮ ಮುಖ್ಯ ಎಂದು ಬಿಗ್ ಬಾಸ್​ಗೆ ಬೈದಿದ್ದ ಅಧ್ಯಾತ್ಮ ಗುರು ದೊಡ್ಮನೆಗೆ ಎಂಟ್ರಿ
ಅನಿರುದ್ಧ ಆಚಾರ್ಯ
ರಾಜೇಶ್ ದುಗ್ಗುಮನೆ
|

Updated on: Oct 07, 2024 | 10:30 AM

Share

ಬಿಗ್ ಬಾಸ್​ಗೆ ಬರಲ್ಲ ಎಂದು ಹೇಳಿಕೊಂಡು ಈ ಮನೆಗೆ ಹೋದವರು ಅನೇಕರಿದ್ದಾರೆ. ಅಲ್ಲಿ ದುಡ್ಡು ಸಿಗುತ್ತದೆ ಅನ್ನೋದು ಒಂದಾದರೆ, ದುಡ್ಡಿನ ಜೊತೆಗೆ ಜನಪ್ರಿಯತೆ ಕೂಡ ಹೆಚ್ಚುತ್ತದೆ. ಕೆಲವರಿಗೆ ಬಿಗ್ ಬಾಸ್​ಮನೆಯಲ್ಲಿ ಜಗಳ ಆಗುತ್ತದೆ ಎನ್ನುವ ಭಯ ಇರುತ್ತದೆ. ಇದೆಲ್ಲವನ್ನೂ ಮೀರಿ ಕೆಲವರು ಈ ಮನೆಗೆ ಹೋಗುತ್ತಾರೆ. ಈ ಮೊದಲು ಬಿಗ್ ಬಾಸ್ ಮನೆಯ ಬಗ್ಗೆ ಆತಂಕ ಹೊರಹಾಕಿದ್ದ ಆಧ್ಯಾತ್ಮ ಗುರು ಅನಿರುದ್ಧ್​ ಆಚಾರ್ಯ ಅವರು ದೊಡ್ಮನೆಗೆ ಬಂದಿದ್ದಾರೆ. ಅವರ ಆಗಮನ ಅನೇಕರಿಗೆ ಶಾಕಿಂಗ್ ಎನಿಸಿದೆ. ಈ ವಿಚಾರಕ್ಕೆ ಅವರು ಟ್ರೋಲ್ ಕೂಡ ಆಗಿದ್ದಾರೆ.

ಅಧ್ಯಾತ್ಮ ವಿಚಾರಗಳಿಂದ ಅನಿರುದ್ಧ್ ಆಚಾರ್ಯ ಅವರು ಸಾಕಷ್ಟು ಸುದ್ದಿ ಆಗಿದ್ದರು. ಅವರ ಹಲವು ವಿಡಿಯೋಗಳು ಇತ್ತೀಚೆಗೆ ವೈರಲ್ ಆಗಿದ್ದವು. ಈ ವಿಡಿಯೋಗಳಲ್ಲಿ ಅವರು ಸನಾತನ ಧರ್ಮ, ಧರ್ಮದ ವಿಶೇಷತೆಗಳ ಬಗ್ಗೆ ಮಾತನಾಡಿದ್ದರು. ಇದರ ಜೊತೆಗೆ ಅರು ಬಿಗ್ ಬಾಸ್​ಗೆ ಬಾಯಿಗೆ ಬಂದಂತೆ ಬೈದಿದ್ದರು. ಈಗ ಅವರು ‘ಬಿಗ್ ಬಾಸ್ ಹಿಂದಿ ಸೀಸನ್ 18’ಕ್ಕೆ ಎಂಟ್ರಿ ಪಡೆದಿದ್ದಾರೆ. ಇದು ಅನೇಕರಿಗೆ ಅಚ್ಚರಿ ಎನಿಸಿದೆ.

‘ಬಿಗ್ ಬಾಸ್​ನಿಂದ​ ನನಗೆ ಆಫರ್ ಬಂದಿತ್ತು. ಕೋಟಿ ಕೊಡೋಕೆ ರೆಡಿ ಇದ್ದರು. ಆದರೆ, ನಾನು ಆಫರ್ ಒಪ್ಪಿಲ್ಲ. ಅದು ನಮ್ಮ ಸಂಸ್ಕೃತಿಗೆ ಮ್ಯಾಚ್ ಆಗಲ್ಲ. ಅಲ್ಲಿರೋರಿಗೆ ಸಂಸ್ಕೃತಿ ಇರಲ್ಲ. ಬಾಯಿಗೆ ಬಂದಂತೆ ಬಯ್ಯುತ್ತಾರೆ. ನಾನು ಅಲ್ಲಿ ಹೋಗೋದು ಸರಿ ಆಗಲ್ಲ. ಕೋಟಿ ರೂಪಾಯಿ ಆಫರ್ ಎಂದಾಗ ಅದನ್ನು ನಾನು ಮಾಡಬಹುದಿತ್ತು. ಆದರೆ, ಹಣಕ್ಕಿಂತ ಸಂಸ್ಕೃತಿ, ಧರ್ಮ ಮುಂದಿದೆ’ ಎಂದು ಅವರು ಈ ಮೊದಲು ಹೇಳಿಕೊಂಡಿದ್ದರು.

ಇದನ್ನೂ ಓದಿ: ‘ಬಿಗ್ ಬಾಸ್ ಅನ್ನ ತಿಂದವನಿಗೆ ಆ ಶೋ ಬಗ್ಗೆ ನಿಯತ್ತಿಲ್ಲ’; ಜಗದೀಶ್ ವಿರುದ್ಧ ಛೀಮಾರಿ 

ಈಗ ಅವರು ‘ಹಿಂದಿ ಬಿಗ್ ಬಾಸ್ ಸೀಸನ್ 18’ರ ಸ್ಪರ್ಧಿ ಆಗಿದ್ದಾರೆ. ಅವರ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ನಡೆಯುತ್ತಿದೆ. ಹಣಕ್ಕಾಗಿ ಅವರು ದೊಡ್ಮನೆಗೆ ಕಾಲಿಟ್ಟರೇ ಎನ್ನುವ ಪ್ರಶ್ನೆ ಮೂಡಿದೆ. ಅವರನ್ನು ಟೀಕಿಸುವ ಕೆಲಸ ಸೋಶಿಯಲ್ ಮೀಡಿಯಾದಲ್ಲಿ ಆಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಚಿಕ್ಕಬಳ್ಳಾಪುರದಲ್ಲಿ ಸರಣಿ ಅಪಘಾತ: ತಪ್ಪಿದ ಭಾರಿ ಅನಾಹುತ
ಚಿಕ್ಕಬಳ್ಳಾಪುರದಲ್ಲಿ ಸರಣಿ ಅಪಘಾತ: ತಪ್ಪಿದ ಭಾರಿ ಅನಾಹುತ
ವೇದಿಕೆಯಲ್ಲಿ ವೈದ್ಯೆಯ ಹಿಜಾಬ್ ಎಳೆದ ಸಿಎಂ ನಿತೀಶ್ ಕುಮಾರ್
ವೇದಿಕೆಯಲ್ಲಿ ವೈದ್ಯೆಯ ಹಿಜಾಬ್ ಎಳೆದ ಸಿಎಂ ನಿತೀಶ್ ಕುಮಾರ್
ದೆಹಲಿ-ಆಗ್ರಾ ಎಕ್ಸ್​ಪ್ರೆಸ್​ವೇನಲ್ಲಿ ಹಲವು ಬಸ್​ಗಳಿಗೆ ಬೆಂಕಿ
ದೆಹಲಿ-ಆಗ್ರಾ ಎಕ್ಸ್​ಪ್ರೆಸ್​ವೇನಲ್ಲಿ ಹಲವು ಬಸ್​ಗಳಿಗೆ ಬೆಂಕಿ
ಧನುರ್ಮಾಸದಲ್ಲಿ ಶುಭಕಾರ್ಯಗಳನ್ನ ಮಾಡಬಾರದು ಯಾಕೆ ಗೊತ್ತಾ?
ಧನುರ್ಮಾಸದಲ್ಲಿ ಶುಭಕಾರ್ಯಗಳನ್ನ ಮಾಡಬಾರದು ಯಾಕೆ ಗೊತ್ತಾ?
ಇಂದು ಈ ರಾಶಿಯವರ ಹಳೆಯ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ
ಇಂದು ಈ ರಾಶಿಯವರ ಹಳೆಯ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ
ಜೋರ್ಡಾನ್ ಕಿಂಗ್ ಅಬ್ದುಲ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ
ಜೋರ್ಡಾನ್ ಕಿಂಗ್ ಅಬ್ದುಲ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ