AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಟಿಆರ್​ಪಿ ಕುಸಿಯಲು ಅನಿರುದ್ಧ್​ ಕಾರಣ, ಅವರು ಧಾರಾವಾಹಿಯಲ್ಲಿ ಯಾವುದೇ ಕಾರಣಕ್ಕೂ ಮುಂದುವರಿಯಲ್ಲ’: ನಿರ್ಮಾಪಕ

‘ಅನಿರುದ್ಧ್​ ಅವರಿಂದ ಶೂಟಿಂಗ್​ಗೆ ತುಂಬಾ ಅಡಚಣೆ ಆಗಿದೆ. ಎದುರು ಮಾತನಾಡುವ ರೀತಿಯಲ್ಲಿ ಅವರು ಇಲ್ಲ. ಕಥೆಗೆ ಅಡೆಚಣೆ ಉಂಟು ಮಾಡುತ್ತಿದ್ದಾರೆ. ಅವರ ಕ್ಯಾರೆಕ್ಟರ್ ಮಾತ್ರ ಬಿಲ್ಡ್​ ಆಗಬೇಕು ಎಂಬ ಅರ್ಥದಲ್ಲಿ ಮಾತನಾಡುತ್ತಿದ್ದರು’ ಎಂದು ಆರೂರು ಜಗದೀಶ್ ಹೇಳಿದ್ದಾರೆ.  

‘ಟಿಆರ್​ಪಿ ಕುಸಿಯಲು ಅನಿರುದ್ಧ್​ ಕಾರಣ, ಅವರು ಧಾರಾವಾಹಿಯಲ್ಲಿ ಯಾವುದೇ ಕಾರಣಕ್ಕೂ ಮುಂದುವರಿಯಲ್ಲ’: ನಿರ್ಮಾಪಕ
ಜಗದೀಶ್​-ಅನಿರುದ್ಧ್​
TV9 Web
| Updated By: ರಾಜೇಶ್ ದುಗ್ಗುಮನೆ|

Updated on:Aug 20, 2022 | 7:37 PM

Share

ಅನಿರುದ್ಧ್ (Aniruddha Jatkar) ಅವರನ್ನು ‘ಜೊತೆ ಜೊತೆಯಲಿ’ ಧಾರಾವಾಹಿಯಿಂದ ಹೊರಗಿಡುವ ಬಗ್ಗೆ ಇಂದು (ಆಗಸ್ಟ್ 20) ಘೋಷಣೆ ಮಾಡಲಾಯಿತು. ಆ ಬಳಿಕ ಸುದ್ದಿಗೋಷ್ಠಿ ನಡೆಸಿ ಅನಿರುದ್ಧ್ ಸ್ಪಷ್ಟನೆ ನೀಡಿದ್ದರು. ‘ಧಾರಾವಾಹಿಗಾಗಿ ನಾನು ಎಲ್ಲವನ್ನೂ ಮಾಡಿದ್ದೇನೆ. ನಾನು ಮತ್ತೆ ನಟಿಸಲು ಸಿದ್ಧ’ ಎಂದು ಹೇಳಿದ್ದರು. ಈ ಬೆನ್ನಲ್ಲೇ ನಿರ್ಮಾಪಕ ಆರೂರು ಜಗದೀಶ್ (Aroor Jagadish) ಅವರು ಸುದ್ದಿಗೋಷ್ಠಿ ನಡೆಸಿ ಒಂದಷ್ಟು ವಿಚಾರ ಹಂಚಿಕೊಂಡಿದ್ದಾರೆ.

‘ಅನಿರುದ್ಧ್​ ಅವರಿಂದ ಶೂಟಿಂಗ್​ಗೆ ತುಂಬಾ ಅಡಚಣೆ ಆಗಿದೆ. ಎದುರು ಮಾತನಾಡುವ ರೀತಿಯಲ್ಲಿ ಅವರು ಇಲ್ಲ. ಕಥೆಗೆ ಅಡೆಚಣೆ ಉಂಟು ಮಾಡುತ್ತಿದ್ದಾರೆ. ಅವರ ಕ್ಯಾರೆಕ್ಟರ್ ಮಾತ್ರ ಬಿಲ್ಡ್​ ಆಗಬೇಕು ಎಂಬ ಅರ್ಥದಲ್ಲಿ ಮಾತನಾಡುತ್ತಿದ್ದರು’ ಎಂದು ಆರೂರು ಜಗದೀಶ್ ಹೇಳಿದ್ದಾರೆ.

‘ನಮ್ಮ ಮಧ್ಯೆ ಮನಸ್ತಾಪ ಇರಲಿಲ್ಲ. ಧಾರಾವಾಹಿಗೆ ಸಾಕಷ್ಟು ದುಡ್ಡು ಹಾಕಿದ್ದೇನೆ. 24 ಗಂಟೆ ಕೆಲಸ ಮಾಡಿದ್ದೇನೆ. ಹೀಗಿದ್ದರೂ ನಿರ್ಮಾಪಕರಿಗೆ ಸಾಥ್ ಕೊಡಬೇಕು ಎಂದು ಅವರಿಗೆ ಯಾವಾಗಲೂ ಅನಿಸಿಲ್ಲ. ಕೊವಿಡ್ ಟೈಮ್​ನಲ್ಲಿ ಎಲ್ಲರಿಗೂ ಸಂಭಾವನೆಯಲ್ಲಿ ಶೇ.15 ಕಟ್ ಮಾಡಿದ್ದೆವು. ಆಗ ನಾನು ಆಸ್ಪತ್ರೆಯಲ್ಲಿ ಇದ್ದೆ. ಅವರು ನನ್ನ ಸ್ಯಾಲರಿ ಯಾಕೆ ಕಟ್ ಮಾಡಿದ್ರಿ ಅಂತ ಕಾಲ್ ಮಾಡಿ ಕೂಗಾಡಿದ್ರು. ಸೆಟ್​ನಲ್ಲೂ ಬಂದು ಕೂಗಾಡಿದರು. ನನ್ನ ದುಡ್ಡು ತಿಂದು ಬುದಕುತ್ತಿದ್ದಾರೆ ಅಂತ ಕೂಗಾಡಿದ್ದರು. ಅದನ್ನು ಕೇಳಿ ಬೇಸರ ಆಯ್ತು’ ಎಂದಿದ್ದಾರೆ ಜಗದೀಶ್.

ಇದನ್ನೂ ಓದಿ
Image
‘ಅಂದು ಜೊತೆ ಜೊತೆಯಲಿ ನಾಯಕಿ ಕ್ಷಮೆ ಕೇಳಿದ್ದರು’; ಹಳೆಯ ಘಟನೆ ನೆನೆದ ಕಿರುತೆರೆ ನಿರ್ಮಾಪಕರ ಸಂಘದ ಅಧ್ಯಕ್ಷ ಭಾಸ್ಕರ್
Image
Aniruddha Press Meet: ಭಿನ್ನಾಭಿಪ್ರಾಯಗಳು ಮನೆಯಲ್ಲಿ ಇದ್ದೇ ಇರುತ್ತೆ, ನನಗೆ ಯಾವುದೇ ದುರಹಂಕಾರ ಇಲ್ಲ: ನಟ ಅನಿರುದ್ಧ
Image
Aniruddha Jatkar: ಜೊತೆ ಜೊತೆಯಲಿ​ ತಂಡದಿಂದ ಅನಿರುದ್ಧ್ ಬ್ಯಾನ್: ನಿಷೇಧಕ್ಕೆ ಅವಕಾಶವಿಲ್ಲ ಎಂದ ಟೆಲಿವಿಷನ್ ಅಸೋಸಿಯೇಷನ್
Image
Megha Shetty:ವೀಕ್ಷಕರ ಬಳಿ ಕ್ಷಮೆ ಕೇಳಿದ ‘ಜೊತೆ ಜೊತೆಯಲಿ’ ನಟಿ ಮೇಘಾ ಶೆಟ್ಟಿ

ಇದನ್ನೂ ಓದಿ: ‘ಜೊತೆ ಜೊತೆಯಲಿ ಧಾರಾವಾಹಿ 2-3 ತಿಂಗಳಲ್ಲಿ ಮುಗಿಯಲಿದೆ’: ಅನಿರುದ್ಧ್​

‘ನನಗಾಗಿರುವ ಪ್ರತಿ ನೋವನ್ನು ಚಾನೆಲ್ ಗಮನಕ್ಕೆ ತಂದಿದ್ದೇನೆ. ಹೇಳೋಕೆ ಹೋದ್ರೆ ತುಂಬಾ ಇದೆ. ನನಗೆ ಇನ್ನು ಆರೋಗ್ಯ ಹಾಳುಮಾಡಿಕೊಳ್ಳಲು ಇಷ್ಟವಿಲ್ಲ. ಅವರನ್ನು ಈ ಸೀರಿಯಲ್​ನಲ್ಲಿ ಯಾವುದೇ ಕಾರಣಕ್ಕೂ ಮುಂದುವರಿಸಲ್ಲ. ನನಗೆ ಗೌರವ ಸಿಕ್ಕಿಲ್ಲ. ಅವರು ಮಾತಿನಲ್ಲಿ ಹೇಳುವಂತೆ ಕೃತಿಯಲ್ಲಿ ಇಲ್ಲ. ಅನೇಕ ಬಾರಿ ಶೂಟಿಂಗ್​ನಿಂದ ಅರ್ಧಕ್ಕೆ ಹೊರಹೋಗಿದ್ದಾರೆ. ಇದರಿಂದ ನನಗೆ ನಷ್ಟ ಉಂಟಾಗಿದೆ’ ಎಂದು ಜಗದೀಶ್ ಆರೋಪಿಸಿದ್ದಾರೆ.

‘ಕ್ಯಾರವಾನ್ ಇಲ್ಲ ಎಂದು ಶೂಟಿಂಗ್​​ಇಂದ ಎದ್ದು ಹೋಗಿದ್ದರು. ಹೆಣ್ಣು ಮಕ್ಕಳ ಕೇರ್ ನಾವು ತೆಗೆದುಕೊಳ್ಳುತ್ತೇವೆ. ಆ ಬಗ್ಗೆ ಅವರಿಗೆ ಯಾಕೆ ಚಿಂತೆ? ನನಗೆ ಆಗಿರೋ ಅವಮಾನ, ನೋವಿಗೆ ನಟರೇ ಸ್ಪಂದಿಸಲಿಲ್ಲ ಅಂದರೆ ಹೇಗೆ? ಈ ಸೀರಿಯಲ್ ಮಧ್ಯಭಾಗದಲ್ಲಿ ಟಿಆರ್​ಪಿ ಕಡಿಮೆ ಆಗಲು ಅವರೇ ಕಾರಣ. ಈ ಧಾರಾವಾಹಿ ನಿಲ್ಲಲು ಅವರೇ ಕಾರಣ’ ಎಂದಿದ್ದಾರೆ ಜಗದೀಶ್.

Published On - 7:16 pm, Sat, 20 August 22

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ