BBK 9: ಬಿಗ್ ಬಾಸ್ ಮನೆಯಲ್ಲಿ ನಡೆಯಿತು ಮಿಡ್​ವೀಕ್​ ಎಲಿಮಿನೇಷನ್; ಮನೆಯಿಂದ ಹೊರ ಹೋಗಿದ್ಯಾರು?

Bigg Boss Kannada Elimination: ಕಳೆದ ವಾರಂತ್ಯದಲ್ಲಿ ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಗಳ ಸಂಖ್ಯೆ ಎಂಟಿತ್ತು. ಬಿಗ್ ಬಾಸ್ ಫಿನಾಲೆಗೆ ಇರಬೇಕಾದ ಸ್ಪರ್ಧಿಗಳ ಸಂಖ್ಯೆ ಐದು. ಹೀಗಾಗಿ, ಫೈನಲ್​ಗೂ ಮುನ್ನ ಮೂರು ಎಲಿಮಿನೇಷನ್ ನಡೆಯಲಿದೆ ಎಂದು ಸುದೀಪ್ ಘೋಷಣೆ ಮಾಡಿದ್ದರು.

BBK 9: ಬಿಗ್ ಬಾಸ್ ಮನೆಯಲ್ಲಿ ನಡೆಯಿತು ಮಿಡ್​ವೀಕ್​ ಎಲಿಮಿನೇಷನ್; ಮನೆಯಿಂದ ಹೊರ ಹೋಗಿದ್ಯಾರು?
ಆರ್ಯವರ್ಧನ್
Follow us
| Updated By: Digi Tech Desk

Updated on:Dec 27, 2022 | 12:52 PM

‘ಬಿಗ್ ಬಾಸ್​’ (Bigg Boss)ಶೋನಲ್ಲಿ ಸ್ಪರ್ಧಿಗಳಿಗೆ ಹಲವು ಸರ್​ಪ್ರೈಸ್​ಗಳು ಇರುತ್ತವೆ. ಕೆಲವೊಮ್ಮೆ ಎಲಿಮಿನೇಷನ್ ವಿಚಾರದಲ್ಲೂ ಬಿಗ್ ಬಾಸ್ ಸರ್​​ಪ್ರೈಸ್​ ನೀಡುತ್ತಾರೆ. ಬಿಗ್ ಬಾಸ್ ಫಿನಾಲೆ ವಾರದಲ್ಲಿ ಸ್ಪರ್ಧಿಗಳಿಗೆ ಸರ್​ಪ್ರೈಸ್ ಸಿಕ್ಕಿದೆ. ವಾರದ ಮಧ್ಯೆ ಒಂದು ಎಲಿಮಿನೇಷನ್ (Bigg Boss Elimination) ನಡೆದಿದೆ. ಬಿಗ್ ಬಾಸ್ ಮನೆಯಲ್ಲಿ ಆರಿದ್ದ ಸ್ಪರ್ಧಿಗಳ ಸಂಖ್ಯೆ ಐದಾಗಿದೆ. ಒಬ್ಬರು ವಾರದ ಮಧ್ಯದಲ್ಲಿ ಔಟ್ ಆಗಿದ್ದಾರೆ. ಇಂದು (ಡಿಸೆಂಬರ್ 27) ಈ ಎಪಿಸೋಡ್ ಪ್ರಸಾರ ಕಾಣಲಿದೆ.

ಕಳೆದ ವಾರಂತ್ಯದಲ್ಲಿ ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಗಳ ಸಂಖ್ಯೆ ಎಂಟಿತ್ತು. ಬಿಗ್ ಬಾಸ್ ಫಿನಾಲೆಗೆ ಇರಬೇಕಾದ ಸ್ಪರ್ಧಿಗಳ ಸಂಖ್ಯೆ ಐದು. ಹೀಗಾಗಿ, ಫೈನಲ್​ಗೂ ಮುನ್ನ ಮೂರು ಎಲಿಮಿನೇಷನ್ ನಡೆಯಲಿದೆ ಎಂದು ಸುದೀಪ್ ಘೋಷಣೆ ಮಾಡಿದ್ದರು. ಶನಿವಾರ (ಡಿಸೆಂಬರ್ 24) ಹಾಗೂ ಭಾನುವಾರ (ಡಿಸೆಂಬರ್ 25) ಎಲಿಮಿನೇಷನ್ ನಡೆದಿತ್ತು. ಅಮೂಲ್ಯ ಗೌಡ ಹಾಗೂ ಅರುಣ್ ಸಾಗರ್ ಅನುಕ್ರಮವಾಗಿ ಔಟ್ ಆಗಿದ್ದರು. ಈಗ ಮಿಡ್​ ವೀಕ್ ಎಲಿಮಿನೇಷನ್ ನಡೆದಿದೆ.

ಈ ಪ್ರೋಮೋವನ್ನು ಕಲರ್ಸ್ ಕನ್ನಡ ವಾಹಿನಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದೆ. ಒಂದು ಕ್ರೇನ್ ಮಾದರಿಯ ವಸ್ತುವನ್ನು ಇಡಲಾಗಿದೆ. ಅದರ ಮೇಲೆ ಸ್ಪರ್ಧಿಗಳು ನಿಲ್ಲಬೇಕು. ಅದು ಕೆಳಗೆ ಹೋಗಿ ಮೇಲೆ ಬರುತ್ತದೆ. ಯಾವ ಸ್ಪರ್ಧಿ ಕಾಣುವುದಿಲ್ಲವೋ ಅವರು ಎಲಿಮಿನೇಟ್ ಆಗಿದ್ದಾರೆ ಎಂದರ್ಥ.

ಸದ್ಯ ಬಿಗ್ ಬಾಸ್ ಮನೆಯಲ್ಲಿ ಆರ್ಯವರ್ಧನ್ ಗುರೂಜಿ, ರೂಪೇಶ್ ರಾಜಣ್ಣ, ರೂಪೇಶ್ ಶೆಟ್ಟಿ, ರಾಕೇಶ್ ಅಡಿಗ, ದಿವ್ಯಾ ಉರುಡುಗ ಹಾಗೂ ದೀಪಿಕಾ ದಾಸ್ ಇದ್ದಾರೆ. ಈ ಪೈಕಿ ಆರ್ಯವರ್ಧನ್ ದೊಡ್ಮನೆಯಿಂದ ಎಲಿಮಿನೇಟ್ ಆಗಿದ್ದಾರೆ ಎನ್ನಲಾಗುತ್ತಿದೆ. ಈ ವಿಚಾರ ಇಂದಿನ ಎಪಿಸೋಡ್​ನಲ್ಲಿ ಅಧಿಕೃತ ಆಗಲಿದೆ.

ಇದನ್ನೂ ಓದಿ: Roopesh Shetty: ಫಿನಾಲೆ ವೀಕ್​​ನ ಮೊದಲ ದಿನವೇ ರೂಪೇಶ್ ಶೆಟ್ಟಿಗೆ ಸರ್​ಪ್ರೈಸ್ ನೀಡಿದ ಬಿಗ್ ಬಾಸ್ 

ಆರ್ಯವರ್ಧನ್ ಅವರು ಒಟಿಟಿ ಸೀಸನ್​ಗೆ ಮೊದಲು ಕಾಲಿಟ್ಟರು. ಅಲ್ಲಿ ಟಾಪ್ 4ರಲ್ಲಿ ಕಾಣಿಸಿಕೊಂಡು ಟೀವಿ ಸೀಸನ್​ಗೆ ಬರುವ ಅವಕಾಶ ಗಿಟ್ಟಿಸಿಕೊಂಡರು. ರುಚಿರುಚಿಯಾದ ಅಡುಗೆ ಮಾಡಿ ಹಾಕುವ ಮೂಲಕ ಕಿಚನ್ ಕಿಂಗ್ ಎನಿಸಿಕೊಂಡರು. ಅವರು ಹೆಚ್ಚಿನ ಸಮಯವನ್ನು ಕಿಚನ್​​ನಲ್ಲೇ ಕಳೆದಿದ್ದಾರೆ. ಅವರು ಹಾಸ್ಯದ ಮೂಲಕವೂ ಗುರುತಿಸಿಕೊಂಡಿದ್ದಾರೆ. ಇನ್ನು ಗುರೂಜಿ ಆಡುವ ಮಾತುಗಳಿಂದ ಅನೇಕರಿಗೆ ಬೇಸರ ಆಗಿದೆ. ಕೆಲವೊಮ್ಮೆ ಅವರು ಮಾತು ಅರ್ಥ ಆಗದೇ ಸುದೀಪ್ ಕೂಡ ನಮಸ್ಕರಿಸಿದ ಉದಾಹರಣೆ ಇದೆ. ದೊಡ್ಮನೆ ಸ್ಪರ್ಧಿಗಳಲ್ಲಿ ಕಡಿಮೆ ವೋಟ್ ಪಡೆದು ಅವರು ಔಟ್ ಆಗಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 12:37 pm, Tue, 27 December 22