AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಗ್​ಬಾಸ್ 10: ಈ ವಾರ ಬಿಗ್​ಬಾಸ್ ಮನೆಯಿಂದ ಹೊರಗೆ ಬಂದಿದ್ದು ಯಾರು?

Bigg Boss 10: ಬಿಗ್​ಬಾಸ್ ಕನ್ನಡ ಸೀಸನ್ 10: ಬಿಗ್​ಬಾಸ್ ಮನೆಯಿಂದ ಮೊದಲ ವಾರ ಸ್ನೇಕ್ ಶ್ಯಾಮ್ ಅವರು ಹೊರಗೆ ಬಂದಿದ್ದರು. ಎರಡನೇ ಭಾಗ್ಯಶ್ರೀ, ಸಂಗೀತಾ. ತನಿಷಾ, ಗೌರೀಶ್ ಅವರುಗಳು ಎಲಿಮಿನೇಷನ್ ಪಟ್ಟಿಯಲ್ಲಿ ಉಳಿದುಕೊಂಡಿದ್ದರು. ಇವರಲ್ಲಿ ಹೊರ ಬಂದಿದ್ಯಾರು?

ಬಿಗ್​ಬಾಸ್ 10: ಈ ವಾರ ಬಿಗ್​ಬಾಸ್ ಮನೆಯಿಂದ ಹೊರಗೆ ಬಂದಿದ್ದು ಯಾರು?
ಬಿಗ್ ಬಾಸ್
ಮಂಜುನಾಥ ಸಿ.
|

Updated on: Oct 22, 2023 | 11:15 PM

Share

ಬಿಗ್​ಬಾಸ್ 10ರ (Bigg Boss Kannada) ಎರಡನೇ ವಾರದ ಕಿಚ್ಚ ಪಂಚಾಯಿತಿ ಭಾನುವಾರ ನಡೆದಿದೆ. ಕಾರ್ತಿಕ್, ಸಂಗೀತಾ, ತುಕಾಲಿ ಸಂತು, ಭಾಗ್ಯಶ್ರೀ, ಗೌರೀಶ್, ತನಿಷಾ, ನೀತು ಇನ್ನೂ ಹಲವರು ಪ್ರಮುಖ ಸದಸ್ಯರು ಈ ವಾರ ನಾಮಿನೇಟ್ ಆಗಿದ್ದರು. ಶನಿವಾರದ ಎಪಿಸೋಡ್​ನಲ್ಲಿ ತುಕಾಲಿ ಸಂತು, ಕಾರ್ತಿಕ್ ಅವರುಗಳು ನಾಮಿನೇಷನ್​ನಿಂದ ಪಾರಾಗಿದ್ದರು. ಭಾನುವಾರಕ್ಕೆ ಸಂಗೀತಾ, ಭಾಗ್ಯಶ್ರೀ, ಗೌರೀಶ್, ತನಿಷಾ ಅವರುಗಳು ಉಳಿದುಕೊಂಡಿದ್ದರು. ಇವರಲ್ಲಿ ಒಬ್ಬರು ಮನೆಯಿಂದ ಹೊರಗೆ ಬಂದಿದ್ದಾರೆ.

ಶನಿವಾರದ ಎಪಿಸೋಡ್​ನಲ್ಲಿ ಸ್ಪರ್ಧಿಗಳನ್ನು ತರಾಟೆಗೆ ತೆಗೆದುಕೊಂಡಿದ್ದ ನಟ ಸುದೀಪ್, ಭಾನುವಾರದ ಎಪಿಸೋಡ್​ನಲ್ಲಿ ತಮಾಷೆಯಾಗಿಯೇ ಶೋ ಅನ್ನು ನಡೆಸಿಕೊಟ್ಟರು. ನಡು-ನಡುವೆ ಕೆಲ ಬುದ್ಧಿವಾದಗಳನ್ನು, ಕೆಲವರು ನಡೆದುಕೊಂಡ ರೀತಿ, ಆಡಿದ ಮಾತುಗಳ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಸಹ ಸುದೀಪ್ ಹಂಚಿಕೊಂಡರು. ನಗುತ್ತಾ-ನಗಿಸುತ್ತಾ ಎಪಿಸೋಡ್​ನ ಕೊನೆಯಲ್ಲಿ ಈ ವಾರ ನಾಮಿನೇಟ್ ಆಗಿದ್ದ ಸ್ಪರ್ಧಿಗಳಲ್ಲಿ ಒಬ್ಬರನ್ನು ಮನೆಯಿಂದ ಹೊರಗೆ ಕರೆದರು ಸುದೀಪ್.

ನಾಮಿನೇಟ್ ಆದವರಲ್ಲಿ ಭಾನುವಾರ ಸಂಗೀತಾ, ಭಾಗ್ಯಶ್ರೀ, ಗೌರೀಶ್, ತನಿಷಾ ಅವರುಗಳು ಉಳಿದುಕೊಂಡಿದ್ದರು. ಇವರಲ್ಲಿ ಮೊದಲಿಗೆ ಸಂಗೀತಾ ಅವರು ಎಲಿಮಿನೇಷನ್​ನಿಂದ ಪಾರಾದರು. ಆ ನಂತರ ತನಿಷಾ ಅವರು ಸಹ ಎಲಿಮಿನೇಷನ್​ನಿಂದ ಪಾರಾದರು. ಅಂತಿಮವಾಗಿ ಪತ್ರಕರ್ತ ಗೌರೀಶ್ ಅಕ್ಕಿ ಅವರನ್ನು ಬಿಗ್​ಬಾಸ್ ಮನೆಯಿಂದ ಹೊರಗೆ ಕರೆದರು ಸುದೀಪ್. ಭಾಗ್ಯಶ್ರೀ ಅವರಿಗೆ ಮನೆಯಲ್ಲಿ ಉಳಿಯಲು ಇನ್ನೊಂದು ವಾರದ ಕಾಲಾವಕಾಶ ದೊರಕಿತು.

ಇದನ್ನೂ ಓದಿ:ಬಿಗ್​ಬಾಸ್ ಮನೆಯಲ್ಲಿ ಬೃಂದಾವನ ಕುಟುಂಬ: ಹಾಡು-ಕುಣಿತ ಕೊನೆಯಲ್ಲಿ ಕಣ್ಣೀರು

ಮನೆಯ ಸದಸ್ಯರು ಗೌರೀಶ್ ಅವರನ್ನು ತಬ್ಬಿ ಬೇಸರದಿಂದ ಕಳಿಸಿಕೊಟ್ಟರು. ಬಳಿಕ ಸುದೀಪ್​ ಅವರನ್ನು ಭೇಟಿಯಾಗಲು ತೆರಳುವ ಮುನ್ನ, ನೀತು ಅವರನ್ನು ಮುಂದಿನ ವಾರಕ್ಕೆ ನೇರವಾಗಿ ನಾಮಿನೇಟ್ ಮಾಡಿದರು ಗೌರೀಶ್ ಅಕ್ಕಿ. ಸುದೀಪ್ ಮುಂದೆ ಬಂದಾಗಲೂ, ಎರಡು ವಾರ ನನಗೆ ಒಳ್ಳೆಯ ಅನುಭವಗಳು ದೊರಕಿತು, ಬಿಗ್​ಬಾಸ್ ಒಂದು ಸುಂದರವಾದ ಪಂಜರ, ಆ ಪಂಜರದಲ್ಲಿ ವ್ಯಕ್ತಿತ್ವಗಳ ಕಿತ್ತಾಟ ನಡೆಯುತ್ತಿದೆ ಎಂದು ಬಣ್ಣಿಸಿದರು. ನಾನು ಸಾಧ್ಯವಾದಷ್ಟು ಶಕ್ತಿ ಮೀರಿ ಪ್ರಯತ್ನ ಪಟ್ಟೆ, ಟಾಸ್ಕ್​ಗಳಲ್ಲಿ ಆಟವಾಡಿದೆ ವಯೋಸಹಜ ಕಾರಣದಿಂದ ಅಥವಾ ಉಳಿದವರು ನನಗಿಂತಲೂ ಶಕ್ತರಾಗಿರುವ ಕಾರಣ ನಾನು ಅಂದುಕೊಂಡಂತೆ ಫಲಿತಾಂಶ ನನಗೆ ಬರಲಿಲ್ಲ ಎಂದರು ಗೌರೀಶ್.

ಮೊದಲ ವಾರ ಸ್ನೇಕ್ ಶ್ಯಾಮ್ ಅವರು ಬಿಗ್​ಬಾಸ್ ಮನೆಯಿಂದ ಹೊರಗೆ ಹೋಗಿದ್ದರು. ಎರಡನೇ ವಾರ ಗೌರೀಶ್ ಅಕ್ಕಿ ಅವರು ಬಿಗ್​ಬಾಸ್ ಮನೆಯಿಂದ ಹೊರಗೆ ಬಂದಿದ್ದಾರೆ. ಮುಂದಿನ ವಾರಕ್ಕೆ ನೀತು ವನಜಾಕ್ಷಿ ನೇರವಾಗಿ ನಾಮಿನೇಟ್ ಆಗಿದ್ದಾರೆ. ಭಾಗ್ಯಶ್ರೀ ಸಹ ಇನ್ನೂ ಅಪಾಯದಲ್ಲಿಯೇ ಇದ್ದಾರೆ. ಹಾಗಾಗಿ ಮುಂದಿನ ವಾರ ಯಾರು ಹೊರಗೆ ಬರಬಹುದು ಎಂಬ ಕುತೂಹಲ ಇದೆ. ಬಿಗ್​ಬಾಸ್ ಕನ್ನಡ ಸೀಸನ್ 10 ಕಲರ್ಸ್ ವಾಹಿನಿಯಲ್ಲಿ ಹಾಗೂ ಜಿಯೋ ಸಿನಿಮಾಸ್​ನಲ್ಲಿ ಪ್ರತಿದಿನ ಪ್ರಸಾರವಾಗುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಮಾಡದ ತಪ್ಪಿಗೆ ಸುಟ್ಟು ಕರಕಲಾದ ಸೀಬರ್ಡ್ ಬಸ್ಸಿನ ಕೊನೆಯ ದೃಶ್ಯ
ಮಾಡದ ತಪ್ಪಿಗೆ ಸುಟ್ಟು ಕರಕಲಾದ ಸೀಬರ್ಡ್ ಬಸ್ಸಿನ ಕೊನೆಯ ದೃಶ್ಯ
ಚಾಮರಾಜನಗರ ಬೋನಿಗೆ ಬಿದ್ದ ಹುಲಿ
ಚಾಮರಾಜನಗರ ಬೋನಿಗೆ ಬಿದ್ದ ಹುಲಿ
2026 ವೃಶ್ಚಿಕ ರಾಶಿಗೆ ಗುರು ಸಂಚಾರದಿಂದ ಆರ್ಥಿಕ ಪ್ರಗತಿಯ ವರ್ಷ
2026 ವೃಶ್ಚಿಕ ರಾಶಿಗೆ ಗುರು ಸಂಚಾರದಿಂದ ಆರ್ಥಿಕ ಪ್ರಗತಿಯ ವರ್ಷ
ಬಸ್​ ದುರಂತದಲ್ಲಿ ಸುಟ್ಟು ಕರಕಲಾದ ಮೃತದೇಹಗಳ ಗುರುತು ಪತ್ತೆ ಹೇಗಿರುತ್ತೆ?
ಬಸ್​ ದುರಂತದಲ್ಲಿ ಸುಟ್ಟು ಕರಕಲಾದ ಮೃತದೇಹಗಳ ಗುರುತು ಪತ್ತೆ ಹೇಗಿರುತ್ತೆ?