AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಗ್ ಬಾಸ್​ ಅಲ್ಲಿ ಸಹೋದರಿಯನ್ನು ಲೆಸ್ಬಿಯನ್ ಎಂದು ಕರೆದ ಸ್ಪರ್ಧಿಗೆ ದೀಪಕ್ ಚಹಾರ್ ಪಾಠ

ಬಿಗ್ ಬಾಸ್ 19 'ಕುಟುಂಬ ವಾರ'ದಲ್ಲಿ ಕ್ರಿಕೆಟಿಗ ದೀಪಕ್ ಚಾಹರ್ ತಮ್ಮ ಸಹೋದರಿ ಮಾಲತಿಗಾಗಿ ಧ್ವನಿ ಎತ್ತಿದರು. ಕುಣಿಕಾ ಮಾಲತಿಯನ್ನು 'ಸಲಿಂಗಕಾಮಿ' ಎಂದು ಕರೆದ ಬಗ್ಗೆ ದೀಪಕ್ ನೇರವಾಗಿ ಪ್ರಶ್ನಿಸಿದರು. ಇದು ಲಕ್ಷಾಂತರ ವೀಕ್ಷಕರ ಮುಂದೆ ಇಮೇಜ್‌ಗೆ ಹಾನಿ ಮಾಡುತ್ತದೆ ಎಂದು ಅವರು ಒತ್ತಿ ಹೇಳಿದರು. ಕುಣಿಕಾ ಸಮರ್ಥಿಸಿಕೊಳ್ಳಲು ಯತ್ನಿಸಿದರೆ, ಮಾಲತಿ, ಕುಣಿಕಾ ಮಗನ ಕ್ಷಮೆಯಾಚನೆಯ ವಿಷಯ ಬಹಿರಂಗಪಡಿಸಿದರು, ಇದು ಹೇಳಿಕೆಯ ಗಂಭೀರತೆಯನ್ನು ತೋರಿಸುತ್ತದೆ.

ಬಿಗ್ ಬಾಸ್​ ಅಲ್ಲಿ ಸಹೋದರಿಯನ್ನು ಲೆಸ್ಬಿಯನ್ ಎಂದು ಕರೆದ ಸ್ಪರ್ಧಿಗೆ ದೀಪಕ್ ಚಹಾರ್ ಪಾಠ
ಮಾಲ್ತಿ ದೀಪಕ್
 ಶ್ರೀಲಕ್ಷ್ಮೀ ಎಚ್
| Edited By: |

Updated on: Nov 22, 2025 | 8:01 AM

Share

ಬಿಗ್ ಬಾಸ್ 19ರಲ್ಲಿ ‘ಕುಟುಂಬ ವಾರ’ ನಡೆದಿದೆ. ಇದು ಸ್ಪರ್ಧಿಗಳಿಗೆಎ ಖುಷಿಯನ್ನು ತರುರುತ್ತದೆ. ಬಿಗ್ ಬಾಸ್ ಸ್ಪರ್ಧಿ ಮಾಲತಿ ಅವರ ಸಹೋದರ ಮತ್ತು ಪ್ರಸಿದ್ಧ ಕ್ರಿಕೆಟರ್ ದೀಪಕ್ ಚಾಹರ್ ಬಿಗ್ ಬಾಸ್ ಮನೆಗೆ ಬಂದಿದ್ದಾರೆ. ಈ ವೇಳೆ ಅವರು ಕುಣಿಕಾ ಸದಾನಂದ್ ಅವರನ್ನು ಭೇಟಿಯಾದರು. ದೀಪಕ್ ಆರಂಭದಲ್ಲಿ ಎಲ್ಲಾ ಮನೆಯವರನ್ನು ಪ್ರೀತಿಯಿಂದ ಸ್ವಾಗತಿಸಿದರೆ, ನಂತರ ಅವರು ಮನೆಯಲ್ಲಿದ್ದಾಗ ಕುಣಿಕಾ ಎತ್ತಿದ್ದ ಗಂಭೀರ ಮತ್ತು ಸೂಕ್ಷ್ಮ ವಿಷಯವನ್ನು ಪ್ರಸ್ತಾಪಿಸಿದರು. ಕೆಲವು ದಿನಗಳ ಹಿಂದೆ ಮಾಲ್ತಿ ಅವರನ್ನು ಲೆಸ್ಬಿಯನ್ನು (ಸಲಿಂಗಕಾಮಿ) ಎಂದು ಕರೆದಿದ್ದರು.

ದೀಪಕ್ ಮಾಲತಿಯನ್ನು ಪ್ರೀತಿಯಿಂದ ಅಪ್ಪಿಕೊಂಡರು. ಅವರನ್ನು ಖುಷಿಯಿಂದ ಎಲ್ಲರೂ ಸ್ವಾಗತಿಸಿದರು. ಆದರೆ ಈ ಸಂತೋಷ ಹೆಚ್ಚು ಕಾಲ ಉಳಿಯಲಿಲ್ಲ. ದೀಪಕ್ ನೇರವಾಗಿ ಕುಣಿಕಾಳ ಬಳಿಗೆ ಹೋಗಿ ಇಡೀ ಮನೆಯನ್ನು ಬೆಚ್ಚಿಬೀಳಿಸುವ ಪ್ರಶ್ನೆಯನ್ನು ಕೇಳಿದರು.

ತನ್ನ ಸಹೋದರಿಯ ವಿರುದ್ಧ ಮಾಡಿದ ಆಕ್ಷೇಪಾರ್ಹ ಹೇಳಿಕೆಯ ಬಗ್ಗೆ ದೀಪಕ್ ಚಾಹರ್ ಬಲವಾದ ನಿಲುವು ತೆಗೆದುಕೊಂಡರು. ‘ನೀವು ಯಾರನ್ನಾದರೂ ಸಲಿಂಗಕಾಮಿ ಎಂದು ಕರೆದರೆ ಹೇಗಾಗುತ್ತದೆ? ಇದು ಒಂದು ದೊಡ್ಡ ವೇದಿಕೆ. ಲೈಂಗಿಕತೆ ವಿಚಾರದಲ್ಲಿ ಈ ರೀತಿ ಲೇಬಲ್ ಮಾಡುವುದು ಬೇಜವಾಬ್ದಾರಿಯುತ ಮಾತ್ರವಲ್ಲ, ಲಕ್ಷಾಂತರ ವೀಕ್ಷಕರ ಮುಂದೆ ಯಾರೊಬ್ಬರ, ವಿಶೇಷವಾಗಿ ಅವಿವಾಹಿತ ಹುಡುಗಿಯ ಇಮೇಜ್‌ಗೆ ಹಾನಿ ಮಾಡುತ್ತದೆ’ ಎಂದು ಅವರು ಒತ್ತಿ ಹೇಳಿದರು.

ಕುನಿಕಾ ಏನು ಹೇಳಿದರು ಗೊತ್ತಾ?

ದೀಪಕ್ ಅವಳ ಮೇಲೆ ಪ್ರಶ್ನೆಗಳ ಸುರಿಮಳೆಗೈಯುತ್ತಿದ್ದಂತೆ, ಕುಣಿಕಾ ತಕ್ಷಣ ತನ್ನನ್ನು ತಾವು ಸಮರ್ಥಿಸಿಕೊಳ್ಳಲು ಪ್ರಾರಂಭಿಸಿದರು. ಅವರ ಮಾತಲ್ಲಿ ಏರು ಧ್ವನಿ ಇತ್ತು. ಇದು ಮನೆಯಲ್ಲಿ  ಉದ್ವಿಗ್ನ ವಾತಾವರಣವನ್ನು ಸೃಷ್ಟಿಸಿತು. ‘ನಾನು ಇಲ್ಲಿ ಜಗಳವಾಡಲು ಬಂದಿಲ್ಲ’ ಎಂದು ಹೇಳಿದರು.

ಇದನ್ನೂ ಓದಿ:

ಈ ಗಂಭೀರ ಚರ್ಚೆಯ ನಡುವೆ, ಮಾಲತಿ ಮತ್ತೊಂದು ಪ್ರಮುಖ ಸಂಗತಿಯನ್ನು ಬಹಿರಂಗಪಡಿಸಿದರು. ಫ್ಯಾಮಿಲಿ ವೀಕ್‌ನಲ್ಲಿ, ಕುನಿಕಾಳ ಮಗ ಅಯಾನ್ ಅವಳನ್ನು ಭೇಟಿ ಮಾಡಿದ್ದರು. ಅವರು ತಮ್ಮ ತಾಯಿಯ ಹೇಳಿಕೆಗೆ ಕ್ಷಮೆಯಾಚಿಸಿದ್ದಾಗಿ ವಿವರಿಸಿದರು. ಕುಣಿಕಾಳ ಹೇಳಿಕೆ ಎಷ್ಟು ನೋವುಂಟುಮಾಡಿದೆ ಎಂಬುದನ್ನು ಎತ್ತಿ ತೋರಿಸುತ್ತದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ಇಂದು ವಟಸಾವಿತ್ರಿ ವೃತವನ್ನು ಆಚರಿಸುವ ಪವಿತ್ರ ದಿನ!
ಇಂದು ವಟಸಾವಿತ್ರಿ ವೃತವನ್ನು ಆಚರಿಸುವ ಪವಿತ್ರ ದಿನ!
ಮಗನಿಗೆ ಬಣ್ಣ ಹಚ್ಚಿಸಿದ ರಿಷಬ್ ಶೆಟ್ಟಿ: ಯಕ್ಷಗಾನ ವೇದಿಕೆಯಲ್ಲಿ ರನ್ವಿತ್
ಮಗನಿಗೆ ಬಣ್ಣ ಹಚ್ಚಿಸಿದ ರಿಷಬ್ ಶೆಟ್ಟಿ: ಯಕ್ಷಗಾನ ವೇದಿಕೆಯಲ್ಲಿ ರನ್ವಿತ್
ಬಿಡದಿ ಟೌನ್​ಶಿಪ್: ರಾಜ್ಯವ್ಯಾಪಿ ಜನಾಂದೋಲನಕ್ಕೆ ಕುಮಾರಸ್ವಾಮಿ ತಂತ್ರ
ಬಿಡದಿ ಟೌನ್​ಶಿಪ್: ರಾಜ್ಯವ್ಯಾಪಿ ಜನಾಂದೋಲನಕ್ಕೆ ಕುಮಾರಸ್ವಾಮಿ ತಂತ್ರ
ರಾಮಮಂದಿರ ದೇಣಿಗೆ ಲೂಟಿ; ಬೀದರ್​ ಶಾಸಕನ ವಿರುದ್ಧವೂ ಎಸ್​ಐಟಿಗೆ ದೂರು
ರಾಮಮಂದಿರ ದೇಣಿಗೆ ಲೂಟಿ; ಬೀದರ್​ ಶಾಸಕನ ವಿರುದ್ಧವೂ ಎಸ್​ಐಟಿಗೆ ದೂರು
ಪುತ್ರನ ಕಳೆದುಕೊಂಡ ಭಾಮಾ ಹರೀಶ್ ಅವರ ತಬ್ಬಿ ಸಂತೈಸಿದ ಧ್ರುವ ಸರ್ಜಾ
ಪುತ್ರನ ಕಳೆದುಕೊಂಡ ಭಾಮಾ ಹರೀಶ್ ಅವರ ತಬ್ಬಿ ಸಂತೈಸಿದ ಧ್ರುವ ಸರ್ಜಾ
ಶಾಲೆ ಒಳಗಡೆ ಬೆಂಕಿ ಹಚ್ಚಿದ ಕಿಡಿಗೇಡಿಗಳು: ಯೂನಿಫಾರ್ಮ್ ಬೆಂಕಿಗಾಹುತಿ
ಶಾಲೆ ಒಳಗಡೆ ಬೆಂಕಿ ಹಚ್ಚಿದ ಕಿಡಿಗೇಡಿಗಳು: ಯೂನಿಫಾರ್ಮ್ ಬೆಂಕಿಗಾಹುತಿ
ಪ್ರದೀಪ್ ಈಶ್ವರ್ ನಡವಳಿಕೆಗೆ ಕೈಮುಗಿದ ಕುಮಾರಸ್ವಾಮಿ
ಪ್ರದೀಪ್ ಈಶ್ವರ್ ನಡವಳಿಕೆಗೆ ಕೈಮುಗಿದ ಕುಮಾರಸ್ವಾಮಿ
ಸೆಶೆಲ್ಸ್‌ನ ಸ್ಟೇಟ್ ಹೌಸ್‌ನಲ್ಲಿ ಪ್ರಧಾನಿ ಮೋದಿಗೆ ಸರ್ಕಾರಿ ಗೌರವದ ಸ್ವಾಗತ
ಸೆಶೆಲ್ಸ್‌ನ ಸ್ಟೇಟ್ ಹೌಸ್‌ನಲ್ಲಿ ಪ್ರಧಾನಿ ಮೋದಿಗೆ ಸರ್ಕಾರಿ ಗೌರವದ ಸ್ವಾಗತ
ಮಗನ ಮೃತದೇಹದ ಎದುರು ಬಿಕ್ಕಿ ಬಿಕ್ಕಿ ಅತ್ತ ನಿರ್ಮಾಪಕ ಭಾಮಾ ಹರೀಶ್
ಮಗನ ಮೃತದೇಹದ ಎದುರು ಬಿಕ್ಕಿ ಬಿಕ್ಕಿ ಅತ್ತ ನಿರ್ಮಾಪಕ ಭಾಮಾ ಹರೀಶ್
ಉತ್ತರ ಕನ್ನಡದ ಹಲವೆಡೆ ವರುಣಾರ್ಭಟ! ಹೊಳೆಯಂತಾದ ರಸ್ತೆಗಳು
ಉತ್ತರ ಕನ್ನಡದ ಹಲವೆಡೆ ವರುಣಾರ್ಭಟ! ಹೊಳೆಯಂತಾದ ರಸ್ತೆಗಳು