AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Tukali Santhosh: ‘ತುಕಾಲಿ ಅಂತ ಕರೆಯೋದು ಸರಿ ಎನಿಸುತ್ತಿಲ್ಲ’; ಸಂತೋಷ್​ ಹೆಸರಿಗೆ ಬಿಗ್​ ಬಾಸ್​ ತಕರಾರು

Bigg Boss Kannada: ‘ಮನೆಯಲ್ಲಿ ಒಂದು ಸಮಸ್ಯೆ ಎದುರಾಗಿದೆ. ಈ ಮನೆಯಲ್ಲಿ ಇಬ್ಬರು ಸಂತೋಷ್​ ಕುಮಾರ್​ ಇದ್ದಾರೆ. ಅದರಿಂದ ವೀಕ್ಷಕರು ಗೊಂದಲಕ್ಕೆ ಒಳಗಾಗುತ್ತಿದ್ದಾರೆ. ನಿಮ್ಮನ್ನು ಏನೆಂದು ಕರೆಯಬೇಕು’ ಎಂದು ಬಿಗ್​ ಬಾಸ್​ ಪ್ರಶ್ನಿಸಿದರು. ‘ನನ್ನನ್ನು ತುಕಾಲಿ ಸಂತೋಷ್​ ಎಂದೇ ಕರೆಯರಿ’ ಎಂದು ಹಾಸ್ಯ ನಟ ಸಂತು ಹೇಳಿದರು. ಆದರೆ...

Tukali Santhosh: ‘ತುಕಾಲಿ ಅಂತ ಕರೆಯೋದು ಸರಿ ಎನಿಸುತ್ತಿಲ್ಲ’; ಸಂತೋಷ್​ ಹೆಸರಿಗೆ ಬಿಗ್​ ಬಾಸ್​ ತಕರಾರು
ತುಕಾಲಿ ಸಂತೋಷ್​
ಮದನ್​ ಕುಮಾರ್​
|

Updated on: Oct 09, 2023 | 10:47 PM

Share

ಕಾಮಿಡಿ ನಟ ತುಕಾಲಿ ಸಂತೋಷ್​ (Tukali Santhosh) ಅವರು ‘ಬಿಗ್​ ಬಾಸ್​ ಕನ್ನಡ ಸೀಸನ್​ 10’ (Bigg Boss Kannada Season 10) ಶೋನಲ್ಲಿ ಸ್ಪರ್ಧಿಸುತ್ತಿದ್ದಾರೆ. ಅವರು ಈ ರೀತಿ ಹೆಸರು ಇಟ್ಟುಕೊಂಡಿದ್ದರ ಬಗ್ಗೆ ಅನೇಕರಿಗೆ ಕೌತುಕ ಇದೆ. ಆ ಬಗ್ಗೆ ಅವರು ಓಪನಿಂಗ್​ ಸಂಚಿಕೆಯಲ್ಲೇ ಮಾಹಿತಿ ನೀಡಿದರು. ಒಂದು ಸ್ಕಿಟ್​ನಲ್ಲಿ ತುಕಾಲಿ ಎಂಬ ಪಾತ್ರ ಮಾಡಿದ ಬಳಿಕ ಅವರ ಹೆಸರಿನ ಜೊತೆ ಆ ವಿಶೇಷಣ ಸೇರಿಕೊಂಡಿತು. ಈಗ ಬಿಗ್​ ಬಾಸ್​ (Bigg Boss) ಕೂಡ ಈ ಹೆಸರಿನ ಬಗ್ಗೆ ತಕರಾರು ತೆಗೆದಿದ್ದಾರೆ. ‘ನಿಮ್ಮನ್ನು ತುಕಾಲಿ ಅಂತ ಕರೆಯೋದು ಅಷ್ಟೊಂದು ಸರಿ ಎನಿಸುತ್ತಿಲ್ಲ’ ಎಂದು ಬಿಗ್​ ಬಾಸ್​ ಹೇಳಿದ್ದಾರೆ. ಆ ಘಟನೆ ಸಖತ್​ ಫನ್ನಿ ಆಗಿತ್ತು.

ಬಿಗ್​ ಬಾಸ್​ ಮನೆಯಲ್ಲಿ ಒಂದೇ ಹೆಸರಿನ ಒಬ್ಬರು ವ್ಯಕ್ತಿಗಳು ಬಂದಿದ್ದು ಇದೇ ಮೊದಲೇನೂ ಅಲ್ಲ. ಈ ಹಿಂದಿನ ಸೀಸನ್​ನಲ್ಲಿ ದಿವ್ಯಾ ಉರುಡುಗ, ದಿವ್ಯಾ ಸುರೇಶ್​ ಇದ್ದರು. ಈಗ 10ನೇ ಸೀಸನ್​ನಲ್ಲಿ ವರ್ತೂರು ಸಂತೋಷ್​ ಮತ್ತು ತುಕಾಲಿ ಸಂತೋಷ್​ ಅವರು ಬಂದಿದ್ದಾರೆ. ಸಂತೋಷ್​ ಅಂತ ಕರೆದಾಗ ಇಬ್ಬರಿಗೂ ಗೊಂದಲ ಆಗಬಹುದು. ಬಿಗ್​ ಬಾಸ್​ ಆದೇಶ ನೀಡಿದಾಗ ಅದು ಯಾವ ಸಂತೋಷ್​ಗೆ ಸಂಬಂಧಿಸಿದ್ದು ಎಂಬ ಪ್ರಶ್ನೆ ಮೂಡಬಹುದು. ಆ ಕಾರಣಕ್ಕಾಗಿ ಬಿಗ್​ ಬಾಸ್​ ತಕರಾರು ತೆಗೆದಿದ್ದಾರೆ.

ಇದನ್ನೂ ಓದಿ: ಬಿಗ್​ ಬಾಸ್​ ಮನೆಯಲ್ಲಿ ನೈಜೀರಿಯಾ ಕನ್ನಡಿಗ ಮೈಕೆಲ್​ ಅಜಯ್​; ಏನು ಇವರ ಹಿನ್ನೆಲೆ?

‘ಮನೆಯಲ್ಲಿ ಒಂದು ಸಮಸ್ಯೆ ಎದುರಾಗಿದೆ. ಈ ಮನೆಯಲ್ಲಿ ಇಬ್ಬರು ಸಂತೋಷ್​ ಕುಮಾರ್​ ಇದ್ದಾರೆ. ಅದರಿಂದ ವೀಕ್ಷಕರು ಗೊಂದಲಕ್ಕೆ ಒಳಗಾಗುತ್ತಿದ್ದಾರೆ. ನಿಮ್ಮನ್ನು ಏನೆಂದು ಕರೆಯಬೇಕು’ ಎಂದು ಬಿಗ್​ ಬಾಸ್​ ಪ್ರಶ್ನಿಸಿದರು. ‘ನನ್ನನ್ನು ತುಕಾಲಿ ಸಂತೋಷ್​ ಎಂದೇ ಕರೆಯರಿ’ ಎಂದು ಹಾಸ್ಯ ನಟ ಸಂತು ಹೇಳಿದರು. ‘ನಿಮ್ಮನ್ನು ತುಕಾಲಿ ಅಂತ ಕರೆಯೋದು ಅಷ್ಟು ಸರಿ ಅನಿಸುತ್ತಿಲ್ಲ. ಹಾಗಾಗಿ ಗೌರವಯುತವಾಗಿ ನಿಮ್ಮನ್ನು ತುಕಾಲಿ ಅವರೇ ಅಂತ ಕರೆಯುತ್ತೇವೆ’ ಎಂದು ಹೇಳುವ ಮೂಲಕ ಬಿಗ್​ ಬಾಸ್​ ನಗೆ ಚಟಾಕಿ ಹಾರಿಸಿದರು.

ಮೊದಲ ದಿನ ಪತ್ನಿಯ ಜೊತೆ ಸಂತೋಷ್​ ಅವರು ಬಿಗ್​ ಬಾಸ್​ ವೇದಿಕೆ ಏರಿದ್ದರು. ‘ಹೆಂಡತಿಯನ್ನೂ ನಿಮ್ಮ ಜೊತೆ ಬಿಗ್​ ಬಾಸ್​ಗೆ ಕಳಿಸೋಣವೇ’ ಎಂದು ಸುದೀಪ್​ ಕೇಳಿದರು. ಆಗ ‘ಖಂಡಿತಾ ಬೇಡ’ ಎಂದು ಸಂತೋಷ್​ ರಾಗ ಎಳೆದಿದ್ದರು. ಕಡೆಗೂ ಪತ್ನಿಯನ್ನು ಬಿಟ್ಟು ಸಂತೋಷ್​ ಒಬ್ಬರೇ ಬಿಗ್​ ಬಾಸ್​ಗೆ ಬಂದರು. ಎಲ್ಲರನ್ನೂ ನಗಿಸುವ ಮೂಲಕ ಅವರು ಗಮನ ಸೆಳೆಯುತ್ತಿದ್ದಾರೆ. ಈಶಾನಿ, ನಮ್ರತಾ ಗೌಡ, ವಿನಯ್​,ಸ್ನೇಹಿತ್​ ಗೌಡ, ನೀತು ವನಜಾಕ್ಷಿ, ಮೈಕೆಲ್​ ಅಜಯ್​, ಶ್ನೇಕ್​ ಶ್ಯಾಮ್​, ಗೌರೀಶ್ ಅಕ್ಕಿ, ಭಾಗ್ಯಶ್ರೀ, ಸಿರಿ ಮುಂತಾದವರು ಬಿಗ್​ ಬಾಸ್​ ಮನೆಯಲ್ಲಿ ಆಟ ಆಡುತ್ತಿದ್ದಾರೆ. ದಿನದ 24 ಗಂಟೆಗಳ ಕಾಲ ‘ಜಿಯೋ ಸಿನಿಮಾ’ದಲ್ಲಿ ಈ ಶೋ ಫ್ರೀ ಆಗಿ ವೀಕ್ಷಣೆಗೆ ಲಭ್ಯವಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ