AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Seetha Raama: ಅಶೋಕ್ ಕೈಯಲ್ಲಿ ಸಿಕ್ಕಿಬೀಳುತ್ತಾಳಾ ಆಫೀಸ್ ಲೆಕ್ಕಾಚಾರವನ್ನೇ ಬುಡಮೇಲು ಮಾಡಿದ್ದ ಭಾರ್ಗವಿ?

Seetha Raama: ಲೇಡಿಸ್ ಕ್ಲಬ್​ನಲ್ಲಿರುವುದು ಭಾರ್ಗವಿ ಹೌದೋ ಅಲ್ಲವೋ ಎಂಬ ಅನುಮಾನ ಬಗೆಹರಿಸಿಕೊಳ್ಳಲು ಅಶೋಕ್ ರಾಮನ ಮನೆಗೆ ಬರುತ್ತಾನೆ. ಆದರೆ  ಭಾರ್ಗವಿ ಮನೆಯಲ್ಲಿರುವುದನ್ನು ನೋಡಿ ತನ್ನ ಲೆಕ್ಕಾಚಾರ ಹೇಗೆ ತಪ್ಪಾಯಿತು ಎಂದು ಯೋಚಿಸುತ್ತಾನೆ. ಅಷ್ಟರಲ್ಲಿ ಅಲ್ಲಿಗೆ ಬಂದ ರಾಮನ ಚಿಕ್ಕಮ್ಮ, ಭಾರ್ಗವಿ  ಬಳಿ ನೀವು ಲೇಡಿಸ್ ಕ್ಲಬ್ ಗೆ ಇನ್ನು ಹೋಗಿಲ್ಲವಾ? ಎಂದು ಕೇಳುತ್ತಾಳೆ. ಈ ಸುಳಿವು ಅಶೋಕ್ ನಿಗೆ, ಭಾರ್ಗವಿಯೇ  ಈ ಆಟಕ್ಕೆಲ್ಲಾ ಸೂತ್ರಧಾರಿ ಎಂಬುದು ತಿಳಿಯುತ್ತಾ?

Seetha Raama: ಅಶೋಕ್ ಕೈಯಲ್ಲಿ ಸಿಕ್ಕಿಬೀಳುತ್ತಾಳಾ ಆಫೀಸ್ ಲೆಕ್ಕಾಚಾರವನ್ನೇ ಬುಡಮೇಲು ಮಾಡಿದ್ದ ಭಾರ್ಗವಿ?
ಭಾರ್ಗವಿ
ಪ್ರೀತಿ ಭಟ್​, ಗುಣವಂತೆ
| Updated By: ರಾಜೇಶ್ ದುಗ್ಗುಮನೆ|

Updated on: Oct 10, 2023 | 8:25 AM

Share

‘ಸೀತಾ ರಾಮ’ (Seetha Raama Serial) ಧಾರಾವಾಹಿ (Serial) ಸಂಚಿಕೆ 63: ಬ್ಯಾಂಕ್​ನವರು ಎಂದು ಸುಳ್ಳು ಹೇಳಿ ಬಂದ ಗುಂಡಾಗಳು ರಾಮ್ ಕೈಯಲ್ಲಿ ಸಿಕ್ಕಿ ಬೀಳುತ್ತಾರೆ. ಏನು ಅರಿಯದ ಸೀತಾಳನ್ನು ಹೆದರಿಸಿ ತನ್ನ ಕೆಲಸ ಸಾಧಿಸಿಕೊಳ್ಳಬೇಕೆಂದಿದ್ದ ಲಾಯರ್ ರುದ್ರ ಪ್ರತಾಪ್, ಪುಡಿ ರೌಡಿಗಳನ್ನು ಕಳುಹಿಸಿರುತ್ತಾನೆ. ಆದರೆ ಅವರು ಸೀತಾಳನ್ನು ಹೆದರಿಸುವುದನ್ನು ನೋಡಿದ ರಾಮ್, ಅವರ ಬಗ್ಗೆ ವಿಚಾರಿಸುತ್ತಾನೆ. ಅವನ ಮಾತಿಗೆ ಹೆದರಿದ ರೌಡಿಗಳು ಅಲ್ಲಿಂದ ಪರಾರಿಯಾಗುತ್ತಾರೆ. ಈ ವಿಷಯ ರುದ್ರ ಪ್ರತಾಪ್​ಗೂ ತಿಳಿದು, ತನ್ನ ಪ್ಲಾನ್ ಹಾಳಾದ ಸಿಟ್ಟಿಗೆ ಕೆಂಡಕಾರುತ್ತಾನೆ.

ಇನ್ನು ಅಶೋಕ್ ರಾಮನ ಬದಲು ಫೈಲ್ ತೆಗೆದುಕೊಂಡು, ಮ್ಯಾನೇಜರ್ ಚರಣ್ ಕೊಟ್ಟಿರುವ ವಿಳಾಸ ಹಿಡಿದುಕೊಂಡು ಹೊರಡುತ್ತಾನೆ. ಏನಾದರೂ ಮಾಡಿ ಇದರ ಹಿಂದಿರುವ ಕೈ ಯಾರು ಎಂಬುದನ್ನು ತಿಳಿದುಕೊಳ್ಳಬೇಕು ಎಂಬುದು ಅವರ ಆಸೆಯಾದರೂ, ಕಳ್ಳನ ನಡೆ ಹೇಗಿರಬಹುದು ಎಂಬುದು ತಿಳಿದಿಲ್ಲದ ಕಾರಣ ನಿಧಾನವಾಗಿ ಅವರನ್ನು ಹಿಡಿಯಬೇಕು ಎಂದು ತೀರ್ಮಾನ ಮಾಡಿಕೊಳ್ಳುತ್ತಾರೆ. ಆದರೆ ಈ ವಿಷಯ ರಾಮನಿಂದ ಚರಣ್​ಗೆ ತಿಳಿದು ಅವನು ಭಾರ್ಗವಿಯನ್ನು ಎಚ್ಚರಿಸುತ್ತಾನೆ. ಅದನ್ನು ತಿಳಿದು ಅವಳು ತನ್ನ ಮಾರ್ಗ ಬದಲಾಯಿಸುತ್ತಾಳೆ.

ಇದನ್ನೂ ಓದಿ: ದಕ್ಷಿಣದಲ್ಲೂ ಬಾಲಿವುಡ್​ನಲ್ಲೂ ಬ್ಯುಸಿ ಆದ ‘ಸೀತಾ ರಾಮಂ’ ಸುಂದರಿ

ಸಿಹಿಯನ್ನು ಸ್ಕೂಲ್ ನಿಂದ ಕರೆದುಕೊಂಡು ಹೋಗಲು ಬಂದ ರಾಮ್ ಮತ್ತು ಸೀತಾ ಅವಳ ಬೇಡಿಕೆ ಕೇಳಿ ಹೆದರುತ್ತಾರೆ. ಫ್ರೆಂಡ್ ಮನೆಗೆ ಹೋಗೋಣ ಎಂದು ಹಠ ಮಾಡುತ್ತಾಳೆ. ರಾಮ್ ನಿಗೆ ಕರೆದುಕೊಂಡು ಹೋಗುವ ಹಾಗಿಲ್ಲ, ಬೇಡ ಎಂದರೆ ಅವಳಿಗೆ ಬೇಸರವಾಗುತ್ತದೆ ಹಾಗಾಗಿ ಏನು ಮಾಡಬೇಕು ಎಂದು ತಿಳಿಯದೆ ಕಂಗಾಲಾಗಿ, ಬಳಿಕ ಹೋಗೋಣ ಎನ್ನುತ್ತಾನೆ. ಇನ್ನು ಲೇಡಿಸ್ ಕ್ಲಬ್ ನಲ್ಲಿರುವುದು ಭಾರ್ಗವಿ ಹೌದೋ ಅಲ್ಲವೋ ಎಂಬ ಅನುಮಾನ ಬಗೆಹರಿಸಿಕೊಳ್ಳಲು ಅಶೋಕ್ ರಾಮನ ಮನೆಗೆ ಬರುತ್ತಾನೆ. ಆದರೆ  ಭಾರ್ಗವಿ ಮನೆಯಲ್ಲಿರುವುದನ್ನು ನೋಡಿ ತನ್ನ ಲೆಕ್ಕಾಚಾರ ಹೇಗೆ ತಪ್ಪಾಯಿತು ಎಂದು ಯೋಚಿಸುತ್ತಾನೆ. ಅಷ್ಟರಲ್ಲಿ ಅಲ್ಲಿಗೆ ಬಂದ ರಾಮನ ಮತ್ತೊಂದು ಚಿಕ್ಕಮ್ಮ, ಭಾರ್ಗವಿ  ಬಳಿ ನೀವು ಲೇಡಿಸ್ ಕ್ಲಬ್​ಗೆ ಇನ್ನು ಹೋಗಿಲ್ಲವಾ? ಎಂದು ಕೇಳುತ್ತಾಳೆ. ಈ ಸುಳಿವು ಅಶೋಕ್​ನಿಗೆ, ಭಾರ್ಗವಿಯೇ  ಈ ಆಟಕ್ಕೆಲ್ಲಾ ಸೂತ್ರಧಾರಿ ಎಂಬುದು ತಿಳಿಯುತ್ತಾ? ಮುಂದೇನಾಗಬಹುದು? ಕಾದು ನೋಡೋಣ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ