AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bigg Boss Finale: ಬಿಗ್​ ಬಾಸ್​ನಿಂದ ದಿವ್ಯಾ ಉರುಡುಗ ಔಟ್​; ಆಪ್ತ ಗೆಳತಿಯನ್ನೇ ಹಿಂದಿಕ್ಕಿದ ಅರವಿಂದ್​​ ಕೆಪಿ

Divya Uruduga: ಬಿಗ್​ ಬಾಸ್​ ಕನ್ನಡ ಸೀಸನ್​ 8ರ ಫಿನಾಲೆಗೆ ಎಂಟ್ರಿ ಪಡೆಯುವ ಮೂಲಕ ನಟಿ ದಿವ್ಯಾ ಉರುಡುಗ ಅವರು ಭರವಸೆ ಮೂಡಿಸಿದ್ದರು. ಆದರೆ ಇನ್ನೇನು ಟ್ರೋಫಿ ಕೈಯಲ್ಲಿ ಹಿಡಿಯಬೇಕು ಎನ್ನುವಷ್ಟರಲ್ಲಿ ಅವರು ಎಲಿಮಿನೇಟ್​ ಆಗಿದ್ದಾರೆ.

Bigg Boss Finale: ಬಿಗ್​ ಬಾಸ್​ನಿಂದ ದಿವ್ಯಾ ಉರುಡುಗ ಔಟ್​; ಆಪ್ತ ಗೆಳತಿಯನ್ನೇ ಹಿಂದಿಕ್ಕಿದ ಅರವಿಂದ್​​ ಕೆಪಿ
ದಿವ್ಯಾ ಉರುಡುಗ
TV9 Web
| Edited By: |

Updated on:Aug 08, 2021 | 10:50 PM

Share

ಬಿಗ್​ ಬಾಸ್​ ಕನ್ನಡ ಸೀಸನ್​ 8ರ ಫಿನಾಲೆ (Bigg Boss Finale) ಎಪಿಸೋಡ್​ನಲ್ಲಿ ದಿವ್ಯಾ ಉರುಡುಗ (Divya Uruduga) ಎಲಿಮಿನೇಟ್​ ಆಗಿದ್ದಾರೆ. 120 ದಿನಗಳ ಕಾಲ ಕಠಿಣ ಪೈಪೋಟಿ ನೀಡಿದ್ದ ಅವರು ಫಿನಾಲೆ ಪ್ರವೇಶಿಸುವಲ್ಲಿ ಯಶಸ್ವಿ ಆಗಿದ್ದರು. ಟಾಪ್​ 3 ಸ್ಪರ್ಧಿಗಳಲ್ಲಿ ಸ್ಥಾನ ಪಡೆಯುವ ಮೂಲಕ ಭರವಸೆ ಮೂಡಿಸಿದ್ದರು. ಆದರೆ ಕೊನೇ ಕ್ಷಣದಲ್ಲಿ ಅವರಿಗೆ ಹಿನ್ನಡೆ ಆಗಿದೆ. ವೀಕ್ಷಕರಿಂದ ಹೆಚ್ಚು ವೋಟ್​ ಪಡೆಯುವಲ್ಲಿ ಅವರು ವಿಫಲರಾಗಿದ್ದಾರೆ. ಮಂಜು ಪಾವಗಡ, ಅರವಿಂದ್​ ಕೆಪಿ (Aravind KP) ಮತ್ತು ದಿವ್ಯಾ ಉರುಡುಗ ಫಿನಾಲೆ ಪ್ರವೇಶಿಸಿದ್ದರು. ದಿವ್ಯಾಗಿಂತಲೂ ಅರವಿಂದ್​ ಹೆಚ್ಚು ವೋಟ್​ ಪಡೆಯುವ ಮೂಲಕ ತಮ್ಮ ಆಪ್ತ ಸ್ನೇಹಿತೆಯನ್ನೇ ಹಿಂದಿಕ್ಕಿದ್ದಾರೆ. ಈಗ ಮಂಜು ಮತ್ತು ಅರವಿಂದ್​ ನಡುವೆ ಹಣಾಹಣಿ ಮುಂದುವರಿದಿದೆ.

ಈ ಸೀಸನ್​ನಲ್ಲಿ ಅರವಿಂದ್​ ಕೆಪಿ ಮತ್ತು ದಿವ್ಯಾ ಉರುಡುಗ ಅವರು ಬೆಸ್ಟ್​ ಜೋಡಿ ಆಗಿದ್ದರು. ಎಲ್ಲ ವಿಚಾರದಲ್ಲಿಯೂ ಒಬ್ಬರಿಗೊಬ್ಬರು ಸಪೋರ್ಟ್​ ಮಾಡಿಕೊಳ್ಳುತ್ತ ಮುಂದೆ ಸಾಗುತ್ತಿದ್ದರು. ಇಬ್ಬರೂ ರಿಯಲ್​ ಲೈಫ್​ನಲ್ಲಿ ಕೂಡ ಜೊತೆಯಾಗಿದ್ದರೆ ಚೆಂದ ಎಂದು ವೀಕ್ಷಕರು ಮಾತನಾಡಿಕೊಳ್ಳುವ ಮಟ್ಟಕ್ಕೆ ಈ ಜೋಡಿಯ ನಡುವೆ ಬಾಂಧವ್ಯ ಇತ್ತು. ಅಂತಿಮವಾಗಿ ಅವರಿಬ್ಬರ ನಡುವೆಯೇ ಬಿಗ್​ ಬಾಸ್​ ಫಿನಾಲೆಯ ಟಫ್​ ಕಾಂಪಿಟೀಷನ್​ ನಡೆಯಿತು.

ಬಿಗ್​ ಬಾಸ್​ ಮನೆಯಲ್ಲಿ ದಿವ್ಯಾ ಉರುಡುಗಗೆ ಹೋಲಿಸಿದರೆ ಅರವಿಂದ್​​ ಅವರಿಗೆ ಜನಪ್ರಿಯತೆ ಜಾಸ್ತಿ ಇತ್ತು. ಅವರು ಮನರಂಜನೆ ಕ್ಷೇತ್ರದಿಂದ ಬಾರದಿದ್ದರೂ ಹೆಚ್ಚು ವೋಟ್​ ಪಡೆಯುವಲ್ಲಿ ಯಶಸ್ವಿ ಆದರು. ಟಾಸ್ಕ್​ನಲ್ಲಿಯೂ ಅವರು ಹಿಂದೆ ಬಿದ್ದಿರಲಿಲ್ಲ. ಅವರ ಜೊತೆ ಹೆಚ್ಚು ಆಪ್ತವಾಗಿ ಗುರುತಿಸಿಕೊಂಡಿದ್ದೇ ದಿವ್ಯಾಗೆ ಮುಳುವಾಗಿರಬಹುದು ಎಂಬ ಅಭಿಪ್ರಾಯ ವೀಕ್ಷಕರ ವರ್ಗದಿಂದ ಕೇಳಿಬರುತ್ತಿದೆ.

ತಾವು ಔಟ್​ ಎಂದು ಗೊತ್ತಾದ ತಕ್ಷಣ ದಿವ್ಯಾ ಉರುಡುಗ ಭಾವುಕರಾದರು. ಅವರಿಗಿಂತಲೂ ಹೆಚ್ಚಾಗಿ ಅರವಿಂದ್​ ಅವರು ಎಮೋಷನಲ್​ ಆದರು. ಕಣ್ಣೀರು ಹಾಕುತ್ತಲೇ ದಿವ್ಯಾ ಅವರು ತಮ್ಮ ಬಿಗ್​ ಬಾಸ್​ ಜರ್ನಿಗೆ ಅಂತ್ಯ ಹಾಡಿದರು. ಅವರ ಕಣ್ಣೀರು ಒರೆಸಿ ಅರವಿಂದ್​ ಮತ್ತು ಮಂಜು ಬೀಳ್ಕೊಟ್ಟರು. ‘ಇದು ನನ್ನ ಅದ್ಭುತ ಅನುಭವ. ಇದನ್ನು ನಾನು ಜೀವನ ಪರ್ಯಂತ ಕಾಪಾಡಿಕೊಳ್ಳುತ್ತೇನೆ’ ಎಂದು ದೊಡ್ಮನೆಯೊಳಗೆ ದಿವ್ಯಾ ಕೊನೇ ಮಾತುಗಳನ್ನು ಆಡಿದರು.​

ಇದನ್ನೂ ಓದಿ:

Bigg Boss Finale: ಬಿಗ್​ ಬಾಸ್​​ ಸ್ಕ್ರಿಪ್ಟೆಡ್ ಶೋ ಹೌದೋ ಅಲ್ಲವೋ? ಸುದೀಪ್​ ಎದುರು ನೇರವಾಗಿ ಉತ್ತರ ಕೊಟ್ಟ ವೈಷ್ಣವಿ

ಬಿಗ್​ ಬಾಸ್​ ಪ್ರಶಸ್ತಿ ಮೊತ್ತದಲ್ಲಿ ಏರಿಕೆ; ಟಾಪ್​ 5ನಲ್ಲಿರುವ ಎಲ್ಲರಿಗೂ ಸಿಗುತ್ತಿದೆ ಪ್ರೈಜ್​​​ ಅಮೌಂಟ್​

Published On - 10:33 pm, Sun, 8 August 21

Follow Us
ಖಾಸಗಿ ಏಜೆನ್ಸಿ ಧೋರಣೆ ಖಂಡಿಸಿ ಹಾಸನದಲ್ಲಿ ಗುತ್ತಿಗೆ ಕಾರ್ಮಿಕರ ಪ್ರತಿಭಟನೆ
ಖಾಸಗಿ ಏಜೆನ್ಸಿ ಧೋರಣೆ ಖಂಡಿಸಿ ಹಾಸನದಲ್ಲಿ ಗುತ್ತಿಗೆ ಕಾರ್ಮಿಕರ ಪ್ರತಿಭಟನೆ
ತಾಂತ್ರಿಕ ದೋಷದಿಂದ ನೇರಳೆ ಮಾರ್ಗ ಮೆಟ್ರೋ ಸಂಚಾರ ಬಂದ್- ಪ್ರಯಾಣಿಕರ ಪರದಾಟ
ತಾಂತ್ರಿಕ ದೋಷದಿಂದ ನೇರಳೆ ಮಾರ್ಗ ಮೆಟ್ರೋ ಸಂಚಾರ ಬಂದ್- ಪ್ರಯಾಣಿಕರ ಪರದಾಟ
ಮೃತರ ಕುಟುಂಬಕ್ಕೆ ನ್ಯಾಯ ಕೊಡಿಸಲು ಬದ್ಧ ಎಂದ ಶಾಸಕ ಪುಟ್ಟರಂಗಶೆಟ್ಟಿ
ಮೃತರ ಕುಟುಂಬಕ್ಕೆ ನ್ಯಾಯ ಕೊಡಿಸಲು ಬದ್ಧ ಎಂದ ಶಾಸಕ ಪುಟ್ಟರಂಗಶೆಟ್ಟಿ
‘ಆ ದಿನಗಳು’ ಸಿನಿಮಾ ನೆನೆದ ನಿರ್ದೇಶಕ ಕೆಎಂ ಚೈತನ್ಯ: ವಿಡಿಯೋ
‘ಆ ದಿನಗಳು’ ಸಿನಿಮಾ ನೆನೆದ ನಿರ್ದೇಶಕ ಕೆಎಂ ಚೈತನ್ಯ: ವಿಡಿಯೋ
ವಿನೋದ್ ಪ್ರಭಾಕರ್​​ಗೆ ಆಗಿದ್ದೇನು: ಮಾಹಿತಿ ನೀಡಿದ ಸಹ ನಟ ವಿಜಯ್ ಗೌಡ
ವಿನೋದ್ ಪ್ರಭಾಕರ್​​ಗೆ ಆಗಿದ್ದೇನು: ಮಾಹಿತಿ ನೀಡಿದ ಸಹ ನಟ ವಿಜಯ್ ಗೌಡ
ಮುಸ್ಲಿಂ ಸಮುದಾಯದ ಮತ್ತಿಬ್ಬರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ಚರ್ಚೆ
ಮುಸ್ಲಿಂ ಸಮುದಾಯದ ಮತ್ತಿಬ್ಬರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ಚರ್ಚೆ
ಅಡ್ಡಮತದಾನ ಮಾಡಿದವರಿಗೆ ತಕ್ಕ ಶಾಸ್ತಿ: ಹೈಕಮಾಂಡ್ ಗುಟ್ಟು ಬಿಚ್ಚಿಟ್ಟ ಅಶೋಕ್
ಅಡ್ಡಮತದಾನ ಮಾಡಿದವರಿಗೆ ತಕ್ಕ ಶಾಸ್ತಿ: ಹೈಕಮಾಂಡ್ ಗುಟ್ಟು ಬಿಚ್ಚಿಟ್ಟ ಅಶೋಕ್
ಪೋರ್ಟರ್, ರ‍್ಯಾಪಿಡೋ ಆ್ಯಪ್​​ಗಳ ವಿರುದ್ಧ ಬೀದಿಗಿಳಿದ ಗೂಡ್ಸ್ ವಾಹನ ಚಾಲಕರು
ಪೋರ್ಟರ್, ರ‍್ಯಾಪಿಡೋ ಆ್ಯಪ್​​ಗಳ ವಿರುದ್ಧ ಬೀದಿಗಿಳಿದ ಗೂಡ್ಸ್ ವಾಹನ ಚಾಲಕರು
ಯುಎಇ ದೇಶಕ್ಕೆ ರಫ್ತಾಗಲಿವೆ ಬ್ರಹ್ಮೋಸ್, ಆಕಾಶ್ ಕ್ಷಿಪಣಿಗಳು!
ಯುಎಇ ದೇಶಕ್ಕೆ ರಫ್ತಾಗಲಿವೆ ಬ್ರಹ್ಮೋಸ್, ಆಕಾಶ್ ಕ್ಷಿಪಣಿಗಳು!
ಬೆಂಗಳೂರು ರಸ್ತೆ ಅಭಿವೃದ್ಧಿ ಅನುದಾನದ ಬಗ್ಗೆ ತೇಜಸ್ವಿ ಸೂರ್ಯ ವಾಗ್ದಾಳಿ
ಬೆಂಗಳೂರು ರಸ್ತೆ ಅಭಿವೃದ್ಧಿ ಅನುದಾನದ ಬಗ್ಗೆ ತೇಜಸ್ವಿ ಸೂರ್ಯ ವಾಗ್ದಾಳಿ