AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bigg Boss Finale: ಬಿಗ್​ ಬಾಸ್​​ ಸ್ಕ್ರಿಪ್ಟೆಡ್ ಶೋ ಹೌದೋ ಅಲ್ಲವೋ? ಸುದೀಪ್​ ಎದುರು ನೇರವಾಗಿ ಉತ್ತರ ಕೊಟ್ಟ ವೈಷ್ಣವಿ

Vaishnavi Gowda: ವೈಷ್ಣವಿ ಟಾಪ್​ 4ರ ಸ್ಥಾನಕ್ಕೆ ಬರುತ್ತಾರೆ ಎಂದು ಹೆಚ್ಚಿನ ಜನರು ನಿರೀಕ್ಷಿಸಿರಲಿಲ್ಲ. ಅವರಿಗೆ ಬಿಗ್​ ಬಾಸ್​ ಶೋ ಸೂಕ್ತ ಅಲ್ಲ ಎಂಬ ಅಭಿಪ್ರಾಯ ಇಟ್ಟುಕೊಂಡಿದ್ದ ಅನೇಕರಿಗೆ ವೈಷ್ಣವಿ ಈಗ ಉತ್ತರ ನೀಡಿದ್ದಾರೆ.

Bigg Boss Finale: ಬಿಗ್​ ಬಾಸ್​​ ಸ್ಕ್ರಿಪ್ಟೆಡ್ ಶೋ ಹೌದೋ ಅಲ್ಲವೋ? ಸುದೀಪ್​ ಎದುರು ನೇರವಾಗಿ ಉತ್ತರ ಕೊಟ್ಟ ವೈಷ್ಣವಿ
ವೈಷ್ಣವಿ ಗೌಡ
TV9 Web
| Updated By: ಮದನ್​ ಕುಮಾರ್​|

Updated on: Aug 08, 2021 | 8:18 PM

Share

ನಟಿ ವೈಷ್ಣವಿ ಗೌಡ ಬಿಗ್​ ಬಾಸ್​ (Bigg Boss Kannada) ಮನೆಯಲ್ಲಿ ತುಂಬ ಭಿನ್ನವಾಗಿ ಗುರುತಿಸಿಕೊಂಡಿದ್ದರು. ಆರಂಭದಲ್ಲಿ ಅವರು ಇದ್ದ ರೀತಿಗೂ ನಂತರದಲ್ಲಿ ಅವರು ಕಾಣಿಸಿಕೊಂಡ ರೀತಿಗೂ ತುಂಬಾ ವ್ಯತ್ಯಾಸ ಇತ್ತು. ಬಿಗ್​ ಬಾಸ್​ ಶೋಗೆ ಬರುವುದಕ್ಕಿಂತಲೂ ಮುನ್ನ ವೈಷ್ಣವಿ (Vaishnavi Gowda) ಯಾವುದೇ ವಿವಾದಕ್ಕೆ ಸಿಲುಕಿಕೊಂಡಿರಲಿಲ್ಲ. ಆದರೆ ಬಿಗ್​ ಬಾಸ್​ ಎಂದರೆ ಒಂದು ವಿವಾದಾತ್ಮಕ ಶೋ ಎನ್ನುವ ಭಾವನೆ ಬಹುತೇಕರಲ್ಲಿ ಇದೆ. ಹಾಗಾಗಿ ಇದು ವೈಷ್ಣವಿಯಂಥವರಿಗೆ ಸೂಕ್ತ ಆಗುವ ಕಾರ್ಯಕ್ರಮ ಅಲ್ಲ ಎಂದು ಅನೇಕರು ಹೇಳಿದ್ದರಂತೆ. ಅಲ್ಲದೆ, ಇದು ಒಂದು ಸ್ಕ್ರಿಪ್ಟೆಡ್​ ಶೋ ಎಂದು ಸಹ ಹಲವರು ಜರಿದಿದ್ದರು. ಅದಕ್ಕೆಲ್ಲ ಈಗ ವೈಷ್ಣವಿ ಗೌಡ ಉತ್ತರ ನೀಡಿದ್ದಾರೆ.

ಬಿಗ್​ ಬಾಸ್​ನಿಂದ ಎಲಿಮಿನೇಟ್​ ಆದ ವೈಷ್ಣವಿ ಅವರನ್ನು ವೇದಿಕೆಗೆ ಕರೆದು ಸುದೀಪ್​ ಮಾತನಾಡಿಸಿದರು. ಆಗ ಈ ಎಲ್ಲ ವಿಚಾರಗಳು ಚರ್ಚೆಗೆ ಬಂದವು. ‘ಈ ಶೋ ನನ್ನಂಥವಳಿಗೆ ಅಲ್ಲ ಎಂಬ ಭಾವನೆ ಹಲವರಿಗೆ ಇತ್ತು. ಇಂದು ಅವರಿಗೆ ಅರಿವಾಗಿದೆ. ನಾನು ಭಿನ್ನವಾಗಿದ್ದೇನೆ ಎಂಬುದನ್ನು ತೋರಿಸಿದ್ದೇನೆ. ಎಲ್ಲರ ಪ್ರೀತಿ ಗಳಿಸಿದ್ದೇನೆ. ಅದು ಎಷ್ಟು ಕೋಟಿ ಕೊಟ್ಟರೂ ಸಿಗುವುದಿಲ್ಲ. ಸ್ವಾತಂತ್ರ್ಯದ ನಿಜವಾದ ರುಚಿ ಸಿಕ್ಕಿದ್ದೇ ನನಗೆ ಈ ಮನೆಯಲ್ಲಿ. ನಾನು ಸ್ವಂತಿಕೆಯಿಂದ ಇದ್ದೆ. ಯಾರ ಪ್ರಭಾವವೂ ನನ್ನ ಮೇಲೆ ಇರಲಿಲ್ಲ. ಇಲ್ಲಿ ಯಾವುದೂ ಸ್ಕ್ರಿಪ್ಟೆಡ್​ ಆಗಿರಲಿಲ್ಲ. ಇದನ್ನೆಲ್ಲ ಸ್ಕ್ರಿಪ್ಟ್​ ಮಾಡಲು ಸಾಧ್ಯವೇ ಇಲ್ಲ’ ಎಂದು ವೈಷ್ಣವಿ ಹೇಳಿದ್ದಾರೆ.

‘ಈ ಶೋಗೆ ಬರುವಾಗ ನಾನು ಯಾವುದೇ ನಿರೀಕ್ಷೆ ಇಟ್ಟುಕೊಂಡಿರಲಿಲ್ಲ. ಎಷ್ಟು ದಿನ ಸಾಧ್ಯವೋ ಅಷ್ಟು ಖುಷಿಯಾಗಿ ಇರಬೇಕು ಎಂದುಕೊಂಡಿದ್ದೆ. 120 ದಿನ ಪೂರ್ಣಗೊಳಿಸಿದ್ದಕ್ಕೆ ನನಗೆ ಖುಷಿ ಇದೆ. ಟಾಪ್​ 4ರವರೆಗೆ ಬಂದಿದ್ದಕ್ಕೆ ನನಗೆ ಹೆಮ್ಮೆ ಇದೆ. ಫಲಿತಾಂಶ ನಮ್ಮ ಕೈಯಲ್ಲಿ ಇಲ್ಲ. ನಾನು ನನ್ನ ಪ್ರಯತ್ನ ಮಾಡಿದ್ದೇನೆ’ ಎಂದು ತಮ್ಮ ಎಲಿಮಿನೇಷನ್​ ಬಗ್ಗೆ ವೈಷ್ಣವಿ ಮಾತನಾಡಿದ್ದಾರೆ.

ಇದನ್ನೂ ಓದಿ:

Vaishnavi Gowda: ದೊಡ್ಮನೆಯೊಳಗೆ ವೈಷ್ಣವಿ ಜೊತೆ ಚೆನ್ನಾಗಿದ್ದ ರಘು ಗೌಡ ಫಿನಾಲೆ ವೇಳೆಗೆ ಪ್ರಚಾರ ಮಾಡಿದ್ದು ಯಾರ ಪರವಾಗಿ?

‘ನಾನು ಮನುಷ್ಯಳೇ’; ಸುದೀಪ್​ ಎದುರು ವೈಷ್ಣವಿ ಹೀಗೆ ಹೇಳಿದ್ದೇಕೆ?

ಬಿಗ್​ ಬಾಸ್​ ಮನೆಯಲ್ಲಿ ಕೊನೇ ದಿನದ ವೇಕ್​ಅಪ್​ ಸಾಂಗ್​ ಯಾವುದು? ವೀಕ್ಷಕರಿಂದ ಬಗೆಬಗೆಯ ಕಮೆಂಟ್​

ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ