AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಗ್​ ಬಾಸ್​ ಮನೆಯಲ್ಲಿ ಕೊನೇ ದಿನದ ವೇಕ್​ಅಪ್​ ಸಾಂಗ್​ ಯಾವುದು? ವೀಕ್ಷಕರಿಂದ ಬಗೆಬಗೆಯ ಕಮೆಂಟ್​

Bigg Boss Finale: ‘ಕೊನೆಯ ದಿನದ ವೇಕ್​ಅಪ್​ ಸಾಂಗ್​ ಯಾವುದಾಗಿರಬಹುದು’ ಎಂದು ಪ್ರಶ್ನೆ ಕೇಳುವ ಮೂಲಕ ಕಲರ್ಸ್ ಕನ್ನಡ ವಾಹಿನಿಯು ವೀಕ್ಷಕರ ತಲೆಗೆ ಹುಳಬಿಟ್ಟಿದೆ. ಅದಕ್ಕೆ ಜನರು ಹಲವು ಬಗೆಯಲ್ಲಿ ಕಮೆಂಟ್​ ಮಾಡಿದ್ದಾರೆ.

ಬಿಗ್​ ಬಾಸ್​ ಮನೆಯಲ್ಲಿ ಕೊನೇ ದಿನದ ವೇಕ್​ಅಪ್​ ಸಾಂಗ್​ ಯಾವುದು? ವೀಕ್ಷಕರಿಂದ ಬಗೆಬಗೆಯ ಕಮೆಂಟ್​
ಬಿಗ್ ಬಾಸ್​ ಕನ್ನಡ ಸೀಸನ್​ 8
TV9 Web
| Edited By: |

Updated on: Aug 08, 2021 | 4:28 PM

Share

ಬಿಗ್​ ಬಾಸ್ (Bigg Boss Kannada)​ ಎಂದರೆ ವೀಕ್ಷಕರಿಗೆ ಮನರಂಜನೆಯ ಹಬ್ಬ. ಆದರೆ ಸ್ಪರ್ಧಿಗಳಿಗೆ ಹೊರಲೋಕದ ಯಾವ ಮನರಂಜನೆಯೂ ಅಲ್ಲಿರುವುದಿಲ್ಲ. ಟಿವಿ, ಫೋನ್​, ಇಂಟರ್​ನೆಟ್​ ಎಲ್ಲವೂ ಕಟ್​. ಆದರೂ ನಿಯಂತ್ರಿತ ವಾತಾವರಣದಲ್ಲಿ ನೂರಕ್ಕೂ ಹೆಚ್ಚು ದಿನ ವಾಸಿಸುವ ಬಿಗ್​ ಬಾಸ್​ ಸ್ಪರ್ಧಿಗಳಿಗೆ ಪ್ರತಿದಿನ ಒಂದೊಂದು ಹಾಡು ಕೇಳಿಸುತ್ತದೆ. ಪ್ರತಿ ಮುಂಜಾನೆ ಸ್ಪರ್ಧಿಗಳನ್ನು ನಿದ್ದೆಯಿಂದ ಎಚ್ಚರಗೊಳಿಸಲು ಯಾವುದಾದರೊಂದು ಸಿನಿಮಾದ ಹಾಡು ಹಾಕಲಾಗುತ್ತದೆ. ಇದು ಮೊದಲಿನಿಂದಲೂ ನಡೆದುಕೊಂಡು ಬಂದ ವಾಡಿಕೆ. ಇಂದು (ಆ.8) ಬಿಗ್ ಬಾಸ್​ ಕನ್ನಡ ಸೀಸನ್​ 8ಕ್ಕೆ ಕೊನೇ ದಿನ. ಇವತ್ತು ಮುಂಜಾನೆ ಈ ಸೀಸನ್​ನ ಕೊನೇ ಹಾಡು ಪ್ಲೇ ಆಗಿದೆ. ಆ ಹಾಡು ಯಾವುದು ಎಂಬ ಕೌತುಕ ವೀಕ್ಷಕರಲ್ಲಿ ಮೂಡಿದೆ.

ಈ ಕುತೂಹಲ ಮೂಡಲು ಕಾರಣ ಕಲರ್ಸ್​ ಕನ್ನಡ ವಾಹಿನಿಯ ಸೋಶಿಯಲ್​ ಮೀಡಿಯಾ ಪೋಸ್ಟ್​. ಆ.8ರ ಬೆಳಗ್ಗೆ ಒಂದು ಪೋಸ್ಟ್​ ಹಂಚಿಕೊಂಡಿರುವ ವಾಹಿನಿಯು, ‘ಕೊನೆಯ ದಿನದ ವೇಕ್​ಅಪ್​ ಸಾಂಗ್​ ಯಾವುದಾಗಿರಬಹುದು’ ಎಂದು ಪ್ರಶ್ನೆ ಕೇಳುವ ಮೂಲಕ ವೀಕ್ಷಕರ ತಲೆಗೆ ಹುಳಬಿಟ್ಟಿದೆ. ಅದಕ್ಕೆ ಜನರು ಹಲವು ಬಗೆಯಲ್ಲಿ ಕಮೆಂಟ್​ ಮಾಡಿದ್ದಾರೆ.

ಮಂಜು ಪಾವಗಡ, ದಿವ್ಯಾ ಸುರೇಶ್​ ಹಾಗೂ ಅರವಿಂದ್​ ಕೆ.ಪಿ. ಈಗ ಫಿನಾಲೆ ಕಣದಲ್ಲಿ ಇದ್ದಾರೆ. ಒಬ್ಬರಿಗೆ ಮಾತ್ರ ಗೆಲುವು. ಇನ್ನಿಬ್ಬರು ಸಮಾಧಾನಪಟ್ಟುಕೊಳ್ಳಲೇಬೇಕು. ಹಾಗಾಗಿ ಈ ಸಂದರ್ಭಕ್ಕೆ ಅನುಗುಣವಾಗಿ, ‘ಏನಾಗಲಿ ಮುಂದೆ ಸಾಗಿ ನೀ.. ಬಯಸಿದ್ದೆಲ್ಲ ಸಿಗದು ಬಾಳಲಿ..’ ಸಾಂಗ್​ ಪ್ಲೇ ಆಗಿರಬಹುದು ಎಂದು ಕೆಲವರು ಅಭಿಪ್ರಾಯ ಪಟ್ಟಿದ್ದಾರೆ. ‘ನಾವು ಮನೇಗ್​ ಹೋಗೋದಿಲ್ಲ..’ ಹಾಡು ಪ್ಲೇ ಆಗಿರಬಹುದು ಎಂದು ಕೆಲವರು ತಮಾಷೆ ಮಾಡಿದ್ದಾರೆ. ದರ್ಶನ್​ ಅಭಿನಯದ ಯಾವುದಾದರೂ ಸಿನಿಮಾಗಳ ಹಾಡುನ್ನು ಪ್ಲೇ ಮಾಡಿ ಎಂದು ಅನೇಕರು ಬೇಡಿಕೆ ಇಟ್ಟಿದ್ದಾರೆ. ಕಡೆಗೂ ಯಾವ ಸಾಂಗ್​ ಮೊಳಗಿದೆ ಎಂಬುದಕ್ಕೆ ಇಂದು ಸಂಜೆಯ ಎಪಿಸೋಡ್​ನಲ್ಲಿ ಉತ್ತರ ಸಿಗಬೇಕಿದೆ.

​ಬಿಗ್ ಬಾಸ್​ ಮನೆಯೊಳಗೆ ಎಲ್ಲ ಬಗೆಯ ಸ್ಪರ್ಧಿಗಳೂ ಎಂಟ್ರಿ ನೀಡಿರುತ್ತಾರೆ. ಸಿನಿಮಾ ಮತ್ತು ಕಿರುತೆರೆ ಲೋಕದ ಸೆಲೆಬ್ರಿಟಿಗಳು ಹೆಚ್ಚಿರುತ್ತಾರೆ. ಪ್ರತಿ ಮುಂಜಾನೆ ತಮ್ಮಿಷ್ಟದ ಹಾಡು ಅಥವಾ ತಾವೇ ನಟಿಸಿದ ಸಿನಿಮಾದ ಹಾಡು ಪ್ಲೇ ಆದರೆ ಅಂತಹ ಸ್ಪರ್ಧಿಗಳ ಸಂಭ್ರಮ ಹೇಳತೀರದು. ಈ ಸೀಸನ್​ನಲ್ಲಿ ಒಂದು ದಿನವಾದರೂ ತಮ್ಮ ಹಾಡು ಪ್ಲೇ ಮಾಡಿ ಎಂದು ಬಿಗ್​ ಬಾಸ್​ ಬಳಿ ಶಮಂತ್​ ಬ್ರೋ ಗೌಡ ಮನವಿ ಮಾಡಿಕೊಂಡಿದ್ದರು. ಅದನ್ನು ಬಿಗ್​ ಬಾಸ್​ ಈಡೇರಿಸಿದ್ದರು ಕೂಡ.

ಇದನ್ನೂ ಓದಿ:

ಬಿಗ್​ ಬಾಸ್​ ಮನೆಯಿಂದ ಹೊರಗಿದ್ದಾಗ ಮಂಜು ಪಾವಗಡಗೆ ಬಂದಿತ್ತು ಒಂದು ವಿಚಿತ್ರ ಕರೆ

ಬಿಗ್​ ಬಾಸ್​ ಮನೆಯಲ್ಲಿ ನಾಲ್ಕೇ ದಿನಕ್ಕೆ ಎರಡು ಲಕ್ಷ ಸಂಪಾದಿಸಿದ ಅರವಿಂದ್​ ಕೆಪಿ

ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು
ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ದೇವದತ್ ಪಡಿಕ್ಕಲ್ ಶತಕ; ಕ್ವಾರ್ಟರ್ ಫೈನಲ್​ಗೇರಿದ ಕರ್ನಾಟಕ
ದೇವದತ್ ಪಡಿಕ್ಕಲ್ ಶತಕ; ಕ್ವಾರ್ಟರ್ ಫೈನಲ್​ಗೇರಿದ ಕರ್ನಾಟಕ
ಮದ್ವೆಯಾಗಿ 5 ವರ್ಷವಾದರೂ ಅವ್ನ ಕೈಯಲ್ಲಿ ಮಗು ಮಾಡಿಕೊಳ್ಳಲಾಗಿಲ್ಲ
ಮದ್ವೆಯಾಗಿ 5 ವರ್ಷವಾದರೂ ಅವ್ನ ಕೈಯಲ್ಲಿ ಮಗು ಮಾಡಿಕೊಳ್ಳಲಾಗಿಲ್ಲ
ಕೇಂದ್ರ ಬಜೆಟ್ ಬಗ್ಗೆ ವ್ಯಂಗ್ಯ ಮಾಡುತ್ತಲ್ಲೇ ಕಟುವಾಗಿ ಟೀಕಿಸಿದ ಸಿಎಂ!
ಕೇಂದ್ರ ಬಜೆಟ್ ಬಗ್ಗೆ ವ್ಯಂಗ್ಯ ಮಾಡುತ್ತಲ್ಲೇ ಕಟುವಾಗಿ ಟೀಕಿಸಿದ ಸಿಎಂ!
ಆಸ್ಟ್ರೇಲಿಯನ್ ಓಪನ್ ಗೆದ್ದು ಇತಿಹಾಸ ನಿರ್ಮಿಸಿದ ಕಾರ್ಲೋಸ್ ಅಲ್ಕರಾಝ್
ಆಸ್ಟ್ರೇಲಿಯನ್ ಓಪನ್ ಗೆದ್ದು ಇತಿಹಾಸ ನಿರ್ಮಿಸಿದ ಕಾರ್ಲೋಸ್ ಅಲ್ಕರಾಝ್
ಚಿಮುಲ್ ಚುನಾವಣೆ: ಮತದಾರರಿಗೆ ಲಕ್ಷ ಲಕ್ಷ ನಗದು, ಬೆಳ್ಳಿ ತಟ್ಟೆ!
ಚಿಮುಲ್ ಚುನಾವಣೆ: ಮತದಾರರಿಗೆ ಲಕ್ಷ ಲಕ್ಷ ನಗದು, ಬೆಳ್ಳಿ ತಟ್ಟೆ!
ಟ್ಯಾಕ್ಸ್‌ ಟೆರರಿಸಂ: ಐಟಿ ದಾಳಿ ವಿರುದ್ಧ ತಿರುಗಿಬಿದ್ದ ಮೋಹನ್ ದಾಸ್ ಪೈ
ಟ್ಯಾಕ್ಸ್‌ ಟೆರರಿಸಂ: ಐಟಿ ದಾಳಿ ವಿರುದ್ಧ ತಿರುಗಿಬಿದ್ದ ಮೋಹನ್ ದಾಸ್ ಪೈ