Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಗ್ ಬಾಸ್ ಫಿನಾಲೆಯಲ್ಲಿ ಅರವಿಂದ್​ ಕೆಪಿ ಗೆಲುವಿಗೂ, ಸೋಲಿಗೂ ಕಾರಣವಾಗಬಹುದು ಈ ಅಂಶಗಳು

ವೃತ್ತಿಪರ ಬೈಕರ್​ ಅರವಿಂದ್ ಕೆ.ಪಿ. ತಮಗೆ ಸಂಬಂಧ ಇರದ ಕ್ಷೇತ್ರದೊಳಗೆ ಕಾಲಿಟ್ಟು ಕರ್ನಾಟಕ ಜನತೆಯ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಬಿಗ್ ಬಾಸ್ ಫಿನಾಲೆಯಲ್ಲಿ ಅರವಿಂದ್​ ಕೆಪಿ ಗೆಲುವಿಗೂ, ಸೋಲಿಗೂ ಕಾರಣವಾಗಬಹುದು ಈ ಅಂಶಗಳು
ಅರವಿಂದ್ ಕೆಪಿ
Follow us
ರಾಜೇಶ್ ದುಗ್ಗುಮನೆ
|

Updated on:Aug 06, 2021 | 3:51 PM

ಬಿಗ್ ಬಾಸ್​ ವೇದಿಕೆಗೆ ಮನರಂಜನಾ ಕ್ಷೇತ್ರದಿಂದ ಬಂದವರು ಮಾತ್ರ ಕ್ಲಿಕ್​ ಆಗುತ್ತಾರೆ, ಉಳಿದ ಕ್ಷೇತ್ರದಿಂದ ಬಂದರೆ ಹೇಳ ಹೆಸರಿಲ್ಲದಂತೆ ಹೋಗುತ್ತಾರೆ ಎನ್ನುವ ನಂಬಿಕೆ ಒಂದಿತ್ತು. ಆದರೆ, ಇದನ್ನು ವೃತ್ತಿಪರ ಬೈಕರ್​ ಅರವಿಂದ್ ಕೆ.ಪಿ. ಸುಳ್ಳು ಮಾಡಿದ್ದಾರೆ. ತಮಗೆ ಸಂಬಂಧ ಇರದ ಕ್ಷೇತ್ರದೊಳಗೆ ಕಾಲಿಟ್ಟು ಕರ್ನಾಟಕ ಜನತೆಯ ಗಮನ ಸೆಳೆಯುವಲ್ಲಿ ಅರವಿಂದ್ ಯಶಸ್ವಿಯಾಗಿದ್ದಾರೆ. ಅಷ್ಟೇ ಅಲ್ಲ, ಅವರು ಗೆಲ್ಲುವ ಸ್ಪರ್ಧಿ ಎಂದೇ ಬಿಂಬಿಸಲಾಗುತ್ತಿದೆ. ಹಾಗಾದರೆ, ಅರವಿಂದ್ ಪ್ಲಸ್​ ಪಾಯಿಂಟ್​ ಏನು? ಅವರ ಮೈನಸ್​ ಪಾಯಿಂಟ್​ ಏನು ಎನ್ನುವ ಪ್ರಶ್ನೆಗೆ ಇಲ್ಲಿದೆ ಉತ್ತರ.

ಅರವಿಂದ್​ ಪ್ಲಸ್​ ಪಾಯಿಂಟ್​ಗಳು

ಕಾನ್ಫಿಡೆನ್ಸ್​

ಅರವಿಂದ್​ ಮೂಲತಃ ಉಡುಪಿಯವರು. ಅವರು ಬೇರೆಬೇರೆ ರಾಷ್ಟ್ರಗಳಲ್ಲಿ ಬೈಕ್​ ಓಡಿಸಿದ್ದಾರೆ. ಅನೇಕ ಕಠಿಣ ಪರಿಸ್ಥಿತಿಗಳನ್ನು ಅವರು ಎದುರಿಸಿ ಬಂದಿದ್ದಾರೆ. ಹೀಗಾಗಿ, ಅವರ ಕಾನ್ಫಿಡೆನ್ಸ್​ ಮಟ್ಟ ತುಂಬಾನೇ ಹೆಚ್ಚಿದೆ. ಅವರು ಏನನ್ನೇ ಹೇಳುವುದಿದ್ದರೂ ಆತ್ಮವಿಶ್ವಾಸದಿಂದ ಹೇಳುತ್ತಾರೆ. ಜನರಿಗೆ ಅವರು ಇಷ್ಟವಾಗುವುದಕ್ಕೆ ಇದು ಪ್ರಮುಖ ಕಾರಣ.

ಟಾಸ್ಕ್​ ಆಡುವ ರೀತಿ

ಬಿಗ್​ ಬಾಸ್​ ಮನೆಯಲ್ಲಿ ಟಾಸ್ಕ್​ಗಳು ತುಂಬಾನೇ ಪ್ರಾಮುಖ್ಯತೆ ವಹಿಸುತ್ತವೆ. ಇದರ ಆಧಾರದ ಮೇಲೆ ಎಲ್ಲರನ್ನೂ ಅಳೆಯಲಾಗುತ್ತದೆ. ಅರವಿಂದ್​ ಅದ್ಭುತವಾಗಿ ಟಾಸ್ಕ್​ ಆಡಿದ್ದಾರೆ. ಈ ಕಾರಣಕ್ಕೆ ಅವರು ಎಲ್ಲರಿಗೂ ಇಷ್ಟವಾಗುತ್ತಾರೆ.

ಗಮನ ಸೆಳೆಯುವ ವ್ಯಕ್ತಿತ್ವ

ಬಿಗ್​ ಬಾಸ್​ ಮನೆಯಲ್ಲಿ ಹೆಚ್ಚು ದಿನ ನಕಲಿ ಗುಣಗಳನ್ನು ತೋರಿಸಿಕೊಂಡು ಇರೋಕೆ ಸಾಧ್ಯವಿಲ್ಲ. ಇದು ವೀಕ್ಷಕರಿಗೆ ಗೊತ್ತಾಗಿ ಬಿಡುತ್ತದೆ. ಅರವಿಂದ್ ಬಿಗ್​ ಬಾಸ್​ ಮನೆಯಲ್ಲಿ ತಮ್ಮ ನೈಜ ವ್ಯಕ್ತಿತ್ವನ್ನು ಬಿಚ್ಚಿಟ್ಟರು. ತಪ್ಪಿದ್ದಾಗ ತಪ್ಪು ಎಂದರು, ಸರಿ ಇದ್ದಾಗ ಸರಿ ಎಂದರು. ತಾವು ಮಾಡಿದ ತಪ್ಪನ್ನು ಒಪ್ಪಿಕೊಂಡು ಮುನ್ನಡೆದರು. ಎಲ್ಲರ ಜತೆ ಹೊಂದಿಕೊಂಡರು. ಈ ಕಾರಣಕ್ಕೆ ಅರವಿಂದ್ ವೀಕ್ಷಕರಿಗೆ ಇಷ್ಟವಾಗುತ್ತಾ ಹೋದರು.

ಪ್ರೀತಿ-ಪ್ರೇಮ ವಿಚಾರ

ಬಿಗ್​ ಬಾಸ್​ ಮನೆಯಲ್ಲಿ ಅರವಿಂದ್ ಹಾಗೂ ದಿವ್ಯಾ ಉರುಡುಗ ಪರಸ್ಪರ ಪ್ರೀತಿಸುತ್ತಿದ್ದಾರೆ ಎನ್ನಲಾಗಿದೆ. ಇದನ್ನು ಅನೇಕ ಬಾರಿ ಅವರೇ ಪರೋಕ್ಷವಾಗಿ ಒಪ್ಪಿಕೊಂಡಿದ್ದಾರೆ ಕೂಡ. ಇವರ ಜೋಡಿ ನೋಡಿ ಅನೇಕರು ಮೆಚ್ಚಿಕೊಂಡಿದ್ದಾರೆ. ಹೀಗಾಗಿ, ಇದು ಕೂಡ ಅವರ ಬಿಗ್​ ಬಾಸ್​ ಜರ್ನಿಗೆ ಸಾಕಷ್ಟು ಮೈಲೇಜ್​ ನೀಡಿದೆ.

ಮೈನಸ್​ ಪಾಯಿಂಟ್​​

ಮನರಂಜನೆ ನೀಡುವುದಿಲ್ಲ:

ಅರವಿಂದ್ ಬಿಗ್​ ಬಾಸ್​ ಮನೆಯಲ್ಲ ಮನರಂಜನೆ ನೀಡುವುದಿಲ್ಲ ಎನ್ನುವ ಮಾತು ಮೊದಲಿನಿಂದಲೂ ಇದೆ. ಅವರು ಟಾಸ್ಕ್​ನಲ್ಲಿ ಚುರುಕಾಗಿರುತ್ತಾರೆ ನಿಜ, ಆದರೆ ಅವರಿಗೆ ಎಲ್ಲರನ್ನೂ ನಗಿಸೋಕೆ ಬರುವುದಿಲ್ಲ. ಮನರಂಜನೆ ನೀಡುವುದಿಲ್ಲ. ಇದನ್ನು ಸಾಕಷ್ಟು ಬಾರಿ ಮನೆ ಮಂದಿ ಕೂಡ ಒಪ್ಪಿಕೊಂಡಿದ್ದಾರೆ.

ದಿವ್ಯಾ ಜತೆಗಿನ ಪ್ರೀತಿ:

ದಿವ್ಯಾ ಉರುಡುಗ ಜತೆಗಿನ ಪ್ರೀತಿ ಅರವಿಂದ್​ಗೆ ಮುಳುವಾಗುವ ಸಾಧ್ಯತೆಯೂ ಇದೆ. ಅರವಿಂದ್ ಹಾಗೂ ದಿವ್ಯಾ ಅಭಿಮಾನಿ ವರ್ಗ ದೊಡ್ಡದಿದೆ. ಇದರಿಂದ ವೋಟ್​ಗಳು ಹಂಚಿಹೋಗುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ. ಒಂದಷ್ಟು ಮತಗಳು ಅರವಿಂದ್​ಗೆ ಬಿದ್ದರೆ, ಇನ್ನೂ ಕೆಲ ವೋಟ್​ಗಳು ದಿವ್ಯಾಗೆ ಬೀಳಬಹುದು.

ಕಾಂಪಿಟೇಷನ್​:

ಅರವಿಂದ್​ಗೆ ವೈಷ್ಣವಿ ಗೌಡ ಹಾಗೂ ಮಂಜು ಟಫ್​ ಕಾಂಪಿಟೇಟರ್​. ಬಿಗ್​ ಬಾಸ್​ ಮನೆಯಿಂದ ಹೊರ ಹೋದ ಶುಭಾ ಪೂಂಜಾ ಹಾಗೂ ದಿವ್ಯಾ ಸುರೇಶ್​ ಅವರು ಮಂಜುಗೆ ವೋಟ್​ ಮಾಡುವಂತೆ ಕೇಳುತ್ತಿದ್ದಾರೆ. ರಘು ಗೌಡ ಅವರು ವೈಷ್ಣವಿಗೆ ಹಾಗೂ ಶಮಂತ್​ ಅವರು ಪ್ರಶಾಂತ್​ಗೆ ವೋಟ್​ ಮಾಡುವಂತೆ ಅಭಿಮಾನಿಗಳ ಬಳಿ ಕೋರುತ್ತಿದ್ದಾರೆ. ಅರವಿಂದ್​ ಅವರು ದಿವ್ಯಾಗೆ ಮಾತ್ರ ಸೀಮಿತವಾಗಿದ್ದರಿಂದ ಅವರಿಗೆ ಬೆಂಬಲ ಸ್ವಲ್ಪ ಕಡಿಮೆ ಆಗಿದೆ ಎನ್ನಬಹುದು.

ಇದನ್ನೂ ಓದಿ:  ಬಿಗ್​ ಬಾಸ್​ ಅರವಿಂದ್​ಗಿದೆ ಸಿನಿಮಾ ಹಿನ್ನೆಲೆ; ಅವರು ನಟಿಸಿರೋ ಚಿತ್ರಗಳಾವವು ಗೊತ್ತಾ?

Published On - 3:21 pm, Fri, 6 August 21

ಪ್ರತಿದಿನ ಮಾಧ್ಯಮಗಳೊಂದಿಗೆ ಮಾತಾಡುವ ರೇಣುಕಾಚಾರ್ಯಗೆ ವಿಷಯಗಳು ಸಿಗುತ್ತಿಲ್ಲ
ಪ್ರತಿದಿನ ಮಾಧ್ಯಮಗಳೊಂದಿಗೆ ಮಾತಾಡುವ ರೇಣುಕಾಚಾರ್ಯಗೆ ವಿಷಯಗಳು ಸಿಗುತ್ತಿಲ್ಲ
ಮಟ ಮಟ ಮಧ್ಯಾಹ್ನ ಫುಲ್ ಟೈಟ್​ ಆಗಿ ಬಂದು ಬಸ್ ಕೆಳಗೆ ಮಲಗಿದ ಕುಡುಕ!
ಮಟ ಮಟ ಮಧ್ಯಾಹ್ನ ಫುಲ್ ಟೈಟ್​ ಆಗಿ ಬಂದು ಬಸ್ ಕೆಳಗೆ ಮಲಗಿದ ಕುಡುಕ!
ಪೊಲೀಸರಿಂದ ಸೂಕ್ತ ತನಿಖೆ ಆಗುತ್ತಿಲ್ಲವೆಂದು ಅರೋಪಿಸಿದ ಸಂಬಂಧಿಕರು
ಪೊಲೀಸರಿಂದ ಸೂಕ್ತ ತನಿಖೆ ಆಗುತ್ತಿಲ್ಲವೆಂದು ಅರೋಪಿಸಿದ ಸಂಬಂಧಿಕರು
ಪ್ರದೀಪ್ ಮಾತುಗಳಿಗೆ ಸಭಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದದರು: ಮೋಹನ್
ಪ್ರದೀಪ್ ಮಾತುಗಳಿಗೆ ಸಭಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದದರು: ಮೋಹನ್
ಬದುಕುಳಿದು ಬಂದು ಅಪಘಾತದ ಭೀಕರತೆ ಬಿಚ್ಚಿಟ್ಟ ಪರಸಪ್ಪ
ಬದುಕುಳಿದು ಬಂದು ಅಪಘಾತದ ಭೀಕರತೆ ಬಿಚ್ಚಿಟ್ಟ ಪರಸಪ್ಪ
VIDEO: ರಾಕಿ ಭಾಯ್ ಸ್ಟೈಲ್​ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್​ಗೆ ಕನ್ನಡಿಗನ ಎಂಟ್
VIDEO: ರಾಕಿ ಭಾಯ್ ಸ್ಟೈಲ್​ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್​ಗೆ ಕನ್ನಡಿಗನ ಎಂಟ್
ಹತ್ತಿರದ ಸಂಬಂಧಿಯೊಬ್ಬರ ಸಾವಿನ ಕಾರಣ ಪರಮೇಶ್ವರ್ ಭಾಗಿಯಾಗಿರಲಿಲ್ಲ: ಪಾಟೀಲ್
ಹತ್ತಿರದ ಸಂಬಂಧಿಯೊಬ್ಬರ ಸಾವಿನ ಕಾರಣ ಪರಮೇಶ್ವರ್ ಭಾಗಿಯಾಗಿರಲಿಲ್ಲ: ಪಾಟೀಲ್
ಕಾರಿನ ಮೇಲೆ ಬಿದ್ದ ಲಾರಿ: ಭಯಾನಕ ಅಪಘಾತ ಡ್ರೋನ್ ಕ್ಯಾಮರಾದಲ್ಲಿ ಕಂಡಿದ್ದು
ಕಾರಿನ ಮೇಲೆ ಬಿದ್ದ ಲಾರಿ: ಭಯಾನಕ ಅಪಘಾತ ಡ್ರೋನ್ ಕ್ಯಾಮರಾದಲ್ಲಿ ಕಂಡಿದ್ದು
ಕಳ್ಳತನ ಮಾಡಿದ ಬಳಿಕ ತಮ್ಮ ಕಾರನ್ನೇ ಬೆಂಕಿಹಚ್ಚಿ ಸುಟ್ಟುಬಿಡುವ ಖದೀಮರು
ಕಳ್ಳತನ ಮಾಡಿದ ಬಳಿಕ ತಮ್ಮ ಕಾರನ್ನೇ ಬೆಂಕಿಹಚ್ಚಿ ಸುಟ್ಟುಬಿಡುವ ಖದೀಮರು
ದರ್ಶನ್ ನಟನೆಯ ‘ಡೆವಿಲ್’ ಚಿತ್ರಕ್ಕೆ ಮೈಸೂರಿನಲ್ಲಿ ಕೊನೆಯ ದಿನದ ಶೂಟಿಂಗ್
ದರ್ಶನ್ ನಟನೆಯ ‘ಡೆವಿಲ್’ ಚಿತ್ರಕ್ಕೆ ಮೈಸೂರಿನಲ್ಲಿ ಕೊನೆಯ ದಿನದ ಶೂಟಿಂಗ್