AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಗ್​ ಬಾಸ್​ ಅರವಿಂದ್​ಗಿದೆ ಸಿನಿಮಾ ಹಿನ್ನೆಲೆ; ಅವರು ನಟಿಸಿರೋ ಚಿತ್ರಗಳಾವವು ಗೊತ್ತಾ?

ಪ್ರೀತಮ್ ಗುಬ್ಬಿ ನಿರ್ದೇಶನದಲ್ಲಿ ಮೂಡಿಬಂದಿದ್ದ ‘ನಾನು ಮತ್ತು ವರಲಕ್ಷ್ಮೀ' ಸಿನಿಮಾಗೆ ಯುವ ಪ್ರತಿಭೆ ಪೃಥ್ವಿ ಹೀರೋ ಆಗಿದ್ದರು. ಬೈಕ್ ರೇಸ್ ಕಥೆಯನ್ನು ಸಿನಿಮಾ ಹೇಳಿದೆ.

ಬಿಗ್​ ಬಾಸ್​ ಅರವಿಂದ್​ಗಿದೆ ಸಿನಿಮಾ ಹಿನ್ನೆಲೆ; ಅವರು ನಟಿಸಿರೋ ಚಿತ್ರಗಳಾವವು ಗೊತ್ತಾ?
ಅರವಿಂದ್​
TV9 Web
| Edited By: |

Updated on: Aug 04, 2021 | 3:53 PM

Share

ಅರವಿಂದ್ ಕೆ.ಪಿ. ಬಿಗ್​ ಬಾಸ್​ಗೆ ಬಂದ ನಂತರದಲ್ಲಿ ಸಾಕಷ್ಟು ಜನಪ್ರಿಯತೆ ಪಡೆದುಕೊಂಡರು. ಸೀಸನ್​ 8ರ ಫಿನಾಲೆಯಲ್ಲಿ ಅವರು ಕೂಡ ಇರೋದು ಬಹುತೇಕ ಖಚಿತವಾಗಿದೆ. ಅಚ್ಚರಿ ಎಂದರೆ, ಅರವಿಂದ್​​ಗೂ ಚಿತ್ರರಂಗಕ್ಕೂ ಒಂದು ಕನೆಕ್ಷನ್​ ಇದೆ. ಈ ವಿಚಾರವನ್ನು ಅರವಿಂದ್ ಅವರೇ ಹೇಳಿಕೊಂಡಿದ್ದಾರೆ.

ಪ್ರೀತಮ್ ಗುಬ್ಬಿ ನಿರ್ದೇಶನದಲ್ಲಿ ಮೂಡಿಬಂದಿದ್ದ ‘ನಾನು ಮತ್ತು ವರಲಕ್ಷ್ಮೀ’ ಸಿನಿಮಾಗೆ ಯುವ ಪ್ರತಿಭೆ ಪೃಥ್ವಿ ಹೀರೋ ಆಗಿದ್ದರು. ಬೈಕ್ ರೇಸ್ ಕಥೆಯನ್ನು ಸಿನಿಮಾ ಹೇಳಿದೆ. ಬಿಗ್​ ಬಾಸ್​ ಮನೆಯಲ್ಲಿ ಆಗಸ್ಟ್​ 3ರ ಎಪಿಸೋಡ್​ನಲ್ಲಿ ವೇಕ್​ಅಪ್​ ಹಾಡಿಗೆ ಈ ಚಿತ್ರದ ‘ನಾನ್ ಚೆನ್ನಾಗಿದ್ದೆ ಯೆಸ್‌ ಬ್ರೋ..’ ಸಾಂಗ್​ ಪ್ಲೇ ಮಾಡಲಾಯಿತು. ಅರವಿಂದ್​ ಇದು ನಾನು ನಟಿಸಿದ ಸಿನಿಮಾದ ಹಾಡು ಎಂದು ಸಂತಸ ಹೊರ ಹಾಕಿದರು. ಈ ವಿಚಾರ ಮನೆ ಮಂದಿಗೆ ಅಚ್ಚರಿ ಮೂಡಿಸಿತ್ತು. ಅರವಿಂದ್​ ರೇಸಿಂಗ್​ ಹಿನ್ನೆಲೆಯಿಂದ ಬಂದವರು ಎಂಬುದಷ್ಟೇ ಮನೆ ಮಂದಿಗೆ ಗೊತ್ತಿತ್ತು. ಅವರಿಗೂ ಚಿತ್ರರಂಗಕ್ಕೂ ಲಿಂಕ್​ ಇದೆ ಎನ್ನುವ ವಿಚಾರ ಬಿಗ್​ ಬಾಸ್​ ಮನೆಯಲ್ಲಿದ್ದವರಿಗೂ ಹಾಗೂ ಅಭಿಮಾನಿಗಳಿಗೆ ಅಚ್ಚರಿ ತಂದಿದೆ.

‘ನಾನು ಮತ್ತು ವರಲಕ್ಷ್ಮೀ’ ಸಿನಿಮಾ ಸಂಪೂರ್ಣವಾಗಿ ಬೈಕ್​ ರೇಸಿಂಗ್​ ಬಗ್ಗೆ ಇದೆ. ಈ ಸಿನಿಮಾದಲ್ಲಿ ಅರವಿಂದ್ ಬೈಕ್​ ಓಡಿಸಿದ್ದಾರೆ. ಅಷ್ಟೇ ಅಲ್ಲ, ಹೀರೋ ರೇಸ್​ನಲ್ಲಿ ಗೆದ್ದಾಗ ಬೈಕರ್​ ಅರವಿಂದ್​ ಕೆಪಿ ಆಗಿಯೇ ಪ್ರಶಸ್ತಿ ನೀಡುತ್ತಾರೆ. ಈ ಚಿತ್ರದಲ್ಲಿ ಮಾಳವಿಕಾ ಮೋಹನನ್, ಪ್ರಕಾಶ್ ರಾಜ್, ಅಚ್ಯುತ್‌ಕುಮಾರ್, ರಂಗಾಯಣ ರಘು, ಸಾಧು ಕೋಕಿಲ, ಪವಿತ್ರಾ ಲೋಕೇಶ್ ಮೊದಲಾದವರು ನಟಿಸಿದ್ದರು. ಇನ್ನು, ಮಲಯಾಳಂನ ‘ಬೆಂಗಳೂರು ಡೇಸ್’ ಸಿನಿಮಾದಲ್ಲೂ ಅರವಿಂದ್ ನಟಿಸಿದ್ದಾರೆ.

ಅರವಿಂದ್ ಕೆ.ಪಿ. ಬಿಗ್​ ಬಾಸ್​ಗೆ ಬಂದಿದ್ದು ಅನೇಕರಲ್ಲಿ ಅಚ್ಚರಿ ಮೂಡಿಸಿತ್ತು. ಬೇರೆ ಕ್ಷೇತ್ರದಿಂದ ಬಂದರೂ ದೊಡ್ಡ ಮಟ್ಟದಲ್ಲಿ ಅವರು ಖ್ಯಾತಿ ಪಡೆದುಕೊಂಡಿದ್ದಾರೆ. ಅವರ ಅಭಿಮಾನಿ ಬಳಗ ಸಾಕಷ್ಟು ವಿಸ್ತರಣೆ ಆಗಿದೆ. ಅರವಿಂದ್ ಗೆಲ್ಲಬೇಕು ಎಂದು ಸಾಕಷ್ಟು ಜನರು ಆಶಿಸುತ್ತಿದ್ದಾರೆ. ಆಗಸ್ಟ್​ 8ರಂದು ಬಿಗ್​ ಬಾಸ್​ ಫಿನಾಲೆ ನಡೆಯುತ್ತಿದೆ. ಯಾರು ಸೀಸನ್​ 8 ಗೆಲ್ಲಲಿದ್ದಾರೆ ಎನ್ನುವುದು ಎಲ್ಲರ ಕುತೂಹಲ.

ಇದನ್ನೂ ಓದಿ: ಬಿಗ್​ ಬಾಸ್​ ಫಿನಾಲೆಗೂ ಮೊದಲು ಮಿಡ್​ವೀಕ್​ ಎಲಿಮಿನೇಷನ್​; ಇಂದು ಹೊರ ಹೋಗುವ ಸ್ಪರ್ಧಿ ಇವರೇನಾ?

ಬಿಗ್​ ಬಾಸ್​ ಮನೆಯಲ್ಲಿ ಅತಿ ಹೆಚ್ಚು ವೋಟ್​ ಪಡೆದವರಲ್ಲಿ ವೈಷ್ಣವಿ ಟಾಪ್​; ಮೂರನೇ ಸ್ಥಾನಕ್ಕೆ ಕುಸಿದ ಅರವಿಂದ್

ವಿರೋಧ ಪಕ್ಷದ ನಾಯಕನಿಂದ ಇಂಥಾ ವರ್ತನೆ ನಿರೀಕ್ಷಿಸಿರಲಿಲ್ಲ ಎಂದ ಬಿಜೆಪಿ
ವಿರೋಧ ಪಕ್ಷದ ನಾಯಕನಿಂದ ಇಂಥಾ ವರ್ತನೆ ನಿರೀಕ್ಷಿಸಿರಲಿಲ್ಲ ಎಂದ ಬಿಜೆಪಿ
ಬಂಧನ ಭೀತಿ ಬೆನ್ನಲ್ಲೇ ಭೈರತಿ ಬಸವರಾಜ್​​​ ದುಬೈಗೆ ಪರಾರಿ
ಬಂಧನ ಭೀತಿ ಬೆನ್ನಲ್ಲೇ ಭೈರತಿ ಬಸವರಾಜ್​​​ ದುಬೈಗೆ ಪರಾರಿ
ಮೈಸೂರಿನಲ್ಲಿ ಪುಟ್ಟ ಬಾಲಕಿಯ ಬ್ಯಾಗಿನೊಳಗೆ ನಾಗರ ಹಾವು ಪ್ರತ್ಯಕ್ಷ!
ಮೈಸೂರಿನಲ್ಲಿ ಪುಟ್ಟ ಬಾಲಕಿಯ ಬ್ಯಾಗಿನೊಳಗೆ ನಾಗರ ಹಾವು ಪ್ರತ್ಯಕ್ಷ!
ಈ ಕಾರಣಕ್ಕೆ ಪುಟ್ಟ ಮಕ್ಕಳಿಗೆ ಕಾಲ್ಗೆಜ್ಜೆ ಹಾಕಲೇಬೇಕು
ಈ ಕಾರಣಕ್ಕೆ ಪುಟ್ಟ ಮಕ್ಕಳಿಗೆ ಕಾಲ್ಗೆಜ್ಜೆ ಹಾಕಲೇಬೇಕು
ಇಂದು ಈ ರಾಶಿಯವರಿಗೆ ಐದು ಗ್ರಹಗಳ ಶುಭಫಲವಿದ್ದು, ಎಲ್ಲ ಕಾರ್ಯಗಳಲ್ಲಿ ಜಯ
ಇಂದು ಈ ರಾಶಿಯವರಿಗೆ ಐದು ಗ್ರಹಗಳ ಶುಭಫಲವಿದ್ದು, ಎಲ್ಲ ಕಾರ್ಯಗಳಲ್ಲಿ ಜಯ
ಯುವಕನಿಗೆ ಡ್ರಗ್ಸ್ ನೀಡಿ ಬಲವಂತವಾಗಿ ಮದುವೆ ಮಾಡಿದ ವಿಡಿಯೋ ವೈರಲ್
ಯುವಕನಿಗೆ ಡ್ರಗ್ಸ್ ನೀಡಿ ಬಲವಂತವಾಗಿ ಮದುವೆ ಮಾಡಿದ ವಿಡಿಯೋ ವೈರಲ್
ಅಪ್ಪ ಅರ್ಜುನ್ ಸರ್ಜಾ ನಿರ್ದೇಶನದಲ್ಲಿ ನಟಿಸಿದ ಬಗ್ಗೆ ಐಶ್ವರ್ಯಾ ಹೇಳಿದ್ದೇನು
ಅಪ್ಪ ಅರ್ಜುನ್ ಸರ್ಜಾ ನಿರ್ದೇಶನದಲ್ಲಿ ನಟಿಸಿದ ಬಗ್ಗೆ ಐಶ್ವರ್ಯಾ ಹೇಳಿದ್ದೇನು
ಮುಸ್ಲಿಂ ಯುವಕನೊಂದಿಗೆ ಹೋದ ಮಗಳ ನೆನೆದು ಕಣ್ಣೀರಿಟ್ಟ ಹೆತ್ತ ಕರುಳು
ಮುಸ್ಲಿಂ ಯುವಕನೊಂದಿಗೆ ಹೋದ ಮಗಳ ನೆನೆದು ಕಣ್ಣೀರಿಟ್ಟ ಹೆತ್ತ ಕರುಳು
93 ವರ್ಷದ ಸಂಭ್ರಮಾಚರಣೆ ಬೇಡ ಎನ್ನಲು ಯಾರಿಗೂ ಅಧಿಕಾರವಿಲ್ಲ: ಜಯಮಾಲ
93 ವರ್ಷದ ಸಂಭ್ರಮಾಚರಣೆ ಬೇಡ ಎನ್ನಲು ಯಾರಿಗೂ ಅಧಿಕಾರವಿಲ್ಲ: ಜಯಮಾಲ
ಮದುವೆ ಮನೆಗೆ ನುಗ್ಗಿ ಮಂಗಳಮುಖಿಯರ ರಂಪಾಟ: ವಿಡಿಯೋ ನೋಡಿ
ಮದುವೆ ಮನೆಗೆ ನುಗ್ಗಿ ಮಂಗಳಮುಖಿಯರ ರಂಪಾಟ: ವಿಡಿಯೋ ನೋಡಿ