AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಗ್​ ಬಾಸ್​ ಮನೆಯಲ್ಲಿ ಅತಿ ಹೆಚ್ಚು ವೋಟ್​ ಪಡೆದವರಲ್ಲಿ ವೈಷ್ಣವಿ ಟಾಪ್​; ಮೂರನೇ ಸ್ಥಾನಕ್ಕೆ ಕುಸಿದ ಅರವಿಂದ್

ಡೇಂಜರ್ ​ಜೋನ್​ನಲ್ಲಿದ್ದವರನ್ನು ಸೇವ್​ ಮಾಡೋಕೆ ಅಭಿಮಾನಿಗಳು ವೋಟ್​ ಮಾಡಬೇಕು. ಯಾರಿಗೆ ಎಷ್ಟು ಮತಗಳು ಬಿದ್ದಿವೆ ಎಂಬುದನ್ನು ವಾಹಿನಿ ಬಹಿರಂಗ ಮಾಡುವುದಿಲ್ಲ. ಆದರೆ, ಹೆಚ್ಚು ವೋಟ್​ ಬಿದ್ದವರು ಮೊದಲು ಸೇವ್​ ಆಗುತ್ತಾರೆ.

ಬಿಗ್​ ಬಾಸ್​ ಮನೆಯಲ್ಲಿ ಅತಿ ಹೆಚ್ಚು ವೋಟ್​ ಪಡೆದವರಲ್ಲಿ ವೈಷ್ಣವಿ ಟಾಪ್​; ಮೂರನೇ ಸ್ಥಾನಕ್ಕೆ ಕುಸಿದ ಅರವಿಂದ್
ಬಿಗ್​ ಬಾಸ್​ ಮನೆಯಲ್ಲಿ ಅತಿ ಹೆಚ್ಚು ವೋಟ್​ ಪಡೆದವರಲ್ಲಿ ವೈಷ್ಣವಿ ಟಾಪ್​; ಮೂರನೇ ಸ್ಥಾನಕ್ಕೆ ಕುಸಿದ ಅರವಿಂದ್
TV9 Web
| Updated By: ರಾಜೇಶ್ ದುಗ್ಗುಮನೆ|

Updated on: Aug 02, 2021 | 2:38 PM

Share

‘ಕನ್ನಡ ಬಿಗ್​ ಬಾಸ್​ ಸೀಸನ್​ 8’ ಫಿನಾಲೆ ವೀಕ್​ ಆರಂಭವಾಗಿದೆ. ಮನೆಯಲ್ಲಿ ಆರು ಸ್ಪರ್ಧಿಗಳಿದ್ದು, ಇವರಲ್ಲಿ ಓರ್ವ ಸ್ಪರ್ಧಿ ಈ ವಾರ ಹೊರ ಹೋಗಲಿದ್ದಾರೆ. ಈ ಮೂಲಕ ಫಿನಾಲೆ ವೀಕ್​ ಮತ್ತಷ್ಟು ಕಠಿಣವಾಗಲಿದೆ. ಈ ಮಧ್ಯೆ ಯಾರು ಗೆಲ್ಲಲಿದ್ದಾರೆ ಅನ್ನೋ ಕುತೂಹಲ ಸದ್ಯ ಮನೆ ಮಾಡಿದೆ. ಇದಕ್ಕೆ ಉತ್ತರ ಆಗಸ್ಟ್​ 8ರಂದು ಸಿಗಲಿದೆ.

ಡೇಂಜರ್ ​ಜೋನ್​ನಲ್ಲಿದ್ದವರನ್ನು ಸೇವ್​ ಮಾಡೋಕೆ ಅಭಿಮಾನಿಗಳು ವೋಟ್​ ಮಾಡಬೇಕು. ಯಾರಿಗೆ ಎಷ್ಟು ಮತಗಳು ಬಿದ್ದಿವೆ ಎಂಬುದನ್ನು ವಾಹಿನಿ ಬಹಿರಂಗ ಮಾಡುವುದಿಲ್ಲ. ಆದರೆ, ಹೆಚ್ಚು ವೋಟ್​ ಬಿದ್ದವರು ಮೊದಲು ಸೇವ್​ ಆಗುತ್ತಾರೆ. ಈ ಮೂಲಕ ಯಾರು ಯಾವ ಸ್ಥಾನದಲ್ಲಿದ್ದಾರೆ ಎಂಬುದು ಗೊತ್ತಾಗುತ್ತದೆ.

ಕಳೆದ ವಾರದಲ್ಲಿ ದಿವ್ಯಾ ಉರುಡುಗ ಹೊರತು ಪಡಿಸಿ ಉಳಿದ ಏಳು ಸ್ಪರ್ಧಿಗಳು ನಾಮಿನೇಷನ್​ ಲೀಸ್ಟ್​ನಲ್ಲಿದ್ದರು. ಈ ಪೈಕಿ ಶುಭಾ ಪೂಂಜಾ ಹಾಗೂ ಶಮಂತ್​ ಕಡಿಮೆ ವೋಟ್​ ಪಡೆದು ಎಲಿಮಿನೇಟ್​ ಆದರು. ಫಿನಾಲೆಗೂ ಹಿಂದಿನ ವಾರದಲ್ಲಿ ಅತಿ ಹೆಚ್ಚು ವೋಟ್​ ಬಿದ್ದಿದ್ದು ವೈಷ್ಣವಿಗೆ ಅನ್ನೋದು ವಿಶೇಷ.

ವೈಷ್ಣವಿ ಅವರು ಎಲಿಮಿನೇಷನ್​ನಿಂದ ಮೊದಲು ಬಚಾವ್​ ಆಗಿದ್ದಾರೆ ಎಂದು ಸುದೀಪ್​ ಘೋಷಣೆ ಮಾಡಿದರು. ಈ ಮೂಲಕ ಅತಿ ಹೆಚ್ಚು ಮತಗಳು​ ಬಿದ್ದಿದ್ದು ವೈಷ್ಣವಿಗೆ ಎಂಬುದು ವೀಕ್ಷಕರಿಗೆ ಸ್ಪಷ್ಟವಾಗಿದೆ. ಮಂಜು ಪಾವಗಡ ಎರಡನೇ ಸ್ಥಾನದಲ್ಲಿ ನಿಂತಿದ್ದಾರೆ. ಅರವಿಂದ್​ ಕೆ.ಪಿ ಅವರು ಈ ಬಾರಿ ಗೆಲ್ಲಲಿದ್ದಾರೆ ಎಂದೇ ಊಹಿಸಲಾಗಿತ್ತು. ಆದರೆ, ಅವರು ಮೂರನೇ ಸ್ಥಾನಕ್ಕೆ ಕುಸಿದಿದ್ದಾರೆ. ಈ ವಾರ ಯಾರಿಗೆ ಹೆಚ್ಚು ವೋಟ್ ಬೀಳುತ್ತದೆಯೋ ಅವರು ಗೆದ್ದಂತೆ. ಹೀಗಾಗಿ, ಈ ವಾರ ಬಹಳ ಪ್ರಾಮುಖ್ಯತೆ ಪಡೆದುಕೊಂಡಿದೆ.

ಇನ್ನು, ಈ ವಾರ ಎಲ್ಲರೂ ನಾಮಿನೇಷನ್​ ಲಿಸ್ಟ್​ನಲ್ಲಿದ್ದಾರೆ. ಮಿಡ್​ ವೀಕ್​ ಎಲಿಮಿನೇಷನ್​ ನಡೆಯಲಿದ್ದು, ಇದರಲ್ಲಿ ಓರ್ವ ಸ್ಪರ್ಧಿ ಹೊರ ಹೋಗಲಿದ್ದಾರೆ. ದಿವ್ಯಾ ಸುರೇಶ್​ ಮತ್ತು ಪ್ರಶಾಂತ್​ ಸಂಬರಗಿ ಇಬ್ಬರಲ್ಲಿ ಒಬ್ಬರು ಎಲಿಮಿನೇಟ್​ ಆಗಲಿದ್ದಾರೆ ಎನ್ನಲಾಗುತ್ತಿದೆ.

ಇದನ್ನೂ ಓದಿ: ಭಾನುವಾರ ಬಿಗ್​ ಬಾಸ್​ ಮನೆಯಿಂದ ಹೊರ ಹೋಗುವ ಸ್ಪರ್ಧಿ ಇವರೇನಾ?

ಸೆಪ್ಟೆಂಬರ್​ನಿಂದ ಬಿಗ್​ ಬಾಸ್ ಹೊಸ ಸೀಸನ್?​; ಪ್ರೋಮೋ ರಿಲೀಸ್​ ಮಾಡಿದ ವಾಹಿನಿ

ಲೋಕಸಭಾ ಚುನಾವಣೆಯಲ್ಲಿ ನಮಗೆ ರಾಜ್ಯದಲ್ಲಿ ಹೆಚ್ಚು ಸೀಟು ಬರಬೇಕಿತ್ತು: ಸಚಿವ
ಲೋಕಸಭಾ ಚುನಾವಣೆಯಲ್ಲಿ ನಮಗೆ ರಾಜ್ಯದಲ್ಲಿ ಹೆಚ್ಚು ಸೀಟು ಬರಬೇಕಿತ್ತು: ಸಚಿವ
ಬಿಕ್ಲು ಶಿವ ಕೊಲೆ ಪ್ರಕರಣವನ್ನು ಸಿಐಡಿ ತನಿಖೆಗೆ ಒಪ್ಪಿಸಿದ ಸರ್ಕಾರ
ಬಿಕ್ಲು ಶಿವ ಕೊಲೆ ಪ್ರಕರಣವನ್ನು ಸಿಐಡಿ ತನಿಖೆಗೆ ಒಪ್ಪಿಸಿದ ಸರ್ಕಾರ
ನೋವಿನಲ್ಲೂ ಬ್ಯಾಟಿಂಗ್​ಗೆ ಬಂದ ರಿಷಭ್ ಪಂತ್​
ನೋವಿನಲ್ಲೂ ಬ್ಯಾಟಿಂಗ್​ಗೆ ಬಂದ ರಿಷಭ್ ಪಂತ್​
ತಮ್ಮ ತಪ್ಪು ಮುಚ್ಚಿಕೊಳ್ಳಲು ಸಿಎಂ ಮತ್ತು ಡಿಸಿಎಂರಿಂದ ಪ್ರಯತ್ನ: ಅರವಿಂದ್
ತಮ್ಮ ತಪ್ಪು ಮುಚ್ಚಿಕೊಳ್ಳಲು ಸಿಎಂ ಮತ್ತು ಡಿಸಿಎಂರಿಂದ ಪ್ರಯತ್ನ: ಅರವಿಂದ್
ಈ ಬಾರಿಯಾದರೂ ರಾಹುಲ್ ಗಾಂಧಿ ಸಿಎಂ-ಡಿಸಿಎಂಗೆ ಸಮಯ ನೀಡುವರೇ?
ಈ ಬಾರಿಯಾದರೂ ರಾಹುಲ್ ಗಾಂಧಿ ಸಿಎಂ-ಡಿಸಿಎಂಗೆ ಸಮಯ ನೀಡುವರೇ?
ಭಾರತದ ಜೊತೆ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಿದ ಬ್ರಿಟಿಷ್ ಪ್ರಧಾನಿ
ಭಾರತದ ಜೊತೆ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಿದ ಬ್ರಿಟಿಷ್ ಪ್ರಧಾನಿ
ಅಕ್ಕನಿಗೆ ಗಂಡ ಮತ್ತು ಅವನ ಮನೆಯವರಿಂದ ವಿಪರೀತ ಹಿಂಸೆ: ಸಹೋದರಿ
ಅಕ್ಕನಿಗೆ ಗಂಡ ಮತ್ತು ಅವನ ಮನೆಯವರಿಂದ ವಿಪರೀತ ಹಿಂಸೆ: ಸಹೋದರಿ
ಶಿರೂರು ದುರಂತ ಸಂಭವಿಸಿ ವರ್ಷ ಕಳೆದರೂ ಮುಗಿಯದ ಜನರ ಆತಂಕ
ಶಿರೂರು ದುರಂತ ಸಂಭವಿಸಿ ವರ್ಷ ಕಳೆದರೂ ಮುಗಿಯದ ಜನರ ಆತಂಕ
ಕ್ರಾಂತಿವೀರ ದಂಥ ಬಿರುದುಗಳೆಲ್ಲ ನನಗೆ ಬೇಡ ಎಂದು ನಗುತ್ತಾ ಹೇಳಿದ ರಾಜಣ್ಣ
ಕ್ರಾಂತಿವೀರ ದಂಥ ಬಿರುದುಗಳೆಲ್ಲ ನನಗೆ ಬೇಡ ಎಂದು ನಗುತ್ತಾ ಹೇಳಿದ ರಾಜಣ್ಣ
ಕರ್ನಾಟಕದ ಎಲ್ಲ ಸಂಸದರಿಗೆ ಇದು ಸ್ವಾಭಿಮಾನದ ಪ್ರಶ್ನೆ: ಶಿವಕುಮಾರ್
ಕರ್ನಾಟಕದ ಎಲ್ಲ ಸಂಸದರಿಗೆ ಇದು ಸ್ವಾಭಿಮಾನದ ಪ್ರಶ್ನೆ: ಶಿವಕುಮಾರ್