AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ನಾನು ಮನುಷ್ಯಳೇ’; ಸುದೀಪ್​ ಎದುರು ವೈಷ್ಣವಿ ಹೀಗೆ ಹೇಳಿದ್ದೇಕೆ?

ಬಿಗ್​ ಬಾಸ್ ಎಂಟನೇ ಸೀಸನ್​ ಆರಂಭದಲ್ಲಿ ವೈಷ್ಣವಿ ತುಂಬಾನೇ ಸೈಲೆಂಟ್​ ಆಗಿದ್ದರು. ಅವರು ಎಲ್ಲರೊಂದಿಗೂ ಅಷ್ಟಾಗಿ ಬೆರೆಯುತ್ತಿರಲಿಲ್ಲ. ಈ ವಿಚಾರ ಇಟ್ಟುಕೊಂಡು ಮನೆ ಮಂದಿ ವೈಷ್ಣವಿ ಅವರನ್ನು ಟೀಕೆ ಮಾಡಿದ್ದರು.

‘ನಾನು ಮನುಷ್ಯಳೇ’; ಸುದೀಪ್​ ಎದುರು ವೈಷ್ಣವಿ ಹೀಗೆ ಹೇಳಿದ್ದೇಕೆ?
‘ನಾನು ಮನುಷ್ಯಳೇ’; ಸುದೀಪ್​ ಎದುರು ವೈಷ್ಣವಿ ಹೀಗೆ ಹೇಳಿದ್ದೇಕೆ?
TV9 Web
| Edited By: |

Updated on: Jul 25, 2021 | 7:29 PM

Share

ಕನ್ನಡ ಬಿಗ್​ ಬಾಸ್​ ಸೀಸನ್​ 8ರಲ್ಲಿ ಒಂದೇ ಒಂದು ದಿನವೂ ಧ್ಯಾನ ಹಾಗೂ ಯೋಗಾಸನ ಮಾಡುವುದನ್ನು ವೈಷ್ಣವಿ ಗೌಡ ತಪ್ಪಿಸಿಲ್ಲ. ಮನೆ ಹೊರಗೆ ಇದ್ದ ರೂಢಿಯನ್ನು ಅವರು ಇಲ್ಲಿಯೂ ಮುಂದುವರಿಸಿಕೊಂಡು ಹೋಗಿದ್ದಾರೆ. ಅವರು ಟೀ-ಕಾಫಿ ಕುಡಿಯಲ್ಲ. ಇದರ ಮಧ್ಯೆ, ಅವರಲ್ಲಿ ಮಹತ್ವದ ಬದಲಾವಣೆ ಆಗಿದೆ. ಇದು ಮನೆಯವರು ಹಾಗೂ ಸುದೀಪ್​ ಗಮನಕ್ಕೆ ಬಂದಿದೆ. ಇದನ್ನು ‘ಸೂಪರ್ ಸಂಡೆ ವಿತ್ ಸುದೀಪ’ ಕಾರ್ಯಕ್ರಮದಲ್ಲಿ ಚರ್ಚೆ ಮಾಡಲಾಗಿದೆ.

ಬಿಗ್​ ಬಾಸ್ ಎಂಟನೇ ಸೀಸನ್​ ಆರಂಭದಲ್ಲಿ ವೈಷ್ಣವಿ ತುಂಬಾನೇ ಸೈಲೆಂಟ್​ ಆಗಿದ್ದರು. ಅವರು ಎಲ್ಲರೊಂದಿಗೂ ಅಷ್ಟಾಗಿ ಬೆರೆಯುತ್ತಿರಲಿಲ್ಲ. ಈ ವಿಚಾರ ಇಟ್ಟುಕೊಂಡು ಮನೆ ಮಂದಿ ವೈಷ್ಣವಿ ಅವರನ್ನು ಟೀಕೆ ಮಾಡಿದ್ದರು. ‘ಅವರ ಗಾಡಿ ಇನ್ನೂ ಸ್ಟಾರ್ಟ್​ ಆಗಿಲ್ಲ ಎಂದು ಅನ್ನಿಸುತ್ತಿದೆ ಎಂದು’ ಕೆಲವರು ಅಭಿಪ್ರಾಯ ಹೊರ ಹಾಕಿದ್ದರು. ಇದನ್ನು ವೈಷ್ಣವಿ ಗಂಭೀರವಾಗಿ ಪರಿಗಣಿಸಿದ್ದರು. ಈ ಕಾರಣಕ್ಕೆ ಅವರಲ್ಲಿ ಸಾಕಷ್ಟು ಬದಲಾವಣೆ ಆಗಿತ್ತು. ಟಾಸ್ಕ್​ನಲ್ಲಿ ಅಗ್ರೆಸ್ಸಿವ್​ ಆಗಿ ಆಡೋಕೆ ಆರಂಭಿಸಿದ್ದರು.

ಈಗ ಎರಡನೇ ಸೀಸನ್​ನಲ್ಲಿ ವೈಷ್ಣವಿ ಮತ್ತಷ್ಟು ಬದಲಾಗಿದ್ದಾರೆ. ಫಿನಾಲೆ ಸಮೀಪಿಸುತ್ತಿದ್ದಂತೆ ಅವರು ಮತ್ತಷ್ಟು ಜಾಗೃತರಾಗಿದ್ದಾರೆ. ಇದು ಅಭಿಮಾನಿಗಳಿಗೆ ಸ್ಪಷ್ಟವಾಗುತ್ತಿದೆ. ಕಳೆದ ಒಂದು ವಾರದಿಂದ ಅವರು ತುಂಬಾನೇ ಸಿಟ್ಟು ಮಾಡಿಕೊಳ್ಳುತ್ತಿದ್ದಾರೆ. ಈ ಪ್ರಶ್ನೆಯನ್ನು ಸುದೀಪ್ ಕೇಳಿದ್ದಾರೆ.

‘ಗೆಲ್ಲಬೇಕು ಎನ್ನುವ ಹಠ ಬಂದಮೇಲೆ ವೈಷ್ಣವಿಗೆ ಕೋಪ ಬರೋಕೆ ಆರಂಭವಾಗಿದೆ’ ಎಂದು ಸುದೀಪ್​ ಪ್ರಶ್ನೆ ಮಾಡಿದರು. ‘ವೈಷ್ಣವಿಗೆ ಮೊದಲಿನಿಂದಲೂ ಕೋಪ ಬರುತ್ತಿತ್ತು. ಅದನ್ನು ಅವರು ಮನೆಯಲ್ಲಿ ತೋರಿಸಿರಲಿಲ್ಲ. ಈಗ ಅದನ್ನು ತೋರಿಸೋಕೆ ಆರಂಭಿಸಿದ್ದಾರೆ ಎಂದು ನನಗೆ ಅನ್ನಿಸುತ್ತಿದೆ’ ಎಂದು ಪ್ರಶಾಂತ್​ ಹೇಳಿದರು.

ಮಂಜು ಕೂಡ ಸುದೀಪ್​ ಪ್ರಶ್ನೆಗೆ ಹೌದು ಎನ್ನುವ ಉತ್ತರ ಕೊಟ್ಟರು. ‘ಮೊದಲು ವೈಷ್ಣವಿ ಕೋಪ ತಡೆದುಕೊಳ್ಳುತ್ತಿದ್ದರು. ಆದರೆ, ಈಗ ಅದನ್ನು ತಡೆದುಕೊಂಡರೂ ಪ್ರಯೋಜನವಿಲ್ಲ ಎನ್ನುವುದು ಅವರಿಗೆ ಗೊತ್ತಾಗಿದೆ’ ಎಂದರು ಅವರು. ವೈಷ್ಣವಿಗೆ ಈ ಪ್ರಶ್ನೆ ಕೇಳಿದಾಗ ‘ನಾನು ಮನುಷ್ಯಳೇ ಅಲ್ಲವಾ ಸರ್​’ ಎಂದು ಮರು ಪ್ರಶ್ನೆ ಹಾಕಿದರು.

ಇದನ್ನೂ ಓದಿ: ಬಿಗ್​ ಬಾಸ್​ ಮನೆಯಲ್ಲಿ ಇದೇ ಮೊದಲ ಬಾರಿಗೆ ತಾಳ್ಮೆ ಕಳೆದುಕೊಂಡ ವೈಷ್ಣವಿ; ಪ್ರಶಾಂತ್​ ವಿರುದ್ಧ ತಿರುಗಿಬಿದ್ದ ನಟಿ

‘ನೀವು ನಡೆದುಕೊಂಡ ರೀತಿ ನಿಮ್ಮ ವ್ಯಕ್ತಿತ್ವಕ್ಕೆ ಸೂಕ್ತವಲ್ಲ’; ಪಂಚಾಯ್ತಿಯಲ್ಲಿ ವೈಷ್ಣವಿಗೆ ಬುದ್ಧಿ ಹೇಳಿದ ಕಿಚ್ಚ ಸುದೀಪ್​

ಟರ್ನಿಂಗ್​ನಲ್ಲಿ ಕಂಟ್ರೋಲ್ ಸಿಗದೆ ಮರಕ್ಕೆ ಡಿಕ್ಕಿ ಹೊಡೆದ ಕಾರು
ಟರ್ನಿಂಗ್​ನಲ್ಲಿ ಕಂಟ್ರೋಲ್ ಸಿಗದೆ ಮರಕ್ಕೆ ಡಿಕ್ಕಿ ಹೊಡೆದ ಕಾರು
ವಾರಾಣಸಿ-ಲಕ್ನೋ ರೈಲಿನೊಳಗೆ ಎರಡು ಗುಂಪುಗಳ ನಡುವೆ ಹೊಡೆದಾಟ
ವಾರಾಣಸಿ-ಲಕ್ನೋ ರೈಲಿನೊಳಗೆ ಎರಡು ಗುಂಪುಗಳ ನಡುವೆ ಹೊಡೆದಾಟ
ಗಾಯಗೊಂಡಿದ್ದ ಚಾಲಕ ಮೊಹಮ್ಮದ್ ರಫೀಕ್ ಸಾವು, ಗೋಳಾಡಿದ ಪತ್ನಿ
ಗಾಯಗೊಂಡಿದ್ದ ಚಾಲಕ ಮೊಹಮ್ಮದ್ ರಫೀಕ್ ಸಾವು, ಗೋಳಾಡಿದ ಪತ್ನಿ
ಉಡುಪಿ ಕೃಷ್ಣನಿಗಾಗಿ ಸಿದ್ಧವಾಯ್ತು ಚೆಂದದ ಚಿನ್ನದ ರಥ! ಹೇಗಿದೆ ನೋಡಿ
ಉಡುಪಿ ಕೃಷ್ಣನಿಗಾಗಿ ಸಿದ್ಧವಾಯ್ತು ಚೆಂದದ ಚಿನ್ನದ ರಥ! ಹೇಗಿದೆ ನೋಡಿ
ಚಿತ್ರದುರ್ಗ ಬಸ್ ಅಪಘಾತದಲ್ಲಿ ಗಾಯಗೊಂಡಿದ್ದ ಚಾಲಕ ಸಾವು
ಚಿತ್ರದುರ್ಗ ಬಸ್ ಅಪಘಾತದಲ್ಲಿ ಗಾಯಗೊಂಡಿದ್ದ ಚಾಲಕ ಸಾವು
ಮೃತರ ಕುಟುಂಬಗಳಿಗೆ ಶಾಸಕ ಪ್ರದೀಪ್ ಈಶ್ವರ್ ನೆರವಿನ ಭರವಸೆ
ಮೃತರ ಕುಟುಂಬಗಳಿಗೆ ಶಾಸಕ ಪ್ರದೀಪ್ ಈಶ್ವರ್ ನೆರವಿನ ಭರವಸೆ
2026 ಗುರು ಗ್ರಹದ ಸಂಚಾರದಿಂದ ಮಕರ ರಾಶಿಯವರಿಗೆ ಗುರುಬಲ ಮತ್ತು ಅದೃಷ್ಟ
2026 ಗುರು ಗ್ರಹದ ಸಂಚಾರದಿಂದ ಮಕರ ರಾಶಿಯವರಿಗೆ ಗುರುಬಲ ಮತ್ತು ಅದೃಷ್ಟ
ಪಕ್ಷದ ನಿರ್ದೇಶನ ಪಾಲಿಸೋದು ಕಾರ್ಯಕರ್ತರ ಕರ್ತವ್ಯ: ಯತೀಂದ್ರ ಟಾಂಗ್
ಪಕ್ಷದ ನಿರ್ದೇಶನ ಪಾಲಿಸೋದು ಕಾರ್ಯಕರ್ತರ ಕರ್ತವ್ಯ: ಯತೀಂದ್ರ ಟಾಂಗ್
ಫಾರಂ ಕೋಳಿ, ಮೊಟ್ಟೆ ತಿನ್ನೋ ಮುನ್ನ ಎಚ್ಚರ: ಕೆಲವು ಕಡೆ ಹೀಗೆಲ್ಲ ಮಾಡ್ತಾರೆ!
ಫಾರಂ ಕೋಳಿ, ಮೊಟ್ಟೆ ತಿನ್ನೋ ಮುನ್ನ ಎಚ್ಚರ: ಕೆಲವು ಕಡೆ ಹೀಗೆಲ್ಲ ಮಾಡ್ತಾರೆ!
ಮಕ್ಕಳಿಗೂ ಮಾಳು ಸ್ಟೈಲ್​​ನಲ್ಲೇ ಹೇರ್​ಸ್ಟೈಲ್; ಇಲ್ಲಿದೆ ಫನ್ ವಿಡಿಯೋ
ಮಕ್ಕಳಿಗೂ ಮಾಳು ಸ್ಟೈಲ್​​ನಲ್ಲೇ ಹೇರ್​ಸ್ಟೈಲ್; ಇಲ್ಲಿದೆ ಫನ್ ವಿಡಿಯೋ