AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ನೀವು ನಡೆದುಕೊಂಡ ರೀತಿ ನಿಮ್ಮ ವ್ಯಕ್ತಿತ್ವಕ್ಕೆ ಸೂಕ್ತವಲ್ಲ’; ಪಂಚಾಯ್ತಿಯಲ್ಲಿ ವೈಷ್ಣವಿಗೆ ಬುದ್ಧಿ ಹೇಳಿದ ಕಿಚ್ಚ ಸುದೀಪ್​

ಈ ವಾರ ವೈಷ್ಣವಿ ತಾಳ್ಮೆ ಕಳೆದುಕೊಂಡಿದ್ದರು. ಪ್ರಶಾಂತ್​ಗೆ ಕೈ ಎತ್ತಿ ಹೊಡೆಯೋಕೂ ಮುಂದಾಗಿದ್ದರು. ಈ ವಿಚಾರದಲ್ಲಿ ಕಿಚ್ಚ ಸುದೀಪ್​ ವೈಷ್ಣವಿಗೆ ಪಾಠ ಹೇಳಿದ್ದಾರೆ.

‘ನೀವು ನಡೆದುಕೊಂಡ ರೀತಿ ನಿಮ್ಮ ವ್ಯಕ್ತಿತ್ವಕ್ಕೆ ಸೂಕ್ತವಲ್ಲ’; ಪಂಚಾಯ್ತಿಯಲ್ಲಿ ವೈಷ್ಣವಿಗೆ ಬುದ್ಧಿ ಹೇಳಿದ ಕಿಚ್ಚ ಸುದೀಪ್​
ವೈಷ್ಣವಿ-ಸುದೀಪ್​
TV9 Web
| Edited By: |

Updated on:Jul 25, 2021 | 2:15 PM

Share

ಬಿಗ್​ ಬಾಸ್​ ಮನೆಯಲ್ಲಿ ವೈಷ್ಣವಿ ಗೌಡ ಯಾರ ತಂಟೆಗೂ ಅಷ್ಟಾಗಿ ಹೋಗುವುದಿಲ್ಲ. ಜಗಳವಾಡುವ ಪರಿಸ್ಥಿತಿ ಬಂದರೂ ಅದನ್ನು ತಿಳಿ ಗೊಳಿಸುವ ಕಲೆ ವೈಷ್ಣವಿಗೆ ಕರಗತವಾಗಿದೆ. ಹೀಗಾಗಿ ಬಿಗ್​ ಬಾಸ್​ ಮನೆಯಲ್ಲಿ ಯಾರ ಜತೆಗೂ ಅವರು ಜಗಳ ಮಾಡಿಕೊಂಡಿಲ್ಲ. ಆದರೆ ಈ ವಾರ ಅವರು ತಾಳ್ಮೆ ಕಳೆದುಕೊಂಡಿದ್ದರು. ಪ್ರಶಾಂತ್​ಗೆ ಕೈ ಎತ್ತಿ ಹೊಡೆಯೋಕೂ ಮುಂದಾಗಿದ್ದರು. ಈ ವಿಚಾರದಲ್ಲಿ ಕಿಚ್ಚ ಸುದೀಪ್​ ವೈಷ್ಣವಿಗೆ ಪಾಠ ಹೇಳಿದ್ದಾರೆ.

ಈ ವಾರ ಸ್ಪರ್ಧಿಗಳು ಬೆನ್ನಿಗೆ ಗೋಣಿಚೀಲ ಕಟ್ಟಿಕೊಂಡು ವೃತ್ತಗಳ ಒಳಗೆ ಓಡುವ ಟಾಸ್ಕ್​ ನೀಡಲಾಗಿತ್ತು. ಮುಂದಿನ ಸದಸ್ಯರ ಚೀಲದಲ್ಲಿರುವ ವಸ್ತುವನ್ನು ಖಾಲಿ ಮಾಡಬೇಕು. ಈ ವೇಳೆ ವೈಷ್ಣವಿ ಹಿಂದೆ ಇದ್ದ ಪ್ರಶಾಂತ್​ ಚೀಲವನ್ನು ಗಟ್ಟಿಯಾಗಿ ಎಳೆದಿದ್ದರು. ಇದು ವೈಷ್ಣವಿ ಅವರ ಕೋಪಕ್ಕೆ ಕಾರಣವಾಗಿತ್ತು. ಹೀಗಾಗಿ, ಅವರು ಸಿಟ್ಟಿನಿಂದ ಪ್ರಶಾಂತ್​ ಮೇಲೆ ಕೈ ಎತ್ತಿದ್ದಾರೆ. ವೈಷ್ಣವಿ ಅವರ ನಡೆ ವೀಕ್ಷಕರಲ್ಲಿ ಅಚ್ಚರಿ ಮೂಡಿಸಿತ್ತು. ಈ ವಿಚಾರದಲ್ಲಿ ಸುದೀಪ್​ ಕೂಡ ಮಾತನಾಡಿದ್ದಾರೆ.

‘ವೈಷ್ಣವಿ ಅವರೇ ಅದೊಂದು ಟಾಸ್ಕ್​. ಆದರೆ, ನೀವೇಕೆ ಅಷ್ಟು ಗಂಭೀರವಾದಿರಿ ಎಂಬುದು ನನಗೆ ಗೊತ್ತಾಗಲಿಲ್ಲ. ಅದು ಅಗ್ರೆಸ್ಸಿವ್​ ಆಗಿ ಆಡುವ ಟಾಸ್ಕ್​. ಅದನ್ನು ಹಾಗೆಯೇ ಆಡಬೇಕು. ಈಗ ಕಬ್ಬಡ್ಡಿಯನ್ನು ಆರಾಮಾಗಿ ಆಡಬೇಕು ಅಂದರೆ ಆಗಲ್ಲ. ನಿಮಗೆ ಕೊಟ್ಟ ಆ ಟಾಸ್ಕ್​ಅನ್ನು ಬೇರೆ ರೀತಿ ಆಡಬೇಕು ಎಂದರೆ ಅದು ಸಾಧ್ಯವಿತ್ತೇ? ಹಾಗೆ ಬೇರೆ ಮಾರ್ಗ ಇತ್ತು ಎಂದಾದರೆ ನಮಗೆ ಹೇಳಿ ನೋಡೋಣ. ನಾವು ಅದನ್ನು ಸ್ವೀಕರಿಸುತ್ತೇವೆ’ ಎಂದರು ಸುದೀಪ್​.

ಇದಕ್ಕೆ ವೈಷ್ಣವಿ ಬೇಸರ ಮಾಡಿಕೊಂಡು ಕ್ಷಮೆ ಕೇಳಿದರು. ಅದಕ್ಕೆ ಸುದೀಪ್​, ‘ನೀವು ಕ್ಷಮೆ ಕೇಳೋದು ಬೇಡ. ಆಟವಾಡುವಾಗ ಸಿಟ್ಟಿನಲ್ಲಿ ಆ ರೀತಿ ಆಗುತ್ತದೆ ನಿಜ. ನಂತರ ನೀವು ಹೇಗೆ ನಡೆದುಕೊಳ್ಳುತ್ತೀರಿ ಎನ್ನುವುದರ ಮೇಲೆ ನಿಮ್ಮ ವೈಕ್ತಿತ್ವ ನಿರ್ಧಾರವಾಗುತ್ತದೆ. ನೀವು ಬಿಗ್​ ಬಾಸ್ ಮನೆಯಲ್ಲಿ ಈ ವಾರ ನಡೆದುಕೊಂಡಿದ್ದು ನಿಮ್ಮ ವ್ಯಕ್ತಿತ್ವಕ್ಕೆ ಸೂಕ್ತವಲ್ಲ’ ಎಂದು ಕಿವಿ ಮಾತು ಹೇಳಿದರು.

ಇದನ್ನೂ ಓದಿ: ‘ನೀವು ನನ್ನನ್ನು ಸ್ತ್ರೀ ನಿಂದಕ ಎಂಬಂತೆ ಮಾಡಿದ್ದೀರಿ’; ಸುದೀಪ್​ ಮೇಲೆಯೇ ಗೂಬೆ ಕೂರಿಸಿದ ಚಕ್ರವರ್ತಿ, ಕಿಚ್ಚ ಕೊಟ್ಟ ಉತ್ತರ ಏನು?

ವೈಷ್ಣವಿ ಕಣ್ಣಲ್ಲಿ ನೀರು ಹಾಕಿಸಿದ ಪ್ರಶಾಂತ್​; ಫಿನಾಲೆಗೂ ಮೊದಲೇ ಫ್ರೆಂಡ್​ಶಿಪ್​ನಲ್ಲಿ ಬ್ರೇಕಪ್?

Published On - 2:14 pm, Sun, 25 July 21

ಕಳೆದು ಹೋಗಿದ್ದ ಬಾಲಕಿಯನ್ನು ಮರಳಿ ತಾಯಿ ಮಡಿಲಿಗೆ ಸೇರಿಸಿದ ಪೊಲೀಸರು
ಕಳೆದು ಹೋಗಿದ್ದ ಬಾಲಕಿಯನ್ನು ಮರಳಿ ತಾಯಿ ಮಡಿಲಿಗೆ ಸೇರಿಸಿದ ಪೊಲೀಸರು
ಸ್ಟ್ರೋಕ್ ಗೆ ಒಳಗಾದವರನ್ನು ಎಷ್ಟು ಸಮಯದೊಳಗೆ ಆಸ್ಪತ್ರೆಗೆ ದಾಖಲಿಸಬೇಕು?
ಸ್ಟ್ರೋಕ್ ಗೆ ಒಳಗಾದವರನ್ನು ಎಷ್ಟು ಸಮಯದೊಳಗೆ ಆಸ್ಪತ್ರೆಗೆ ದಾಖಲಿಸಬೇಕು?
ಇಂದೋರ್‌ನಲ್ಲಿ ಕಲುಷಿತ ನೀರು ಕುಡಿದು 7 ಜನ ಸಾವು; ಆಸ್ಪತ್ರೆಗೆ ಸಿಎಂ ಭೇಟಿ
ಇಂದೋರ್‌ನಲ್ಲಿ ಕಲುಷಿತ ನೀರು ಕುಡಿದು 7 ಜನ ಸಾವು; ಆಸ್ಪತ್ರೆಗೆ ಸಿಎಂ ಭೇಟಿ
ಬಸ್ಸಿನಲ್ಲಿ ನಿದ್ದೆಗೆ ಜಾರಿದ್ದ ವೇಳೆ ಯುವತಿಯ ಎದೆ ಮೇಲೆ ಕೈ ಇಟ್ಟ ಯುವಕ
ಬಸ್ಸಿನಲ್ಲಿ ನಿದ್ದೆಗೆ ಜಾರಿದ್ದ ವೇಳೆ ಯುವತಿಯ ಎದೆ ಮೇಲೆ ಕೈ ಇಟ್ಟ ಯುವಕ
ಪುರಿ ಜಗನ್ನಾಥ ದೇವಸ್ಥಾನದಲ್ಲಿ ಈ ವರ್ಷದ ಕೊನೆಯ ಸೂರ್ಯಾಸ್ತ ಕಂಡಿದ್ದು ಹೀಗೆ
ಪುರಿ ಜಗನ್ನಾಥ ದೇವಸ್ಥಾನದಲ್ಲಿ ಈ ವರ್ಷದ ಕೊನೆಯ ಸೂರ್ಯಾಸ್ತ ಕಂಡಿದ್ದು ಹೀಗೆ
ಬೆಂಗಳೂರಲ್ಲಿ ಪಬ್​​ಗಳತ್ತ ಮುಖ ಮಾಡಿದ ಜನ: ಸಿಲಿಕಾನ್​​ ಸಿಟಿ ಫುಲ್​​ ಝಗಮಗ
ಬೆಂಗಳೂರಲ್ಲಿ ಪಬ್​​ಗಳತ್ತ ಮುಖ ಮಾಡಿದ ಜನ: ಸಿಲಿಕಾನ್​​ ಸಿಟಿ ಫುಲ್​​ ಝಗಮಗ
ವರ್ಷದ ಕೊನೆಯ ಸೂರ್ಯಾಸ್ತ: ನಯನ ಮನೋಹರ ದೃಶ್ಯ ಸೆರೆ
ವರ್ಷದ ಕೊನೆಯ ಸೂರ್ಯಾಸ್ತ: ನಯನ ಮನೋಹರ ದೃಶ್ಯ ಸೆರೆ
ಒಡಿಶಾದಲ್ಲಿ 2 ಪ್ರಲೇ ಕ್ಷಿಪಣಿಗಳ ಯಶಸ್ವಿ ಉಡಾವಣೆ; ವಿಡಿಯೋ ಇಲ್ಲಿದೆ
ಒಡಿಶಾದಲ್ಲಿ 2 ಪ್ರಲೇ ಕ್ಷಿಪಣಿಗಳ ಯಶಸ್ವಿ ಉಡಾವಣೆ; ವಿಡಿಯೋ ಇಲ್ಲಿದೆ
ಗ್ರಾಹಕರಿಗೆ ಶಾಕ್​​ ಕೊಟ್ಟ ಡೆಲವರಿ ಬಾಯ್ಸ್​​​
ಗ್ರಾಹಕರಿಗೆ ಶಾಕ್​​ ಕೊಟ್ಟ ಡೆಲವರಿ ಬಾಯ್ಸ್​​​
ಬಿಗ್​​ಬಾಸ್ ಮನೆಯಲ್ಲಿ ಸ್ಪಂದನಾ-ರಾಶಿಕಾ ಕುಸ್ತಿ: ವಿಡಿಯೋ
ಬಿಗ್​​ಬಾಸ್ ಮನೆಯಲ್ಲಿ ಸ್ಪಂದನಾ-ರಾಶಿಕಾ ಕುಸ್ತಿ: ವಿಡಿಯೋ