ಶುರುವಾಯ್ತು ಬಿಗ್​​ಬಾಸ್ ಅಗ್ನಿಪರೀಕ್ಷೆ, ಆಕಾಂಕ್ಷಿಗಳಿಗೆ ನಾನಾ ಹಿಂಸೆ

Bigg Boss Kannada Agnipareekshe: ಈ ಬಾರಿ ಬಿಗ್​​ಬಾಸ್ ಮನೆಗೆ ಹೋಗಲು ಸಾಮಾನ್ಯರಿಗೆ ಅವಕಾಶ ನೀಡಲಾಗಿದ್ದು, ಅರ್ಜಿ ಹಾಕಿ ಹಲವು ಹಂತಗಳ ಆಯ್ಕೆ ಪ್ರಕ್ರಿಯೆಗಳನ್ನು ಮುಗಿಸಿದವರನ್ನು ಬಿಗ್​​ಬಾಸ್ ಮನೆಗೆ ಕಳಿಸಲಾಗುತ್ತದೆ. ಬಿಗ್​​ಬಾಸ್ ಮನೆಗೆ ಹೋಗಲು ಅರ್ಜಿ ಹಾಕಿದ ಹಲವಾರು ಮಂದಿಯಲ್ಲಿ ಕೊನೆಯ 60 ಮಂದಿಯನ್ನು ಆಯೋಜಕರು ಆಯ್ಕೆ ಮಾಡಿದ್ದು, ಅವರನ್ನು ‘ಬಿಗ್​​ಬಾಸ್ ಅಗ್ನಿಪರೀಕ್ಷೆ’ಯಲ್ಲಿ ಕೊನೆಯ ಹಂತದ ಪರೀಕ್ಷೆಗೆ ಒಳಪಡಿಸಲಾಗುತ್ತದೆ.

ಶುರುವಾಯ್ತು ಬಿಗ್​​ಬಾಸ್ ಅಗ್ನಿಪರೀಕ್ಷೆ, ಆಕಾಂಕ್ಷಿಗಳಿಗೆ ನಾನಾ ಹಿಂಸೆ
Agnipareekshe

Updated on: Aug 16, 2026 | 10:29 PM

ಬಿಗ್​​ಬಾಸ್ (Bigg Boss) ಕನ್ನಡ ಸೀಸನ್ 13 ಪ್ರಾರಂಭಕ್ಕೆ ಕೆಲ ದಿನಗಳಷ್ಟೆ ಬಾಕಿ ಇದೆ. ಆದರೆ ಬಿಗ್​​ಬಾಸ್ ಶೋ ಶುರು ಆಗುವ ಮುಂಚೆಯೇ ಬಿಗ್​​ಬಾಸ್ ‘ಅಗ್ನಿಪರೀಕ್ಷೆ’ ಆರಂಭವಾಗಿದೆ. ಈ ಬಾರಿ ಬಿಗ್​​ಬಾಸ್ ಮನೆಗೆ ಹೋಗಲು ಸಾಮಾನ್ಯರಿಗೆ ಅವಕಾಶ ನೀಡಲಾಗಿದ್ದು, ಅರ್ಜಿ ಹಾಕಿ ಹಲವು ಹಂತಗಳ ಆಯ್ಕೆ ಪ್ರಕ್ರಿಯೆಗಳನ್ನು ಮುಗಿಸಿದವರನ್ನು ಬಿಗ್​​ಬಾಸ್ ಮನೆಗೆ ಕಳಿಸಲಾಗುತ್ತದೆ. ಬಿಗ್​​ಬಾಸ್ ಮನೆಗೆ ಹೋಗಲು ಅರ್ಜಿ ಹಾಕಿದ ಹಲವಾರು ಮಂದಿಯಲ್ಲಿ ಕೊನೆಯ 60 ಮಂದಿಯನ್ನು ಆಯೋಜಕರು ಆಯ್ಕೆ ಮಾಡಿದ್ದು, ಅವರನ್ನು ‘ಬಿಗ್​​ಬಾಸ್ ಅಗ್ನಿಪರೀಕ್ಷೆ’ಯಲ್ಲಿ ಕೊನೆಯ ಹಂತದ ಪರೀಕ್ಷೆಗೆ ಒಳಪಡಿಸಲಾಗುತ್ತದೆ.

ಇಂದು ಟೆಲಿಕಾಸ್ಟ್ ಆರಂಭಿಸಿದ ‘ಬಿಗ್​​ಬಾಸ್ ಅಗ್ನಿಪರೀಕ್ಷೆ’ಯಲ್ಲಿ ಮಾಜಿ ವಿನ್ನರ್​​ಗಳಾದ ನಟಿ ಶ್ರುತಿ ಮತ್ತು ಚಂದನ್ ಶೆಟ್ಟಿ ಹಾಗೂ ಬಿಗ್​​ಬಾಸ್ 10ರ ಫಿನಾಲೆ ಸ್ಪರ್ಧಿಗಳಾದ ವಿನಯ್ ಗೌಡ ಮತ್ತು ಸಂಗೀತ ಶೃಂಗೇರಿ ಜಡ್ಜ್​​ಗಳು. ಅಂತಿಮ ಹಂತಕ್ಕೆ ಆಯ್ಕೆ ಆಗಿರುವ 60 ಮಂದಿಗೆ ನಾನಾ ರೀತಿಯ ಪ್ರಶ್ನೆಗಳು, ಟಾಸ್ಕ್​​ಗಳನ್ನು ನೀಡಿ, ಬಿಗ್​​ಬಾಸ್ ಮನೆಯ ಒಳಗೆ ಹೋಗಲು ಅರ್ಹರಾದ ವ್ಯಕ್ತಿಗಳನ್ನು ಆಯ್ಕೆ ಮಾಡುವುದು ಈ ನಾಲ್ವರು ಜಡ್ಜ್​​ಗಳ ಕೆಲಸ ಆಗಿರಲಿದೆ.

ಇಂದು (ಆಗಸ್​ಟ್ 16) ಪ್ರಸಾರವಾದ ಮೊದಲ ದಿನದ ಎಪಿಸೋಡ್​​ನಲ್ಲಿ ನಾನಾ ಆಕಾಂಕ್ಷಿಗಳು ಬಿಗ್​​ಬಾಸ್ ವೇದಿಕೆಗೆ ಬಂದರು. ನಾಲ್ವರು ಜಡ್ಜ್​​ಗಳನ್ನು ರಂಜಿಸುವ ಅವರನ್ನು ಇಂಪ್ರೆಸ್ ಮಾಡುವ ಪ್ರಯತ್ನ ಮಾಡಿದರು. ಜಡ್ಜ್​​ಗಳು ಸಹ ಆಕಾಂಕ್ಷಿಗಳಿಗೆ ಕಠಿಣಾತಿ ಕಠಿಣವಾದ ಟಾಸ್ಕ್​​ಗಳನ್ನು ನೀಡಿದರು. ಹಿಂದಿಯ ‘ರೋಡೀಸ್’, ‘ಖತರೋಂಕಾ ಕಿಲಾಡಿ’ ಲೆವೆಲ್​​ನ ಟಾಸ್ಕ್​​ಗಳನ್ನು ಸಹ ಸ್ಪರ್ಧಿಗಳು ನೀಡಿದರು. ಎಪಿಸೋಡ್​​ನಲ್ಲಿ ಮೊದಲು ಬಂದ ಸ್ಪರ್ಧಿಗೆ, ಫೋನ್ ಮಾಡಿ ಕಾರಣವಿಲ್ಲದೆ ಉದ್ಯೋಗಕ್ಕೆ ರಾಜೀನಾಮೆ ಕೊಡು ಎಂದರು. ಆ ಯುವತಿ, ಜಡ್ಜ್​ಗಳು ಹೇಳಿದಂತೆ ಮಾಡಿದರು. ಆದರೂ ಅವರು ಆಯ್ಕೆ ಆಗಲಿಲ್ಲ.

ಇದನ್ನೂ ಓದಿ:ಬಿಗ್‌ಬಾಸ್ ಅಗ್ನಿಪರೀಕ್ಷೆ’ಯಲ್ಲಿ ಗಲಾಟೆ: ‘ವಿನಯ್ ಗೌಡ ಅಲ್ಲಿರೋದಕ್ಕೆ ಲಾಯಕ್ಕಿಲ್ಲ’ ಎಂದ ಸ್ಪರ್ಧಿ

ಅಗ್ನಿಪರೀಕ್ಷೆಯ ರೂಲ್ಸ್ ಪ್ರಕಾರ, ಎಲ್ಲರೂ ಗ್ರೀನ್ ಕೊಟ್ಟರೆ ಸ್ಟಾರ್ ಕ್ಯಾಂಡಿಡೇಟ್, ಇಬ್ಬರು ಗ್ರೀನ್ ಕೊಟ್ಟು ಇಬ್ಬರು ರೆಡ್ ಕೊಟ್ಟರೆ ಹೋಲ್ಡ್, ಮತ್ತೆ ಅವಕಾಶ ಸಿಗುತ್ತದೆ. ಒಬ್ಬರು ಮಾತ್ರ ಗ್ರೀನ್ ಕೊಟ್ಟು ಮೂವರು ರೆಡ್ ಕೊಟ್ಟರೆ ಔಟ್. ಎಲ್ಲರೂ ರೆಡ್ ಕೊಟ್ಟರೆ ಸಹ ಔಟ್. ಜಡ್ಜ್​​ಗಳಂತೂ ತಮಗೆ ಸಿಕ್ಕಿರುವ ಪವರ್ ಅನ್ನು ಬಳಸಿ ಬರುವ ಆಕಾಂಕ್ಷಿಗಳಿಗೆ ಚಿತ್ರ, ವಿಚಿತ್ರ ಟಾಸ್ಕ್​​ಗಳನ್ನು ನೀಡುತ್ತಿದ್ದಾರೆ. ಆ ಟಾಸ್ಕ್​​ಗಳಿಗೂ ಆಕಾಂಕ್ಷಿಗಳು ಬಿಗ್​​ಬಾಸ್​​ಗೆ ಹೋಗಲು ಬೇಕಾದ ಅರ್ಹತೆಗೂ ಏನು ಸಂಬಂಧ ಎಂಬುದು ಸಹ ಗೊತ್ತಿಲ್ಲದೆ ಟಾಸ್ಕ್​​ಗಳನ್ನು ನೀಡುತ್ತಿದ್ದಾರೆ. ಈ ಜಡ್ಜ್​​ಗಳು ಆಯ್ಕೆ ಮಾಡಿದ ಸ್ಪರ್ಧಿಗಳನ್ನು ಅಂತಿಮವಾಗಿ ಮನೆಯ ಒಳಗೆ ಕಳಿಸುವ ಜವಾಬ್ದಾರಿ ಪ್ರೇಕ್ಷಕರ ಹೆಗಲ ಮೇಲೆಯೇ ಬೀಳಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us