ನಾನು ಸುಂದರವಾಗಿದ್ದೀನಿ ಹಾಗಾಗಿ ಸ್ವರ್ಗ ಬೇಕು ಎಂದ ಸ್ಪರ್ಧಿ; ಸಿಕ್ಕಿದ್ದೇನು?

|

Updated on: Sep 29, 2024 | 7:50 PM

ಸೋಶಿಯಲ್ ಮೀಡಿಯಾದಲ್ಲಿ ಅನುಷಾ ರೈ ದೊಡ್ಡ ಮಟ್ಟದ ಹಿಂಬಾಲಕರನ್ನು ಪಡೆದಿದ್ದಾರೆ. ಅವರು ಆಗಾಗ ಗ್ಲಾಮರಸ್ ಫೋಟೋಗಳನ್ನು ಪೋಸ್ಟ್ ಮಾಡುತ್ತಾ ಇರುತ್ತಾರೆ. ಈಗ ಬಿಗ್ ಬಾಸ್​ಗೆ ಕಾಲಿಟ್ಟಿರೋದ್ರಿಂದ ಅವರ ಖ್ಯಾತಿ ಮತ್ತಷ್ಟು ಹೆಚ್ಚುವ ನಿರೀಕ್ಷೆ ಇದೆ.

ನಾನು ಸುಂದರವಾಗಿದ್ದೀನಿ ಹಾಗಾಗಿ ಸ್ವರ್ಗ ಬೇಕು ಎಂದ ಸ್ಪರ್ಧಿ; ಸಿಕ್ಕಿದ್ದೇನು?
ಅನುಷಾ
Follow us on

ಪ್ರತಿವರ್ಷದಂತೆ ಈ ಬಾರಿಯೂ ಬಿಗ್ ಬಾಸ್​ಗೆ ಕಲಾವಿದರನ್ನು ಹೆಚ್ಚಿನ ಸಂಖ್ಯೆಯಲ್ಲಿ ಕರೆತರಲಾಗಿದೆ. ಕಿರುತೆರೆ ಕಲಾವಿದರು ಬಿಗ್ ಬಾಸ್ ಮನೆಗೆ ಎಂಟ್ರಿ ಪಡೆದಿದ್ದಾರೆ. ಇದರ ಜೊತೆಗೆ ಕ್ರಿಕೆಟರ್, ವಕೀಲರು ಕೂಡ ದೊಡ್ಮನೆಯಲ್ಲಿ ಸ್ಥಾನ ಪಡೆದಿದ್ದಾರೆ. ಈ ಬಾರಿ ದೊಡ್ಮನೆಗೆ ಅನುಷಾ ರೈ ಕೂಡ ಬಂದಿದ್ದಾರೆ. ಅವರು ಯಾರು? ಅವರ ಹಿನ್ನೆಲೆ ಏನು ಎಂಬ ಬಗ್ಗೆ ಇಲ್ಲಿದೆ ವಿವರ.

ಅನುಷಾ ರೈ ಅವರು ತುಮಕೂರಿನವರು. ಅವರು ಬೆಳೆದಿದ್ದು ಹಳ್ಳಿಯಲ್ಲಿ. ಅವರು ಆರಂಭದಲ್ಲಿ ಕಿರುತೆರೆಯಲ್ಲಿ ಗುರುತಿಸಿಕೊಂಡಿದ್ದರು. ಆ ಬಳಿಕ ದೊಡ್ಡ ಪರದೆಗೆ ಕಾಲಿಟ್ಟರು. ‘ಧೈರ್ಯಂ ಸರ್ವತ್ರ ಸಾಧನಂ’, ‘ಬಿಎಂಡಬ್ಲ್ಯೂ’, ‘ಅಬ್ಬಬ್ಬಾ’, ‘ಖಡಕ್’, ‘ರೈಡರ್’, ‘ದಮಯಂತಿ’ ಮೊದಲಾದ ಸಿನಿಮಾಗಳಲ್ಲಿ ಅವರು ಸಣ್ಣ-ಪುಟ್ಟ ಪಾತ್ರ ಮಾಡಿದ್ದಾರೆ. ಈಗ ಅವರು ಬಿಗ್ ಬಾಸ್ ಮನೆಗೆ ಕಾಲಿಟ್ಟಿದ್ದಾರೆ.

‘ಎಗ್ಸೈಟೆಡ್​ ಆಗಿದೀನಿ. ಸ್ವರ್ಗ-ನರಕ ಎಕ್ಸ್​ಪೀರಿಯನ್ಸ್ ಮಾಡಬೇಕು. ಸ್ವರ್ಗ ಸುಂದರವಾಗಿರುತ್ತದೆ, ನಾನು ಕೂಡ ಸುಂದರವಾಗಿದ್ದೀನಿ. ಹೀಗಾಗಿ, ಸ್ವರ್ಗ ಸೇರಬೇಕು’ ಎಂದರು ಅವರು. ಆದರೆ, ಅವರಿಗೆ ಸಿಕ್ಕಿದ್ದು ಮಾತ್ರ ನರಕ. ‘ನಾನು ಹಳ್ಳಿ ಹುಡುಗಿ. ನನಗೆ ಇದೆಲ್ಲ ತೊಂದರೆಯೇ ಇಲ್ಲ’ ಎಂದರು ಅವರು.

ಇದನ್ನೂ ಓದಿ: ‘ಧೈರ್ಯಂ ಸರ್ವತ್ರ ಸಾಧನಂ’ ಸಿನಿಮಾದಲ್ಲಿದೆ ನೈಜ ಘಟನೆ; ಶೀಘ್ರದಲ್ಲೇ ರಿಲೀಸ್​

ಸೋಶಿಯಲ್ ಮೀಡಿಯಾದಲ್ಲಿ ಅನುಷಾ ರೈ ದೊಡ್ಡ ಮಟ್ಟದ ಹಿಂಬಾಲಕರನ್ನು ಪಡೆದಿದ್ದಾರೆ. ಅವರು ಆಗಾಗ ಗ್ಲಾಮರಸ್ ಫೋಟೋಗಳನ್ನು ಪೋಸ್ಟ್ ಮಾಡುತ್ತಾ ಇರುತ್ತಾರೆ. ಈಗ ಬಿಗ್ ಬಾಸ್​ಗೆ ಕಾಲಿಟ್ಟಿರೋದ್ರಿಂದ ಅವರ ಖ್ಯಾತಿ ಮತ್ತಷ್ಟು ಹೆಚ್ಚುವ ನಿರೀಕ್ಷೆ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 7:45 pm, Sun, 29 September 24