AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಂಬಂಧ ಬೆಳೆಸಲು ಬಂದಿಲ್ಲ: ಮನೆ ಸದಸ್ಯರಿಗೆ ಚಾಟಿ ಬೀಸಿದ ಕಿಚ್ಚ

Bigg Boss Kannada: ಬಿಗ್​ಬಾಸ್ ಕನ್ನಡ ಸೀಸನ್ 11 ವೀಕೆಂಡ್ ಎಪಿಸೋಡ್​ನಲ್ಲಿ ಕಿಚ್ಚ ಸುದೀಪ್ ಮನೆಯ ಸದಸ್ಯರಿಗೆ ಬುದ್ಧಿವಾದ ಹೇಳಿದರು. ಹಲವರು ಸಂಬಂಧಗಳನ್ನು ಮುಂದೆ ಮಾಡಿಕೊಂಡು ಆಡುತ್ತಿದ್ದು, ಸಂಬಂಧಗಳನ್ನು ಗಂಟು ಮೂಟೆ ಕಟ್ಟಿ ಇಡಿ ಎಂದು ಎಚ್ಚರಿಕೆ ನೀಡಿದರು.

ಸಂಬಂಧ ಬೆಳೆಸಲು ಬಂದಿಲ್ಲ: ಮನೆ ಸದಸ್ಯರಿಗೆ ಚಾಟಿ ಬೀಸಿದ ಕಿಚ್ಚ
ಮಂಜುನಾಥ ಸಿ.
|

Updated on: Nov 30, 2024 | 11:17 PM

Share

ಬಿಗ್​ಬಾಸ್​ ವೀಕೆಂಡ್ ಪಂಚಾಯ್ತಿಯಲ್ಲಿ ಪ್ರತಿ ಶನಿವಾರದಂತೆ ಸುದೀಪ್, ಇಡೀ ವಾರದ ವಿಶ್ಲೇಷಣೆ ಮಾಡಿದರು. ಈ ವಾರ ಅವರಿಗೆ ಮಾತನಾಡಲು ಸಾಕಷ್ಟು ಸರಕನ್ನು ಮನೆಯ ಸ್ಪರ್ಧಿಗಳು ಮೊದಲೇ ನೀಡಿದ್ದರು. ಮಹರಾಜ-ಮಹಾರಾಣಿ ಟಾಸ್ಕ್​ ಅನ್ನು ಬಿಗ್​ಬಾಸ್ ಈ ಬಾರಿ ನೀಡಿದ್ದರು. ಮಹಾರಾಜ ಆಗಿದ್ದ ಉಗ್ರಂ ಮಂಜು ಮೊದಲಿಗೆ ಚೆನ್ನಾಗಿ ನಿಭಾಯಿಸಿದ್ದರು. ಆದರೆ ಯಾವಾಗ ಮೋಕ್ಷಿತಾ ಮಹಾರಾಣಿ ಆಗಿ ಬಂದರೋ ಇಡೀ ಮನೆಯ ವಾತಾವಾರಣವೇ ಬದಲಾಯ್ತು. ಇಬ್ಬರೂ ವೈಯಕ್ತಿಕ ಆಟ ಆಡಲು ಆರಂಭಿಸಿ ಇಡೀ ಟಾಸ್ಕ್​ನ ದಿಕ್ಕನ್ನು ತಪ್ಪಿಸಿದರು. ಇದನ್ನೇ ಸುದೀಪ್ ಕಟುವಾಗಿ ಟೀಕೆ ಮಾಡಿದರು.

ಇಷ್ಟು ವಾರಗಳಲ್ಲಿ ಬಿಗ್​ಬಾಸ್ ಕೊಟ್ಟಿದ್ದ ಟಾಸ್ಕ್​​ಗಳಲ್ಲೇ ಈ ವಾರ ಕೊಟ್ಟ ಟಾಸ್ಕ್ ಬಹಳ ಕ್ರಿಯೇಟಿವ್ ಆಗಿತ್ತು, ಎಲ್ಲರಿಗೂ ಸಮಾನ ಅವಕಾಶ ಸಿಕ್ಕಿತ್ತು, ಎಲ್ಲರಿಗೂ ಅವರವರ ಪ್ರತಿಭೆ ತೋರಿಸಲು ಅವಕಾಶ ಸಿಕ್ಕಿತ್ತು. ಟಾಸ್ಕ್​ ಬಹಳ ಚೆನ್ನಾಗಿ ಪ್ರಾರಂಭ ಆಗಿತ್ತು. ಆದರೆ ಅದನ್ನು ಕೆಲವರು ಅದನ್ನು ಹಾಳು ಮಾಡಿಕೊಂಡರು’ ಎಂದ ಸುದೀಪ್, ವಿಶೇಷವಾಗಿ ಉಗ್ರಂ ಮಂಜು, ಮೋಕ್ಷಿತಾ ಅವರನ್ನು ಟೀಕೆ ಮಾಡಿದರು.

ಇಬ್ಬರೂ ಸಹ ಟಾಸ್ಕ್ ಅನ್ನು ಟಾಸ್ಕ್ ರೀತಿ ಆಡಲಿಲ್ಲ. ಇಬ್ಬರೂ ಸಹ ಯಾವುದೇ ಹಂತದಲ್ಲೂ ಟಾಸ್ಕ್ ಗೆ ಜೀವ ತುಂಬುವ ಅವಕಾಶ, ಅಧಿಕಾರ ಹೊಂದ್ದಿರಿ ಆದರೆ ಇಬ್ಬರೂ ಸಹ ಆ ಕಾರ್ಯ ಮಾಡಲಿಲ್ಲ. ಉಗ್ರಂ ಮಂಜು ಅವರು ಟಾಸ್ಕ್​ ಅನ್ನು ಅದ್ಭುತವಾಗಿ ಆಡಿದರು. ಅವರಂತೆ ಇನ್ಯಾರೂ ಸಹ ಆ ಪಾತ್ರಕ್ಕೆ ಜೀವ ತುಂಬಲು ಸಾಧ್ಯ ಇಲ್ಲ ಎಂಬ ರೀತಿ ಪಾತ್ರವನ್ನು ನಿಭಾಯಿಸಿದಿರಿ ಆದರೆ ಒಂದು ಬಾರಿ ಎಡವಿ ಬಿದ್ದರೆ ಮುಗಿಯಿತು. ಮಾಡಿದ ಎಲ್ಲವೂ ನೀರಲ್ಲಿ ಹೋಮ’ ಎಂದರು ಸುದೀಪ್.

ಇದನ್ನೂ ಓದಿ:‘ಪುಷ್ಪ 2’ ಸಿನಿಮಾದಿಂದ ಬದಲಾಗಲಿದೆ ರಶ್ಮಿಕಾ ವೃತ್ತಿ ಜೀವನದ ದಿಕ್ಕು

ಗೌತಮಿ ಸಹ, ಟಾಸ್ಕ್ ಆಡಲಿಲ್ಲ ತಮ್ಮ ವೈಯಕ್ತಿಕ ಭಿನ್ನಾಭಿಪ್ರಾಯಗಳನ್ನು ಇಟ್ಟುಕೊಂಡು ಅದನ್ನು ತೀರಿಸಿಕೊಳ್ಳುವ ಪ್ರಯತ್ನ ಮಾಡಿದರು ಎಂಬರ್ಥದ ಮಾತುಗಳನ್ನಾಡಿದ ಸುದೀಪ್. ಮನೆಯ ಎಲ್ಲ ಸದಸ್ಯರಿಗೆ ಒಟ್ಟಿಗೆ ಸೇರಿ, ‘ಇಲ್ಲಿ ನೀವು ಸಂಬಂಧ ಬೆಳೆಸಲು ಬಂದಿಲ್ಲ. ಟಾಸ್ಕ್ ಇಲ್ಲದಾಗ ಕೂತು ಒಂದೆರಡು ಮಾತು ಮಾತನಾಡಲು ಸಂಬಂಧ ಸರಿ ಅದಕ್ಕೆ ಮೀರಿದ್ದು ಇಲ್ಲಿ ಯಾವುದೂ ಸಹ ಸಹ ಇಲ್ಲ. ಜನ ನಿಮ್ಮ ಸಂಬಂಧಗಳನ್ನು ನೋಡಲು ಬಿಗ್​ಬಾಸ್​ ನೋಡುವುದಿಲ್ಲ. ಅದಕ್ಕೆ ಧಾರಾವಾಹಿಗಳಿವೆ, ಆದರೆ ಜನ ಬಿಗ್​ಬಾಸ್ ನೋಡುವುದು ಬಿಗ್​ಬಾಸ್ ಕಾರಣಕ್ಕೆ, ಅದನ್ನು ಸರಿಯಾಗಿ ನಿಭಾಯಿಸಿ. ನೀವು ಬಿಗ್​ಬಾಸ್ ಮನೆಯಿಂದ ಹೊರಗೆ ಬಂದ ಮೇಲೆ ಬೇಕಾದರೆ ಸಂಬಂಧಗಳನ್ನು ಬೆಳೆಸಿಕೊಳ್ಳಿ’ ಎಂದು ಖಾರವಾಗಿ ಹೇಳಿದರು ಸುದೀಪ್.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ್ ಯಾವತ್ತೋ ಸಿಎಂ ಆಗಬೇಕಿತ್ತು: ಹೆಚ್​ಡಿಕೆ
ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ್ ಯಾವತ್ತೋ ಸಿಎಂ ಆಗಬೇಕಿತ್ತು: ಹೆಚ್​ಡಿಕೆ
ಮಗನಿಗೆ ದುಬಾರಿ ಬೆಲೆಯ ಕಾರನ್ನು ಉಡುಗೊರೆಯಾಗಿ ನೀಡಿದ ಹಾರ್ದಿಕ್ ಪಾಂಡ್ಯ
ಮಗನಿಗೆ ದುಬಾರಿ ಬೆಲೆಯ ಕಾರನ್ನು ಉಡುಗೊರೆಯಾಗಿ ನೀಡಿದ ಹಾರ್ದಿಕ್ ಪಾಂಡ್ಯ
40 ಭಾರತೀಯ ಮೂಲದ ಆಟಗಾರರನ್ನು ಶ್ಲಾಘಿಸಿದ ಮೋದಿ
40 ಭಾರತೀಯ ಮೂಲದ ಆಟಗಾರರನ್ನು ಶ್ಲಾಘಿಸಿದ ಮೋದಿ
ಮೋದಿ ಪ್ರಸ್ತಾಪಿಸಿದ ಅಂಗಾಂಗ ದಾನದ ಬಗ್ಗೆ ಡಾಕ್ಟರ್ ಹೇಳಿದ್ದಿಷ್ಟು
ಮೋದಿ ಪ್ರಸ್ತಾಪಿಸಿದ ಅಂಗಾಂಗ ದಾನದ ಬಗ್ಗೆ ಡಾಕ್ಟರ್ ಹೇಳಿದ್ದಿಷ್ಟು
ಗುಡ್ ನ್ಯೂಸ್: ಶೀಘ್ರದಲ್ಲೇ ನೈಸ್‌ ರೋಡ್‌ ಸಂಪರ್ಕಿಸುವ ರಸ್ತೆ ಆರಂಭ
ಗುಡ್ ನ್ಯೂಸ್: ಶೀಘ್ರದಲ್ಲೇ ನೈಸ್‌ ರೋಡ್‌ ಸಂಪರ್ಕಿಸುವ ರಸ್ತೆ ಆರಂಭ
ಭಾರೀ ಅಗ್ನಿ ಅವಘಡ:20 ಕೋಟಿ ರೂ.ಹೆಚ್ಚು ಮೌಲ್ಯದ ವಸ್ತುಗಳು ಭಸ್ಮ
ಭಾರೀ ಅಗ್ನಿ ಅವಘಡ:20 ಕೋಟಿ ರೂ.ಹೆಚ್ಚು ಮೌಲ್ಯದ ವಸ್ತುಗಳು ಭಸ್ಮ
ಶಾಸಕ ಚಂದ್ರು ಲಮಾಣಿ ವಿರುದ್ಧ ನಡೆದಿತ್ತಾ ಷಡ್ಯಂತ್ರ?ಸ್ವಾಮೀಜಿ ಆಡಿಯೋ ವೈರಲ್
ಶಾಸಕ ಚಂದ್ರು ಲಮಾಣಿ ವಿರುದ್ಧ ನಡೆದಿತ್ತಾ ಷಡ್ಯಂತ್ರ?ಸ್ವಾಮೀಜಿ ಆಡಿಯೋ ವೈರಲ್
ಶಾರ್ಟ್​ ಸರ್ಕ್ಯೂಟ್​ನಿಂದ ಸುಗಂಧ ದ್ರವ್ಯ ಗೋದಾಮು ಧಗಧಗ!
ಶಾರ್ಟ್​ ಸರ್ಕ್ಯೂಟ್​ನಿಂದ ಸುಗಂಧ ದ್ರವ್ಯ ಗೋದಾಮು ಧಗಧಗ!
ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದ ಬಿಜೆಪಿ ಶಾಸಕನ ಪರ ರಾಜಣ್ಣ ಬ್ಯಾಟಿಂಗ್
ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದ ಬಿಜೆಪಿ ಶಾಸಕನ ಪರ ರಾಜಣ್ಣ ಬ್ಯಾಟಿಂಗ್
ಆ್ಯಂಬುಲೆನ್ಸ್ ಅಡ್ಡಗಟ್ಟಿ ಕಾರು ಚಾಲಕನ ರಸ್ತೆ ರಂಪಾಟ
ಆ್ಯಂಬುಲೆನ್ಸ್ ಅಡ್ಡಗಟ್ಟಿ ಕಾರು ಚಾಲಕನ ರಸ್ತೆ ರಂಪಾಟ