AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಂಬಂಧ ಬೆಳೆಸಲು ಬಂದಿಲ್ಲ: ಮನೆ ಸದಸ್ಯರಿಗೆ ಚಾಟಿ ಬೀಸಿದ ಕಿಚ್ಚ

Bigg Boss Kannada: ಬಿಗ್​ಬಾಸ್ ಕನ್ನಡ ಸೀಸನ್ 11 ವೀಕೆಂಡ್ ಎಪಿಸೋಡ್​ನಲ್ಲಿ ಕಿಚ್ಚ ಸುದೀಪ್ ಮನೆಯ ಸದಸ್ಯರಿಗೆ ಬುದ್ಧಿವಾದ ಹೇಳಿದರು. ಹಲವರು ಸಂಬಂಧಗಳನ್ನು ಮುಂದೆ ಮಾಡಿಕೊಂಡು ಆಡುತ್ತಿದ್ದು, ಸಂಬಂಧಗಳನ್ನು ಗಂಟು ಮೂಟೆ ಕಟ್ಟಿ ಇಡಿ ಎಂದು ಎಚ್ಚರಿಕೆ ನೀಡಿದರು.

ಸಂಬಂಧ ಬೆಳೆಸಲು ಬಂದಿಲ್ಲ: ಮನೆ ಸದಸ್ಯರಿಗೆ ಚಾಟಿ ಬೀಸಿದ ಕಿಚ್ಚ
ಮಂಜುನಾಥ ಸಿ.
|

Updated on: Nov 30, 2024 | 11:17 PM

Share

ಬಿಗ್​ಬಾಸ್​ ವೀಕೆಂಡ್ ಪಂಚಾಯ್ತಿಯಲ್ಲಿ ಪ್ರತಿ ಶನಿವಾರದಂತೆ ಸುದೀಪ್, ಇಡೀ ವಾರದ ವಿಶ್ಲೇಷಣೆ ಮಾಡಿದರು. ಈ ವಾರ ಅವರಿಗೆ ಮಾತನಾಡಲು ಸಾಕಷ್ಟು ಸರಕನ್ನು ಮನೆಯ ಸ್ಪರ್ಧಿಗಳು ಮೊದಲೇ ನೀಡಿದ್ದರು. ಮಹರಾಜ-ಮಹಾರಾಣಿ ಟಾಸ್ಕ್​ ಅನ್ನು ಬಿಗ್​ಬಾಸ್ ಈ ಬಾರಿ ನೀಡಿದ್ದರು. ಮಹಾರಾಜ ಆಗಿದ್ದ ಉಗ್ರಂ ಮಂಜು ಮೊದಲಿಗೆ ಚೆನ್ನಾಗಿ ನಿಭಾಯಿಸಿದ್ದರು. ಆದರೆ ಯಾವಾಗ ಮೋಕ್ಷಿತಾ ಮಹಾರಾಣಿ ಆಗಿ ಬಂದರೋ ಇಡೀ ಮನೆಯ ವಾತಾವಾರಣವೇ ಬದಲಾಯ್ತು. ಇಬ್ಬರೂ ವೈಯಕ್ತಿಕ ಆಟ ಆಡಲು ಆರಂಭಿಸಿ ಇಡೀ ಟಾಸ್ಕ್​ನ ದಿಕ್ಕನ್ನು ತಪ್ಪಿಸಿದರು. ಇದನ್ನೇ ಸುದೀಪ್ ಕಟುವಾಗಿ ಟೀಕೆ ಮಾಡಿದರು.

ಇಷ್ಟು ವಾರಗಳಲ್ಲಿ ಬಿಗ್​ಬಾಸ್ ಕೊಟ್ಟಿದ್ದ ಟಾಸ್ಕ್​​ಗಳಲ್ಲೇ ಈ ವಾರ ಕೊಟ್ಟ ಟಾಸ್ಕ್ ಬಹಳ ಕ್ರಿಯೇಟಿವ್ ಆಗಿತ್ತು, ಎಲ್ಲರಿಗೂ ಸಮಾನ ಅವಕಾಶ ಸಿಕ್ಕಿತ್ತು, ಎಲ್ಲರಿಗೂ ಅವರವರ ಪ್ರತಿಭೆ ತೋರಿಸಲು ಅವಕಾಶ ಸಿಕ್ಕಿತ್ತು. ಟಾಸ್ಕ್​ ಬಹಳ ಚೆನ್ನಾಗಿ ಪ್ರಾರಂಭ ಆಗಿತ್ತು. ಆದರೆ ಅದನ್ನು ಕೆಲವರು ಅದನ್ನು ಹಾಳು ಮಾಡಿಕೊಂಡರು’ ಎಂದ ಸುದೀಪ್, ವಿಶೇಷವಾಗಿ ಉಗ್ರಂ ಮಂಜು, ಮೋಕ್ಷಿತಾ ಅವರನ್ನು ಟೀಕೆ ಮಾಡಿದರು.

ಇಬ್ಬರೂ ಸಹ ಟಾಸ್ಕ್ ಅನ್ನು ಟಾಸ್ಕ್ ರೀತಿ ಆಡಲಿಲ್ಲ. ಇಬ್ಬರೂ ಸಹ ಯಾವುದೇ ಹಂತದಲ್ಲೂ ಟಾಸ್ಕ್ ಗೆ ಜೀವ ತುಂಬುವ ಅವಕಾಶ, ಅಧಿಕಾರ ಹೊಂದ್ದಿರಿ ಆದರೆ ಇಬ್ಬರೂ ಸಹ ಆ ಕಾರ್ಯ ಮಾಡಲಿಲ್ಲ. ಉಗ್ರಂ ಮಂಜು ಅವರು ಟಾಸ್ಕ್​ ಅನ್ನು ಅದ್ಭುತವಾಗಿ ಆಡಿದರು. ಅವರಂತೆ ಇನ್ಯಾರೂ ಸಹ ಆ ಪಾತ್ರಕ್ಕೆ ಜೀವ ತುಂಬಲು ಸಾಧ್ಯ ಇಲ್ಲ ಎಂಬ ರೀತಿ ಪಾತ್ರವನ್ನು ನಿಭಾಯಿಸಿದಿರಿ ಆದರೆ ಒಂದು ಬಾರಿ ಎಡವಿ ಬಿದ್ದರೆ ಮುಗಿಯಿತು. ಮಾಡಿದ ಎಲ್ಲವೂ ನೀರಲ್ಲಿ ಹೋಮ’ ಎಂದರು ಸುದೀಪ್.

ಇದನ್ನೂ ಓದಿ:‘ಪುಷ್ಪ 2’ ಸಿನಿಮಾದಿಂದ ಬದಲಾಗಲಿದೆ ರಶ್ಮಿಕಾ ವೃತ್ತಿ ಜೀವನದ ದಿಕ್ಕು

ಗೌತಮಿ ಸಹ, ಟಾಸ್ಕ್ ಆಡಲಿಲ್ಲ ತಮ್ಮ ವೈಯಕ್ತಿಕ ಭಿನ್ನಾಭಿಪ್ರಾಯಗಳನ್ನು ಇಟ್ಟುಕೊಂಡು ಅದನ್ನು ತೀರಿಸಿಕೊಳ್ಳುವ ಪ್ರಯತ್ನ ಮಾಡಿದರು ಎಂಬರ್ಥದ ಮಾತುಗಳನ್ನಾಡಿದ ಸುದೀಪ್. ಮನೆಯ ಎಲ್ಲ ಸದಸ್ಯರಿಗೆ ಒಟ್ಟಿಗೆ ಸೇರಿ, ‘ಇಲ್ಲಿ ನೀವು ಸಂಬಂಧ ಬೆಳೆಸಲು ಬಂದಿಲ್ಲ. ಟಾಸ್ಕ್ ಇಲ್ಲದಾಗ ಕೂತು ಒಂದೆರಡು ಮಾತು ಮಾತನಾಡಲು ಸಂಬಂಧ ಸರಿ ಅದಕ್ಕೆ ಮೀರಿದ್ದು ಇಲ್ಲಿ ಯಾವುದೂ ಸಹ ಸಹ ಇಲ್ಲ. ಜನ ನಿಮ್ಮ ಸಂಬಂಧಗಳನ್ನು ನೋಡಲು ಬಿಗ್​ಬಾಸ್​ ನೋಡುವುದಿಲ್ಲ. ಅದಕ್ಕೆ ಧಾರಾವಾಹಿಗಳಿವೆ, ಆದರೆ ಜನ ಬಿಗ್​ಬಾಸ್ ನೋಡುವುದು ಬಿಗ್​ಬಾಸ್ ಕಾರಣಕ್ಕೆ, ಅದನ್ನು ಸರಿಯಾಗಿ ನಿಭಾಯಿಸಿ. ನೀವು ಬಿಗ್​ಬಾಸ್ ಮನೆಯಿಂದ ಹೊರಗೆ ಬಂದ ಮೇಲೆ ಬೇಕಾದರೆ ಸಂಬಂಧಗಳನ್ನು ಬೆಳೆಸಿಕೊಳ್ಳಿ’ ಎಂದು ಖಾರವಾಗಿ ಹೇಳಿದರು ಸುದೀಪ್.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್